Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರಾಣ ಹೋಗುವ ಮುನ್ನ...

ಗೆಳತಿ...
ಮನಸಾರೆ ಪ್ರೀತಿಸಿರುವೆ ನಾ ನಿನ್ನ...
ನೀ ದೂರ ಸರಿಸಿದರೆ ಹೇಗೆ ನನ್ನ...
ಮನದೊಳಗೆ ನೋವು ಕಾಡುತಿದೆ ನನ್ನ...
ತಿಳಿಸಿಬಿಡು ಗೆಳತಿ ನಿನ್ನ ನಿರ್ಧಾರವನ್ನ...
ನನ್ನ ಪ್ರಾಣ ಹೋಗುವ ಮುನ್ನ...
ಇಲ್ಲವಾದರೆ ನಾ ಸೇರುವೆ ಮರಳಿ ಬಾರದ ಲೋಕವನ್ನ...
ಇಂತಿ.... ಮಲ್ಲ....

- Mallesh

27 Jan 2020, 05:36 pm

ನಿನೊಬ್ಬನೆ ಇದ್ದೆಯಲ್ಲ ಇಲ್ಲದಂತೆ!!...

ಬಟ್ಟ ಬಯಲೋಳ್ ಬಯಲಾದ ಬಯಲೇಶ್ವರ ಲಿಂಗವೇ!..
ಬಯಲು ಬಯಲಲೇ ಹಿಂಗಿ, ಬ್ರಹ್ಮಾಂಡವನು ಬಯಲೇ ನುಂಗಿ ನಿನ್ನೋಳ್ಳ ಬಯಲೇ ಅಡಗಿ!..
ನಿನೊಬ್ಬನೇ ಇದ್ದೆಯಲ್ಲ!!..ಇಲ್ಲದಂತೆ.
ಎನ್ನ ಅಂತರಂಗವ, ಪಾಪ ಕರ್ಮ ಗಳನು ಬಯಲಲಿ ಬಯಲ ಮಾಡಯ್ಯ.
ಗುರು ಬಸವ ಪ್ರಿಯ ರೇವಣಸಿದ್ದೇಶ್ವರ.

ರಚಣೆ: ಆರ್ ವೀ ಗೌಡರ.
ಕೃಪೆ: ಎಲ್ಲಾ ಶರಣರು.
Mobil 7892256063

- Siddugouda

27 Jan 2020, 04:09 pm

ಆಶೆಎಂಬ ಮಾಲಗಂಭ

ಮೈತುಂಬಾ ಮೋಹ ಮಧ ಮತ್ಸರ ಎಂಬ ಎಣ್ಣೆ ಬಳೆದುಕೊಂಡು,
ಆಶೆ, ಅಹಂಕಾರವೆಂಬ ಮಾಲಗಂಭ ವೇರುತ್ತಿರಲು;
ತುತ್ತತುದಿಗಿರುವ ಗುರು, ಲಿಂಗ, ಜಂಗಮದೆಡೆಗೆ ಕೈಚಾಚಿದರೆ,
ಮರೆಯಲ್ಲಿ ನಿಂತು ಗುರು ಬಸವಪ್ರಿಯ ರೇವಣಸಿದ್ದೇಶ್ವರ ನಸುನಕ್ಕನಯ್ಯ.

ರಚಣೆ: RV Goudar
ಕೃಪೆ: ಎಲ್ಲ ಶರಣರು.
ಮೊಬೈಲ್: 9008060918

- Siddugouda

27 Jan 2020, 11:36 am

ಅಗ್ನಿ ಈ ಜಗದಲಿ ಇದ್ದು ಇಲ್ಲದಂತಿದೆ.

ಬೆಂಕಿ ಈ ಜಗದಲಿ ಇದ್ದು ಇಲ್ಲದಂತಿದೆ.
ಅದು ಯಾವದರ ಜಾಗವನ್ನು ಸ್ವಯಂ ಪ್ರೆರಿತವಾಗಿ ಆಕ್ರಮಿಸುವುದಿಲ್ಲ.
ಆದರೆ ಘರ್ಷಣೆಯಾದಾಗ ಮಾತ್ರ ಹೊತ್ತಿಕೊಳ್ಳತ್ತದೆ.
ಹಾಗೆಯೇ ಘರ್ಷಣೆ ಇಲ್ಲದಾಗ ಅಲ್ಲಿಯೇ ಅಡಗುತ್ತದೆ.
ಹಾಗೇಯೇ ಗುರು ಲಿಂಗ ಜಂಗಮ ಮತ್ತು ಭಕ್ತರ ತಂಟೆಗೆ ಬಂದರೆ;
ಬಸವ ಪ್ರಿಯ ರೇವಣಸಿದ್ದೇಶ್ವರ ಅಗ್ನಿಯ ಜಾಗದಲ್ಲಿ ಬಂದುನಿಲ್ಲುವನು ನೋಡಾ.

ರಚಣೆ: RV Goudar
ಕೃಪೆ: ಎಲ್ಲ ಶರಣರು
Mobil: 7892256063

- Siddugouda

27 Jan 2020, 11:23 am

ಆಶೆಎಂಬ ಮಾಲಗಂಭ

ಮೈತುಂಬಾ ಮೋಹ ಮಧ ಮತ್ಸರ ಎಂಬ ಎಣ್ಣೆ ಬಳೆದುಕೊಂಡು,
ಆಶೆ, ಅಹಂಕಾರವೆಂಬ ಮಾಲಗಂಭ ವೇರುತ್ತಿರಲು;
ತುತ್ತತುದಿಗಿರುವ ಗುರು, ಲಿಂಗ, ಜಂಗಮದೆಡೆಗೆ ಕೈಚಾಚಿದರೆ,
ಮರೆಯಲ್ಲಿ ನಿಂತು ಗುರು ಬಸವಪ್ರಿಯ ರೇವಣಸಿದ್ದೇಶ್ವರ ನಸುನಕ್ಕನಯ್ಯ.

ರಚಣೆ: RV Goudar
ಕೃಪೆ: ಎಲ್ಲ ಶರಣರು.
ಮೊಬೈಲ್: 9008060918

- Siddugouda

27 Jan 2020, 11:05 am

ಬೆಳಗು ಕವಿತೆ( ದೇವನ ಬೆಳಕು)

*ಬೆಳಗು ಕವಿತೆ*


// ದೇವನ ಬೆಳಕು //
---------------------
ನೂರಾರು ದೇಶಗಳ ಸಾವಿರಾರು
ಭಾಷೆಗಳ ಮೆರಗು!
ಸತ್ಯ ಸೌರಭ
ದೇವನ ಬೆಳಕಾಗಿ
ಮೂಡಿತು;ದೇಶ,ಕಾಲ,
ಜನಾಂಗಗಳನ್ನೂ ಮೀರಿ.

ಅರಳುವ ಹೂವಿಗಿಲ್ಲ
ಬೇಧ ಭಾವದ ಹಣೆಪಟ್ಟಿ
ತಿಪ್ಪೆಯ ಮೇಲೆ ಉಪ್ಪರಿಗೆ
ಸಾಮ್ರಾಜ್ಯ ಕಟ್ಟುವುದು.
ಎಲ್ಲಿ ನೋಡಿದಲ್ಲೆಲ್ಲಾ ಮಲ್ಲಿಗೆಯ ಹೂಗಳು.

ಅಧಿಷ್ಟಾನ ತಿಪ್ಪೆಯಾದರೂ ಮೇಲೆ
ಸುಗುಂಧ,ಸುವಾಸನೆ;
ಸೌಂದರ್ಯದ ಉಪಾಸನೆ ಅದಕ್ಕೆ
ಅಗಮ್ಯ,ಅಗೋಚರ,ಅಪ್ರತಿಮ.

ಕಲಿತವರು,ಕಲಿಯದವರು
ಉಳ್ಳವರು,ಇಲ್ಲದವರು; ಯಾರು ನೋಡಿದರೂ
ಮನಸು ವಿಕಾಸಗೊಳ್ಳುವುದು
ಆನಂದದ ಸುವಾಸನೆ
ಕಣ್ಣುಗಳು ಅರಳಿ.

ಸಂತರ ಹಾಡಾಗುವುದು
ಗಿಡದ ಒಂದು ಬೇರು
"ಯಾವ ದೇಶದಲ್ಲಿ ಸಂತರಿಲ್ಲ,
ಇನ್ನಾವ ದೇಶದಲ್ಲಿ ಮಹಂತರಿಲ್ಲ!"
ಯಾವುದು ಅಮೇರಿಕಾ,ಯಾವುದು ಚೀನಾ?
ಇನ್ನಾವುದೇ ಭಾರತವಿರಲಿ
ದೇಶ ಕೋಶ ಎಲ್ಲವೂ ಭೂಮಂಡಲ.

// ಮೃದಂಗಜ//
ಸುರೇಶ ಜಕಾತಿ. ಜಮಖಂಡಿ
8746086658

- ಸುರೇಶ ಜಕಾತಿ.ಜಮಖಂಡಿ

27 Jan 2020, 07:32 am

ಮನವ ಮಂಡ ಗುದ್ದಲಿ ಮಾಡಿಕೊಂಡು

ತನುವ ತಿಪ್ಪಿಯ ಗುಂಡಿ ಮಾಡಿಕೊಂಡು
ಮನವ ಮಂಡ ಗುದ್ದಲಿ ಮಾಡಿಕೊಂಡು
ಅಗೆದು ಬಗೆದು ಹಡ್ಡಿ ಹುಡುಕಿದರೆ
ದುಷ್ಟ ದುರಹಂಕಾರದ ಹುಳ-ಹುಪ್ಪಟೆಗಳು ಎದ್ದುಬಂದವು
ಇಂತಹ ಹುಳುಗಳನ್ನು ಕ್ಷಮಿಸಿ ಮುಕ್ತಿ ಕೊಡಿಸು ಗುರು ಬಸವ ಪ್ರಿಯ ರೇವಣಸಿದ್ದೇಶ್ವರ.

ರಚಣೆ: ಸಿದ್ದುಗೌಡ
ಕೃಪೆ: ಎಲ್ಲ ಶರಣರು.
ಮೊಬೈಲ್:7892256063

- Siddugouda

26 Jan 2020, 06:32 pm

ಆಶಾವಾದಿ

ಸುಳ್ಳಿನ ಮೇಲೆ ಸುಳ್ಳು ಪೋಣಿಸುವುದು
ಸುಲಭ ನಿನಗೆ..
ಆಾ ದೇವ ನಿನ್ನ ಮುಖವಾಡ ಕಳಚುವ ಎಂಬ,
ನಂಬಿಕೆ ನನಗೆ..

- deepu

26 Jan 2020, 01:00 am

ಛಂದ ಪದ್ಯಗಳು

ಮುಕ್ತಗಳು
-------------------------------
೦೧.ಭಾವಲಹರಿ
______________________
ತನು ಒಂದಾರೂ ಅದರೊಳಗೆ
ಭೂಕಂಪ,ಸಮುದ್ರ ಸುನಾಮಿ
ಸೃಷ್ಟಿಸಲೆಂದೇ ಇರುವ
ಹಲವು ರೀತಿಯ ಮನಗಳು
ಇರುವುದೊಂದೇ ಭಾವಲಹರಿ
ಎಲ್ಲರೆದೆಯ ಕುಟ್ಟಲು.

೦೨.ನಾಲಿಗೆ
--------------------
ನಮ್ಮ ಮನೆಯ ನಾಯಿಯದು
ಚಪಲ ವಾಂಛೆಯ ಹಿತ್ತಲು
ಕುರುಡು ಕಿವುಡು ಎಲ್ಲ ಇಹುದು
ರಸವ ನೆಕ್ಕುವುದು ಸುತ್ತಲು
ಸಿಕ್ಕ ಸಿಹಿ,ಕಾರ,ಹುಳಿಯ ಸವಿದು
ಕಹಿಯ ಬಲ್ಲ ನಾಲಿಗೆ.

೦೩.ಕವಿಗಳು
______________
ಇವರು ಎತ್ತು ,ಇವರು ಎಮ್ಮೆ
ರಥವ ಹಿಡಿದು ಎಳೆವರು
ನಾಡ ನುಡಿಯ ಹಿರಿಮೆ ಗರಿಮೆ
ಎಲ್ಲ ಮಹಿಮೆಯ ತಿಳಿವರು
ಲೆಕ್ಕವಿಲ್ಲದ ಪದ-ಪದ್ಯ-ಗದ್ಯರಚನೆ ಬಲ್ಲರು
ಉರಿಯ ನುಂಗಿ ತಂಪು ಹಿಂಗಿ
ಹಾಲು ಹಿತವ ಕೊಡುವರು
ಎದೆಗೆ ಹೊಕ್ಕ ಸಿಕ್ಕ ವಿಷವ
ಬಿಕ್ಕಿ ಬಿಕ್ಕಿ ಕಕ್ಕುವರು
ಓದು- ಬರಹ ಬಲ್ಲರವರು
ಖಡ್ಗ ಲೇಖನಿ ಹಿಡಿವರು
ಯಾರಿಗುಂಟು ಯಾರಿಗಿಲ್ಲ
ಅಕ್ಷರ ತೆನೆ ತುರುಕುವವರು
ಇವರೇ ನಮ್ಮ ಗಣಪ-ಬಳಪ
ಲಕ್ಷ್ಮಿ- ಸರ್ವಸ್ವ ನುಡಿವರು
ಮುಂಬರುವ ಪೀಳೆಗಗೆ ಎದೆಹಾಲು ನೀಡುವರು
ಇವರೇ ನಮ್ಮ ಕವಿಗಳು ನಾಡ ನುಡಿಯ ಕಲಿಗಳು.

೦೪. ರಾಜಕಾರಣಿಗಳು
________________________
ನಾಡನೊಡೆವ ಮಂದಿ ಇವರು
ನಮ್ಮ ನೆಲವ ಬಲ್ಲರು
ನಮ್ಮ ಮತವ ಗೆಲ್ಲುವನಕ
ಛಲದಿ ಬಿಡದೆ ಮೆರೆವರು
ನಲಿವ ನಮ್ಮ ನಾಡದೇವಿಯ
ಕೊರಳ ಹಾರವ ಕದಿವರು
ಒಲಿದ ನೆರಳಿನಲ್ಲಿ ಕಳುವು
ಇವರ ಕಾಯಕ ಎಂದಿಗೂ
ಅಂದಿಗಿಂದಿಗೆಲ್ಲ ಇವರೆ ಭಾರತವ ಆಳಿದವರು
ಕೆಳವರ್ಗದವರನೆಲ್ಲ ನೆತ್ತಿ ಹಿಂಡಿ ಬಿಡುವರು
ದಲಿತರಾದಿಯಾಗಿ ಇವರ ತುದಿಯನೆಲ್ಲ ಬಲ್ಲರು
ಕೊಟ್ಟುದೊಂದು ಪಡೆವರೈದು
ಬ್ರಷ್ಟಹಿತವ ಹೊಂದಿದವರು
ಇವರೆ ನಮ್ಮ ರಾಜ್ಯ ರಾಜರೆಂದು
ಉಲಿದು ಮೆರೆವರು ವೋಟು ನೋಟು
ಎಲ್ಲ ತಿಂದು ಜನರ ಹಿತವ ಮರೆತರು.

೦೫. ಗೋಪಾಲ
____________________
ಶ್ಯಾಮವರ್ಣ ಶ್ವೇತಹಾರ
ಗೋವುಗಳನು ಕಾಯ್ವನು
ಕೊಳಲನೂದಿ, ನಾದವಿಡಿದು
ಹಿಂಡು ದನವ ಕರೆವನು
ಗೋಪಿಕೆಯರ ಮನವ ಬಲ್ಲ
ಮಾತು ಬಲ್ಲ ಮಲ್ಲನು
ಕಂಸ ಕೊಂದ ಗಿರಿಯನೆತ್ತಿ
ಹಿಡಿದ ವೀರ ಧೀರನು.

// ಮೃದಂಗಜ//


ಸುರೇಶ ಜಕಾತಿ‌.ಜಮಖಂಡಿ
8746086658.

- ಸುರೇಶ ಜಕಾತಿ.ಜಮಖಂಡಿ

25 Jan 2020, 09:22 pm

...ಮದುವೆ ಸಂಬಂಧ...

ಮದುವೆಯೆಂಬುವುದು ಯಾವತ್ತೋ
ಆಗಬಾರದ ಬಂಧನ
ಇದು ಎರಡು ಜೀವಗಳ ನಡುವಿನ
ಜನ್ಮ ಜನ್ಮಾಂತಾರ ಅನುಬಂಧ......

ಕೆಲವು ಸನಿವೇಶಗಳ ಕಲ್ಪನೆಯಿಂದ
ಕೂಡಿರಬಾರದು ಜೀವನ
ಅದರಲ್ಲಿ ಪರಸ್ಪರ ನೈಜತೆ
ಹೊಂದಿರಬೇಕು ಸರಿಸಮಾನ....

ಗಂಡ-ಹೆಂಡತಿ ಕುಡಿ ಬಾಳಿದರೆ
ಸುಖ-ಸಂಸಾರವಾಗುತ್ತೆ
ಬಿರುಕು ಬಿಟ್ಟಿದರೆ ಸಂಸಾರದಲ್ಲಿ ಇಲ್ಲ
ಯಾವ ಸಾರ......

- Ajay

25 Jan 2020, 09:00 pm