Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನವಳ ನಗು....

ಹೆಣ್ಣಿನ ಮುಖದಲ್ಲಿ...
ಮೌನವೇ ಬಂಗಾರ.

ನಾಚಿಕೆ...
ಅದಕೆ ಸಿಂಗಾರ.

ಕೈ ಬಳೆಯ ನಾದ ದಲ್ಲಿ...
ಕಾಲ್ಗೆಜ್ಜೆಯ ಸದ್ದಿನಲ್ಲಿ.

ಎಲ್ಲೋ ಕೇಳಿಸುವುದು...
ನನ್ನವಳ ನಗು...

- Chethan N

23 Dec 2019, 02:08 pm

ಆ ಮಮತೆಯ ಸಂಚಲನ

ಅಮ್ಮ ಎಂಬ ಕೂಗನ್ನು ಮರೆತಿದ್ದೆ ದಶಕದಿಂದ
ಕಾರಣ, ಅಪ್ಪ ಎಂಬ ವಸ್ತುವಿನ ಪ್ರೀತಿಯಿಂದ

ಮರೆತದ್ದು ಅಮ್ಮ ಎಂಬ ಪದವನ್ನಷ್ಟೇ
ಅವಳ ಹಳೆಯ ನೆನಪುಗಳನ್ನಲ್ಲ
ಮರಳಿ ಮರುಕಳಿಸಿದೆ ನೆನಪುಗಳು

ಆಕೆಯ ಜೊತೆ ಕೈ ಹಿಡಿದು ಜಾತ್ರೆಯಲ್ಲಿ ಸುತ್ತಿದ್ದು,
ಆಕೆ ಹೊಡೆದದ್ದು, ಬೈದದ್ದು, ಅತ್ತಿದ್ದು, ಮುತ್ತಿಟ್ಟಿದ್ದು,
ಹಸಿವಾಗುವ ವೇಳೆಗೆ ತುತ್ತಿಟ್ಟಿದ್ದು, ತಿನ್ನದಿದ್ದಾಗ ತಟ್ಟಿದ್ದು,
ಗಾಯಕ್ಕೆ ಮುಲಾಮು ಹಚ್ಚಿದ್ದು, ತಟ್ಟುತ್ತಾ ಮಲಗಿಸಿದ್ದು,
ಸಾಸಿವೆ ಡಬ್ಬದಲ್ಲಿ ಕಾಸನ್ನು ಅಪ್ಪನಿಗೆ ತಿಳಿಯದೆ ಬಚ್ಚಿಟ್ಟಿದ್ದು,
ಕೇಳಿದ ಆಟಸಾಮನು ಕೊಡಿಸಿದ್ದು, ಕೇಳದೆ ತಿಂಡಿ ತಿನಿಸಿದ್ದು,
ಕಡೆಗೆ ಅವಳು ಸತ್ತಿದ್ದು, ಸುಟ್ಟಿದ್ದು..ಹೇಗೆ ಮರೆಯುವುದು??

ಕಾಣದೂರಿಗೆ ಹೇಳದೇ ಪಯಣಿಸಿದಳು
ಏನೂ ಅರಿಯದ ಮಗುವನ್ನು ಬಿಟ್ಟು ಹೋದಳು

ಯಾರ ಜೊತೆ ಜಾತ್ರೆಯಲ್ಲಿ ಸುತ್ತುವುದು?
ಯಾರ ಕೆನ್ನೆಗೆ ಮುತ್ತನಿಡುವುದು?
ಹಸಿದಾಗ, ಬಿದ್ದಾಗ, ಅತ್ತಾಗ, ದಿಕ್ಕೆಟ್ಟಾಗ,
ನೋವಿರಲಿ, ನಲಿವಿರಲಿ ಯಾರಿಗೆ ಹೇಳುವುದು?

ಅವಳ ಕೈ ಹಿಡಿದಾಗ ಆಗುವ ಮಮತೆಯ ಸಂಚಲನ
ಬೇಕಿದೆ. ಮತ್ತೆಂದೂ ಸಿಗದ ಆ ಏಕೈಕ ಸಂಚಲನ

- ಬಿ.ಎಂ.ವಿ

- venkatesh murthy

23 Dec 2019, 05:31 am

ಗೆಳೆತನ.....

ಬಾಲ್ಯದ ಈ ಸಂಬಂಧ
ಬೆರೆಯುವ ಗುಣದ ಅನುಬಂಧ
ಅದುವೇ ಈ ನನ್ನ ನಿನ್ನ
ನಡುವಿನ ಗೆಳೆತನ..

ಕತ್ತಲೆಯನ್ನು ಕವಿತ ಬದುಕಿಗೆ
ಬೆಳಕನ್ನು ಚೆಲುವ ಈ ಸ್ನೇಹ
ಬಿಸಲಾಗದ ಒಂದು ಸ್ನೇಹ ಬಲೆಯೇ
ಈ ಸುಂದರವಾದ ಬಂಧನ.....

ಜಾತಿ-ಭೀತಿ ಭೇದವಿಲ್ಲ
ಈ ಭಾವದ ಬಂಧಕೆ
ಮನಸ್ಸು ನೋವಿಗೆ ಒಲವು
ತುಂಬುವುದು ಈ ಗೆಳೆತನ...

ಸ್ನೇಹದ ಭಾವನೆಗಳಿಗೆ
ಬೆಸೆಯಬೇಕು ಮುತ್ತಿನ ಹಾರ
ಏಕಾಂತದ ಒಂಟಿತನಕೆ
ಹೊಸತೇ ಈ ಗೆಳೆತನ......

- Ajay

22 Dec 2019, 10:14 pm

"ಅಹಂಕಾರದ ಕೇಡು"

"ಅಹಂಕಾರದ ಕೇಡು"

ತರವೆ ನಿನಗೆ ಅಹಂಕಾರ ಗರ್ವ
ಯೌವನದ ಸೊಬಗು ಮಾನಸ ಪರ್ವ
ಮುಂಗುರುಳು ಚೆಲುವ ಕಣ್ಣು ಚಿತ್ತಾಕರ್ಷಕ
ಬೆಳ್ಮುಗಿಲ ಚೆಲುವ ಮೈಮಾಟ ಮೋಹಕ.

ಚೆಲುವನರಸಿ ಮಧುವನೀರಿ ಹಾರಿಹವು ಎಚ್ಚರ
ಕ್ಷಣಿಕ ತೃಪ್ತಿ ಮೋಹಕ ಮನದಾಚೆ ನೋವು ನಿರಂತರ
ಸುತ್ತಿ ಸುತ್ತಿ ಚಿತ್ತಭ್ರಮಿಸಿ ಮನವ ತಣಿಸೆ ಕಾತರ
ಒಲವ ಪಡೆವ ಆಸೆಕಂಗಳ ಮನದ ಚಿತ್ತಾರ.

ಓ ಮಾನಿನಿಯೇ ಅಹಂಕಾರ ಪಡದಿರು
ಇದ್ದಾಗ ಇಲ್ಲ ಸಲ್ಲದ ಗೌರವ ಸನ್ಮಾನ
ಕಳೆದಾಗ ಮಾತು ನೀರವ ಮೌನ ಸ್ಮಶಾನ
ಸತ್ತಾಗ ...!!!???

ಸ್ನಾನವ ಮಾಡಿಸಿ ಶ್ವೇತಾಂಬರ ಹೊದಿಸಿ
ಕೈತುಂಬ ಬಳೆಯ ತೊಡಿಸಿ
ಹಣೆಗೆ ಕುಂಕುಮ ಚಂದನವ ಲೇಪಿಸಿ
ಮುಡಿ ತುಂಬ ಹೂವ ಮುಡಿಸಿ
ಹೂತಾಗ...!!!!????

ಅದುವೆ ನೋಡು ನಮಗೆ ಶಾಶ್ವತ ತಾಣ
ಗೆದ್ದಲುಗಳಿಗೆ ಸಂಭ್ರಮ ರಸದೌತಣ
ಸೌಂದರ್ಯದಿಂದ ಬಂದಾ ಕೇಡು
ಮಣ್ಣಲ್ಲಿ ಮಣ್ಣಾಯಿತು ನೋಡು.

By- GP

- gp

21 Dec 2019, 10:12 pm

ತಾಯಿ ಪ್ರೀತಿ

ಶಿಖರವನ್ನೇರಬೇಕೆಂದಾಗ ಕೆಲವರೆಲ್ಲ
ಗಹ ಗಹಿಸಿ ನಕ್ಕರು, ಹಂಗಿಸಿದರು,
ಅವಳು ಮಾತ್ರ ನಾ ಹತ್ತಲು ಬೇಕಾದ
ಸಿದ್ದತೆ ಮಾಡುತ್ತಿದ್ದಳು..

ಶಿಖರವನ್ನೇರುತ್ತಿರುವಾಗ ಕೆಲವರೆಲ್ಲ
ಕಲ್ಲು ಬಿಸಾಡಿದರು, ಹುಚ್ಚನೆಂದರು
ಅವಳು ಮಾತ್ರ ದೇವರಲ್ಲಿ
ನನಗಾಗಿ ಪ್ರಾರ್ಥಿಸುತ್ತಿದ್ದಳು..

ಇನ್ನೇನು ಶಿಖರವನ್ನೇರಬೇಕು ಎಲ್ಲರೂ
ನನ್ನನ್ನು ಅವರ ಆತ್ಮೀಯನಂತೆ ಕಾಣುತ್ತಿದ್ದರು
ಅವಳು ಮಾತ್ರ ಉಟ ನೀರು ಬಿಟ್ಟು
ಆಸೆಗಣ್ಣಲ್ಲಿ ನನಗಾಗಿ ಕಾಯುತ್ತಿದ್ದಳು..

ಶಿಖರದ ತುತ್ತ ತುದಿಯನ್ನೇರಿದೆ
ಊಹಿಸಲಸಾಧ್ಯವಾದ ಜನರನ್ನೆಲ್ಲ ಕಂಡೆನು
ಆಕೆ ಮಾತ್ರ "ಇಳಿಯುವಾಗ ಜಾಗೃತೆ ಮಗನೆ"
ಎಂದು ಕಿವಿ ಮಾತು ಹೇಳುತ್ತಿದ್ದಳು..

- ಅಕ್ಷತ

21 Dec 2019, 07:30 pm

ಗುಪ್ತಗಾಮಿನಿ

ಗೊತ್ತಿತ್ತು ನನಗೆ ನೀನೊಂದು ಗುಪ್ತಗಾಮಿನಿಯೆಂದು

ನಿನಗೂ ಗೊತ್ತಿತ್ತು ನಾನು ಛಲ ಬಿಡದ ತ್ರಿವಿಕ್ರಮನೆಂದು

ಅಶ್ವಮೇಧದ ಕುದುರೆಯ ಲಗಾಮು ಹಿಡಿಸುವ ನಿನ್ನ ನಯನಗಳ ಅಭಿಮಾನಿನಾನೆಂದು

ನೀ ಸೋಲದಿರು ಈ ಆಟದಲ್ಲಿ , ನಿನ್ನ ಪಡೆವರೆಗು ಪವಣಿಸದ ಪರಮಾತ್ಮನಿಲ್ಲಿ.

ನೀ ಸೋತರು ನಾ ಗೆದ್ದರೂ ಅಮರ ಪೇಮಿಗಳು ನಾವಿಲ್ಲಿ.

- Chiru

19 Dec 2019, 10:59 pm

ಅಲೆಮಾರಿ

ಅಲೆಮಾರಿಯಾಗುವಾಸೆ
ಬರಿದೆ ನೋವ ಬದುಕ ಮರೆತು
ಜಗದ ಜನರ ನಡುವೆ ಬೆರೆತು
ಚಲಿಸುವಾಸೆ ತೀರಾ ಮರೆತು
Rakshitha holla

- Rakshitha ks

19 Dec 2019, 10:27 pm

ನನ್ನವಳು

ಅವಳ ಕಣ್ಣಿನ
ಕಾಮನಬಿಲ್ಲಿನಿಂದ ಬಂದ ಬಾಣ
ನನ್ನ ಹೃದಯಕ್ಕೆ ತಾಕಿದಾಗ ,.
ನಾ ನನ್ನ ಅಂತರಾತ್ಮವನ್ನು ಕೇಳಿದೆ
"ಯಾರು ಆ ಚೆಲುವೆ ?.."
ನನ್ನ ಅಂತರಾತ್ಮ ಹೇಳಿತು
"ಅವಳೆ ನಿನ್ನವಳು"

ನನ್ನವಳ ಸೌಂದರ್ಯಕ್ಕೆ ಮರುಳಾಗಿ
ನನ್ನನೇ ಮರೆತೆ ನಾ...
ಅವಳ ಗುಂಗಲ್ಲೇ ಕಳೆದುಹೋದೆ ನಾ...

- Li.Rakri.ShGowda

17 Dec 2019, 02:23 pm

ಸ್ನೇಹ

ಸೃಷ್ಟಿಯ ಸದೃಶ್ಯ ದಲ್ಲಿ ನಕ್ಷತ್ರದಂತೆ ಹೊಳೆಯುವ ಮನಸ್ಸು ಚಂದ ಮಿಂಚಂತೆ ಸಂಚರಿಸಿ ಕಂದನ ಅಪ್ಪುಗೆ ಯಂತೆ ಮನದೊಳಗೆ ಬೆಸೆದ ಮನಸ್ಸು ಎಂತ ಚೆಂದ ಮಮತೆಯ ಮಡಿಲಲ್ಲಿ ಮುಳುಗಿರುವ ಮನಗಳ ನಡುವೆ ಮೂಡಿತು ಮುಗ್ಧತೆಯ ಹೃದಯ ಸಂಬಂಧ ಸ್ಪಷ್ಟತೆಯ ಬದುಕಿನಲ್ಲಿ ಕಾಲಚಕ್ರದ ಸುರುಳಿಯಲ್ಲಿ ಸೃಷ್ಟಿಯಾಗಿದೆ ಸುಂದರ ಮನಸ್ಸುಗಳ ನಡುವೆ ಬಿಡಿಸಲಾರದ ಅನುಬಂಧ ನಂಬಿಕೆಯ ದೋಣಿಯಲ್ಲಿ ಪ್ರಯಾಣಿಸುವ ಭಾವನೆಗಳು ನೀಡಿವೆ ಮನಕೆ ಮಹದಾನಂದ ಭರವಸೆಯ ಭಾವದಲ್ಲಿ ವಿಶ್ವಾಸದ ಊರಿನಲ್ಲಿ ಮಧು ತುಂಬಿದ ಹೂವು ದುಂಬಿಯಂತೆ ಎರಡು ಹೃದಯಗಳ ಸಂಬಂಧ ಸ್ಥಿರವಾಗಿ ಚಿರವಾಗಿ ಕರುಣೆ ಪ್ರೀತಿ ಸಹನೆಯಲ್ಲಿ ಸದಾ ಹಸಿರಾಗಿರಲಿ ಸುಮಧುರ ಸ್ನೇಹಸಂಬಂಧ ಅನಿರೀಕ್ಷಿತ ಭಾವನೆಗಳ ಬೇಸಿಗೆ ಪ್ರಣತಿಯ ಜ್ಯೋತಿಯಂತೆ ಪ್ರಜ್ವಲಿಸಿ ಮುದ ನೀಡಿದ ಸ್ನೇಹ ಅನುರಾಗದ ಸಂಬಂಧ

- nagamani Kanaka

16 Dec 2019, 08:30 pm

ಒಬ್ಬನೆ ಪಯಣಿಗ

ಪ್ರಜ್ಞಾಪೂರ್ವಕ ಕಣ್ ತೆರೆದು ನೋಡಿದಾಗ ಪಯಣದಲ್ಲಿದ್ದೆ!
ಹೊರಟ ಅರಿವಿಲ್ಲ, ಗುರಿಯ ಪರಿವಿಲ್ಲ.
ಸುತ್ತ ಓಡುವ ಜಗತ್ತು ನಿಂತು ಯೋಚಿಸುವವರಾರು ಇಲ್ಲ!
ನಾ ನಿಂತರೆ ತಳ್ಳಿಕೊಂಡೇ ಹೊರಟವರು,
ಗುರಿ ಅರಿಯದ ಪಯಣಿಗರು.

ಬದಲಾಗುವ ಭಾವನೆಗಳು, ನೆಲೆ ನಿಲ್ಲದೆ ಓಡುವವು.
ಸ್ನೇಹ ಬಾಂಧವ್ಯಗಳು ಕಾಲಚಕ್ರದಲ್ಲಿ ತೆಯ್ಯುವವು.!
ಪ್ರೇಮ ಸ್ನೇಹಗಳ ಬಳ್ಳಿ ಬಳಸಿಕೊಂಡು ನಡೆದವ,
ಋಣ ಬಾಂಧವ್ಯಗಳ ಓಡ ನಡುವೆಯೂ, ನಾ ಒಬ್ಬಂಟಿ ಪಯಣಿಗ.

- ARJUN RAGHAVENDRA

16 Dec 2019, 06:24 pm