Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸನ ಮಾತು

ಸುಂದರ ವನದಲ್ಲಿ ಅರಳಿದ ಕೇಂದಾವರೆ ನೀ
ಆಕಾಶದಿ ಹಾರುವ ಹಕ್ಕಿ ನೀ
ನನ್ನ ಉಸಿರ ಏರಿಳಿತವು ನೀ
ಹೇಳದ ಸಾವಿರ ಮಾತಿಗೆ ಸ್ಪೂರ್ತಿ ನೀ
ಎಷ್ಟು ಹೇಳಿದರು ಬಣ್ಣಿಸಲಾಗದ್ದ ಚಲುವೆ ನೀನು
ಈ ಕವಿತೆ ಬರೆದ ಪ್ರೇಮಿ ನಾನು

- bharath kumar r

03 Feb 2020, 10:01 pm

ರಾಧಾಕೃಷ್ಣ

ನನ್ನ ಸುತ್ತ - ಮುತ್ತಲು ಎಷ್ಟೋ ಜನ ಗೋಪಿಕೆಯರು ಇದ್ದರೂ, ನನ್ನ ಮನಸು ನಿನ್ನ ದ್ಯಾನದಲ್ಲೇ ಮುಳುಗಿರುವುದಲ್ಲೇ ರಾಧೆ.....
ನನನ್ನು ಎಲ್ಲರೂ ತಮ ತಮಗೆ ಸ್ವಂತ ಅಂಥ ಅಂದುಕೊಳ್ಳುವರು ಅವರಿಗೆ ತಿಳಿಯದ ಸಂಗತಿಯೆಂದರೆ ನೀ ನನ್ನ ಮನದರಸಿಯೆಂದು...
ಈ ಪ್ರಪಂಚದ ಹಾಗು - ಹೋಗುಗಳನ್ನು ನೋಡುವ ನಾನು ನಿನ್ನ ಮಡಿಲಲ್ಲಿ ಮಲಗಿ ಕೊಳಲು ನುಡಿಸುತ್ತಾ ಪ್ರೇಮನೂರಾಗದಲ್ಲಿ ಮೈ ಮರೆಯುವೆ,
ಇಡೀ ಜಗತ್ತು ನನನ್ನು ಕಳ್ಳಯೆನ್ನುವದರಲ್ಲಿ ತಪ್ಪೇನಿಲ್ಲ.....
ಯಾಕಂದರೆ ನನನ್ನು ನಾನೇ ಮರೆಯುವಸ್ಟು ನನ್ನ ಪ್ರೀತಿಸುವ ಈ ನಿನ್ನ ಮನವ ಕದ್ದಿರುವೆ,
ನಿನ್ನ ನನ್ನ ಮನವು ಸೇರಿದಂತೆ ನನ್ನ ಹೆಸರಿನ ಜೊತೆ ನಿನ್ನ ಹೆಸರು ಸದಾ ಪ್ರೀತಿಗೆ ಸ್ಪೂರ್ತಿಯಾಗಿರಲಿ


- VenuCA

03 Feb 2020, 12:21 pm

ಕನ್ನಡಿ

ನನ್ನ ತಪ್ಪುಗಳು,
ನನ್ನೆದೆಯಲ್ಲಿ ಪ್ರಜ್ವಳಿಸೋ ಕಿಡಿಗಳು..
ನನ್ನನ್ನು ಸುಡದೆ,
ಅವು ಸಾಯಲಾರವು..

- deepu

03 Feb 2020, 12:13 am

ಚೆಲುವೆ

ಪ್ರೀತಿಯ ಪಾರಿವಾಳ
ಹಾರ ಬಲ್ಲೆಯ್ಯಾ ಮುಗಿಲೆತ್ತರಕ್ಕೆ
ನನ್ನ ಒಲವಿನ ಅಭಿಮಾನಕ್ಕೆ
ನನ್ನ ಉಸಿರಿನಲ್ಲಿ ಕಾಯುತಿರುವೆ ಮನದಂಗಳದಲ್ಲಿ
ಸದಾ ಮಿನುಗುವ ತಾರೆಯ
ನಗುವಿನ ಚಿಲುಮೆಯಲ್ಲಿ
ಮಗುವಾಗಿ ಸದಾ ಹಂಬಲಿಸಿತಿರುವೆ ಚೆಲುವೆ...

- ಎ ಜಿ ಶರಣ್

02 Feb 2020, 11:33 pm

ಮನದ ಮಾತು

ತೀಳಿಯದಿ ನಾ ತಪ್ಪು ಮಾಡಿದೆ
ಪ್ರೀತಿ ಬಯಸಿ ನಿನ್ನ ಮನ ನೋಯಿಸಿದೆ
ನನ್ನ ಇಷ್ಟ ಹೇಳಿ ನಾ ನಿನ್ನ ಕಾಡಿದೆ
ತೀಳಿಯದೆ ಮಾಡಿದ ತಪ್ಪಿಗೆ ನಾ ದಿನವು ಪರಿತಪಿಸಿದೆ
ಒಂದು ಸಲ ಕ್ಷಮಿಸಿ ಬಿಡು ನಾ ನಿನ್ನ ಪ್ರಿತಿಸಿದೆ

- bharath kumar r

02 Feb 2020, 08:39 pm

ಮನಸಿನ ಮಾತು

ಅಂದದ ಭೂಮಿಯ ಮೇಲೆ
ಸುಂದರ ಚಿತ್ರ ಬರೆದು
ಬಣ್ಣಿಸಲೆಂದು ಬಂದಿರುವೆ
ಈ ಸೌಂದರ್ಯವನ್ನು
ಇನ್ನೇನು ಹೆಚ್ಚು ಹೇಳುವುದು
ಭೂವಿಗೀಳಿದ ಚಿತಾರ ನಿನ್ನು
ಇಂತೀ
ಭರತ್ ಕುಮಾರ್ ಆರ್ ಬಿ

- bharath kumar r

02 Feb 2020, 08:23 pm

ಅವನ ಕಣ್ಣಲ್ಲಿ ಬಚ್ಚಿಟ್ಟ

ಅವನ ಕಣ್ಣಲ್ಲಿ ಬಚ್ಚಿಟ್ಟ
ಅವಳ ಆ ಅಂದ
ಕಂಬನಿಯಾಗಿ ಹರಿದು
ಕೊರಳ ಬಳಸಿ ಆರಿತು!!

ಅವನ ಹೃದಯದಿ ಬಚ್ಚಿಟ್ಟ
ಮೊದಲ ಒಲವಿನ ಚೆಂದ
ಹೇಳದೇ ಉಳಿದುಹೋಗಿ
ಎದೆಯನ್ನು ಚುಚ್ಚಿತು!!

ಅವನು ಅದರದಲಿ ಬಚ್ಚಿಟ್ಟ
ಹೇಳದ ಸ್ವರವೊಂದ
ಗಧ್ಗದಿಸಿ ಮೌನದ ಸೆರೆಯಲ್ಲಿ
ಸಿಲುಕಿ ಮರೆಯಾಯಿತು!!

- ಪಿ.ಜಿ.ಜ್ಯೋತಿ

02 Feb 2020, 11:50 am

ಕವನದ ಅಂಗಳ

ಕವನದ ಅಂಗಳ
ನಿನ್ನಯ ಈ ಕಂಗಳು!!
ನಿನ್ನನು ನಾ ನೋಡಿದ
ಆ ದಿನವೇ ಬೆಳದಿಂಗಳು!!

ನಕ್ಷತ್ರದ ಊರಿನಿಂದ
ನೀ ಭುಮಿಗೆ ಜಾರಿ ಬಂದೆ!!
ಅಂಗೈಯ ಬೊಗಸೆ ತುಂಬ
ಒಲವನ್ನು ತುಂಬಿ ತಂದೆ!!

ಹೂದೋಟದಲ್ಲಿ ನೀ ಅರಳಿ
ಸೌಗಂಧ ಸೂಸಿ ನಿಂತಿರುವೆ!!
ನನ್ನೆದೆಯ ಮಿಡಿತ ನೀನಾಗಿ
ನವ ರಾಗವನು ಮೀಟಿರುವೆ!!

ಸಾಗರದ ಅಲೆಗೆ ಮುತ್ತಿಟ್ಟು
ಚಿಪ್ಪಲ್ಲಿ ಅವಿತು ನಕ್ಕಿರುವೆ!!
ಪರ್ವತದ ಶಿರವ ನೀ ಏರಿ
ಆಗಸಕೆ ಕೈ ಚಾಚಿರುವೆ!!

ಒಲವೆಂಬ ಮಳೆಯ ಸುರಿಸಿ
ನೆನೆದಾಗ ನಡುಕವೆ ಚೆಲುವೆ!!
ಬಿಸಿ ಅಪ್ಪುಗೆಗೆ ಇದೆ ಒಪ್ಪಿಗೆ
ಎದೆಯಾಳ ಸೇರಿಕೋ ಒಲವೇ!!

- ಪಿ.ಜಿ.ಜ್ಯೋತಿ

02 Feb 2020, 11:38 am

ಮನಸೇ....

ಪ್ರೀತಿಯ ಗಾಳಿಯೇ ಬೀಸದ ಹೃದಯಕ್ಕೆ ಇಂದು ಒಲವಿನ ಗಾಳಿ ಬೀಸಿದೆ...
ಮನಸು ಅರಿವಿಲ್ಲದೆ ಅವಳೆಡೆಗೆ ಜಾರಿದೆ...
ಅವಳ ಮುಂಗುರುಳ ನೋಡಿದ ಕ್ಷಣದಿಂದ ಮನಸು ಹಿಡಿತಕ್ಕೆ ಸಿಗದೇ ಓಡುತಿದೆ...
ಅವಳು ಕೊಟ್ಟ ಆ ಒಂದು ಮುಗುಳುನಗೆ ನನ್ನ ಬೆಂಬಿಡದೆ ಕಾಡುತಿದೆ...
ಮನಸೇ... ನಿನಗೇಕೆ ಇಷ್ಟೊಂದು ಹಠ ನನಗೆ ತಿಳಿಯದಾಗಿದೆ... ಅಂದರೆ...ಮನಸೇ... ನಿನಗೆ ಪ್ರೇಮಾಂಕುರವಾಗಿದೆ... ✍️ಮಲ್ಲ...

- Mallesh

01 Feb 2020, 06:39 pm

ಬಚ್ಚಿಟ್ಟ ಪ್ರೀತಿ (ಕವಿತೆ)

ಬಚ್ಚಿಟ್ಟ ಪ್ರೀತಿ
------------------

ನಿನ್ನ ಮೌನ , ನನಗೆ ಎಲ್ಲವನ್ನೂ ಹೇಳುತ್ತಿದೆ,
ರೇಶ್ಮೆಯ ಹುಳು ತನ್ನ ಮೈಸುತ್ತಿಕೊಂಡಂತೆ
ದಣಿದ‌‌ ನಿನ್ನ ಆಯಾಸದ ರೀತಿ .

ಇನ್ನಾದರೂ ನಿನ್ನ ಮಲ್ಲಿಗೆಯ ಪ್ರೀತಿ ತೋರು
ನನ್ನನ್ನು ಮುನ್ನಡೆಸಲು ನಿನ್ನಲ್ಲಿರುವ
ಆ ಪದ ಮೃದಂಗವೇ ಸಾಕು.

ಇಂದಾದರೂ ನೀನು ನೆನಪಿಸಿಕೊಳ್ಳಬಹುದಲ್ಲವೇ?
ನನ್ನೆದೆಯ ಗೋಡೆಯ ಮೇಲೆ ಬರೆದಿಟ್ಟ
ಆ ನಿನ್ನ ಹೂ ಬಾಣದ ಗುರುತು.

ಕಣ್ಣು ಸನ್ನೆಗೆ ನಾನಿನ್ನೂ ದೂರ..ಬಹು ದೂರ..!
ನನ್ನ ಎದೆಯ ಗೂಡಿನಲ್ಲಿ ಬಚ್ಚಿಟ್ಟ ಪ್ರೀತಿ
ಅದು ನಾನು ಮಾಡಿದ ,ಮೊದಲ ತಪ್ಪು.

ಹೃದಯವನ್ನು ಹಿಂಡಿದಾಗಲೊಮ್ಮೆ
ಪ್ರೀತಿಸುವುದು ನನ್ನ ಕರ್ತವ್ಯವಲ್ಲವೆಂದರೆ
ಎಲ್ಲರನ್ನೂ ನಾನು ತಪ್ಪಿತಸ್ಥರೆಂದು ಭಾವಿಸುತ್ತೇನೆ!

ನಾನು ಮೊದಲೇ ಎಚ್ಚರಿಕೆ ನೀಡಿದ್ದೇನೆ,
ಭಾವನೆಗಳನ್ನು ಮರೆಮಾಡಲು ತುಂಬಾ ಶ್ರಮಿಸುವ
ವ್ಯಕ್ತಿಗೆ ಪ್ರೀತಿಯ ಅಭಿವ್ಯಕ್ತಿ ಏಕೆ? ..

ನನ್ನ ಕಣ್ಣುಗಳಿಗೆ ನೋಡಲು
ಸಾಧ್ಯವಿರದ ಪ್ರೀತಿಯನ್ನು ಕಲಿಸಿರುವೆ
ಸೂಚಿಸಲು ಪ್ರಯತ್ನಿಸುವ ನಿಖರತೆಯ ನಗೆ ನಿನಗೆ !

ವಿದಾಯ ಹೇಳಲು ಸಮಯ ಎಂದು ..?
ನಿನ್ನಲ್ಲಿ ಈ ನಿರ್ದಯೆ ಹೇಗೆ ಬಂತು ?
ಹೂವಿನ ಹಿಂದೆ ಇರುವ ಮುಳ್ಳು ನನಗೆ ತೋರಿಸಲು.

"ಮೀರಿದ್ದೀರಿ" ಎಂಬುದರ ಬಗ್ಗೆ ಮಾತನಾಡುತ್ತಾ,
ನೀನು ಮನೆ ಎಂದು ಕರೆಯಲ್ಪಡುವ ಸ್ಥಳದಲ್ಲಿ ...
ನಾನು ಸ್ವಾಗತ ಎಂದು ಬರೆದು ಕೊಂಡಿದ್ದೇನೆ.

ಇಷ್ಟಪಡುವುದನ್ನು ನಾನು ದ್ವೇಷಿಸುತ್ತೇನೆ
ದುರ್ಬಲ ಮತ್ತು ತೆರೆದ ಹೃದಯದಲ್ಲಿ ಹೂಬಾನವನ್ನೇ ಬಿಟ್ಟಿರುವೆ
ಆದರೆ ನಿನ್ನನ್ನು ಇಷ್ಟಪಡುವ ರೀತಿಯಲ್ಲಿ ನಾನು ಪ್ರೀತಿಸಲಾರೆ,

ನಿನಗೆ ಸಾಧ್ಯವಾದ ಏಕೈಕ ಮಾರ್ಗವನ್ನು ನಾನು ಪ್ರೀತಿಸುತ್ತೇನೆ ..
ನಾನು ಖಂಡಿತವಾಗಿ ರೋಮಿಯೋ ,
ಆದರೆ ನೀನು ಜೂಲಿಯೆಟ್ ಅಲ್ಲ.

ಏಕೆಂದರೆ
ಈ ಪ್ರೀತಿಯ ಕಥೆಯಲ್ಲಿ ನಾನು
ಬುಲೆಟ್ ಅನ್ನು ಚಿತ್ರೀಕರಿಸಿದವನು.

ನಾನು ಈಗಾಗಲೇ ತಿರುಚಿದ ನನ್ನ ಈ ಮನಸ್ಸಿನಲ್ಲಿ ನಿನ್ನನ್ನು
ಅನುಮತಿಸುತ್ತೇನೆ,
ಮುರಿದುಹೋಗುವ ಶೀರೋಭಾಗ
ಸಮಾಧಾನವನ್ನು ಕಂಡುಕೊಳ್ಳುವ ಹಾಗೆ.

ತೊಂದರೆಯಲ್ಲೂ ಒಂದು ಸುಂದರ ಮೂರ್ತಿ ನಾನು
ಒಡೆದು ಹೋದ ಈ ಅವ್ಯವಸ್ಥೆ ಮೂಡಿಸಿದವರು ಯಾರು?

--- ಸುರೇಶ ಜಕಾತಿ. ಜಮಖಂಡಿ
8746086658.

- ಸುರೇಶ ಜಕಾತಿ.ಜಮಖಂಡಿ

01 Feb 2020, 04:25 pm