Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸಿನ ಮಾತು

ಹಾಳಾಯಿತು ಹೃದಯ ಹಳೆ ಹುಡುಗಿಯ ನೆನಪಿನಲ್ಲಿ
ಮತ್ತೆ ಯಾರಾದರು ಸಿಗುವರೇ ನನ್ನ ಬಾಳ ದಾರಿಯಲ್ಲಿ
ಸಿಗುವವರು ಬರುವವರೆ ಕೊನೆವರೆಗೂ ನನ್ನ ಬಾಳ ದಾರಿಯಲ್ಲಿ
ಪ್ರೀತಿಸುತ್ತೇನೆಂದು ಮೋಸ ಮಾಡುವವರೆ ತುಂಬಿರುವ ಈ ಜಗದಲಿ
ನೊಂದ ಹೃದಯದ ಮಾತು ಕೇಳಿ ಅಳುತಿಹೇನು ನಾನಿಲ್ಲಿ
ಸಿಗದಿದ್ದರೂ ಪರವಾಗಿಲ್ಲ ಅವರೆಲ್ಲರಲ್ಲಿ ಸುಖವಾಗಿ
ಕೊನೆವರೆಗೂ ಸಾಗುತಿಹನು ನಾನವಳ ನೆನಪಲ್ಲಿ
ಅವಳು ಇರಬಹುದೇ ನನ್ನ ನೆನಪಲ್ಲಿ ಅದು ಒಂದೇ ನನ್ನಗೆ ನಂಬಿಕೆ ಬದುಕಿನಲ್ಲಿ
ಇಂತಿ
ಭರತ್ ಕುಮಾರ್ ಆರ್ ಬಿ
೯೯೭೨೬೬೪೫೮೯
9972664589

- bharath kumar r

06 Feb 2020, 08:53 am

ಮೋಡದ ಮರೆಯಲ್ಲಿ

ಕಣ್ಣಿಗೆ ಕಾಣದೇ ಕೈಗೆ ಸಿಗದೇ
ಮನದ ಮರೆಯಲ್ಲಿ ನಿಂದಿಹಳು

ಕನಸಲ್ಲಿ ಬಾರದೇ ಎದುರಲ್ಲಿ ಬಾರದೇ
ಮನದ ಮರೆಯಲ್ಲಿ ನಿಂದಿಹಳು

ಕೈಗೆಟುಕದ ಪಾದರಸದಂತೆ ಬಾನಿನ ಚುಕ್ಕಿಯಂತೆ
ಮನದ ಮರೆಯಲ್ಲಿ ನಿಂದಿಹಳು

ಹಗಲೆನ್ನದೇ ಇರುಳೆನ್ನದೇ ಕಾಡುತಿಹಳು
ಮನದ ಮರೆಯಲ್ಲಿ ನಿಂದಿಹಳು

ಅಪ್ಪ ಅಮ್ಮನ ಪ್ರೀತಿಗೆ ಸಮನಾಗದೇ
ಮನದ ಮರೆಯಲ್ಲಿ ನಿಂದಿಹಳು

ಯಾರಿವಳು? ಯಾರಿವಳು?
ಮನದ ಮೋಡದಲ್ಲಿನಿಂದಿಹಳು

ಮಹಾಂತೇಶ ಕಾತರಕಿ
ಗುಳೇದಗುಡ್ಡ

- Mahantesh

06 Feb 2020, 04:35 am

ನೀ ಬರವ ಸಮಯದೋಳ್...

ನೀ ಬರುವ ಸಮಯದೋಳ್:
ಕತ್ತಲೆ; ಉಸಿರು ಗಟ್ಟಿ ಹಿಡಿದು ನಿಂತಿದೆ.
ತಂಗಾಳಿ; ದೀರ್ಘ ಉಸಿರು ಎಳೆದುಕೊಂಡು ಸ್ತಬ್ದವಾಗಿದೆ.
ಚಂದ್ರ; ಹಲ್ಲು ಕಿಸಿದು, ಕಣ್ಣು ಮಿಟುಕಿಸದೆ, ಕಣ್ಣರಳಿಸಿ ನಿಂತಿದ್ದಾನೆ.

- Siddugouda

05 Feb 2020, 04:18 pm

ನಿನ್ನ ನೆನಪು.

ಮೋಹಕ ಅಲೆಗಳು
ಮುತ್ತಿಟ್ಟು ಹೋದ
ಮರಳು ರಾಶಿಯ
ಎದೆಯ ಮೇಲೆ
ಬಿದ್ದ ಹಸಿರಾದ
ಹಸಿ ಎಲೆಯಂತೆ
ನಿನ್ನ ನೆನಪು,
ಹಾಲ್ನೊರೆತದ ಧಾಳಿಗೆ
ಸಿಲುಕಿ ಇನ್ನೇನು
ನೀರ ಪಾಲಾಗುತ್ತಿದ್ದಂತೆ
ಅಲೆಗಳ ಅಬ್ಬರಕ್ಕೆ
ಸೋತು ಬಿಟ್ಟು
ಮತ್ತೆ ಪುನಃ
ದಡ ಸೇರುತ್ತಿದೆ.!

- ಅಕ್ಷತ

05 Feb 2020, 03:52 pm

ನನ್ನೂರ ಬಜಾರ

ನನ್ನೂರಲಿ ಬಜಾರ ಸೇರುವ ಬೀದಿ ಅಂಗಾತ ಬತ್ತಲೆ ಮಲಗಿದೆ.
ಮೈ ಮೇಲೆ ಇದ್ದ ಒಂದಿಷ್ಟು ಹರಕು ಮುರಕು ಬಟ್ಟೆಯನ್ನು ಮೊನ್ನೆ ದಿವಸ ಕಿತ್ತುಕೊಂಡರು.
ಗರತಿಯರ ನೀರಿಗೆಗೆ ಕೈ ಹಾಕಿ, ನೀರಿಗೆ ಸಡಿಲು ಮಾಡುವ ಬೌಗಬೆಕ್ಕುಗಳ ದರಬಾರು.
ನಾಯಿ ಬಾಯಿಯೊಳಗೆ ಕಚ್ಚಿ ಹಿಡಿದ; ಮಾಂಸದ ತುಂಡು ಕಸಿಯಲು; ಎರಡು ಕಾಲಿನ ನಾಯಿಗಳ ಸಾಲೇ ಸಾಲು.
ಬೀದಿ ಗೂಳಿ ದನಗಳ ಹೆಂಡಿ ಕದೆಯಲು, ಹೆಂಡೆಬುಟ್ಟಿ ತಲೆಮೇಲೆ ಹೊತ್ತ, ಹೆಂಡಿ ಕಳ್ಳರ ಕಚ್ಚಾಟ.
ನಿಬ್ಬು ಮುರಿದ ಪೆನ್ನುಗಳಲ್ಲಿ; ಶಾಯಿ ಖಾಲಿ ಮಾಡಿಕೊಂಡು, ಮತ್ತೊಬ್ಬರ ಪೆನ್ನು ತಮ್ಮ ಜೇಬು ಮೇಲೆ ಸಿಕ್ಕಿಸಿಕೊಂಡು, ಪೋಜು ಕೊಡುವ ಶಂಡರ ದಂಡು.
ತಮ್ಮ ಮನೆಯ ಪಲ್ಲಂಗಗಳ ಕಾಲಮುರಿದು, ಪಕ್ಕದ ಮನೆಯ ಬೆಡರೂಮ ಕಿಡಕಿಗೆ, ದುರಬೀನ ಇಟ್ಟು, ಜೊಲ್ಲು ಸುರಿಸುವ, ನಾಮಾರ್ಧಗಳ ಸಾಲು.
ತಮ್ಮ ಹೊಲವನು ಊಳಲು; ಮತ್ತೊಬ್ಬರಿಗೆ ಕೊಟ್ಟು, ಮತ್ತೋಬ್ಬರ ಹೊಲದಲಿ; ಕಸ ಬೆಳೆಯಲು, ತಿನಕುವ ಹೇಕಡ್ಯಾಗಳು.
ತಮ್ಮ ಜೋಳವ ಮತ್ತೊಬ್ಬರಿಗೆ ಕೊಟ್ಟು ಮತ್ತೊಬ್ಬರ ಜೋಳವ ತಂದು ಹಾರಾಡಿ ಹಾರಾಡಿ ಬೀಸುವ ಗಂಡು ಸೂಳೆಯರು.
ಹೊತ್ತು ಮುಳಗಿದ ಮೇಲೆ ನನ್ನೂರ ಬಜಾರ ಬೀದಿಯಲಿ, ಇವರ ಶೂರತನದ; ಬಂಡ ಬಯಲಾಟಗಳ ಅನಾವರಣ.

- Siddugouda

05 Feb 2020, 12:17 pm

ನನ್ನ ಮನ ಸೋತಿತ್ತು

ತಂಗಾಳಿ ಬೀಸುವ
ನಗುವ ಹೂವಿನ ಮುಂದೆ
ನಾ ಮನ ಸೋತು
ಮೈಮರೆತು ನಾ ನಿಂತೆ...

ಚೀರುವ ಹೂವುಗಳಿಗ
ಸದಾ ಗಿಡಗಳರುವಂತೆ ಹೇಳಿ ಬಂದಿದ್ದೆ
ಮಾತು ಬರದ ಆ ಹೂವುಗಳಿಗೆ
ನಿಮಗೆ ಸಮ್ಮತಿವಿದೆಂದು ಕೇಳಿದ್ದೆ......

ಆ ದೃಶ್ಯವನ್ನು ನೋಡಲು
ನನ್ನ ಎರಡೂ ಕಣ್ಣು ಸಾಲದು
ಹೂವಿನ ತೋಟವನ್ನು
ನೋಡಿ ಮೈಮರೆತ್ತೆನು

ಈ ಪ್ರಕೃತಿ ನೋಡಿ
ಇಡೀ ಜಗತ್ತನ್ನು ನಾ ಮರೆತೇ
ಸುಂದರವಾದ ಗಾಳಿ,ಬೆಳಕು
ನೋಡಿ ನನ್ನ ಮನಸ್ಸು ಸೋತಿತು.....

- Ajay

05 Feb 2020, 07:18 am

ಮನಸಿನ ಮಾತು

ಚಂದಿರನ ಅಂಗಳದಿ ಬೆಳದಿಂಗಳ ಬಾಲೆ ನೀ
ಸುಂದರ ಬನದಲ್ಲಿ ಅರಳಿದ ಹುವು ನೀ
ಬಯಸಿ ಕೋಳುತೀರುವೆ ನೀನ್ನ ಪ್ರೀತಿಯನು
ಏಕೆ ಹೆಳುತ್ತಿಲ್ಲ ನಿನ್ನ ಮನಸ್ಸಿನ ಮಾತನ್ನು
ಕೋರಗಿ ಸಾಯುತ್ತಿರುವುದು ನನ್ನ ಆಸೆಯನದು
ಇತ್ತಿ ಭರತ ಕುಮಾರ್ ಆರ್ ಬಿ.
9972664589

- bharath kumar r

04 Feb 2020, 10:44 am

ಹಸಿರ ಭಾವನೆ ನೀ...

ಬರೆದಷ್ಟು ಮುಗಿಯದ
ಸಾಲಿನೊಳಗೆ ನೀ ಬಂದು
ಆಗೊಮ್ಮೆ ಈಗೊಮ್ಮೆ
ಮತ್ತಷ್ಟು ಹೆಚ್ಚಿಸುತ್ತಿರುವೆ
ಬರಹದ ವೇಗವ.

ಮನದಾಳದ ಭಾವನೆಗಳ
ಪೋಣಿಸುತಲಿಹುವೆನು
ಚಂದದ ಅಕ್ಷರದಲಿ
ಆದರೂ ಸಾಲುತ್ತಿಲ್ಲ
ಮಾರುದ್ದದ ದಾರ.

ಸಿಗುತ್ತಿಲ್ಲ ಪದಗಳು
ನಿನ್ನ ವರ್ಣಿಸಲು
ಪರದಾಡುತಿರುವೆನು
ನಿನ್ನಂದಕೆ ಒಂದು
ಉಪಮೆ ನೀಡಲು.

ಮನದ ಕತ್ತಲ ಕೋಣೆಗ
ಬೆಳಕಿನ ನಿನ್ನ ಓಜಸ್ಸು
ದಾರಿ ದೀಪವಾಗಿದೆ,
ದೀಪದ ಬೆಳಕು ಆರದಂತೆ
ಕಾಪಿಟ್ಟುಕೊಳ್ಳುವೆ ನಿನ್ನ.

ನೀನೆಂದರೆ ನನ್ನ ಬರಹದ
ಆದಿ, ಅಂತ್ಯ,ಮಧ್ಯ ಎಲ್ಲವೂ
ಆಗಾಗ ನಗು ಒಂಚೂರು ಅಳು
ಹುಚ್ಚು ಹಿಡಿಸುವ ಮನದ
ಹಸಿರ ಭಾವನೆ ನೀ..

- ಅಕ್ಷತ

04 Feb 2020, 10:33 am

ವಿಪಲ ಪ್ರೇಮ

ನಿನಗಾಗಿ ಕಾಯುವ ಬದಲು,
ಕಲ್ಲ ಮುಂದೆ ಕಾದಿದ್ದರೆ, ಕಲ್ಲಿಗೆ ಜೀವ
ಬರುತ್ತಿತ್ತೋ ಏನೋ?
ನಿನಗಾಗಿ ಕಣ್ಣೀರ್ ಇಡುವ ಬದಲು,
ಕಲ್ಲ ಮುಂದೆ ಅತ್ತಿದ್ದರೆ, ನನ್ನ ಕಣ್ಣೀರ
ಓರುತ್ತಿತ್ತೋ ಏನೋ?

- Basavanna Lanke

04 Feb 2020, 10:11 am

ಶೇಷ

ನಿನ್ನ ನಿರೀಕ್ಷೆ ಯ
ಆಕಾಂಕ್ಷೆಯ
ಗಣತಿಯಲ್ಲಿ
ಅಗಣಿತ
ನಕ್ಷತ್ರ ಗಳ
ಗುಣಿತ


ಭಾವನೆಗಳು
ಸಂಕಲನ
ವ್ಯವಕಲನ

ಒಲವು
ಭಾಗಾಕಾರ

ವಿರಹ
ಶೇಷ

- Kencharayappa Kaviok

04 Feb 2020, 07:54 am