Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೆಣ್ಣು ಮನದ ಕಣ್ಣು

ಹೆಣ್ಣನ್ನು ಹೊನ್ನಾಗಿ ಕಾಣಿರಯ್ಯ

ಹೆಣ್ಣನ್ನು ಹೊನ್ನಾಗಿ ಕಾಣಿರಯ್ಯ
ಹೆಣ್ಣಿಲ್ಲದಿದ್ದರೆ ಬಾಳು ಬರಡು ಕಣಯ್ಯ

ಒಂದು ಗಂಡಿನ ಏಳಿಗೆಯ ಹಿಂದೆ
ಒಂದು ಹೆಣ್ಣಿರುವಳೆಂಬುದು ನಿಜವಯ್ಯ

ಸತ್ಯ-ನೀತಿಯ ಬಿಡದೆ ಬಾಳಿರಯ್ಯ
ಅನ್ನ-ನೀರಿಗಾಗಿ ದಿನಾ ದುಡಿಯಿರಯ್ಯ

ನಾನು-ನನ್ನದು ಎಂಬುದ ಮರೆಯಿರಯ್ಯ
ನಾವು-ನಮ್ಮದು ಎಂದು ಬಾಳಿರಯ್ಯ

- null

23 Nov 2019, 06:37 am

ಕನಸಿನೊಳಗಿನ ಮಾಯೇ

ಮಾಯಾ ನಗರಿಯ ಮಾಯದ
ಬಲೆಗೆ ಜೆಡರ ಹುಳುವಿನಂತೆ
ಸೊತು ಬಿದ್ದೆ ಆದರೆ ಆ ಮಾಯಾ
ಬಲೆಯ ಸಂಚ್ಚು ತಿಳಿಯದಾದೆ.....

ಪಾಪಿ ಹೃದಯ ಬಲೆಯಲ್ಲಿಯೆ ಸಿಕ್ಕಿ
ಯೋಚಿಸತೊಡಗಿತ್ತು ಕ್ಷಣಕಾಲದಲ್ಲೇ
ಗೋರವಾಯಿತು ಇದು ಮಾಯಾದ
ಹೇಸರಿನ ಪ್ರೇಮದ ಬಲೆಯಾಗಿತ್ತು....

ಆ ಮಾಯಾನಗರಿಯ ರಾಣಿಯ ಜೊತೆ
ಮಾತನಾಡ ತೊಡಗಿದೆ ಹಾಗೆಯೆ ಏಕಾಂತ
ದಲ್ಲಿರುವಾಗ ನಾಮ್ಮಿಬ್ಬರ ಮಾತಿನ ನಡುವೆ
ಸಾಕೇದ್ದೇಳು ಸೊಮಾರಿನನ್ ಮಗನೆ ಆನ್ನೊ
ಸುಪ್ರಭಾತ ಕೇಳತೋಡಗಿತು...

ಈ ಸೂಂದರವಾದ ಸಮಯದಲ್ಲಿ
ಯಾರದು ಈ ಸುಪ್ರಭಾತ ಏಂದು ಕಣ್ತೆರೆದು
ನೋಡಿದರೆ ಭಾಸ್ಕರನ ಹಾಗೆ ಕೆಂಪೆರುತ್ತ
ಕೈಯಲ್ಲಿ ಪೋರಕೆಏಂಬ ಆಯುಧ ಹಿಡಿದಿತ್ತು
ಆ ಕ್ಷಣವೆ ಕಕ್ಕಬಿಕ್ಕಿಯಾಗಿ ಪಲಾಯನ ಮಾಡಿದೆ.......ವಿನೋದ್ ರಾಥೋಡ್

- Vinod Naik Vinod Naik

22 Nov 2019, 11:28 pm

ನಿದಿರೆ...

ಹಾಳೂರ ಸಂತೆಯಲ್ಲಿ
ಜಿಟಿ-ಜಿಟಿ ಸುರಿವ ಮಳೆಯಲ್ಲಿ
ಜನಜಂಗುಳಿಯ ನಡುವೆ
ಭಿಕ್ಷುಕನದ್ದು ಕುಂಭಕರ್ಣ ನಿದಿರೆ...

ಐಶಾರಾಮಿ ಮನೆಯಲ್ಲಿ
ಆಳು-ಕಾಳುಗಳ ಸೇವೆಯಲ್ಲಿ
ಶ್ರೀಮಂತಿಕೆಯ ನಡುವೆ
ಅವನಿಗೆ ಬರುತ್ತಿಲ್ಲ ನಿದಿರೆ..

ಎಷ್ಟಿದ್ದರೇನು? ಏನಿಲ್ಲದಿದ್ದರೇನು?
ಮನಸ್ಸಿಗೆ ನೆಮ್ಮದಿ ಇಲ್ಲದಲ್ಲಿ
ಹೇಗಾದರೂ ಬಂದೀತು
ನೆಮ್ಮದಿಯ ನಿದಿರೆ..!?

- ಅಕ್ಷತ

22 Nov 2019, 10:55 pm

ಇದೆ.ಇಲ್ಲ.ಇದೆಇಲ್ಲಎರಡೂ ಇದೆ.ಇದೆಇಲ್ಲಎರಡೂ ಇಲ್ಲ.

ಯಾರೋ ಅನ್ನಿಸಿದ್ದು ಇವ್ನೆ ಅಂತ.
ನೀನು?
ನಾನು ಅನ್ಕೊಂಡಿದ್ದು ಇವ್ನೆ ಅಂತ.
ಇವಾಗ ಏನ್
ಅನ್ಕೊಂಡಿದೀಯೋ?
ಇವ್ನೆ. ಇವ್ನಲ್ಲ.ಇವ್ನೆ ಇವ್ನಲ್ಲ ಎರಡೂ ಇವ್ನೆ. ಇವ್ನೆ, ಇವ್ನಲ್ಲ ಎರಡೂ ಇವ್ನಲ್ಲ. .
ಮುಂದೆ ಏನ್ ಅನ್ಕೋತಿಯೋ?
ನಿಂಗೇಕೆ? ನಂಗೇಕೆ?.............

ನಮ್ಮೂರಿನ ಗುಡಿಯಲ್ಲಿರೋ ಅವ್ನು
ಯಾಕೋ ದೇವ್ರು ಅನ್ನುಸ್ತಿಲ್ಲ ನನ್ಗೆ.
ಇನ್ಯಾರು ಅನ್ಸ್ತಾವ್ರೆ?
ಕಾಗದದ ಮೇಲೆ ನಾನು ಬಿಡಿಸಿದ ಇವ್ನು
ನನ್ಗೆ ದೇವ್ರು ಅನ್ನಿಸ್ತಿದೆ.
ಏನಿವಾಗ?
ಮುಟ್ಟಲಿಲ್ಲ ಮುದ್ದಾಡಲಿಲ್ಲ ಒಂದಿನನೂ ಅವ್ನನ್ನು.
ಮುಟ್ಬೇಕಿತ್ತು, ಮುದ್ದಿಸಬೇಕ್ಕಿತ್ತು?
ಹೆದ್ರುಸ್ತಿದ್ನಲ್ಲಪ್ಪ ಬೆಂಕಿ ಹಿಡ್ಕೊಂಡು
ಯಾರು?
ಅಂಗಿಬಿಚ್ಕೊಂಡು, ದಾರಾಸುತ್ಕೊಂಡು
ನಿಂತಿದ್ನಲ್ಲ ಅವನು ನಮ್ಮಿಬ್ಬರ ಮಧ್ಯೆ..
ಹೌದಲ್ವಾ !ಮತ್ತೆ ಇವನು?
ಮುಟ್ಟುತಿನಿ, ಮುದ್ದಾಡ್ತಿನಿ
ನಾನು?
ನನ್ನ ಕೇಳೋ ಅವಶ್ಯಕತೆನೇ ಇಲ್ಲಾ.
ಯಾರ್ಬೇಕಾದ್ರು ,ಯಾವಾಗಬೇಕಾದ್ರು
ಆಮೇಲೆ?
ಬೆಂಕಿ ಹಿಡ್ಕೊಂಡಿರೋ ಧ್ವನಿ ಇಲ್ಲ
ನಮ್ಮಿಬ್ಬರ ಮಧ್ಯೆ.
ಮತ್ತೇನಿದೆ?
ಗಾಳಿ ಇದೆ...
ಏನು?
ಗಾಳಿ ಇದೆ. ಗಾಳಿ ಇಲ್ಲ. ಗಾಳಿ ಇದೆ ಇಲ್ಲ ಎರಡೂ ಇದೆ ಗಾಳಿ ಇದೆ ಇಲ್ಲ ಎರಡೂ ಇಲ್ಲ........

-ಪ್ರವೀಣಾ ಸಿಂಗೋನಹಳ್ಳಿ.

- praveens singonahalli

22 Nov 2019, 10:22 pm

- ಕೊಡವಿಕೊಂಡು ಎದ್ದೇಳು...

ಕೊಡವಿಕೊಂಡು ಎದ್ದೇಳು... (ಪಲ್ಲವಿ)
ಈ ಬದುಕು ನಿನ್ನದು
ಸಾವಿರಾರು ಜನ್ರಿದೃನೂ ಒಂಟಿಯಾಗೇ ಸಾಯೋದೂ..

ಭೂಮಿ ಮ್ಯಾಗೇ ಇರೋವಷ್ಟು ದಿನಳು
ಉಸಿರಾಡಬೇಕು ಎಲ್ರೂನೂ
ಹೊಟ್ಟೆಗಾಗೀ ಕೆಟ್ಟದ್ ಮಾಡ್ಬೇಡ
ಮಡಿಕ್ಕೆಂಡಿರೂ ದೇವ್ರು ದೊಡ್ಡೋನು ಅನ್ಕಂಡು

ಲೆಕ್ಕಾಚಾರದ ದಿನ್ಗಳಿವು ಕಾಯೋಂಗಿಲ್ಲ
ಯಾರಿಗೂನೂ..
ಕುಂತ್ರೆ ಕುಡುಕೆ ಹೊನ್ನು ಸಾಲಂಗಿಲ್ಲ ಅಂದಾವ್ರೇ ಹಿರೀಕರು..

ಆಡೋ ಪದ ಚೆಂದಿದ್ರೆ. ಊರ ಜನ್ಗಳೆಲ್ಲಾ ಅಣ್ ತಮ್ಮಂದಿರು..
ತಂಗ್ಳನ್ನ ತಿಂದೃನೂ ಬದುಕ್ಬಿಡು ನೆಮ್ದೀ ಪಡ್ಕಂಡು...
ಕೊಡವಿಕೊಂಡು ಎದ್ದೇಳು ಈ ಬದುಕು ನಿನ್ನದು

ಪವನ ಕುಮಾರ ಕೆ ವಿ
ಬಳ್ಳಾರಿ 9900515957

- PavanKumarKV

18 Nov 2019, 04:52 pm

ನನ್ನ ಗೆಳೆಯ.....

ಓ ನನ್ನ ಗೆಳೆಯ
ನೀನೇ ನನ್ನ ಇನಿಯಾ
ಆಗು ಬಾ ನನ್ನ ತಾಯಿಗೆ ಅಳಿಯ
ಆದರೆ ಸುರಿಸುವೆ ಮುಂಗಾರು ಮಳೆಯ
ಇಲ್ಲದಿದ್ದಾರೆ ಹರಿಸುವೇ ಕಣ್ಣೀರ ಹೊಳೆಯ.
:-ವೀಣಾ ಲಿಂಗಣ್ಣ
( ರಾಯಚೂರು )

- Veena

17 Nov 2019, 02:53 pm

ಅನುಭವಸ್ತ

ಒಬ್ಬರ ಮುಂದೆ ಮತ್ತೊಬ್ಬರನ್ನ ಹೊಗಳಿ
ಮತ್ತೊಬ್ಬರ ಮುಂದೆ ಇನ್ನೊಬ್ಬರನ್ನ ತೆಗಳಿ ಇನ್ನೊಬ್ಬರ ಮುಂದೆ ಮಗದೊಬ್ಬರನ್ನ ಸಿಕ್ಕಿಸಿ
ಮಗೊದೊಬ್ಬರ ಮುಂದೆ ಸಿಕ್ಕರೊಬ್ಬರನ್ನ ಹಿಕ್ಕಿಸಿ,
ಗೆದ್ದೇವೆಂದು ಭ್ರಮೆಯ ತಮ್ಮ ಮುಖವನ್ನೇ ಕ್ಲಿಕ್ಕಿಸಿ,
ಬಾಗುವಾತನ ಮುಂದೆ ಬಿಗಿದಿವೆಂದು ಬಗ್ಗು-ಬಡಿ ಯುವವನೆ ಪ್ರಸ್ತುತ ಕಲಿಯುಗದ "ಅನುಭವಸ್ತ"

ಸುಗ್ಗಿ..

- ಆರ್ ಎಸ್ ಸುಗ್ಗಿ.

16 Nov 2019, 10:44 pm

ನೀನೇನಾದರೂ...?

ಸಂಜೆ ತಂಗಾಳಿ
ನನ್ನ ನೋಡಿ
ಮುಸಿ ಮುಸಿ ನಕ್ಕು
ಕೆನ್ನೆ ಹಿಂಡಿ
ಕೈಯ ಹಿಡಿದು
ಕಿವಿಯಲೇನೊ
ಪಿಸುಗುಟ್ಟಿದಂತಿದೆ
ನೀನೇನಾದರೂ
ಹೇಳಿ ಕಳುಹಿಸಿರುವೆಯಾ?

ಬಲು ತುಂಟ ಅವನು
ಅತ್ತ ಇತ್ತ ಸುಳಿದು
ನಿನ್ನ ಹೆಸರ ಕರೆದು
ನಾಚಿಕೆಯಲಿ ಮೂಡಿದ
ತುಟಿಯಂಚಲೊಂದು
ಕಿರುನಗೆಯ ಕಂಡು
ಹಕ್ಕಿಗಳ ಕಳುಹಿಸಿರುವ
ಸಂಜೆಗೆಂಪ ತರಲೆಂದು
ನನ್ನ ಕೆನ್ನೆಗೆಂದು

ಕಾಡಿ ಬೇಡಿದರು
ಕಾಡಿಸುತಿರುವ ಹೇಳದೆ
ಅವನು ಕದ್ದು ತಂದ
ನಿನ್ನೊಡನೆ ನಾನಿರದ
ಘಳಿಗೆಯಲಿ ನೀನು
ನಿಟ್ಟುಸಿರಿನೊಳಗೆ ಅವಿತಿಟ್ಟು
ಅವನ ಕಿವಿಯೊಳಗೆ
ತೇಲಿಬಿಟ್ಟ ನಿನ್ನೊಲವಿನ
ಚೆಚ್ಚಗಿನ ಪ್ರೇಮಸಂದೇಶವನು

- ಶ್ರೀಕಾವ್ಯ

16 Nov 2019, 10:34 pm

ನೆನಪುಗಳು

ಬರೀ ನೆನಪುಗಳ ನಾವೆ......

ಕತ್ತಲ ಲೋಕದಲ್ಲಿ
ಕನಸಿನ ಮಾಯೆ
ಬೆತ್ತಲ ಭುಗಿಲಲ್ಲಿ
ಕಾಮದ ಕಲ್ಪನೆಯ ಛಾಯೆ...!!

ಸ್ವರಗಳು ಗುಯ್ ಗುಟ್ಟುತ್ತಿವೆ
ಮನಗಳ ಭಾವ ಸಿಡಿಯುತ್ತಿವೆ
ಬರೀ ನೆನಪುಗಳ ಅಂಬರಗಳಿಗೆ ಸೇತುವೆ ಇಲ್ಲಿವೆ..!!

ಸರಿಸೃಪಗಳ ಸಾಲಿನಲ್ಲಿ
ಸರಿಗಮಗಳ ನಾದ ಚೆಲ್ಲಿ
ಮದಗಜಗಳ ಬೆಟ್ಟದಲ್ಲಿ
ಚಿಲಿಪಿಲಿಗಳ ಕಲರವ ಕೇಳಿ
ಗುಯ್ ಗುಟ್ಟುತ್ತಿವೆ ಬರೀ ನೆನಪಿನ ನಾವೆ...!!

ಗಾಳಿ ಮಳೆಯ ಭಾವದಲ್ಲಿ
ರತ್ನ ಮಂಜರಿ ಪ್ರೇಮಿಯಾಗಿ
ಕಾಣುತ್ತಿವೆ ಬರೀ ನೆನಪುಗಳ ನಾವೆ.......!!
ಜೈ ಶ್ರೀ ರಾಮ್

- Mallu Kumbar

12 Nov 2019, 09:58 pm

ಮರೆಯದಿರೋಣ

ರಾಮ ರಾಮ ರಾಮ
ಅಲ್ಲಾಹು ಅಲ್ಲಾಹು ಅಲ್ಲಾಹು
ಏಸು ಏಸು ಏಸು 
ಏನಾದರೂ ಹೆಸರಿಸು ಶಕ್ತಿ ಸಂಕೇತವು..
ಬದುಕಿನೊಂದಿಗೆ ಬೆಸದ ಬಾವಗಳು 
ಹಿಂದೂಸ್ತಾನವು ಐಖ್ಮತೆಯ ತಾಣವು.. 

ಹಸಿದಾಗ ಬೇಕು ಅನ್ನ.. 
ಬೇರೇನೂ ಬಯಸದು, ಈ ಶರೀರರದೊಳಗಿನ ಪ್ರಾಣ.. 
ಶರೀಫನೂ ನಮ್ಮೊಳಗಿದ್ದಾನ. 
ಶರಣನೂ ನಮ್ಮೊಳಗಿದ್ದಾನ.. 
ಶಿಲುಬೆಗೇರಿದ ದೇವ ದೂತ ನಮ್ಮೊಳಗಿದ್ದಾನ.. 
ನಾವೆಲ್ಲರೂ.. ಒಂದೇ ಎನ್ನೋಣ.. 
ಅವರೊಲ್ಲೊಂದಾಗೋಣ 
ಅವರಂತೆಯೇ ಬದುಕೋಣ... 
ಸಲುಹಿತಿರುವ ಬಾರತಾಂಬೆಗೆ ಒಳ್ಳೆಯ ಮಕ್ಕಳಾಗೋದ ಮರೆಯದಿರೋಣ.. ಮರೆಯದಿರೋಣ.. 

ಪವನ ಕುಮಾರ ಕೆ ವಿ 
ಬಳ್ಳಾರಿ 9900515957 

- PavanKumarKV

11 Nov 2019, 07:13 am