ಸಿಂಹದ ಮರಿಯ ತಂದು ಸಾಕಿ ಬೆಳಸಿದರೆ, ಅದಕೆ
ಆಕಳ ಗುಣ ಬಂದಿತೆ? ಅಮೃತದಂತ ಹಾಲು ಕೊಟ್ಟಿತೆ?
ನರಿಯ ಮರಿಯ ತಂದು ಸಾಕಿ ಬೆಳಸಿದರೆ ಅದಕೆ
ನಾಯಿಯಂತ ನಿಯತ್ತಿನ ಗುಣ ಬಂದಿತೆ?
ಕಳ್ಳಬೆಕ್ಕಿಗೆ ಮನೆಯಲ್ಲಿ ಜಾಗ ನೀಡಿ
ನಿಯತ್ತಿನ ನಾಯಿಗೆ ಅಂಗಳದಲ್ಲಿ ಜಾಗ ನೀಡಿದ
ಮನುಜನ ನೋಡಿ
ಇದು ಕಲಿಗಾಲವಯವ್ಯ
ಎಂದ ಗುರು ಬಸವ ಪ್ರಿಯ ರೇವಣಸಿದ್ದೇಶ್ವರ.
ಎಲ್ಲೆಡೆ ಮತಾಂಧತೆ ಜಾತೀಯತೆಯ ಸಾಮ್ರಾಜ್ಯ
ನಿಜವಾಗಿಯೂ ಲಭಿಸಿದೆಯೇ ನಮಗೆ ಸ್ವರಾಜ್ಯ?
ಕಣ್ಬಿಟ್ಟ ಕಡೆಯಲ್ಲೆಲ್ಲ ಕೋಲೆಬಸವಗಳ ಗುಟುರು, ಕಾಕು
ಹಿಂದೆಯೆ ನಡೆದಿದೆ ಗದ್ದುಗೆಯ ಅಹಂಕಾರದ ಪರಾಕು
ಹಿಂಬಾಲಕರಿಗೆಲ್ಲ ಅಧಿಕಾರದ ರಕ್ಷಾ ಕವಚದ ಬಾಳು
ರಕ್ಷಕರೆಲ್ಲಾ ಭಕ್ಷಕರಾಗಿ ಎಂಜಲಿಗೆ ದೇಹಿಯೆನ್ನುವ ಗೋಳು
ನೋಟ ಬೀರಿದಲ್ಲೆಲ್ಲಾ ನಾನು ನನ್ನದೆ!
ನನ್ನ ಬಿಟ್ಟು ಜಗದಲಿ ಏನಿದೆ?
ಕ್ಷಣಕ್ಷಣಕೂ ಬಲಿಯುತಿದೆ ಅದ್ವಿತೀಯನಾಗುವ ಸ್ವಾರ್ಥ
ಸಾವಿರ ಪ್ರಾಣಗಳುಸಿರುಗಟ್ಟಿದರು ಸರಿಯೇ,
ದೇಶವನ್ನೆ ದೋಚಿ ಮಾರುವುದಾದರೂ ಸರಿಯೇ
ಎಡಬಿಡದೆ ನಡೆದಿದೆ ಅತಿಕ್ರಮ ಅತ್ಯಾಚಾರ
ಸಿಕ್ಕಿದ್ದನ್ನೆಲ್ಲ ಅಗೆದು ತೆಗೆದು ಬಗೆದು ಸಿಗಿದು ತಿನ್ನುವಷ್ಟು
ಇವರ ಕಣ್ಣಿಗೆ ಬಿದ್ದು ಸತ್ತವರೆಷ್ಟೋ? ಸೊರಗಿದವರೆಷ್ಟೋ?
ತನ್ನನ್ನೇ ಅಡವಿಟ್ಟು ಗಂಟು ಕಟ್ಟಿಕೊಂಡವರೆಷ್ಟೋ?
ಆಣೆ ಬರಹ ಬರಿದಿರುವ ಬ್ರಹ್ಮ ಸಾಕ್ಷಿಗೆ
ಜನ್ಮ ನೀಡಿದ ತಾಯಿ ಸಾಕ್ಷಿ ಯಾಗಿ , ನನ್ನ ದೇಹವು ಜೀವಂತವಾಗಿರುವವರೆಗೂ ನಿನ್ನ ನೆನಪುಗಳೊಂದಿಗೆ ನಿನ್ನನ್ನು ಮರೆಯುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ.