Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸುಲಿಗೆ...

ಅಂದು ಎನಗೆ
ಒಲಿದಳು..!
ತುಟಿಗೆ ತುಟಿಯ
ಬೆರೆಸಿ ಸವಿಯ
ಮುತ್ತುಗಳನು
ಸುಲಿದಳು..!
ಮೊಲ್ಲೆ ಮುಡಿದು
ಬಳಿಗೆ ಬಂದು
ಲಲ್ಲೆಯನ್ನು
ಹೊಡೆದಳು..!!
ಚಿತ್ತವಿಟ್ಟು
ನೋಡಿದರೆ
ಎತ್ತ ಮಾಯವಾದಳೋ..!!

~ ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

08 Feb 2020, 10:17 am

ನಾ ಬರೇದ ಕವಿತೆ

ನಾ
ನೀನ್ನ್ ನೋಡಿದಾಗ
ನಿನ್ನ ಮೇಲೆ ಆಯಿತು
ಪ್ರೀತಿ,,,,,,,,,

ಈಗ ನನ್ನ ಗಾ ಆಯಿತು
ಅದೇ ಪ್ರೀತಿ ಆ
ಪ್ರೀತಿ ಸುಮಧುರವಾದ
ಪ್ರೀತಿ,,,,,,,,

- Nagaraj Hadapad

08 Feb 2020, 09:51 am

ಮೋಡದ ಮರೆಯಲ್ಲಿ ೨

ನನಗೆ ಬಂದ ಕಷ್ಟ ನನಗೇ ಸಾಕು
ಎಂದು ಗೊಣಗುವ ನಾವು
ನಮ್ಮ ಜನನಕ್ಕೆ ಕಾರಣರಾದವರ ಕಷ್ಟ ನೋಡಬಹುದಲ್ಲ ?

ನನಗೆ ಸಿಕ್ಕ ಸುಖದ ಜೀವನ ನಮ್ಮ
ಮಕ್ಕಳಿಗೆ ಇರಲಿ ಎಂದು ಬಯಸುವ
ನಾವು ನಮ್ಮ ಜನ್ಮ ಹೀಗೆ ಇರಲಿ ಎಂದು ಬಯಸಿದವರ ಸುಖದ ಬಗ್ಗೆ ಯೋಚಿಸಬಹುದಲ್ಲ?

ಕೆಲಸಕ್ಕೆ ಸೇರುವಾಗ ತಂದೆ ತಾಯಿಗೆ ಕಾಡಿ ಬೇಡುವ ನಾವು ಕೆಲ ದಿನಗಳಲ್ಲಿ
ಅವರ ಆಸೆಗೆ ನಿರಾಸೆ ಮಾಡಿ
ಮತ್ತೇ ಅವರ ಮಡಿಲಿಗೆ ಒರಗಲು ಬಯಸಬಹುದಾ ?

ಕಷ್ಟದಿಂದಲೇ ಬಂದು ನಮ್ಮ ಕಷ್ಟಕ್ಕಿಂತ ಮೂರು ಪಟ್ಟು ಕಷ್ಡದಿಂದ ಸುಖದ ಜೀವನ ಸಾಗಿಸಲು ಮುಂದಾದವರು ನಮ್ಮ ಮುಂದೆನೇ ಇರುವಾಗ
ನಾನು ಮಾತ್ರ ಬೇಗ ಸುಖದ ಜೀವನ ಸಾಗಿಸಬೇಕು ಎಂದು ಕನಸು ಕಾಣಬಹುದಾ ?

ನಾನು ನನ್ನ ಮಕ್ಕಳು ಸುಖದಿಂದ ಬಾಳಬೇಕು
ಎಂದು ಬಯಸುವ ನಾವು ನಮ್ಮ ತಂದೆ ತಾಯಿ
ಅವರ ತಂದೆ ತಾಯಿ ಹೇಗೆ ಜೀವನ ಸಾಗಿಸಿದರು ಎಂಬುದನ್ನ ತಿಳಿಯಲು ಬಯಸಬಹುದಲ್ಲ ?

ಬೇರೆಯವರು ಹೇಗೆ ಬಾಳಿದರೆನು
ಮತ್ತೊಬ್ಬರು ಹೇಗೆ ಬೆಳೆದರೆನು
ನನಗೆ ನನ್ನ ದಾರಿ ಸುಗಮವಾಗಿರಬೇಕು
ಎಂದು ಬಯಸುವ ನಾವು
ಬೇರೆಯವರು ಹೀಗೆಯೇ ಯೋಚಿಸಿದರೆ ಹೇಗೆ ಎಂದು ಯೋಚಿಸಬಹುದಲ್ಲ ?

ಮೇಲಿನವರು ಬೆಳೆದ ಹಾಗೆ
ನಾನೂ ಬೆಳೆಯಬಹುದಾ ಎಂದು ಯೋಚಿಸಿ
ಅವರ ದಾರಿಯಲ್ಲಿ ಸಾಗಿದರೆ ನಾನೂ ಜಯಶಾಲಿ
ಆಗಬಹುದಾ ಎಂದು ಯೋಚಿಸಿ ,
ಕಾರಣ ಜಯ ಎಂಬ ಶಬ್ದಕ್ಕೆ ಯಾರೂ
ತಡೆಗೋಡೆ ಹಾಕಿರುವದಿಲ್ಲ‌ ಎಂಬುದನ್ನ ಅರಿಯಬಹುದಾ ?



ಮಹಾಂತೇಶ ಕಾತರಕಿ ಗುಳೇದಗುಡ್ಡ,

- Mahantesh

08 Feb 2020, 01:40 am

ಹೇಗೆ ತಿಳಿಸಲಿ ಗೆಳೆಯ..?

ಹೇಗೆ ತಿಳಿಸಲಿ ಗೆಳೆಯ..?
ನನ್ನೊಳಗೆ ಅಡಗಿರುವ ಭಾವನೆಯ
ಎದುರು ಬಂದಾಗೆಲ್ಲ ತಿಳಿಸುವ ಹಂಬಲ
ಆದರೂ ಸಾಲುತ್ತಿಲ್ಲ ಧೈರ್ಯ.

ನಿನ್ನ ಒಂದು ಮಾತು ಸಾಕೆನಗೆ
ದಿನವೆಲ್ಲ ಕಳೆಯಲು ಹಗಲು ಕನಸಿಗೆ,
ರಾತ್ರಿಯೂ ಅದೇ ಕಥೆಯಾಗಿದೆ
ಯಾರಿಗೆ ಹೇಳಲಿ ನನ್ನೀ ವ್ಯಥೆ.

ಆಗಾಗ ಜಾರುವ ಕಣ್ಣೀರಿಗೆ ಕಾರಣ ನೀ
ಮನದೊಳಗೆ ಮನೆ ಮಾಡಿ ಹೋದೆ,
ಬರಬಾರದೆ ಆಗಾಗ ಬಾಗಿಲ ತಟ್ಟಿ
ಕಾಯುತಿರುವೆ ನಿನಗೆಂದು ಕನಸುಗಳ ಕಟ್ಟಿ

ಎಂದು ಬರುವೆ ಹೇಳು ಗೆಳೆಯ..?
ನಿನ್ನ ಬಿಟ್ಟು ಬದುಕು ಕಷ್ಟವಾಗಿದೆ,
ಮನಸ್ಸಿನೊಳಗಿರುವ ಗುಟ್ಟು ರಟ್ಟು ಮಾಡಲು
ಕಾಯುತ್ತಿರುವೆನು ತುದಿಗಾಲಿನಲ್ಲಿ..

- ಅಕ್ಷತ

07 Feb 2020, 06:12 pm

ಅಮ್ಮ ಬರುವಳೆಂದು...

ರಾತ್ರಿಯೆಂದರೆ
ಬಲು ಇಷ್ಟ ನನಗೆ
ಕನಸಲ್ಲಾದರೂ
ಅಮ್ಮ ಬರುವಳೆಂದು..!
ಹಾಗೆಯೇ
ಹಗಲೆಂದರೂ
ಬಲು ಇಷ್ಟ ಎನಗೆ
ಅತ್ತು ಅತ್ತು ಕಣ್ಣುಗಳು
ನೋವಾಯಿತೆಂದು..!
ಪ್ರತಿದಿನವೂ ಕಾಯುವೆ ನಾ
ಸಂಜೆಗೆ ಹಾಗೂ ಮುಂಜಾವಿಗೆ..!!

- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

07 Feb 2020, 10:50 am

ಅಮ್ಮ ಏಕೋ ಬರಲಿಲ್ಲ..

ಮೂಡಣದಿ ರವಿ ಬಂದಾಯ್ತು
ಮನೆಯಂಗಳ ಶುಚಿಗೊಳಿಸಿ
ರಂಗೋಲಿ ಇಡುವ ಹೊತ್ತಾಯ್ತು
ಆದರೂ ಅಮ್ಮ ಏಕೋ ಬರಲೇ ಇಲ್ಲ..!

ಸದಾ ಕುಟುಂಬಕ್ಕಾಗಿ ದುಡಿಯುವ
ಕೇಳಿದ್ದನ್ನು ಮಾಡಿ ಉಣಿಸುವ ಅಮ್ಮ
ಹಸಿವಿನಿಂದ ನಾ ಕಾಯುತ್ತಿದ್ದರೂ
ಇಂದು ಅಮ್ಮ ಏಕೋ ಬರಲೇ ಇಲ್ಲ…!

ಅಮ್ಮನ ಕೆಲವು ಸೀರೆಗಳು
ಮೂಲೆ ಸೇರಿದವು
ಕೆಲವೊಂದಿಷ್ಟು ಇನ್ಯಾರದೋ ಪಾಲಾದವು
ಅಳಿದುಳಿದ ಕೆಲ ಸೀರೆಗಳು
ಕೌದಿ ತಲೆದಿಂಬಿಗೆ ಮುಡಿಪಾದವು
ದಿನ ರಾತ್ರಿ ತಲೆದಿಂಬಿಗೆ
ಕಂಬನಿಯ ಜೊತೆ ಒರಗುವೆ
ಆದರೂ ಅಮ್ಮ ಏಕೋ ಬರಲೇ ಇಲ್ಲ…!

ಮೊಬೈಲ್ ತರೆದಾಗ
ಕಾಣುವ ಹೆಸರದು ಅಮ್ಮ
ಎಡವಿ ಬಿದ್ದಾಗ
ಬರುವ ಕೂಗು ಅಮ್ಮ
ದುಃಖಲ್ಲೂ ನೆನಪಾಗಿ
ಮಿಕ್ಕೆಲ್ಲ ಸಮಯದಲ್ಲೂ
ಕನಸಾಗಿ ಕಾಡುವ ಅಮ್ಮ
ಮತ್ತೆಂದಿಗೂ ಬರುವುದೇ ಇಲ್ಲ...!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

07 Feb 2020, 10:49 am

ಸೇರಲಾರೆವು..

ನಾನು ನೀನು
ಸೇರಿ ತಾನು
ಅರಳುವುದು
ಸುಮ ನಿತ್ಯವು..!!
ನಾನು ಭಾನು
ನೀನು ಭೂಮಿ
ಸೇರಲಾರೆವು
ಎಂಬುದೇ ಸತ್ಯವು..!!

- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

07 Feb 2020, 10:47 am

ನಾನು ಬರಹಗಾರನಲ್ಲ

ಹೌದು
ನಾನು
ಬರಹಗಾರನಲ್ಲ..!

ನಾನು ಏನನ್ನೂ
ಬರೆಯುವುದಿಲ್ಲ;

ಎದೆಯ ಊರ ಬವಣೆ ಗೂಡ
ಭಾವದ ಮರಿ ಹಕ್ಕಿಯದು;
ಕಂಡ
ಕನಸ ನಾ ಬರೆಯಲಿಲ್ಲ;

ವಾಸ್ತವದಿ ಬಲಿತ ಗರಿ
ನೋವಲ್ಲೆ ಬೆಳೆದ ಮರಿ
ಈ ಮನದ
ಕೊಂಬೆಯಲ್ಲಿಯೇ
ಗೂಡು ಕಟ್ಟಿದ್ದರೂ
ನಾ
ತಿರುಗಿ ನೋಡಲಿಲ್ಲ..!

ಬಲಿತ ರೆಕ್ಕೆ ಸೇರೆ ಬಾನ ತೆಕ್ಕೆ
ನೆಲದ ನೆರಳು ಕೊನೆಗೆ ಬಾಳು
ಬರಿಯ ಮಣ್ಣು ಎಂದ ಮಾತ
ನಾ ಮರೆಯಲಿಲ್ಲ;
ಆದರೂ ಕೂತು ಅದ ನಾ
ಬರೆಯಲಿಲ್ಲ...!

ನಾನು ಬರೆಯಲ್ಲಿಲ್ಲ
ಕೈಗಳು ಪಟ್ಟ ಪಾಡ;
ನೊಂದ ಕಾಲ್ಗಳನೊತ್ತುವಾಗ
ಗುನುಗಿದ ಹಾಡ
ನಾನು ಬರೆಯಲಿಲ್ಲ
ಕಣ್ಣಂಚಲಿ ಕೂತು ಒಮ್ಮೆಲೆ
ಜಿಗಿಯುತ್ತಿದ್ದ ಕಂಬನಿ ಸಾಲ...!

ನಾನು ಬರಹಗಾರನಲ್ಲ;
ಏಕೆಂದರೆ
ಕಾಗದದ ಹಣೆಮೇಲೆ
ಅದರ
ಭವಿಷ್ಯವ ನಾನೆಂದೂ
ಬರೆಯಲಿಲ್ಲ...!

-ರಮೇಶ್ ಪ್ರಜ್ವಲ್

- Ramesh Prajwal

07 Feb 2020, 12:48 am

ತಾಯಿಯ ಮಡಿಲು

ಊರೂರು ಸುತ್ತಾಡಿ
ಸಮಯ ಕಳೆಯಲು
ಸ್ನೇಹಿತರು ಕರೆಯುತ್ತಿದ್ದರು
ಕರೆ ಮಾಡಿ ಪದೇ ಪದೇ,
ಒಂದೆಡೆ ಕುಳಿತು
ಯೋಚಿಸಿದಾಗ ಅರಿತೆನು
ತಾಯಿಯ ಮಡಿಲಿಗಿಂತ
ಮಿಗಿಲಾದ ಸ್ವರ್ಗ ಸುಖ
ಬೇರಾವುದಿದೆಯೆಂದು..!

- ಅಕ್ಷತ

07 Feb 2020, 12:41 am

ಗೆಳತಿ

ಕಾಡ ಕಲ್ಲಿಗೆ ಉಳಿಯಾಗಿ ಬಾ
ಒಣಗಿದ ಭಾವಿಗೆ ಜೀವ ಜಲವಾಗಿ ಬಾ
ಚಲುವಿನ ಚಿತ್ತಾರಕೆ ಬಣ್ಣವಾಗಿ ಬಾ
ಬೆಳದಿಂಗಳ ರಾತ್ರಿಗೆ ಚಂದ್ರಮೆಯಾಗಿ ಬಾ
ಒಲವಿನ ರಾತ್ರಿಗೆ ಗೆಳತಿಯಾಗಿ ಬಾ.

- Siddugouda

06 Feb 2020, 12:28 pm