ಬದುಕಬೇಕೆಂಬ ಮಾನವ
ಆಸೆಗೆಕೆ ಮಾಡುವೆ ಸಜೀವ ಸಮಾದಿ !
ಹೋರಾಡಲು ಬಿಡು ಜೀವನದ ಕಣಕ್ಕೆ
ಹೋರಾಡಲಿ ಬಡಿದಾಡಲಿ
ಬದುಕಿನಾಳವ ತಿಳಿಯಲಿ
ಕಾಲ ಅನುಭವಗಳ ತಿಳಿದು
ಬದುಕಿನ ನಗ್ನತೆಯನ್ನರಿತು
ಅನುಭವ ಶಿಲ್ಪಿಯಾಗಲಿ !!
ಪ್ರತಿ ಬಾರಿ ಸೋತ ಹೃದಯ
ಸುಮ್ಮನಾಗಿದೆ....
ಮನಸ್ಸಿನ ಪ್ರತಿ ನೋವುಗಳ ಮೌನ
ತಾಳಿದೆ....
ಹೃದಯದಲ್ಲಿ ಅವಳ ಪ್ರೀತಿ
ಅಚ್ಚೆಯಂತೆ ಉಳಿದಿದೆ....
ಕಣ್ಣೆರಡು ಮೋಸ ಹೋಗಿವೆ......
ಕನಸುಗಳು ಮಾಸುತ್ತಿವೆ.. ....
ದಿಕ್ಕು ತೋಚದಾಗಿದೆ ಬದುಕು.....
ಆ ದಿನಗಳು ಎಲ್ಲಿ ಹೋದವು
ಸೂತ್ರ ಕಟ್ಟಿ ಆಕಾಶಕ್ಕೆ ಪಟ ಹಾರಿಸಿದ್ದು
ಚಿನಿಪನಿ ಹಿಡೆದು ಹೊಡೆದು ಆಡಿದ್ದು
ಗುಂಡ, ಗಜಗ, ಕಣಗಲಿ ತೋರಬೆರಳಲಿಟ್ಟು ಹೊಡದದ್ದು
ಅಜ್ಜ ಅಜ್ಜಿಯ ತೊಡೆಯ ಮೇಲೆ ಕಥೆ ಕೇಳುತ್ತಾ ನಿದ್ದೆಗೆ ಜಾರಿದ ಆ ದಿನಗಳು
ಬೊಗಸೆ ಶೆಂಗಾಕ್ಕೆ ಉರಿಬಿಸಲಲಿ ಶೆಂಗಾ ಶೊಸಿಸಿದ್ದು
ಬೊಗಸೆ ಹುಣಸೆ ಕಪ್ಪ ಕೆ ಹುಣಸೆ ಹಣ್ಣು ಜಜ್ಜದ್ದು
೨ಪೈ ಸೆಗೆ ಒಂದು ಉಣ್ಣುವ ಎಲೆ ಕಟ್ಟದ್ದು
೨೫ ಪೈಸೆಗೆ ಒಂದು ತಾಸ ಬಾಡಿಗೆ ಸೈಕಲ್ ಹೊಡದದ್ದು
೭೫ ಪೈಸೆಗೆ ನೆಲಕೆ ಟಿಕೆಟ್ ತೆಗೆದು ಸಿನೇಮಾ ನೋಡಿದ್ದು
ಸಂಕ್ರಮಣ ಕ್ಕೆ ೧೦ ಕಿ.ಮಿ ನಡೆದು ರೊಟ್ಟಿ ಖಾರ ತಿಂದದ್ದು
ಊರ ಮದುವೆ ಸಮಾರಂಭಗಳಿಗೆ ಕರೆಯದೇ ಕಳಸಗಿತ್ತಿಯಂತೆ ಹೋಗಿದ್ದು
ಎಸ್ ಎಸ್ ಎಲ್ ಸಿ ಪರೀಕ್ಷೆಲಿ ನಮಗೂ ಯಾರ ಕಾಫಿ ಕೊಡಲು ಬರದದ್ದಕ್ಕೆ ಕಣ್ಣೀರು ಹರಸಿದ್ದು
'ಬಬ್ರುವಾಹನ' ಅಣ್ಣವರ ಸಿನೇಮಾ ನೂರು ಬಾರಿ ನೋಡಿದ್ದು
ಇದ್ದದ್ದೊಂದು ಹಳೆಕಾಲದ ಕೈ ಗಡಿಯಾರ ಕ್ಲಾಸಲಿ ಎಲ್ಲರಗೂ ಕಾಣುವಂಗ ಕೈ ಗೆ ಕಟಗೊಂಡಡ್ಡಾಡಿದ್ದು
ತಲೆ ಗುಂಡ ಹೊಡಸಿಕೊಂಡ ಹಣೆಗೆ ವಿಭೂತಿ ಪಟ್ಟ ಬಳಕೊಂಡ ಕ್ಲಾಸಮೇಟಗಳ ರ್ಯಾಗಿಂಗಿಗೆ ಒಳಗಾಗಿದ್ದು
ಎಲ್ಲ ಜಾತಿ ಮತ ಧರ್ಮ ಗೆಳೆಯರ ಜೊತೆ ಒಂದೇ ತಾಟಲಿ ಉಂಡಾಡಿದ್ದು
ಪತ್ರ ಬರೆದು ಉತ್ತರಕ್ಕೆ ಹದಿನೈದು ದಿನಗಳವರೆಗೆ ಪತ್ರದ ದಾರಿ ಕಾಯ್ದದ್ದು
ವರ್ಡಕಪ್ ಆಟ ನೋಡಲು, ಸಾಹುಕಾರ ಮನೆಯ ಕಿಡಕಿಗಳಲಿ ಇಣಿಕಿ ಟಿ.ವ್ಹಿ.ನೋಡಿದ್ದು
ಸೈಜ್ ಬರದಿದ್ದರೂ ಗೆಳೆಯರ್ ಡ್ರೆಸ್ ಹಾಕ್ಕೊಂಡು ಕಾಲೇಜ್ ದಲಿ ಬಿಲ್ಡಪ್ ಕೊಟ್ಟದ್ದು
ಮನುಷ್ಯ ಜಾತಿ ಒಂದೇ ಎಂಬ ತತ್ವ ಬದಕಲ್ಲಿ ಅಳವಡಿಸಿಕೊಂಡದ್ದು.
ಆ ದಿನಗಳು ಎಲ್ಲಿ ಹೋದವು...