ಕನಸಿನ ಕನ್ಯೆ ಕಲ್ಪನೆಗೂ ಮೀರಿದ್ದಳು...
ಕಣ್ಬಿಟ್ಟು ನೋಡಿದರೆ ಕತ್ತಲು ಕತ್ತಲು...
ಹುಡುಕಾಡಿದೆ ನಾ ಎಲ್ಲಾ ಸುತ್ತಲೂ...
ಕಾಣಲೇ ಇಲ್ಲ ನೋಡಿದರು ಎತ್ತಲೂ...
ಆಗ ಅನಿಸಿತು ಮನಸಿಗೆ ಇದು ಕನಸೇ... ✍️ಮಲ್ಲ...
ಸಂಸಾರವೆಂಬುದೊಂದು ಗೂಳಿ.
ಆಶೆ-ಮೋಹ ಎಂಬ ಎರಡು ಕೊಂಬು ಮೂಡಿ
ಸಿಕ್ಕ ಸಿಕ್ಕ ವರಿಗೆಲ್ಲ ಗುದ್ದಾಡಿಕೊಂಡಿ,
ಉಲಿವ ಇಂದ್ರೀಯಗಳಿಗೆಲ್ಲ ನಶೆ ಏರಿಸಿಕೊಂಡಿ
ಪಾಪದ ಬಲೆಯನ್ನು ಮೈಗೆ ಸುತ್ತಿಕೊಂಡಿ
ಮಾಯೆಯನ್ನು ತಲೆಯ ಮೇಲೆ ಹೊತ್ತು ಮೆರಸಿಕೊಂಡಿ
ನಾನು; ನನ್ನದೆಂಬ ಸುಳಿಯೊಳಗೆ ಸಿಲುಕಿಕೊಂಡಿ
ಹುದಲೊಳಗೆ ಸಿಲುಕಿ ವಿಲವಿಲ ಒದ್ದಾಡುವ ಕೋಣದಂತಾದಿ.
ಗುರು ಬಸವ ಪ್ರಿಯ ರೆವಣಸಿದ್ದೇಶ್ವರನನ್ನು ಕೂಗಿ ಕರೆ..
ಅವನೊಬ್ಬನೇ ನಿನ್ನ ಮೇಲೆತ್ತಬಲ್ಲ.
ರಚಣೆ: ಆರ್ ವೀ ಗೌಡರ
ಕೃಪೆ: ಎಲ್ಲ ಶರಣರು
Mobil: 7892256063
ಹಳಿತಪ್ಪಿದ ರೈಲಿನಂತಾಗಿದೆ ನನ್ನ ಜೀವನ...
ಎತ್ತ ಸಾಗುತಿದೆ ಎಂದು ತಿಳಿಯದಾಗಿದೆ ಮನ...
ಉಳಿವಿಗಾಗಿ ಮಾಡಬಹುದು ಸಕಲ ಪ್ರಯತ್ನ...
ಅದೃಷ್ಟವಿದ್ದರೆ ನಡೆಸಬಹುದು ಜೀವನ...
ಇಲ್ಲವಾದರೆ ಬದುಕಿಗೆ ಅಂತಿಮ ನಮನ...
✍️ಮಲ್ಲ...
ಅಲೆಗ್ಝಾಂಡರ ಜಗತ್ತೆ ಗೆದ್ದುಬಿಡುವೆ ಎಂದು ಹೊರಟಿದ್ದ ;
ಆದರೆ ಹಾದಿ ಬೀದಿ ಯಲ್ಲಿ ಬಿದ್ದು ಹೆಣವಾಗಿದ್ದ.
ಕೋಟೆ ಕೊತ್ತಲು ಮಹಲು ಅರಮನೆಗಳ ಕಟ್ಟಿ
ಹಾಡು, ನೃತ್ಯ, ವಾದ್ಯ, ತಾಳ-ಮೇಳ, ಬಡಸಿ; ಹೊನ್ನು-ಹೆಣ್ಣು - ಮಣ್ಣು ಗಳ ಮೈ ಕುಣಿಸಿ,
ಏರಿ ಮೇಲೆ ಏರಿ ಕುಳಿತೇ ನೀನು.
ಗುರು ಬಸವ ಪ್ರಿಯ ರೇವಣಸಿದ್ದೇಶ್ವರ ಕೈ ಹಿಡಿದು ಕರೆದಾಗ,
ಕೈ ಝಾಡಿಸಿ ಹೋದ ಮರುಳೆ ನೀ ಹಳೆ ಮರುಳೆ.
ರಚಣೆ: ಆರ್ ವಿ ಗೌಡರ
ಕೃಪೆ: ಎಲ್ಲ ಶರಣರು
Mobil: 7892256063