Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ತಂಗಾಳಿ ತಂಪಿನಲ್ಲಿ
ಹೂ ಮನಸ ಮನದಲ್ಲಿ
ನಿನಗಾಗಿ ಕಾಯುತ್ತಿರುವ
ನೀ ಯಾರೇ....
ಯಾರು ಬರೆಯದ ಕವಿತೆ ನೀನು
ನಿನಗಾಗಿ ಕಾಯುತ್ತಿರುವೇ ನಾನು
ಒಮ್ಮೆ ನೋಡು ನನ್ನ ನೀನು...
ನೀ ನೋಡು
ನೋಡದಿರು..
ನಿನಗಾಗಿ ಕಾಯುವೇ
ನಾ....
ಪ್ರತಿ ಜನ್ಮವು
ಇಂತಿ. ನಾ... ಯಾರು....???
- Chethan N
08 Dec 2019, 05:09 pm
ಕರುಣಾಮಯಿ ತಾಯಿ
ಎಷ್ಟೇ ನೋವಿದರು ಮನಸ್ಸಿನಲ್ಲಿ ಇಟ್ಟುಕೊಂಡು ತನ್ನ ಸುತ್ತ ಮುತ್ತ ಇರುವವರಿಗೆ ಖುಷಿ ನೀಡುವವಳು..
ತನ್ನ ಪತಿ ಎಷ್ಟೇ ಕಷ್ಟ ಕೊಟ್ಟರು ಸಹಿಸಿಕೊಳ್ಳುವವಳ್ಳು..
ಎಷ್ಟೇ ಕಷ್ಟ ನೋವು ಇದ್ದರೂ ಖುಷಿಯಿಂದ ಜೀವನ ಸಾಗಿಸುವವಳು..
ಅವಳು ಉಪವಾಸ ಇದ್ದರೂ ತನ್ನ ಮಕ್ಕಳು ಉಪವಾಸ ಗೇಡಬಾರದೆಂದು ಬಯಸುವವಳು..
ಎಷ್ಟೆ ನೋವಿದ್ದರೂ ತಂದೆ ತಾಯಿಯ ಗೌರವ ಕಾಪಾಡವವಳು..
ತನ್ನ ಕನಸುಗಳಿಗೆ ಬೇಲಿ ಹಾಕಿದವಳು..
ತನ್ನ ಪತಿ ಎಷ್ಟೇ ಕಷ್ಟ ಕೊಟ್ಟರು ಅವನನ್ನು ದೇವರು ಎಂದು ಪೂಜಿಸುವವಳು..
ಮಕ್ಕಳ ಕನಸು ನನಸಾಗಲ್ಲಿ ಎಂದು ಓದಿಸುವವಳು..
ಮಕ್ಕಳ ನಗುವಲೆ ತನ್ನ ನೋವನ್ನು ಮರೆತವಳು..
ದೇವರನೆ ಮೀರಿಸಿದ್ದವಳು..
ಅವಳಿಗೆ ಎಷ್ಟೇ ಕಷ್ಟವಿದ್ದರೂ ತಂದೆ ತಾಯಿಯನ್ನು ನೋಡಿಕೊಳ್ಳುತಿರುವವಳು.
ಎಲ್ಲ ಜವಾಬ್ದಾರಿಯನ್ನು ನಿಭಾಯಿಸುವವಳು..
ನಿನ್ನ ಪ್ರೀತಿ ತೀರಿಸಲು ಒಂದು ಜನ್ಮ ಸಾಲದು ಅಮ್ಮ..
ಐ ಲವ್ ಯೂ ಮಾ..
- naveen kumar
08 Dec 2019, 03:53 pm
ಏನೋ ಯೋಚನೆ,
ಏನೋ ಚಿಂತೆ, ಏನೋ ವ್ಯತೆ,
ಏನೆನೋ ಬೇಡಿಕೊಳ್ಳಲಾಗದಂತಿದೆ
ಮನಸ್ಸೇ ಮೌನವಾಗಿದೆ...
ಕಡಿದ ಮರದಂತೆ
ಮುಡಿದ ಮಲ್ಲಿಗೆಯಂತೆ
ಸಿಹಿಯು ತಿನ್ನದರೆ ಕಹಿಯಂತೆ
ಏಕಾಂತವ ಬಯಸಿದೆ ಮನ
ಮನಸ್ಸೇ ಮೌನವಾಗಿದೆ...
ಅತೃಪ್ತತೆ ಅಧಿಕವಾಗಿ
ಸಂತೋಷ ಮರೆಯಾಗಿ
ಏಕಾಂತ ಜೊತೆಯಾಗಿ
ಮೌನವೆ ಮರವಾಗಿ
ಮನಸ್ಸೇ ಮೌನವಾಗಿದೆ.....
- Ajay
08 Dec 2019, 08:15 am
ನನ್ನೇನೇ ನೋಡದ
ನಾನು ಕಾಣದೆದಿರುವ
ನಿನ್ನ ಪ್ರೀತಿಗೆ ಕೈಚಾಚಿ
ನಿನ್ನ ಬಳಿ ನಾ ನಿಂತಿರುವೆ...
ಕಾಣಬೇಡ ಮುದ್ದು ಮನಸ್ಸೇ
ನೀ ಹಗಲುಗನಸ
ಅದು ಕೆಡಿಸಿಬಿಡುವುದು
ನಿನ್ನ ಕಟ್ಟಿಕೊಡಂಹ ಎಲ್ಲಾ ಕನಸ.....
ಹೇ ಮನಸೇ ನೀ ಯಾಕೆ
ನೋವವನು ಕೊಡುವೆ
ನಿನ್ನ ಆ ನೋವು
ನನ್ನ ಎಲ್ಲಾ ಕನಸನ್ನು ಚುರು ಮಾಡಿತ್ತೆ....
- Ajay
08 Dec 2019, 07:40 am
ನಡುಬೆಟ್ಟಗಳ ಹಾದಿಯಲಿ ಚಲಿಸುತಿಹ ನಮ್ಮೆಲ್ಲರ ಹೊತ್ತೊಯುತಲಿದೆ ಟಿ ಟಿ ಗಾಡಿ ನಾವೆಲ್ಲರೂ ತಾಳ ತಂಬೂರಿಯೊಂದಿಗೆ ಹಾಡಿ ಪ್ರತಿದ್ವನಿ ಅಪ್ಪಳಿಸುತಲಿದೆ ನಮ್ಮೆಲ್ಲರ ಸುತ್ತ ಸಾಗುತಲಿದೆ ಅಡ್ಡದಿಡ್ಡಿಯಾಗಿ ಕತ್ತಲನವರಿಸಿ
ಬರೀ ಹಸಿರು ಮರಗಿಡಗಳಿಗೆ ಪ್ರಾಣಿ ಪಕ್ಷಿ ಬಂಡೆಗಲ್ಲಿನ ನಡುವೆ ನೀರಿನ ಅರ್ಭಟ ಅಂದಚಂದವೆಂಬಂತೆ ಕಣ್ಣಿಗೆ ಕಪ್ಪು ಏಂಬಂತೆ ತುಟ್ಟ ತುದಿಗೆ ಬರುತಲಿರುವೆವು ನಿನ್ನ ಅತ್ತಿರಕೆ ಬಾನಂಗಳಕೆ ಹಾರುವ ಬಯಕೆ ಕನಸೆ ನನಸೆ ಕಂಡದೆಲ್ಲ ಕನಸು madhusudhanagowda@gmail.com
- madhusudhanagowda@gmail.com
04 Dec 2019, 12:02 am
ನಗುವಾಗ ಎಲ್ಲರೂ
ಜೊತೆಯಲ್ಲಿರುವರು
ಆಗ ಜೀವನ
ಆನಂದವಾಗಿರುವುದು
ಅಳುವಾಗ ಕೆಲವರು
ಜೊತೆಯಲ್ಲಿರುವರು
ಆಗ ಜೀವನ
ಕಷ್ಟವೆನಿಸುವುದು
ಕಷ್ಟದಲ್ಲಿರುವಾಗ ಯಾರು
ಜೊತೆಯಲ್ಲಿರುವುದಿಲ್ಲ
ಆಗ ಜೀವನ
ಅರ್ಥವಾಗುವುದು..
- ಅಕ್ಷತ
03 Dec 2019, 09:59 am
ನಸುಕಿನಲ್ಲಿ ಕಂಡೆನು
ನಾಜೂಕಾದ ಹೊನ್ನು
ಹಿಂದಿಲ್ಲ- ಮುಂದಿಲ್ಲ
ಯಾರಿಗೂ ಇದರ ಸುಳಿವಿಲ್ಲ
ರಾಶಿ- ರಾಶಿ ನಿಂತಿಹಳು
ಬಂಗಾರದ ಅರಸಿ
ಕೈಬೀಸಿ ಕರೆಯುತಿಹಳು
ಮೋಹದ ಬಲೆ ಬೀಸಿ
ನಾಲ್ಕಾಸೆಗೆ ದುಡಿಯುವ ನಾನು
ನಾಯಕಳಾಗಬಲ್ಲೆನೇನು
ತಿರುಕನಂತೆ ಕನಸಕಂಡೆನು
ಮೋಹದಲೆಯಲ್ಲಿ ಬಂಧಿಯಾದೆನು
ಸಂತೃಪ್ತಿ ಅಸಾಧ್ಯ
ಸಾಧಕಳಾಗುವೆ ನೀ ಸಧ್ಯ
ನುಡಿಯೆ ನೈಮಿತ್ತಿಕನು
ಬೆರಗಾಗಿ ನಾನೆದ್ದೆನು
ದಿನಕೊಂದು ಸಂದೇಶ
ನೀಡುತಲಿರುವೆ
ಅರಿವಿಗೆ ಅಸ್ಪಷ್ಟವಾಗಿ
ತೊಳಲಾಟದಲಿ ಮುಳುಗಿಸುವೆ
ಬದಲಾವಣೆಯ ಮಾರುತ
ಹಾಕಲು ತನ್ನ ಅಂಕಿತ
ಹಣೆಬರಹದ ಲಿಖಿತ
ಬದಲಾವಣೆಯದು ನಿಶ್ಚಿತ
ಶಾರದ
- ಶಕುಂತಲಾ
02 Dec 2019, 09:07 am
ಕಾಣಬೇಡ ಮನವೇ
ಹಗಲುಗನಸ...
ಅದು ನುಂಗಿಬಿಡುವುದು
ದಿನದ ಎಲ್ಲ ನಿಮಿಷ...
ಕಾಣಬೇಡ ಮನವೇ
ಹಗಲುಗನಸ...
ಅದು ಕೆಡಿಸಿಬಿಡುವುದು
ನಿನ್ನ ಎಲ್ಲ ಕೆಲಸ...
ಕಾಣಬೇಡ ಮನವೇ
ಹಗಲುಗನಸ...
ಅದು ಅಳಿಸಿಬಿಡುವುದು
ಕೊನೆಗೆ ಕಂಡ ಕನಸ...
- ಪಿ.ಜಿ.ಜ್ಯೋತಿ
01 Dec 2019, 11:56 am
ಒಲವಿನ ದಿಬ್ಬಣದ ಹಾದಿಯಲಿ
ಮಂಜಿನ ಹನಿಗಳು ಹೊಳೆದಿರಲಿ
ಹೊಂಗಿರಣದ ಸಿರಿಯ ಬೆಳಕಿರಲಿ
ಹೊಂಬಾಳೆಯು ಶಿರವನು ಬಾಗಿರಲಿ!!
ಒಲವಿನ ದಿಬ್ಬಣದ ಹಾದಿಯಲಿ
ತುಂತುರು ಮಳೆಯು ಮುತ್ತಿಡಲಿ
ಚಿಗುರೆಲೆಯು ಚಪ್ಪರವ ಹಾಕಿರಲಿ
ಹೂ ಗಂಧದ ಗಾಳಿಯು ಬೀಸಿರಲಿ!!
ಒಲವಿನ ದಿಬ್ಬಣದ ಹಾದಿಯಲಿ
ಕಾಮನ ಬಿಲ್ಲದು ಬಾಗಿರಲಿ
ಕೋಗಿಲೆಗಳು ಪದವನು ಹಾಡಿರಲಿ
ಜಂಭದ ಕೋಳಿಯು ಕುಣಿದಿರಲಿ!!
ಒಲವಿನ ದಿಬ್ಬಣದ ಹಾದಿಯಲಿ
ಹೂವಿನ ಹಾಸಿಗೆಯು ಹಾಸಿರಲಿ
ಭೃಮರದ ವಾಧ್ಯವು ಮೊಳಗಿರಲಿ
ಜೇನಿನ ಹೊಳೆಯು ಹರಿದಿರಲಿ!!
ಒಲವಿನ ದಿಬ್ಬಣದ ಹಾದಿಯಲಿ
ರತ್ನದ ಕಂಬಗಳ ಸಾಲಿರಲಿ
ಸಕ್ಕರೆಯ ರಂಗೋಲಿ ಬಿಡಿಸಿರಲಿ
ಮುತ್ತಿನ ತೋರಣವು ಕಟ್ಟಿರಲಿ!!
ಒಲವಿನ ದಿಬ್ಬಣದ ಹಾದಿಯಲಿ
ಚೆಲುವದು ಮೈ ಮನ ತುಂಬಿರಲಿ
ಸಡಗರ ಸಂಭ್ರಮವು ನೆರೆದಿರಲಿ
ಉಲ್ಲಾಸದ ಉಡುಗೊರೆ ಜೊತೆಗಿರಲಿ!!
- ಪಿ.ಜಿ.ಜ್ಯೋತಿ
01 Dec 2019, 11:39 am
ಇರುವೆಯೊಂದು ತನ್ನ ಗೂಡು
ಇರುವುದೆಂದೋ
ಇಲ್ಲವೆಂದೋ
ನಿಲ್ಲದೆ ಮಣ್ಣ ಅಗೆದು
ಮಣ್ಣಿನ ರಾಶಿ ಸುರಿಸುತಿದೆ....
ನನ್ನೇ ನೋಡದ ನಾನು
ಕಾಣದ ನಿನ್ನ ಪ್ರೀತಿಗೆ
ಕೈ ಚಾಚುತಿರುವೆ....
ನನ್ನೇ ನೋಡುವ ನೀನು
ಹಿಡಿಯಲಾಗದ ಪ್ರೀತಿಯ
ಹಾಗೆಯೇ ಏಕೆ ಇಟ್ಟುಕೊಂಡಿರುವೆ....
ಮರದ ಮೇಲಿನ ಪಕ್ಷಿಗಳ ಸರಸ
ನಿಸರ್ಗದ ಜೊತೆ ಜೊತೆ ನಿಲ್ಲದೆ
ಸಾಗುತಿದೆ.....
ನನ್ನ ವಯಸ್ಸೂ ಕೂಡ
ಮನೆಬಿಟ್ಟು ಹೊರಗೆ ಬಾ
ಬಯಲು ಎಂದೂ ನಿಲ್ಲದು
ನೀನೂ ಕೂಡ..........
ನಿನ್ನ ಹಿಂದಿರುವ ಜಡೆಯ
ಮುಂದಿರುವೆ ನಾನು.....
ಆ ಜಡೆಯ ಮೌನಕ್ಕೆ
ನಿನ್ನ ಕಣ್ಣಿನ ಮಾತಿನ ಭಯಕ್ಕೆ
ಹಿಡಿದು ನಿಲ್ಲಿಸಕ್ಕಾಗದ ಪ್ರೀತಿಗೆ...
ಮಕ್ಕಳಂತೆ ಹಠ ಮಾಡು
ಮುದ್ದಿಸುತೀನಿ ಕಲಿತವಳಾಗಬೇಡ..
ಇಲ್ಲವಾದರೆ ಈ ದಡ್ಡನ
ಬೆರಳಿಡಿದು ತಿದ್ದಿಸಿ ಕಲಿಸು ಅಮ್ಮನಂತೆ..
ಸುಮ್ಮನಿರಬೇಡ...
ಸುಮ್ಮನಿರಲಾಗುವುದಿಲ್ಲ....
ಹಳೆಯ ನೆನಪು ಬದಲಾಗಿದೆ
ಅದಿತ್ತೇ ಅನ್ನೋಥರ....
ಇದ್ದಿದ್ದರೆ ಅದುನ್ನೇ ಹಿಡಿದಿರುತಿರಲಿಲ್ಲವೇ.?
ನಿನ್ನ ನಗು ಅಳು ಮಾತು ಮೌನ
ಕಲಿಸುತಿದೆ....
ಇನ್ನೂ ಜಾಸ್ತಿ ಉಂಟಾಗುತಿದೆ....
ಯಾವಾಗ ಇದೆಲ್ಲ ಹೇಳು ಅಂತ
ಯಾವಾಗ ಇದುಕ್ಕೆ ಕೊನೆ ಅಂತ
ಕೇಳ್ಬೇಡ...
ನಾ ಹೇಳೋಕಾಗಲ್ಲ
ಹಗಲು ರಾತ್ರಿಗೆ ಕೊನೆ ಮೊದಲು
ಯಾವುದು ಅಂತ....
ಪ್ರೀತಿ ಹಗಲು ರಾತ್ರಿ.
ನದಿಗಳಿಂದ ನೀರು
ಅಣೆಕಟ್ಟು ಸೇರಿದೆ.. ತುಂಬುತಿದೆ..
ಬಾಗಿಲು ತೆರೆಯದಿದ್ದರೆ ಹೇಗೆ...
ಹೊಡೆದು ಹೋಗಿ ಬೆಳೆ ಕೊಚ್ಚಿ ಹೋಗುವುದು.
ಒಂದೊಂದೇ ಬಾಗಿಲ ತೆರೆದಿಬಿಡು...
ನನ್ನ ಪದ ನಿನ್ನಂತೆಯೇ...
ಮುಗಿಯದೂ ನಿಲ್ಲದೂ........
-ಪ್ರವೀಣಾ ಸಿಂಗೋನಹಳ್ಳಿ
mund
- praveens singonahalli
30 Nov 2019, 04:14 pm