Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
೧.
ಮುಂಜಾನೆಯಲಿ ಇಂದು ಮಂಜಿನ ಇಂಚರ...
ಮರೆಮಾಚಲು ಬರುತ್ತಿದ್ದ ಬಾನಿನಲಿ ಭಾಸ್ಕರ...
ತಡೆಯಲು ಬಂದನು ಕಳ್ಳ ಚಂದಿರ...
ತೊಡೆಸಿಯೆ ಬಿಟ್ಟನು ಬಂಗಾರದ ಉಂಗುರ...
➡ ಬಸವರಾಜ್ ಕನ್ನೂರ...
- BasavarajKannur
10 Jan 2020, 12:04 am
ರಾಧೇಯೋರ್ವಳಿರುವಳು ಇಲ್ಲಿ
ಕಾಯುತಲಿ ಮಾಧವನ ದಾರಿ
ಅವನ ನಾಮ ಸ್ಮರಣೆಯಲ್ಲಿ ಮರೆತಿಹಳು
ಉಸಿರ ಬಿಸಿಯ ಗಾಳಿ.
ಮೇಘಶ್ಯಾಮನೆಲ್ಲಿರುವನೋ ತನ್ನನುಡಿಕಿ
ಎಂದಿಗೆ ಬರುವನೋ ತಿಳಿಯದೇನೆ ರಾಧೆ
ಅವನ ಗಾದೆ ಪ್ರೇಮದಿಂದ ಹಾಡುತಿಹಳು
ಹೊಸ್ತಿಲಿಗೆ ಹೇಳುತಿಹಳು.
ಇಟ್ಟ ಸಿಂಧೂರ ಮುಡಿದ ಮಂದಾರ
ಮಾಸದಿರಲಿ ಬಾಡದಿರಲಿ ನನ ಕೃಷ್ಣನ
ಕಾಣುವವರೆಗೂ ಅವನ ನೆರಳು ನನ್ನ
ಸೋಕುವವರೆಗೂ.
ತುಟಿಯ ಕೆಂಪು ಕಪ್ಪು ಕಾಡಿಗೆ ಕರಗದಿರಲಿ
ದೀಪ ಆರದಿರಲಿ ಕನಸು ಕಮರದಿರಲಿ ತಾವರೆ ಬಿರಿಯದಿರಲಿ ಕಮಲ ನಯನಾ ನಿನ್ನ ನೋಟಕೆ
ಸಿಲುಕಿ ನನ್ನ ಮನ ಮರೆಯದಿರಲಿ ನಿನ್ನನುಡಿಕಿ
ನನ್ನ ತೊರೆಯದಿರಲಿ.
- ಚುಕ್ಕಿ
08 Jan 2020, 03:36 pm
ಹೈಕು
---------
೧೨೧.
ಸಂದೀಘ್ದ ಮನಸ್ಸಿನಲ್ಲಿ
ಸವಾಲೆತ್ತುವ ಪ್ರಶ್ನೆ
ವೈರಾಗ್ಯ.
೧೨೨.
ಬ್ರಹತ್ ಶಿಲಾಶಾನದ
ಬಂಡೆಯೂ ಉತ್ತರ ನೀಡುವುದು
'ಬರುವಾಗ ಬೆತ್ತಲೆ
ಹೋಗುವಾಗಲು ಬೆತ್ತಲೆ
ಬಂದು ಹೋಗುವ ನಡುವೆ
ತುಂಬಿಸಿಕೊಳ್ಳದಿರಿ ಕತ್ತಲೆ.'
೧೨೩.
ಯಾವುದೇ ಬಂಧನಕ್ಕೆ
ಒಳಪಡದ ದೇವರು ಬಾಹುಬಲಿ.
೧೨೪.
ಗೊಮ್ಮಟನ
ಕಮ್ಮಟದಲ್ಲಿ
ಮಾಯೆಗೆ ಪ್ರವೇಶವಿಲ್ಲ.
೧೨೫.
ನನಗೆ ನಾನೆ ಗುರು
ನನಗೆ ನಾನೆ ದೇವರು
ಸಾರುವುದು ಗೊಮ್ಮಟನ ಕಲ್ಲು.
೧೨೬.
ಗೆದ್ದು ಸೋತವನು ಭರತ
ಸೋತು ಗೆದ್ದವನು ಬಾಹುಬಲಿ.
೧೨೭.
ಏಕ ಶಿಲಾ ಶಾಸನದಲ್ಲಿ
ಮೂಡಿಬಂದುದೆಲ್ಲ
ಖಾಲಿಯಾದ ಈ ಜೀವನ.
೧೨೮.
'ಎದ್ದು ನಿಂತರೆ
ಜಗವೇ ಬಾಗುವುದು'
ಸಾರುವನಿದನು ಗೊಮ್ಮಟನು.
೧೨೯.
ಮೋಕ್ಷದ ದಾರಿಗೆ
ಚಂದ್ರಗುಪ್ತ ಬಸದಿಯೇ ಸಾಕ್ಷಿ.
೧೩೦.
ಬೆಟ್ಟ ದತ್ತಿದಾಗಲೂ
ಸಿಕ್ಕುವುದು
ಬೆತ್ತಲೆಯ ಮೂರ್ತಿ.
--- ಸುರೇಶ ಜಕಾತಿ.ಜಮಖಂಡಿ
8746086658.
- ಸುರೇಶ ಜಕಾತಿ.ಜಮಖಂಡಿ
06 Jan 2020, 10:10 am
ಚೆಲುವ ಕಂಗಳು
ಗುಳಿಗೆನ್ನೆಯ ಸುಂದರ ನಗುವಿನ ಚಲುವೆ
ಎಲ್ಲರನು ನಗಿಸುತ ನೀ ನಗುತಲಿರುವೆ
ಚೆಲುವ ಕಂಗಳು ನೀನ್ನ ಮೊಗಕೆ ಶೋಬೆ
ಕಾಡಿಗೆ ತೀಡದ ಕಂಗಳಲಿ ಕೂಡಿ ನೋಟ ಬಿರುವೆ
ನಿನ್ನ ಚೆಲುವ ಕಂಗಳು ಬೆಳದಿಂಗಳಂತೆ..
ತಿಂಗಳಿಗೊಮ್ಮೆ ಬರುವ ಹುಣ್ಣಿಮೆ ಚಂದಿರನಂತೆ
ನಿದಿರೆಯ ಮರೆಸುವ ಮದಿರೆಯ ಮೆರೆಸುವ
ಅದರದದದರದಲಿ ಮರೆಯದ ಚೆಲುವ ಕಂಗಳು
ಚೆಲುವ ಕಂಗಳ ಹಿಂದೆ ನೂರಾರು ನೋವು
ತೋರ್ಪಡಿಸದೆ ಹಾಕುವೆ ನೀ ನಗುವಿನಾ ಸೋಗು
ಬಚ್ಚಿಟ್ಟು ಮುಚ್ಚಟ್ಟು ಭಾರವಾಗಿದೆ ಹೃದಯವು
ಕಂಗಳಲ್ಲಿ ಕಂಬನಿಯ ಸುರಿಸಿ ಹೊರ ಹಾಕಿದೆ
ಯಮನೂರ ಹಂಚಿನಾಳ ✍️
ಭಾವನೆಗಳ ಹಾದಿಯಲ್ಲಿ
ಈ ಜೀವನ
- yamanur
05 Jan 2020, 06:41 pm
ದಿನದ ಬದುಕು
ತಂಗಾಳಿಗೆ ಹೊಯ್ದಾಡಿ
ನಗುವ ಹೂಗಳ ಮುಂದೆ
ನಾ ಮನಸಾರೆ ಮೆಚ್ಚಿ
ಮೈಮರೆತು ನಿಂದೆ
ಸದಾ ಗಿಡದಲ್ಲಿರುವಂತೆ
ಹೂಗಳಿಗೆ ಹೇಳಿ ಬಂದಿದ್ದೆ
ಮಾತು ಬಾರದ ಹೂವಿಗೆ
ಸಮ್ಮತಿಯೇ ಎಂದು ಕೇಳಿದ್ದೆ
ಆ ದೃಶ್ಯ ಒಂದೇ ದಿನಕೆ
ಸಮರದಲಿ ಜೀವತೆತ್ತಂತೆ
ಹೂವಿಲ್ಲದೆ ಬೋಳಾದ
ತೋಟ ಕಂಡು ಬೆಚ್ಚಿನಿಂತೆ
ಎಲ್ಲರ ತಲೆ ತೆಗೆದರೂ
ಮರೆಯಲ್ಲಿ ಅವಿತಿದ್ದ
ಹೂವೊಂದ ನೋಡಿ
ಮಾಲಿ ಬಂದು ಕಿತ್ತಿದ್ದ
ಹತಾಶನಾದ ನಾನು
ಮನದಿ ನೊಂದಿದ್ದೆ
ಯಮನೂರ ಹಂಚಿನಾಳ ✍️
- yamanur
05 Jan 2020, 06:39 pm
ಅವನು
---------
ನಲಿವುಗಳ ಆಚೆಯಲಿ
ನಾವಿಡುವ ಹೆಜ್ಜೆಗಳಲಿ
ಶಾಂತಿಧೂತನ ಪಾತ್ರ .
ಅವನೆತ್ತರಕೆ ಬೆಳೆಯಲು
ಅವನಿಟ್ಟ ಕಸ್ತೂರಿ
ಮೂಸಿಸಲು ನಮಗೆ ಸಮಯವಿಲ್ಲ.
ಕಿರುನಾಲಿಗೆಗೊಂದು
ಹಿರಿನಾಲಿಗೆಯ ಆಶ್ರಯ
ದೇವನೊಲುಮೆಯ ಕೀರ್ತಿ.
ಸಂತೋಷವ ಗಳಿಸಿಡಲು
ಮುಪ್ಪು ಆವರಿಸುವ ಮುನ್ನ
ಒಳಹೊಕ್ಕು ನೋಡೊಮ್ಮೆ ಅವನ.
ಅವನಂದುಕೊಂಡದ್ದು
ನಾವಿಂದು ಕೊಂಡದ್ದು
ಎರಡೂ ಒಂದೇ.
-- ಸುರೇಶ ಜಕಾತಿ.ಜಮಖಂಡಿ
8746086658.
- ಸುರೇಶ ಜಕಾತಿ.ಜಮಖಂಡಿ
05 Jan 2020, 09:46 am
ಹೈಕು
______
೧೦೧.
ಇದೆಂತಹ ಮೋಡಿ
ರಜೆ ಬಂದರೆ ಸಾಕು
ಓದುವ ಕಣ್ಣು, ಕಿವಿ ,ಮೂಗು ,ಬಾಯಿ
ಎಲ್ಲಾ ಒಂದೇ ಕಡೆ ಕೂಡುವವು.
೧೦೨.
ಸುಖದ ಸಂಸಾರಕ್ಕೆ
ತಾಪತ್ರಯಗಳೇ ಕಾರಣ.
೧೦೩.
ಕಣ್ಣು ಮಿಟುಕಿಸಿದಾಗಲೊಮ್ಮೆ
ಕಾಣುವ ಕುಂಟ ನೆಪ
ದೊಡ್ಡ ಅವಕಾಶವನ್ನೇ ಸೃಷ್ಟಿಸುವುದು.
೧೦೪.
ನಾವಿದ್ದಷ್ಟೂ ನಮ್ಮ ವಯಸ್ಸು.
೧೦೫.
ಹಣೆಬರಹದ ಹೊಣೆತನಕ್ಕೆ
ದೃತರಾಷ್ಟ್ರನೂ ಮರುಗಿದ.
೧೦೬.
ಕೌರವರೆಂದರೆ ಯಾರೆಂದುಕೊಂಡಿದ್ದೀರಿ?
ಅವರು, ನಮ್ಮೊಳಗಿರುವ ಅವಗುಣಗಳು.
೧೦೭.
ನಮ್ಮನ್ನೆತ್ತಿ ಆಡಿಸಿದ
ಮುತ್ತಾತರಿಗೂ ಗೊತ್ತಿತ್ತು
ಸೃಷ್ಟಿ ಕರ್ತನ ತಾಕತ್ತು.
೧೦೮.
ಮುತ್ತಾತರ ಕಸರತ್ತಿನ
ಫಲವೇ ಇಂದಿನ ನಾವು.
೧೦೯.
ಅವರೂ ಒಂದು ದಿನ
ಬಾಡಿ ಹೋಗುವರು.
೧೧೦.
ಕುಡಿಯಲಾಗದೇ
ಕೊನೆಯುಸಿರೆಳೆವಾಗ
ಬಾಯೊಳಗೆ ನೀರು ಬಿಡುವರು.
೧೧೧.
ತತ್ತು ಅಣ್ಣ ನೀಡದೇ
ಹೊತ್ತು ಹಾಕಿದ
ಮಕ್ಕಳು .
೧೧೨.
ನಾವಂದು ಕೊಂಡದ್ದನ್ನು
ಸಾಧಿಸಲಾರದ
ಗಳಿಗೆಯೇ ಮೌನ.
೧೧೩.
ಔಷದೀಯ ಗುಣ
ನಮ್ಮ ನಡುವಳಿಕೆ.
೧೧೪.
ನೆಮ್ಮದಿಯ ಉಸಿರಾಟಕ್ಕೆ
ಪ್ರಾಣಾಯಾಮದ ಸಂಭ್ರಮ
೧೧೫.
ಸತ್ಯ ಒಂದೇ
ಅದು ಪರಾಕಾಷ್ಠೆ!
೧೧೬.
ತ್ಯಾಗಕ್ಕೂ ಒಂದು
ಅಪವಾದ ಬಲಿದಾನ.
೧೧೭.
ತಾಳ್ಮೆಗೊಂದು ಮಿತಿ
ಗಂಡ ಹೆಂಡಿರ ಪ್ರೀತಿ.
೧೧೮.
ತವರು ಮನೆಯಾಗಿದೆ
ನಮಗೆ ಭಾರತ.
೧೧೯.
ತಿದ್ದಿ ತೀಡಿದರೂ
ಬರಲಿಲ್ಲ ಬುದ್ದಿಗೇಡಿತನ.
೧೨೦.
ಬುದ್ದಿಗೇಡಿಯಾಗಲು
ಕುಡಿದು ಬಿದ್ದ ಯುವಕನೇ ಸಾಕ್ಷಿ.
//ಸುರೇಶ ಜಕಾತಿ.ಜಮಖಂಡಿ//
8746086658.
- ಸುರೇಶ ಜಕಾತಿ.ಜಮಖಂಡಿ
05 Jan 2020, 09:11 am
ಮುಂಡಿಗೆ ಪದ್ಯ-೦೩
___________________
ಬರಹದುರಿಗಿನ್ನೂ ಬದುಕುವುದು ಎಕೆ?
ಸಾಕು ಸಲುಹೆನ್ನ ಮಂದಾರ ಗಿನಿಯೇ
ಬಾಯ್ತುಂಬ ಹೊಗಳುವರ ಬೇಗುದಿಗೆ ನೀ ಸಿಕ್ಕು
ಸೊಡರು ಮಾತಿನಿಂದ ಜಂಬ ಕೊಚ್ಚಿ.
ಅರಸನೂ,ಮಂತ್ರಿಯೂ ಆಗಬಹುದೇನೋ
ನೀನೆರೆವ ನೀಕೊರೆವ ಬದುಕು ಬವನೆ
ಬಂದರಿಯೇ ನಾ ಅದನು ತದಕು ಸೊಡರೆ
ಅದಕವನು ಅಂಜುವನು ನುಂಗುವನು ಒಡವೆ
ಬಂದರೆ ಬಾ ಇನ್ನೂ ಹದಳು ಕೊಳಗಳು
ಅಲ್ಲಿನ್ನೂ ನೀರಿಲ್ಲ ಮೆಲವೂ ತಾ ಹಾಸಿಲ್ಲ
ಸುಂಟರದ ಸದ್ದಡಗಿ ಗೆಲ್ಲತಿಹುದಡವಿ
ಸಂತೆಕಂಡವರಿಗಿನ್ನೂ ಸಾವು- ನೋವು
ಅಂದು ಇಂದಿಗೆ ನಿನ್ನ ಸಂಗಡವೂ ಚೆನ್ನ
ಬರದ ನಾಡಲಿ ಬರುವ ನೀ ಎನ್ನ ಚೆಲುವ
ಉಲಿಯಕೊಂಬುವರವರು ನಲಿದರವರಿಲ್ಲ
ಚೆಲುವ ಚೆನ್ನಿಗರಾಯ ನಿನ್ನಳವೆ ಅವರಿಗಿಲ್ಲ.
ಸದ್ದುಗದ್ದಲವೂ ಸುದ್ದಿ ತೋರಣವೂ
ಎದೆ ಸೀಳಿದರಕ್ತವದಕೆ ಹಾವಿನೆಂಜಲು
ಬಾ ಎಂದರೆ ಬರದಿರುವ ತಮ್ಮನ್ನೇ ಮಾರಿರುವ
ತೊಳಲಾಟದ ಮೌನಕೆ ಶರಣರವರಿಲ್ಲ.
ಬಂದ ಬಾಯಾರಿಕೆ ತೀರಿಸಲು ಮೈದಡವಿ
ತಂದ ತಾಂಬೂಲು ಬಾಯಲ್ಲಿ ಇರಿಸಿ
ಇದು ಚೆಂದ ಮಧು ಸ್ನೇಹ ಎನ್ನತ್ತಲಿದ್ದಾರೆ
ಕಂಡ ಬ್ರಾಂತಿಯನವರು ನೆನೆಯುತ್ತಲಿದ್ದಾರೆ.
ನೀನಾರೋ, ಅವರಾರೋ ನನಗೇತಕೆ ಚಿಂತೆ
ಬಂದು ಹೋಗುವ ನಡುವೆ ಗದ್ದಲದ ಸಂತೆ
ಬರೆವ ಸೂರ್ಯನು ಒಮ್ಮೆ ಕರಗಿ ನೋಡುವನು
ಇವನಲ್ಲಿ ಅವನಲ್ಲಿ ಮೂಗು ತುರಿಸುವನು.
// ಸುರೇಶ ಜಕಾತಿ.ಜಮಖಂಡಿ//
8746086658
- ಸುರೇಶ ಜಕಾತಿ.ಜಮಖಂಡಿ
04 Jan 2020, 06:43 pm
ಆಗಾಗ ಅರಳುವ
ತುಟಿಯಂಚಿನ ಈ ನಗು
ಬಾಡಿ ಹೋಗುವ ಮುನ್ನ
ನೀ ಬಂದು
ನೀರ ಹನಿಸಿ ಹೋಗು,
ಚಿಗುರುವ ನವಿರಾದ
ಕನಸುಗಳು
ಚಿವುಟಿ ಹೋಗದಂತೆ
ಜೋಪಾನವಾಗಿ
ಕಾಪಿಟ್ಟುಕೊ...
- ಅಕ್ಷತ
04 Jan 2020, 12:06 am
ಮುಂಡಿಗೆ ಪದ್ಯ-೦೨
__________________
ಬರುವಾಗಲದು ಬಿಂಕು ಬಿಣ್ಣಾಣದ ಪಾತರಗಿತ್ತಿ
ಅರಮನೆಯಂದದಿ ಸೊಗಸು ವಯ್ಯಾರವ
ಕಂಡು ಹಿಂಜರಿಯದೆ ಬಂದು ನೆಲೆಸಿಹುದು
ನೊಂದು ಸಾಗುವುದು ಈ ಭೂಮಿ ಮೇಲೆ!
ಹಿಂಸೆಯ ತಾಳದ ತಂಬೂರಿಯ ಮೀಟುತ
ದಿನಗಳನೆನಿಸಿ ಮುಂದೆ ದೂಡುತ್ತ
ಎಷ್ಟು ದಿನವಿದಕೆ ಬಾಯಾರಿಕೆ; ಮೇಲೆ ಬಿಸಿ ತಾಪ
ನೂರ್ಮಡಿಲು ಗೆದ್ದಿಹುದು;
ಬಂದು ಒಂದೇ ಸವನೇ ಬಿಕ್ಕುತ್ತಿದೆ.!!
ಇಂದಿಗೆ ನೊಂದಿಹುದು, ನಾಳೆ ಎಂಬುದ ಕನಸು
ಮತ್ತೆ ತಡೆವರಿಸಿ ಬಾಯಾಡಿಸುತ್ತಲಿದೆ
ಮುಂದೆ ನಲಿವುದು ಹಿಂಬದಿಯ ಬಯಲಲ್ಲಿ
ಕೆಸರುಗದ್ದೆಯ ಓಟ ;ಮುಂದೈದು ಪಂಚ ತಾರೆಯರು
ಆರತಿಯ ಬೆಳಗುತಿಹರು!!!
ಸೊಂಟ ಕಟ್ಟಿದ ಭಾಷೆ,ವಿಧ ವಿಧದ ತೃಷೆ ನಮಗೆ
ಬಲಿಯ ಕೊಡಲವರು ಆಡುವರು ಮೃದುಭಾಷೆ
ಆರು ನಾರಿನ ಹಗ್ಗ ಸೊಂಟಕ್ಕೆ ಬಿಗಿದಿಹರು
ಬಿಡಿಸೆಂದು ಭಗವಂತನ ಬೇಡುತಿಹರು!!!!
ಒಂದೇ ಮಗ್ಗುಲಲ್ಲಿ ನಾಲ್ಕೈದು ಮಕ್ಕಳು
ಎಣಿಕೆ ಮಾಡುವುದರೊಳಗೆ ಜೀಕುತಿಹರು
ಎಡದಂಡೆ ಬಲದಂಡೆ ಬಯಲು ಸೀಮೆಯಲಿ
ನಾರಿ ತಾ ವಸ್ತ್ರವಿಡಿದು ಕುಣಿದಿಹಳು!!!!!
ಎದೆ ಅಂಗಿ ಹರಿದಿರಲು ಕಲೆಯೊಂದು ಕಲಿತು
ಬಲಿತ ದೇಹದ ಭಾಗ ಭಾವಕ್ಕೂ ನಿಲುಕದು
ಎದೆಯ ತೂಕದ ಮುಂದೆ ಮತ್ತೆ ಇನ್ನೇನು?
ಕತ್ತು ಹಿಸುಕುವ ಉದ್ಯೋಗದಿ ಭ್ರಷ್ಟ ಭಾವ!!!!!!
ನಯ ವಿನಯದೆದಿರು ಜಾನಕಿಯ ಸೂಚನೆ
ಹಿಂದೆ ಕೈಕೆಯಿಯ ಶಪಥ ಪಟ್ಟಿ
ಮುಂದೆ ಕನ್ಗಳ ಸೊನ್ನೆಯನು ಬರೆಯದೆ
ನೊಂದ ಬಕುತನಿಗಿನ್ನೂ ನಾಲ್ಕು ಗೇನು!!!!!!!
--- ಸುರೇಶ ಜಕಾತಿ.ಜಮಖಂಡಿ
8746086658
ವಿಳಾಸ:- ಶ್ರೀಹರಿ ನಿಲಯ,ಮಹಾಲಿಂಗೇಶ್ವರ ಕಾಲೊನಿ.ಜಮಖಂಡಿ
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕು- 587301
- ಸುರೇಶ ಜಕಾತಿ.ಜಮಖಂಡಿ
03 Jan 2020, 11:15 pm