Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

Tangi

ಕನ್ನಡ ಕಣ್ಮಣಿ ಪ್ರೀತಿ ಮುದ್ದಿನ ಮನಿ ನನ್ನ ತಂಗಿ ?
ಅಕ್ಕರೆಯಲ್ಲಿ ಸಾಟಿ ಇಲ್ಲ ಪ್ರೀತಿಯಲ್ಲಿ ನನ್ನ ತಂಗಿಯಷ್ಟು ಬಂದು ಇಲ್ಲ
ಕಾಳಜಿ ತೋರುವಲ್ಲಿ ನಿನ್ನ ಹಾಗೆ ಯಾರು ಇಲ್ಲ ??
ಕೊನೆವರೆಗೂ ಕಾಪಾಡಿಕೊಳ್ಳುವೆ ನನ್ನ ಮುದ್ದಿನ ತಂಗಿಯನ್ನು ?
ಮಮತೆಯ ಮಾತಿನಲ್ಲಿ ಪ್ರೀತಿ ಹಂಚುವ ಸಂಬಂಧದಲ್ಲಿ ನನ್ನ ತಂಗಿಯ ಮೇಲುಗೈ
ಈ ಸಂಬಂಧ ಕಲ್ಪಿಸಿಕೊಟ್ಟ ನನ್ನ ತಂಗಿಗೆ ಹುಟ್ಟು ಹಬ್ಬದ ಶುಭಾಶಯಗಳು ನಿನ್ನ ಜೀವನದಲ್ಲಿ ಯಾವಾಗಲೂ ಸುಖ ಶಾಂತಿ ನೆಮ್ಮದಿ ಇರಲಿ ಎಂದು ನಾ ಆಶಿಸುತ್ತೇನೆ ಒಳ್ಳೆಯ ಜ್ಞಾನ ಉಳ್ಳ ನನ್ನ ತಂಗಿ ಉನ್ನತಕ್ಕೆ ಬೆಳೆಯಲಿ,??

- Sanjay Hattikal

11 Aug 2025, 11:29 pm

ಹಸಿರುಸಿರ ಗಿರಿಯಲಿ ಜೀವಮಯ

ಹಸಿರುಸಿರ ಗಿರಿಯಲಿ
ಜೀವಮಯದ ಬಂಧನವೋ
ಜೀವ ಜೀವನದಡಿಯಲಿ
ಸದಾ ಜೀವಿಸೋ ಹಸಿರುಸಿರೇ ಜೀವವೋ

ಒಲವಿನ ಜೀವಾನಂದದಲಿ
ನಲಿವ ಜೀವದಸಿರುಸಿರ ರಾಗವೋ
ಜೀವ ಜೀವಾತ್ಮದಾನಂದಲಿ
ಹೃದಯಾತ್ಮ ನುಡಿಸೋ ಪ್ರೇಮಾನಂದದನುರಾಗವೋ

ಭಾವದಿತ ನುಡಿನಾಡಿಯಲಿ
ಹರಿವ ಪದಾತ್ಮದಾನಂದವೇ ಜೀವನವೋ
ಜೀವ ಜೀವನದೊಳು ಜೀವಿಸೋ
ಹಸಿರುಸಿರ ಗಿರಿಯೇ ಪ್ರೇಮಾನಂದಮಯವೋ...




- ಜೀವ ಕಪ್ಪುಚುಕ್ಕಿ

11 Aug 2025, 07:44 pm

ಕವನದ ಶೀರ್ಷಿಕೆ ಇಂಟರ್ನ್ಯಾಷನಲ್ ಪರ್ಪಲ್ ಫಸ್ಟ್..


ಅಂತರರಾಷ್ಟ್ರೀಯ ಪರ್ಪಲ್ ಫಸ್ಟ್ ಗೋವಾದಲ್ಲಿ,
ನಾವು ಕಳೆದ ಸಮಯವನ್ನು ವರ್ಣಿಸಲಾಗದು ಪದಗಳಲ್ಲಿ.

ತಂತ್ರಜ್ಞಾನದ ಪಕ್ಷಿ ನೋಟ ಅಡಗಿತ್ತು ನಾವು ಸ್ಪರ್ಶಿಸಿದ ಅಪ್ಸೇಸೇಬಲ್ ಡಿವೈಸ್ಗಳಲ್ಲಿ,
ನಮ್ಮ ಸ್ವಾಭಿಮಾನದ ಕಣ್ಣಾಗಬಲ್ಲ ಸಾವಿ ರಾರು ವಸ್ತುಗಳು ಮಿಂಚುತ್ತಿದ್ದವು ಕೈಗೆತಕದ ರೇಟಿನಲ್ಲಿ.

ಪರ್ಪಲ್ ಬಣ್ಣದ ಬ್ಯಾನರ್ಗಳ ಹಂದರಗಳಲ್ಲಿ,
ಪ್ರಾಯೋಗಿಕ ಪ್ರದರ್ಶನದ ಮಾಹಿತಿಯ ಚಿತ್ತಾರ ಚಿಮ್ಮುತ್ತಿತ್ತು ಅನುಭವಸ್ಥರ ಮಾತುಗಳಲ್ಲಿ.

ಆರ್. ಪಿ. ಡಬ್ಲ್ಯೂ. ಡಿ. ಕಾಯಿದೆ ಕಲ್ಪಿಸಿದೆ ಸರ್ವರಿಗೂ ಸಮಾನ ಶಿಕ್ಷಣ,
ಅದರಂತೆ ವಿವಿಧ ತಂತ್ರಗಳ ಅಳವಡಿಸಿ ನಾವು ಬೋಧಿಸಿ ಮಾಡಬೇಕಿದೆ ಮಕ್ಕಳ ಭವಿಷ್ಯ ನಿರ್ಮಾಣ.

ಹಲವು ಹಂತದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರದ ಮಾರ್ಗಗಳಾದವು ತಜ್ಞರು ಮಂಡಿಸಿದ ವಿಷಯಗಳು,
ಸುಗಮ್ಯತೆ ಸೃಷ್ಟಿಸುವ ಮನಗಳಿಗೆ ಮುನ್ನುಡಿಯಾದವು ಅಲ್ಲಿ ಕೇಳಿದ ಉಪನ್ಯಾಸಗಳು.

ವೀಕ್ಷಕರ ಆಹ್ವಾನಿಸುತ್ತಿದ್ದವು ಮನರಂಜಿಸುವ ಸಾಂಸ್ಕೃತಿಕ ಚಟುವಟಿಕೆಗಳು,
ಸ್ವಯಂ ಸಂತಸ ಪಡೆಯಲು ಸಿದ್ಧವಾಗಿದ್ದವು ವಿಭಿನ್ನ ಕ್ರೀಡೆಗಳು.

ದಣಿದವರಿಗೆ ಪರಿಮಳ ಸೂಸಿ ಸ್ವಾಗತಿಸುತ್ತಿದ್ದವು ಚಾಟ್ಸ್ ಮಳಿಗೆಗಳು,
ಸ್ತ್ರೀಯರ ಸುಂದರ ನೋಟಕ್ಕೆ ಮಣಿಯುತ್ತಿದ್ದವು ಅಲಂಕಾರದ ಆಭರಣಗಳು.

ಅರಸಿ ಬಂದವರಿಗೆ ಹಸಿವು ಮಾಯವಾಗಿತ್ತು,
ಬಯಸಿ ಬಂದ ಕಲಾತ್ಮಕ ಶಿಲೆಗಳಿಗೆ ಜ್ಞಾನದ ವರಹ ದಾನವಾಗಿತ್ತು.

ಸಡಗರದ ಸಮೃದ್ಧಿ ಸಾಧಕರ ಪ್ರೇರೇಪಿಸುತ್ತಿತ್ತು,
ಸಂಸ್ಥೆಗಳ ಪರಿಚಯ ಸುಗಮ್ಯತೆಗೆ ಸಂಪರ್ಕದ ಮಾಧ್ಯಮವಾಗಿತ್ತು.

ನವ ಸಾಧನಗಳ ಸೃಷ್ಟಿ, ವಿಕಲಚೇತನರ ಸ್ವತಂತ್ರ ಬದುಕಿಗೆ ದಿವ್ಯದೃಷ್ಟಿ.

ಪವಿತ್ರ ಯಾತ್ರೆಗು ಶ್ರೇಷ್ಠ ಪರ್ಪಲ್ ಫಸ್ಟ್ ಸಂಭ್ರಮ,
ಇದು ವಿವಿಧ ಆಯಾಮಗಳಲ್ಲಿ ಸಜ್ಜುಗೊಳ್ಳುವ ಕಲಾವಿದರ ಸಮಾಗಮ.

ಒಮ್ಮೆಯಾದರೂ ಹೋಗಬೇಕು ಈ ಸಮಾವೇಶಕ್ಕೆ,
ವಿಶ್ವ ಸಂಸ್ಥೆ ಸಾರಥಿಯಾಗಿದೆ ನಮ್ಮ ವಿಜಯಕ್ಕೆ.


ರಚನೆ ಶ್ರೀಮತಿ ನಾಗಮಣಿ h b
GHPS Dharmapur.

- nagamani Kanaka

09 Aug 2025, 06:32 am

ತಾಯಿ

ಯಾವ ಧರ್ಮದವರಾದರೇನು?
ಹೆತ್ತವಳು ತಾಯಿಯಲ್ಲವೇ!

ಯಾವ ದೇಶದವರಾದರೇನು?
ಹಡೆದವಳು ಹೆಣ್ಣಲ್ಲವೇ!

ಬಡವ ಶ್ರೀಮಂತ ಯಾರಾದರೇನು?
ಜೀವ ನೀಡುವವಳು ತಾಯಿಯಲ್ಲವೇ!

ಯಾವ ಊರಿನವರಾದರೇನು?
ಹುಣಬಡಿಸುವವಳು ಮಾತೆಯಲ್ಲವೇ!

ಯಾವ ಜಾತಿ ಜನಾಂಗವಾದರೇನು?
ಸುಖ ನೀಡುವವಳು ಸಖಿಯಲ್ಲವೇ!

ಗಡಿರೇಖೆಗಳನ್ನು ಮೀರಿದಾಕೆ
ನೀತಿನಿಯಮಗಳ ದಾಟಿದಾಕೆ
ಸರ್ವಕಾಲಕ್ಕೂ ಸರ್ವ ಜನಾಂಗಕ್ಕೂ
ನಿತ್ಯ ಅನ್ನ ನೀಡಿ ಪೊರೆವವಳು
ನನ್ನ ಹೆತ್ತವಳು ನೀನಲ್ಲವೇ ತಾಯಿ......

ಡಾ. ನಾಗೇಶ್ ಮೌರ್ಯ

- ಡಾ ನಾಗೇಶ ಮೌರ್ಯ

07 Aug 2025, 10:40 am

ಹೇಳಿ ಹೋಗು ಕಾರಣ

ಪ್ರೀತಿ ಪ್ರೇಮದ
ಕಿಚ್ಚ ಹೆಚ್ಚು ಮಾಡಿ
ಮನದ ಭಾವಗಳು ಉಕ್ಕುವಂತೆ
ಮಾಡಿ ಈಗೇಕೆ ದೂರಾದೆ.

ಹಗಲು ರಾತ್ರಿಗಳು
ನಿನ್ನ ಕಲ್ಪನೆಯಲ್ಲಿ ಮೂಡಿತ್ತು.
ನಕ್ಷತ್ರಗಳ ಸಾಲಲ್ಲಿ,ಮೋಡಗಳ ಮರೆಯ,ಲ್ಲಿ ಪ್ರೀತಿಯ ಹೊಂಬಿಸಲು, ಈಗ ನೀನೆಲ್ಲಿ?

ನಿನ್ನ ಪುಟ್ಟ ಹೃದಯದಲ್ಲಿ
ನಾನೇ ರಾಣಿಯಾಗಿರುವೆ ಎಂದ ಅರಿತಿದ್ದೆ.
ಹಗಲು ಕನಸುಗಳು ತೇಲಿ ಹೋದವು
ಕಾರಣಗಳೇ ತಿಳಿಯಲಿಲ್ಲ.

ನನ್ನ ದೂರ ತಳ್ಳಿ ಪ್ರೀತಿಯನ್ನು ಅವಮಾನಿಸಿ
ಅಂತ್ಯದಲ್ಲಿ ನೀ ನನಗೆ ಉಳಿಸಿದ್ದು ಕಾಳ್ಗಿಚ್ಚಿನಂತ ನೋವು.
ಕಾರಣ ತಿಳಿಸದೆ ದೂರಾದೇಕೆ? ಹೇಳಿ ಹೋಗು ಕಾರಣ.

- ಮೇಘಾ ಬೆಳಧಡಿ

02 Aug 2025, 09:39 am

- Pooja

02 Aug 2025, 12:10 am

ನನ್ ಅವ್ವ

ತನ್ನ ತಂದೆ =ತಾಯಿಗೆ ಮಗಳಾದವಳು
ಗಂಡನಿಗೆ ಹೆಂಡತಿಯಾಗಿ ಬಂದವಳು
ಅವಳು ಮಗ =ಮಳಿಗೆ ಜನ್ಮ ನೀಡಿದವಳು
ಅತ್ತೆಗೆ ಮಗಳಾದವಳು
ಮಾವನಿಗೆ ಸೊಸೆಯಾದವಳು
ಮಕ್ಕಳಿಗೆ ಪ್ರಪಂಚವಾದಗಳು
ಪ್ರೀತಿಯಲ್ಲಿ ಸೌಕಾತಿಯಾದವಳು
ಬಡತನದಲ್ಲಿಯೇ ಹೆಚ್ಚು ಪ್ರೀತಿ ತೋರಿಸಿದಳು
ತನ್ನ ನೋವು ಗಳಿಲ್ಲ ಮುಚ್ಚಿಟ್ಟ ಶ್ರೀಮಂತೇ
ತನಗಾಗಿ ಏನನ್ನು ಬಯಸದವಳು
ಮನೆಯಲ್ಲಿ ತನ್ನ ಮುಖ್ಯ ಪಾತ್ರ ವಹಿಸಿದವಳು
ತನ್ನ ಆಸೆ ಬಯಕೆಗಳನ್ನು ಬದಿಗಿಟ್ಟವಳು
ಹಗಲು ರಾತ್ರಿ ಎನ್ನದೆ ಮನೆಯಲ್ಲಿಯೇ ದುಡಿದವಳು
ತನ್ನ ಜೀವನವನ್ನು ಬಿಟ್ಟು ತನ್ನವರಿಗಾಗಿ ಮುಡುಪಾಗಿಟ್ಟವಳು
ಅವಳೇ ನನ್ನವ್ವ

- Rakesh A

01 Aug 2025, 02:36 pm

⛵ ಜೀವನ ನಾವೆ ⛵

ಹಾದು ಹೋದ ಕಣ್ಣುಗಳು
ಆಡಿ ಹೋದ ಮೌನ ಮಾತು
ಕಿವಿಗಳು ಶ್ರವಿಸದಿರಬಹುದು
ಭಾವನೆಗಳಿಂದ ಭಾರವಾದ
ಬಡ ಹೃದಯದ ಗತಿಯೇನು?

ನನ್ನದೂ ಒಂದು ಬದುಕು,
ಜನರಲೆಯುವ ಅಳತೆ ಕೋಲಿನ
ಬಳಕೆಗಷ್ಟೇ ಉಪಯೋಗಕಿರುವವನು
ಅನ್ನುವವರು ಅನ್ನಲಿ ಎನ್ನಬಹುದಿತ್ತು
ಕಣ್ಣುಗಳು ಸುಮ್ಮನಿರಬೇಕೇ

ಸಾತು ನೀಡುವ ಪ್ರಿಯ ಮಿತ್ರ
ಕತ್ತಲ ಇರುಳಿನ ಆಣೆ,
ಚಿಮ್ಮುವ ಕಣ್ಣ ಧಾರೆಯ ರಭಸಕೆ
ಗಲ್ಲದಿ ತಟಸ್ಥವಾದ ಮೊರೆ
ಎಲ್ಲಿ ನಿಯಂತ್ರಣ ತಪ್ಪುವುದೋ
ಎನ್ನುವ ಭಯ ಎನಗೆ!

ಮನದಲೇ ಸುಕ್ಕುಹಿಡಿದ
ಭಾವನೆಗಳ ರಾಶಿಗೆಲ್ಲಿದೆ ಬೆಲೆ?
ಬಳಿ ಸುಳಿವ ಸಾವಿರ
ಆಲೋಚನಾ ಬಳ್ಳಿಗಳ ತೋಟಕೆ
ನೀರ ಹುಯ್ದು ಹಾಯುವ ಗಾಳಿ ನಾನು,
ಹಿಡಿಯಲೆತ್ನಿಸಿ ಸೋತೂ ಸೋಲದೆ
ಉದುರುವ ಬಣ್ಣದ ಎಲೆಯನು
ಕುಳಿತು ಕಾಯುತಿರುವೆನು ಇನ್ನೂ

- ಅಮಾಯಕ

- Introvert Soul

30 Jul 2025, 07:34 pm

ಸ್ನೇಹ ಬಾಂಧವ್ಯ

ನದಿ ದಂಡಿ ಮೇಲೊಂದು ಮರವಿತ್ತು
ನೂರಾಯೆಂಟ ಹಕ್ಕಿ ಅಲ್ಲಿ ಕುಳಿತಿತ್ತು
ಎರಡ ಹಕ್ಕಿ ಸ್ನೇಹ ಬೇಳೆದಿತ್ತು

ಕಷ್ಟ ಸುಖದಲ್ಲಿ ಪಾಲಿತ್ತೂ
ಕೂಡಿ ಉನ್ನುವುದರಲ್ಲಿ ಒಂದೇ ತುತ್ತು
ಆಡಿದ ಆಟಾ ನೆನಪಾತೂ
ನೆನಪೊಂದೇ ಕಾಣಿಕೆ ಆತು

ಬೇಟೆಗಾರ ಬಂದಾ ಮರಕಡೆಗೇ
ಬಿಲ್ಲು ಬಾಣ ಹಿಡಿದಾ ಕೈಯೊಳಗೆ
ಗುರಿ ಇಟ್ಟಾ ಹಕ್ಕಿಗೇ
ಬಾಣ ತಾಗಿ ಹಕ್ಕಿ ಬಿತ್ತು ನೆಲಕೇ

ಗೆಳೆಯನ ಕಳಕೊಂಡ ಹಕ್ಕಿ
ಅಳುತ್ತಾ ಹೇಳಿತು ಬಿಕ್ಕಿ, ಬಿಕ್ಕಿ
ನನ್ನ ಹೋಡೆ ಮೋದಲು
ಸೇರಬೇಕು ಗೆಳೆಯನ ಒಡಲು

ಆಡಿದ ಆಟಾ ನೆನಪಾತೂ
ಮಾಡಿದ ತುಂಟಾಟ ಮನಸ್ಸಲ್ಲಿತ್ತು
ನೆನಪೊಂದೇ ಕಾಣಿಕೇ ಆತು
ಗೆಳೆತನಾ ಅಗಲಿ ಹೋತು

ಮಂಜುಳಾ ನಾಗರಾಜ ✍️

- ಮಂಜುಳಾ ನಾಗರಾಜ

27 Jul 2025, 12:37 pm

ಝಂಕಾರ

ಬಣ್ಣ ಬಣ್ಣಗಳ ಚಿಟ್ಟೆಗಳೆ
ಪುಷ್ಪಗಳ ಮಕರಂದ
ಹೀರಲು ಹೊರಟಿಹೆಯಾ
ಸದ್ದನು ಮಾಡದೆ ಸುಗ್ಗಿಯ ಮಾಡುತ
ನಡೆದಿದೆ ನಿನ್ನಯ ಝoಕಾರ.

ಹಾರುತ ತೇಲುತ ರಾಗವ ಹೇಳುತ
ತನ್ಮಯಳಾದೆ ಈ ದಿನ ಸುದಿನ
ಮಕ್ಕಳು ನಿನ್ನ ಹಿಂಬಾಲಿಸುತ
ಹಿಡಿಯಲು ಹೊರಟವು ಮುಂದಾಗಿ
ನಿನ್ನಯ ಅಂದವು ಸೊಬಗಿನ ಚಂದವು.
ಕಣ್ಮನ ಸೆಳೆದವು ಕಿವಿ ಗಿಂಪನ್ನು ತಂದವು.

- ಮೇಘಾ ಬೆಳಧಡಿ

26 Jul 2025, 06:19 pm