Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಪ್ಪ

ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ದೇವರಿಲ್ಲ ಎಂಬ ಗಾದೆ ಮಾತು ಎಲ್ಲರಿಗೂ ಗೊತ್ತಿರುವ ವಿಷಯವೇ, ಹಿಂದಿನ ಕಾಲದಿಂದಲೂ ಋಷಿಮುನಿಗಳು,ಕವಿಗಳು ಅಮ್ಮನ ಬಗ್ಗೆ ನಾನಾ ಬಗೆಯಲ್ಲಿ ವರ್ಣಿಸುವುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯವೇ, ಇಂದು ಜಗತ್ತಿನಲ್ಲಿ ಮಹಿಳೆಯರಿಗೆ ಮಹತ್ವದ ಸ್ಥಾನವಿದೆ. ಕವಿಗಳು ತಮ್ಮ ಕಾವ್ಯ ರಚನೆಗಳಲ್ಲಿ ಅಮ್ಮನ ಬಗ್ಗೆ ಆಕರ್ಷಕ ಭಾಷಾಶೈಲಿಯಲ್ಲಿ ವರ್ಣಿಸಿದ್ದಾರೆ. ಆದರೆ ಅಪ್ಪನ ಬಗ್ಗೆ ಯಾವುದೇ ಕಾವ್ಯ ಕಥೆಗಳಲ್ಲಿ ಉಲ್ಲೇಖವಿಲ್ಲದಿರುವುದು ನಮಗೆಲ್ಲರಿಗೂ ತುಂಬಾ ದುಃಖದ ಸಂಗತಿ ಎಂದು ಹೇಳಬಹುದು. ಜಗತ್ತಿನಲ್ಲಿ ಕೋಪಿಷ್ಟ ತಂದೆ ಹೊಡೆಯುವ ಅಪ್ಪಂದಿರು ಜಗತ್ತಿನಲ್ಲಿ ಎಲ್ಲಾದರೂ ಎರಡು ಪರ್ಸೆಂಟ್ ರಷ್ಟು ನಾವು ಕಾಣಬಹುದು ಆದರೆ ಪ್ರೇಮವನ್ನು ನೀಡುವ ಅಪ್ಪನ ಬಗ್ಗೆ ಏನು ಹೇಳುವಿರಿ?------.
ಏನಾದರೂ ನೋವು ಕಷ್ಟಗಳು ಬಂದರೆ ಅಮ್ಮನ ಅಳುತ್ತಾಳೆ ಅಮ್ಮ ನು ಅತ್ತು ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾಳೆ.ಆದರೆ ಅಪ್ಪನು ಹಾಗಲ್ಲ ಏನೇನು ಕಷ್ಟಗಳು ಬಂದರೂ ಸಂಯಮದಿಂದಿರುತ್ತಾನೆ ಅಮ್ಮನಿಗೆ ಸಾಂತ್ವನ ಹೇಳುತ್ತಾನೆ ಆಗ ಅವಳನ್ನು ತಾನೇ ಸಮಾಧಾನ ಮಾಡುತ್ತಾನೆ. ಆಗ ಅಮ್ಮನಿಗಿಂತ ಸಾಂತ್ವನ ಹೇಳುವ ಅಪ್ಪನೇ ಶ್ರೇಷ್ಠನಾಗುತ್ತಾನೆ.ಯಾಕೆಂದರೆ ಉರಿಯುವ ದೀಪದಲ್ಲಿ ಜ್ಯೋತಿಗಿಂತ ದೀಪವೇ ಬಿಸಿಯಾಗಿರುತ್ತದೆ. ಆದರೆ ಮಹತ್ವ ಜ್ಯೋತಿಗೆ ಜಾಸ್ತಿ ಇರುತ್ತದೆ.ಎಲ್ಲರ ಎದುರು ಕಣ್ಣೀರು ಸುರಿಸುವ ಅಮ್ಮನನ್ನು ನೋಡುತ್ತೇವೆ. ಆದರೆ ಅಪ್ಪ ರಾತ್ರಿ ತಲೆ ದಿಂಬಿನಲ್ಲಿ ಮುಖಹುದುಗಿಸಿ ಮುಸುಮುಸು ಅಳುವುದನ್ನು ಮಾತ್ರ ನಾವು ನೋಡುವುದಿಲ್ಲ. ಅಲ್ಲೇ ನಾವು ತಪ್ಪು ಮಾಡುವುದು ತಂದೆಗೆ ಯಾವುದೇ ರೀತಿಯ ಕಷ್ಟಗಳು ನೋವುಗಳಿರುವುದಿಲ್ಲ ಎಲ್ಲವನ್ನು ಅಮ್ಮನೊಬ್ಬಳೇ ನಿಭಾಯಿಸುತ್ತಾಳೆ.ಎಂಬುದು ನಮ್ಮ ತಪ್ಪು ತಿಳುವಳಿಕೆ ಅಪ್ಪನಿಗೂ ಸಹ ಒಂದು ಮನಸ್ಸಿದೆ ಎಂಬುದನ್ನು ನಾವು ಅರಿತಿರಬೇಕು.

ನಡು ಜೀವನದಲ್ಲಿ ಹೆಂಡತಿ ತೀರಿ ಹೋದರೆ ಅಪ್ಪನು ತನ್ನ ಕಣ್ಣೀರನ್ನು ತಡೆಹಿಡಿದು ಮಕ್ಕಳಿಗೆ ಆಧಾರ ನೀಡುತ್ತಾನೆ. ದಿನಾಲು ಅಡುಗೆ ಮಾಡಿ ಬಡಿಸುವ ಅಮ್ಮ ಎಲ್ಲರಿಗೂ ನೆನಪುಳಿಯುತ್ತಾಳೆ. ಆದರೆ ಅಡುಗೆಗಾಗಿ ಸಾಮಾನು ತರುವ ಅಪ್ಪನನ್ನು ಎಲ್ಲರೂ ಸಹಜವಾಗಿ ಮರೆಯುತ್ತಾರೆ.

ತನ್ನ ಮನೆಗಾಗಿ ಪರದಾಟ.ಕಷ್ಟಪಡುವ ಪುರುಷ ಅಪ್ಪನು ನಿಜವಾಗಲೂ ಮಹಾನ್ ವ್ಯಕ್ತಿಯಾಗಿದ್ದಾನೆ.
ಶ್ರೀ ಕೃಷ್ಣನ ಅಮ್ಮ ದೇವಕಿ, ಯಶೋಧೇಯರ ಪ್ರಶಂಸೆಯನ್ನು ಎಲ್ಲಾ ಕಡೆಯೂ ಕೇಳುತ್ತೇವೆ. ಆದರೆ ಮಗನ ರಕ್ಷಣೆಗಾಗಿ ನಡುರಾತ್ರಿಯಲ್ಲಿ ಮಗನನ್ನು ತಲೆಯ ಮೇಲೆ ಹೊತ್ತುಕೊಂಡು ಪ್ರವಾಹದಿಂದ ತುಂಬಿದ ನದಿಯನ್ನು ದಾಟಿದ ಅಪ್ಪನಾದ ವಾಸುದೇವನನ್ನು ಮರೆಯಬಾರದು ಅಲ್ಲವೇ,,,,,,,,,

ಅಪ್ಪನ ಮಹತ್ವ ಯಾರಿಗೆ ಗೊತ್ತಾಗುತ್ತದೆ? ಚಿಕ್ಕಂದಿನಿಂದಲೇ ಅಪ್ಪ ತೀರಿ ಹೋದ ನಂತರ ಸಣ್ಣ ವಯಸ್ಸಿನಲ್ಲಿ ಅನೇಕ ಜವಾಬ್ದಾರಿಗಳನ್ನು ಹೊತ್ತು ಮಗನಿಗೆ ಮಾತ್ರ ನಿಜವಾದ ಅರ್ಥವೂ ತಿಳಿಯುತ್ತದೆ.

- ಮೇಘಾ ಬೆಳಧಡಿ

16 May 2025, 04:10 pm

ಕವನ ಬುದ್ಧ ಪೂರ್ಣಿಮಾ.


ಜಗದ ಬೆಳಕು ಉದಯಿಸಿತು ಮಾಯಾದೇವಿಯ ಉದರದಿಂದ,
ಕಪಿಲ ವಸ್ತುವಿನ ಜನಕೆ ಧನಕನಕಾದಿಗಳ ಹೊಳೆ ಹರಿಯಿತು ಮಹಾತ್ಮನ ಆಗಮನದಿಂದ.

ಮಗನ ಭವಿಷ್ಯ ಕೇಳಿ ಬೆಚ್ಚಿ ಬಿದ್ದ ರಾಜ ಶುದ್ಧೋದನ,
ಅರಮನೆಯಲ್ಲಿ ಕೊರತೆಗಳು ಸುಳಿಯದಂತೆ ಪೋಷಿಸಿದ ತಂದೆ ರಾಜಕುಮಾರನನ್ನ

ಹೊರ ಪ್ರಪಂಚಕ್ಕೆ ಕಾಲಿಟ್ಟ ಸಿದ್ಧಾರ್ಥನಿಗೆ,
ಕಂಡ ನಾಲ್ಕು ದೃಷ್ಯಗಳು ದಿಕ್ಸೂಚಿಗಳಾದವು ಕುಟುಂಬದ ವಿಮೋಚನೆಗೆ

ತಥಾಗತ ಮಾರ್ಗವ ಅರಸುತ್ತ ಹೊರಟ ಪ್ರಜಾಪತಿ ಸುತ,
ಸುಜಾತಳ ಪ್ರಸಾದ ಸ್ವೀಕರಿಸಿ ಧ್ಯಾನಾಸಕ್ತನಾಗಿ ದುಖಃದ ಮೂಲವನರಿತ.

ಾಸೆಗಳ ನಿಯಂತ್ರಣ ವರ್ತಮಾನದ ಚಿಂತನೆಗಳಿಗೆ ಶಕ್ತಿ,
ಮಿಡಿದ ಹೃದಯಗಳ ಉಪಚರಿಸುವ ಪ್ರವರ್ತನಗಳೇ ಸನ್ನಡತೆಗೆ ಸ್ಪೂರ್ತಿ.

ಜಾತಕ ಕಥೆಗಳ ಸಾರ ನಮ್ಮ ನಿತ್ಯ ಬದುಕಿಗೆ ಆಧಾರ,
ಅಷ್ಟಾಂಗ ಮಾರ್ಗಗಳ ಪಾಲನೆ ಶುದ್ಧ ಮನಸಿಗೆ ಆಹಾರ.

ಗೌತಮ ಬುದ್ಧನಾಗಿ ಗಳಿಸಿದ ಸಿದ್ಧಿಯ ವೈಶಾಕ ಪೂರ್ಣಿಮದಂದು,
ಅಂಧಕಾರವ ಅಳಿಸಿ ತನ್ನ ನಿಗ್ರಹಿಸಲು ಸ್ಥಳವಾಯಿತು ಬೋಧಿ ವೃಕ್ಷವಂದು.

ಶರಣಾದ ಶಿಷ್ಯರು ಹರಡಿದರು ಬುದ್ಧನ ತತ್ವಗಳ ಜಗದಗಲ,
ವಿಷ್ಣುವಿನ ಪ್ರತಿರೂಪಕ್ಕೆ ಸೋತು ಪ್ರಕೃತಿ ನಿಸ್ವಾರ್ಥದಿ ನಮಗೆ ನೀಡುತ್ತಿದೆ ಸರಕುಗಳ ಜಾಲ

ನೈತಿಕತೆ ನೆತ್ತರಾದರೆ ಸಿಗುವುದು ಆನಂದ,
ಕೈಹಿಡಿದ ಸ್ನೇಹ ಆತ್ಮ ಸಂಗಾತಿಯಾದರೆ ಕಳೆವ ಕ್ಷಣಗಳೆಲ್ಲ ಚಂದ.

ಜನನ, ಮರಣ ಮತ್ತು ಅಂತರಂಗದ ನವ ಜ್ಯೋತಿಗೆ ಗುರುವಾದ ದಿನವಿದು,
ಬುದ್ಧ ಪೂರ್ಣಿಮದ ಆಚರಣೆ ಎಂದರೆ ಸಾರ್ಥಕತೆಯ ನಿಲುವ ತಿಳಿಯುವುದು.

- nagamani Kanaka

12 May 2025, 01:27 pm

ಬದುಕು

ನನ್ನಬಾಳ ಪುಟಗಳ
ತಿರುವಿ ಹಾಕಿದರೆ ಸಿಗದು
ನನ್ನ ತಾಯಿ ತಂದೆಯ
ಅಪ್ಪುಗೆಯ ಒಲವು.

ತನ್ಮಡಿಲೊಳಗೆ
ಚಂದ್ರನ ಬೆಳದಿಂಗಳ
ರಸದೌತನ ನೀಡಿದಾಕೆ.
ಅವಳೇ ಮಮತೆಯ ಸಾಕರಾಮೂರ್ತಿ.

ಮಗಳಲ್ಲ ಮಗಳು
ತಾಯಲ್ಲ ತಾಯಿ
ಈ ಪ್ರೀತಿಗೆ ಸಮುದ್ರದಾಚೆಗಿದೆ
ತಂಪಾದ ಇಂಪಾದ ಪಿಸುಮಾತುಗಳ ಅಪ್ಪುಗೆ.

ನನ್ನನ್ನಗಲಿದೆ ಇಂದು
ನನ್ನಮನದಲ್ಲಿರುವೆ
ನೀನೆಂದೆಂದೂ ನನ್ನವರಿಂದು
ಯಾರು ಇಲ್ಲ ನಿನ್ನಗಲುವಿಕೆ ನನ್ನಲ್ಲಿಲ್ಲ.

ಹೃದಯದ ಬಡಿತದಿ
ನೀನಿರುವಿ ನಾಡಿಮಿಡಿತದಿ
ಬೆರೆತಿರುವೆ,,,, ಬದುಕುವ
ಹಂಬಲ ನೀಡಿರುವೆ ಅವಳೇ ನನ್ನವ್ವ ನನ್ನ ಸಾಕವ್ವಾ

- ಮೇಘಾ ಬೆಳಧಡಿ

12 May 2025, 01:27 am

ಕವನ ಅಮ್ಮನ ತ್ಯಾಗ.


ಮಡಿಲು ತುಂಬಿದ ಹೆಣ್ಣಿನ ಮೊಗದಲ್ಲಿ ಮೂಡುವುದು ಮಂದಹಾಸ,
ಕಷ್ಟಗಳ ಕರಗಿಸಿ ಹೊಸ ಕನಸುಗಳೊಂದಿಗೆ ಕಳೆವಳು ನವಮಾಸ.

ಸಡಗರದ ಐಸಿರಿಯೆ ಧರೆಗಿಳಿದ ಕಂದ,
ಮನೆಯವರ ಕೈಯಲ್ಲಿ ಹೊಳೆವ ಮಣಿಯಾಗಿ ಮೆರೆದ.

ಅಮ್ಮನ ಹಾರೈಕೆಯಲಿ ಸ್ವರ್ಗದ ಸುಖವಿತ್ತು,
ಹೃದಯದ ಗೋಪುರದಲ್ಲಿ ಮಗುವಿನ ಮುಂದಿನ ಭವಿಷ್ಯವಿತ್ತು.

ಅಪೂರ್ವ ಚಿಂತನೆಗಳ ಅಮ್ಮನ ಅರ್ಪಣೆಯ ಭಾವ,
ಬೆವರರಿಸಿ ದುಡಿದು ಬೆಳೆಯಲು ಅಸುಳೆಗೆ ಪ್ರೇರಣೆಯ ಜೀವ.

ಕಂದನ ಮಂಗಳ ಕಾರ್ಯಕ್ಕೆ ಸುಧೆಯು ಅಮ್ಮ,
ಹರ್ಷದಲಿ ಅಪ್ಪುವಳು ಮಕ್ಕಳು ಪ್ರಗತಿ ಕಂಡ ಜೀವನ.

ತ್ಯಾಗ ಪ್ರೀತಿಗೆ ಸಾಕ್ಷಿಯಾದ ಜನನೀ,
ಸಂಸಾರ ನಡೆಸುವಳು ಮಕ್ಕಳಿಗಾಗಿ ಬಚ್ಚಿಟ್ಟು ಕಂಬನಿ.

ಕೋಟಿ ಗಳಿಸಿದರು ಸಾಧ್ಯವೆ‌ ಕೊಳ್ಳಲು ದೇವತೆಯ ಕರುಣೆಯನ್ನ,
ಗಂಜಿ ಕುಡಿದರು ಬಿಡಬಾರದು ಸ್ವಾಭಿಮಾನವನ್ನ.

ಮಕ್ಕಳ ಕೋಪವ ಕೊನೆಗೊಳಿಸುವಳು ತಾಳ್ಮೆಯಲ್ಲಿ,
ಸುವ್ಯವಸ್ಥಿತ ನಾಗರೀಕನಾಗಲು ಬಯಸುವಳು ಪೊರೆವ ನಾಡಲ್ಲಿ.

ನೋಯಿಸದಿರು ಮಗುವೆ ಜನ್ಮವಿತ್ತ ತಾಯಿಯನ್ನ,
ಸದಾ ಪೂಜಿಸು ಶೋಕ ವಿಮುಕ್ತಿಮಾಡುವ ಸುಮತಿಯನ್ನ.

ಮಾತೆಯ ಮಮತೆಯ ಸ್ಮರಿಸಿ ಮಕ್ಕಳೆ ನಿಮ್ಮ ಸಂಸ್ಕಾರದಲಿ,
ಅಮ್ಮನಿಗೆ ಝೈಕಾರ ಮೊಳಗಿಸಿ ಶ್ರೇಷ್ಟತೆಯ ಕೀರ್ತಿಯಲಿ.

- nagamani Kanaka

11 May 2025, 06:06 pm

ಮಳೆಯಲ್ಲಿ

"ಮೊದಲ ಬಾರಿ ನಿನ್ನ ಕಂಡಾಗ
ಕಂಪಿಸಿತು ಈ ಹೃದಯ "
ಮತ್ತೆ ಯಾರೇ ಕಂಡರು ಪ್ರತಿಕ್ರಿಯೆಸದೆ
ಹೋಯಿತು ಈ ಹೃದಯ
ನಿನ್ನ ಕಣ್ಣುಗಳಲ್ಲಿ ನೀರ ನಾ ನೋಡಲಾರೆ
ನಿನ್ನ ಬಿಟ್ಟು ನಾ ಬದುಕಲಾರೆ
ನಿಂತಿದ್ದೆ ಕೆಲ ದಿನಗಳು ನಿನ್ನ ಹಗಲಿಮಳೆಯಲ್ಲಿ
ನಿನ್ನ ನೋಡಿದ ತಕ್ಷಣ ಸಿಡಿಲು ಬಡಿದಂತಾಯಿತು
ನನ್ನೆದೆಯಲ್ಲಿ

- Sanju gubbi Bhagya

11 May 2025, 04:23 pm

ಬಂಗಾರದ ಪುಟದಂತೆ ತೆರೆದ ಮನ.


ಕೆಸರಾಗಿದೆ ಮನದ ಕೊಳ,
ಗಾಳಕ್ಕೆ ಸಿಲುಕಿದ ಚಿಂತನೆಗಳಲ್ಲಿ.
ಸುಂಟರಗಾಳಿ ಸುತ್ತುತ್ತಿದೆ ನಿರ್ಧಾರವಿಲ್ಲದ ಮೆದುಳಿನಲ್ಲಿ,
ಅಮೃತವನುಣಿಸಿ ಜೊತೆಯಾಗುವವರಿಲ್ಲ ಭೂಮಂಡಲದಲ್ಲಿ.

ಕಲ್ಲಂತೆ ಗಟ್ಟಿಯಾಗಿರಬೇಕು ನಮ್ಮೊಳಗೆ ನಾವು,
ಹಾಲಂತೆ ತಿಳಿಯಾಗಿದ್ದರೆ ಕಾಡದು ನೋವು.
ಸಜ್ಜನರ ಮೊಗದಲ್ಲಿ ಸಂತಸದ ಚೆಲುವು,
ಶುದ್ಧ ಮನಸ್ಸೊಂದು ಮುಗುಳ್ನಗೆಯ ಹೂವು.

ಬೇವಂತ ಕಷ್ಟಗಳ ಅಪ್ಪಿಕೊಳ್ಳಬೇಕು ಮೊದಲು,
ಜ್ಞಾನವಿರಬೇಕು ತಟಸ್ಥ ಗುರಿಯ ವಿಮರ್ಶಿಸಲು.
ಉತ್ಸಾಹದ ಕೆಲಸವೇ ಮಾಧುರ್ಯದ ಸಾಲು,
ಸೃಜನತೆ ಸಂಶೋಧಕರ ಪಾಲು, ಪ್ರಶಸ್ತಿ ಪಡೆಯಲು.

ಬಂಗಾರದ ಪುಟದಂತೆ ತೆರೆದ ಮನ,
ತಾಳ್ಮೆಯ ಸಿರಿಯಲ್ಲಿ ಮೆರೆಯುವ ಚೇತನ.
ಪಾದರಸದಂತೆ ಬೆರೆಯುವರು ಸಮಾಜವನ್ನ,
ಮಾನವ ಬದಲಾಗಿ ಬೆಳೆಸಿಕೊಳ್ಳಬೇಕು ಇಂತಹ ವ್ಯಕ್ತಿತ್ವವನ್ನ.

- nagamani Kanaka

08 May 2025, 04:02 pm

ಕವನ ಸಮಾಜದ ನಂದಾದೀಪ.


ಕಾಯಿ ಸಿಕ್ಕಾಗ ಹಣ್ಣು ಮಾಡುಲು ಹುಡುಕುವ ಪ್ರಯತ್ನದ ಮಾರ್ಗಗಳೇ ಕ್ರಿಯಾಶೀಲತೆ,
ರಸಾ ತುಂಬಿದ ಹಣ್ಣನ್ನು ಬಳಸುವ ವಿಧಾನವೇ ಆತ್ಮಿಯತೆ.

ತಂಪೆರೆವ ವೃಕ್ಷಕ್ಕೆ ನೆಮ್ಮದಿಯ ನೀರಾಗಬೇಕು,
ಸುಸ್ತಿಗೆ ಆಸರೆಯಾದ ನೆರಳನ್ನು ಜೀವನದ ಪಯಣದಲ್ಲಿ ನೆನಪಿಡಬೇಕು.

ಬಾಹ್ಯ ನೋಟ್ಟಕ್ಕೆ ಸೆರೆಯಾಗುವುದು ಪ್ರಕೃತಿಯ ಸೌಂದರ್ಯ,
ವಾಸ್ತವ ಸನ್ನಿವೇಷ ಅರಿಯಲು ತೆರೆಯುವುದು ಉದಾತ್ತ ಗುಣಗಳ ಆಂತರ್ಯ.

ಕಾಲಗಳು ಬದಲಾದಂತೆ ಚಿಂತನೆಗಳು ಬದಲಾಗಬೇಕು,
ಹಿಂದಿನದನ್ನು ಆಪೇಕ್ಷಿಸದೆ ಕಷ್ಟವಾದರೂ ಇಂದಿನ ಜೊತೆ ನಡೆಯಬೇಕು.

ಪ್ರಾಣವಿರದ ದೇಹಕ್ಕಿಲ್ಲ ಮೌಲ್ಯ,
ನಿರ್ಧಾರಿತ ಹೃದಯಕ್ಕೆ ಅರ್ಥವಾಗದು ಭಿನ್ನಹದ ತಾತ್ಪರ್ಯ.

ಬಿದ್ದಾಗ ಎತ್ತಿದವರು ನನ್ನವರೆಂದು ಬೀಗಬೇಡ,
ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿ ಮುಂದೆ ನಡೆಯಬೇಕು ನೋಡ.

ಬಯಕೆಗಳ ಸಾಲು ತಿರಸ್ಕಾರದ ಪ್ರತೀಕ,
ವಿನಮ್ರತೆಗೆ ತೆರೆಯದ ಸ್ನೇಹ ನಿರರ್ಥಕ.

ಪಡೆದ ಜ್ಞಾನದ ಅನುಭವಗಳೇ ಮುಂದಿನಮಾರ್ಗದರ್ಶಕ,
ಸಮಾಜದ ನಂದಾದೀಪವಾಗಿ ನೊಂದವರ ಕಣ್ಣೀರೊರೆಸುವುದೇ ಸಾರ್ಥಕ.

- nagamani Kanaka

08 May 2025, 03:57 pm

ಅವಳು

ಅವಳನು ನೋಡಲು ಸಾಲದು ನನ್ನ ಎರಡು ಕಣ್ಣು...!
ಅವಳಿಗಾಗಿ ಆದರೂ ಸರಿಯೆ ನಾ ಮಣ್ಣಲ್ಲಿ ಮಣ್ಣು...!
ಅವಳೆ ನನ್ನ ಮನೆಯ ದೀಪ ಹಚ್ಚುವ ಹೆಣ್ಣು.............!!

- Harish Gowda

08 May 2025, 09:05 am

ಚಿಕನ್ ಪ್ರಭಾವ

ದೇಹಕ್ಕೆ ಕೊಡದಿದ್ದರೆ ದಂಡನೆ....................!
ದೇಹ ಆಗುವುದು ದುಂಡನೆ........................!
ಮನಸು ಎಷ್ಟೇ ಮಾಡಿದರು ಖಂಡನೆ.............!
ನಾಲಿಗೆ ಮಾತ್ರ ಕೇಳುವುದು ಚಿಕನ್ ತುಂಡನೆ...!!

- Harish Gowda

04 May 2025, 11:45 am

ಮನದ ಮಾತು

ಹೇಳಿಬಿಡಲೇ ನಾನು ನಿನಗೆ
ನನ್ನೊಳಗವಿತಿರುವ ಗುಟ್ಟು
ಮನದ ಬೇಗೆಯನರುಹಿ
ಹಗುರಾಗಬೇಕಿದೆ ಈ ಹೃದಯವು
ಪ್ರೀತಿಯ ಅಪ್ಪುಗೆಯ
ಬಯಸಿದೆ ಈ ಮನವು
ಸಂತೈಸುವ ಹೊಣೆ ಈಗ ನಿನ್ನದು.....
ಅತ್ತು ಹಗುರಾಗಲು
ಬೇಕಿದೆ ಮಮತೆಯ ಮಡಿಲು
ನೀ ತೋರುವೆಯಾ ಭರವಸೆಯ ಬೆಳಕು
ಮೌನದಿ ಕಾಳಜಿಯ, ಪ್ರೇಮದ ಒಲುಮೆಯ
ನೀಡುವೆಯಾ ನನಗಾಗಿ ನೀನು.....
ಇರುವೆಯಾ ನನ್ನೊಂದಿಗೆ ಎಂದೂ.....

- ಸಖೀ

26 Apr 2025, 09:25 pm