Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿನ್ನನು ನೋಡುವ ಆಸೆ ಹೊತ್ತ ಕಣ್ಣಲಿ

ನಿನ್ನನು ನೋಡುವ
ಆಸೆ ಹೊತ್ತ ಕಣ್ಣಲಿ
ಬೇರೆ ಜಗವನು
ನಾ ಹೇಗೆ ಕಾಣಲಿ!!
ಎದೆಯ ಗುಡಿಯ
ಒಳಗೆ ನಲ್ಲ ನಿನ್ನನು
ಹೊರತು ಪಡಿಸಿ ನಾ
ಬೇರೆ ದೈವವ ಕಾಣೆನು!!

ಸುಮ್ಮನೆ ಇದ್ದರೂ
ನಿನ್ನದೆ ಯೋಚನೆ
ಕಾಣುವ ಕನಸದು
ಕಾಯದು ಇರುಳನು!!
ಆಗೊಮ್ಮೆ ಈಗೊಮ್ಮೆ
ತುಟಿಯಲ್ಲಿ ನಗು ಚಿಮ್ಮಿ
ನೀ ಬರುವೆ ನೆನಪಾಗಿ
ಹಗಲಿರುಳು ನನಗಾಗಿ!!

ಕಾಯುತ್ತ ನಾ ಇರುವೆ
ಕಾಡಲೆಂದೇ ನೀ ಬರುವೆ
ಕಣ್ಣೆದಿರು ಬಣ್ಣ ಬಣ್ಣ
ಬದುಕಲ್ಲಿ ನೂರು ಬಣ್ಣ!!
ಮುಗಿಲ ಎತ್ತರಕ್ಕೂ
ಮಿಗಿಲಾದ ಒಲವು
ಮಡಿಯುವ ಮುನ್ನ
ನೀ ಸಿಗಲು ಗೆಲುವು!!

ಆ ಚುಕ್ಕಿ ತಾರೆಯು
ಆ ಬಾನ ಏರಿದೆ
ನೀ ನನ್ನ ತಾರೆಯು
ನನ್ನ ಬಾಳ ಏರು ಬಾ!!
ನಿನ್ನಯ ತೋಳಲಿ
ನಾ ಪುಟ್ಟ ಮಗುವಾಗಿ
ಜಗ ಮರೆತು ಇರಬೇಕು
ಸದಾ ಹಾಯಾಗಿ!!

- ಪಿ.ಜಿ.ಜ್ಯೋತಿ

13 Feb 2020, 11:27 am

ಮನಸು-ಕನಸು

ಮರೆಯಲಾರೆ
ಅಮ್ಮನ
ಕೊನೆಯ ಮುತ್ತು
ನನ್ನವಳ
ಮೊದಲ ಮುತ್ತು,
ಅಮ್ಮನ ಮುತ್ತಿನಲಿ
ನಿಸ್ವಾರ್ಥ ಮನಸಿತ್ತು.!
ಇವಳ ಮುತ್ತಿನಲಿ
ನೂರಾರು ಕನಸಿತ್ತು.!
- ಸಿದ್ದು ಕನ್ನಡಿಗ

ಹ್ಯಾಪಿ ಕಿಸ್ ಡೇ..

- - ಸಿದ್ದು ಕನ್ನಡಿಗ

13 Feb 2020, 09:54 am

ಹ್ಯಾಪಿ ಕಿಸ್ ಡೇ...

ಪ್ರಿಯೇ..
ನೀ ತುಟಿಗೆ ಬಣ್ಣ
ಹಚ್ಚಿದರೇ ಏನು..!
ಅದ ಅಳಿಸಿ
ಕಚ್ಚದಿರುವೆನೇ ನಾನು.!

- - ಸಿದ್ದು ಕನ್ನಡಿಗ

13 Feb 2020, 09:38 am

ನೀ ಮರಿಯಬೇಡ...

ನೂರಾರು ಹುಡುಗರ ಮಧ್ಯ ನಡುವೆ
ನಿನ್ನ ನೋಡಿ ನನ್ನ ಮನ ಸೋತಿತು
ನೀ ಸೇರಿದೆ ನನ್ನ ಪುಟ್ಟು
ಹೃದಯವೆಂಬ ಅರಮನೆಯ ಮಡಿಲು.....

ನನ್ನ ಕಣ್ಣುಗಳಲ್ಲೂ,ಮನಸ್ಸಲ್ಲೂ,
ಅವನ ಆ ನೋಟದೆ ಧ್ಯಾನ
ಅವನ ಆ ನಗು ನಂಗೆ ದೇವ್ರು ಕೊಟ್ಟ ವರದಾನ
ಅವನೇ ನನ್ನ ಮನದ ಸಾಹುಕಾರ....

ಎಷ್ಟುಂತಾ ನಾ ಹೇಳುತ್ತಾ
ಹೋಗಲ್ಲಿ ಅವನ ಗುಣಗಳ.
ಅವನು ಒಳಿಯದೆ ಹೋದರೆ
ಅಗೋದ್ಯಾಗೆ ನನ್ನ ಪ್ರೀತಿ ಪಾವನ...

ಹೇ ಗೆಳಯನೇ
ನೀ ಯಾಕ್ ಈಗೆ ಸತಾಯಿಸುವೆ
ನಿನಗಾಗಿ ಕಾಯುತ್ತಿದೆ
ಇಲ್ಲೊಂದು ಪುಟ್ಟ ಮನಸ್ಸುವೆಂಬುವುದನ್ನ
ನೀ ಮರೆಯಬೇಡ....

- Ajay

12 Feb 2020, 10:39 pm

ಹೆಣ್ಣೆಂದರೆ...

ಜರಿಯಬೇಡಿರಿ ನನ್ನ ಹೆಣ್ಣೆಂದು,
ಸಮಾಜದಿ ನಾನು ಹುಣ್ಣೆಂದು..!

ನಿನ್ನ ಹೆತ್ತವಳು ಹೆಣ್ಣು
ಹೊತ್ತವಳೂ ಹೆಣ್ಣು
ಅಷ್ಟೇ ಏಕೆ...
ಹುತ್ತು ಬಿತ್ತು ಬದುಕಲು
ತಿನ್ನುವ ಅನ್ನ ಅದೂ ಹೆಣ್ಣು..!

ಜರಿಬೇಡಿರಿ ನನ್ನ ಹೆಣ್ಣೆಂದು
ಸಮಾಜದಿ ನಾನು ಹುಣ್ಣೆಂದು..!

ನಿಮ್ಮ ಬೆನ್ನಿಗೆ ಹುಟ್ಟಿದ
ಸಹೋದರಿಯು ಹೆಣ್ಣು,
ನಿಮ್ಮ ಬೆನ್ನ ತಟ್ಟುವ
ಅರ್ಧಾಂಗಿಯು ಹೆಣ್ಣು,
ನಿನ್ನ ರಕುತವನೇ
ಹಂಚಿಕೊಂಡ ಮಗಳೂ ಹೆಣ್ಣು...!

ಜರಿಬೇಡಿರಿ ನನ್ನ ಹೆಣ್ಣೆಂದು
ಸಮಾಜದಿ ನಾನು ಹುಣ್ಣೆಂದು..!

ಸೌಂದರ್ಯವತಿ ಪಕೃತಿಯನೇ
ಹೋಲಿಸಿರುವಿರಿ ಹೆಣ್ಣಿಗೆ,
ಲಕ್ಮೀ-ಸರಸ್ವತಿಯರೆಂಬ ಹೆಣ್ಣೆ
ಒಡತಿಯರೆಂದು ಬಣ್ಣಿಸಿರುವಿರಿ
ಧನ-ಕನಕ-ವಿದ್ಯೆಗೆ,
ಅಷ್ಟೇ ಏಕೆ..
ಭರತಖಂಡದ ಮೂಲಪುರುಷ
ಭರತ ಮಹಾರಾಜನು
ಆದರೂ ಪೂಜಿಪಿರಿ ಹೆಣ್ಣಾದ
ಭರತಮಾತೆಯೆಂಬ ಹೆಸರಿಗೆ..!

ಜರಿಬೇಡಿರಿ ನನ್ನ ಹೆಣ್ಣೆಂದು
ಸಮಾಜದಿ ನಾನು ಹುಣ್ಣೆಂದು..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

12 Feb 2020, 08:35 pm

"ಶೋಧ"

ಬದುಕಬೇಕೆಂಬ ಮಾನವ
ಆಸೆಗೆಕೆ ಮಾಡುವೆ ಸಜೀವ ಸಮಾದಿ !
ಹೋರಾಡಲು ಬಿಡು ಜೀವನದ ಕಣಕ್ಕೆ
ಹೋರಾಡಲಿ ಬಡಿದಾಡಲಿ
ಬದುಕಿನಾಳವ ತಿಳಿಯಲಿ
ಕಾಲ ಅನುಭವಗಳ ತಿಳಿದು
ಬದುಕಿನ ನಗ್ನತೆಯನ್ನರಿತು
ಅನುಭವ ಶಿಲ್ಪಿಯಾಗಲಿ !!

-ಕಿದ್ವಾಯಿ ರಾಜಶೇಖರ್.

- Raj Raj

12 Feb 2020, 07:25 pm

ಪ್ರತಿ ಬಾರಿ ಸೋತ ಹೃದಯ ಸುಮ್ಮನಾಗಿದೆ

ಪ್ರತಿ ಬಾರಿ ಸೋತ ಹೃದಯ
ಸುಮ್ಮನಾಗಿದೆ....
ಮನಸ್ಸಿನ ಪ್ರತಿ ನೋವುಗಳ ಮೌನ
ತಾಳಿದೆ....
ಹೃದಯದಲ್ಲಿ ಅವಳ ಪ್ರೀತಿ
ಅಚ್ಚೆಯಂತೆ ಉಳಿದಿದೆ....
ಕಣ್ಣೆರಡು ಮೋಸ ಹೋಗಿವೆ......
ಕನಸುಗಳು ಮಾಸುತ್ತಿವೆ.. ....
ದಿಕ್ಕು ತೋಚದಾಗಿದೆ ಬದುಕು.....

✍️ನಿಮ್ಮ ಪವನ

- Pavankumar Honawad

12 Feb 2020, 05:41 pm

ಆ ದಿನಗಳು

ಆ ದಿನಗಳು ಎಲ್ಲಿ ಹೋದವು
ಸೂತ್ರ ಕಟ್ಟಿ ಆಕಾಶಕ್ಕೆ ಪಟ ಹಾರಿಸಿದ್ದು
ಚಿನಿಪನಿ ಹಿಡೆದು ಹೊಡೆದು ಆಡಿದ್ದು
ಗುಂಡ, ಗಜಗ, ಕಣಗಲಿ ತೋರಬೆರಳಲಿಟ್ಟು ಹೊಡದದ್ದು
ಅಜ್ಜ ಅಜ್ಜಿಯ ತೊಡೆಯ ಮೇಲೆ ಕಥೆ ಕೇಳುತ್ತಾ ನಿದ್ದೆಗೆ ಜಾರಿದ ಆ ದಿನಗಳು
ಬೊಗಸೆ ಶೆಂಗಾಕ್ಕೆ ಉರಿಬಿಸಲಲಿ ಶೆಂಗಾ ಶೊಸಿಸಿದ್ದು
ಬೊಗಸೆ ಹುಣಸೆ ಕಪ್ಪ ಕೆ ಹುಣಸೆ ಹಣ್ಣು ಜಜ್ಜದ್ದು
೨ಪೈ ಸೆಗೆ ಒಂದು ಉಣ್ಣುವ ಎಲೆ ಕಟ್ಟದ್ದು
೨೫ ಪೈಸೆಗೆ ಒಂದು ತಾಸ ಬಾಡಿಗೆ ಸೈಕಲ್ ಹೊಡದದ್ದು
೭೫ ಪೈಸೆಗೆ ನೆಲಕೆ ಟಿಕೆಟ್ ತೆಗೆದು ಸಿನೇಮಾ ನೋಡಿದ್ದು
ಸಂಕ್ರಮಣ ಕ್ಕೆ ೧೦ ಕಿ.ಮಿ ನಡೆದು ರೊಟ್ಟಿ ಖಾರ ತಿಂದದ್ದು
ಊರ ಮದುವೆ ಸಮಾರಂಭಗಳಿಗೆ ಕರೆಯದೇ ಕಳಸಗಿತ್ತಿಯಂತೆ ಹೋಗಿದ್ದು
ಎಸ್ ಎಸ್ ಎಲ್ ಸಿ ಪರೀಕ್ಷೆಲಿ ನಮಗೂ ಯಾರ ಕಾಫಿ ಕೊಡಲು ಬರದದ್ದಕ್ಕೆ ಕಣ್ಣೀರು ಹರಸಿದ್ದು
'ಬಬ್ರುವಾಹನ' ಅಣ್ಣವರ ಸಿನೇಮಾ ನೂರು ಬಾರಿ ನೋಡಿದ್ದು
ಇದ್ದದ್ದೊಂದು ಹಳೆಕಾಲದ ಕೈ ಗಡಿಯಾರ ಕ್ಲಾಸಲಿ ಎಲ್ಲರಗೂ ಕಾಣುವಂಗ ಕೈ ಗೆ ಕಟಗೊಂಡಡ್ಡಾಡಿದ್ದು
ತಲೆ ಗುಂಡ ಹೊಡಸಿಕೊಂಡ ಹಣೆಗೆ ವಿಭೂತಿ ಪಟ್ಟ ಬಳಕೊಂಡ ಕ್ಲಾಸಮೇಟಗಳ ರ್ಯಾಗಿ‌ಂಗಿಗೆ ಒಳಗಾಗಿದ್ದು
ಎಲ್ಲ ಜಾತಿ ಮತ ಧರ್ಮ ಗೆಳೆಯರ ಜೊತೆ ಒಂದೇ ತಾಟಲಿ ಉಂಡಾಡಿದ್ದು
ಪತ್ರ ಬರೆದು ಉತ್ತರಕ್ಕೆ ಹದಿನೈದು ದಿನಗಳವರೆಗೆ ಪತ್ರದ ದಾರಿ ಕಾಯ್ದದ್ದು
ವರ್ಡಕಪ್ ಆಟ ನೋಡಲು, ಸಾಹುಕಾರ ಮನೆಯ ಕಿಡಕಿಗಳಲಿ ಇಣಿಕಿ ಟಿ.ವ್ಹಿ.ನೋಡಿದ್ದು
ಸೈಜ್ ಬರದಿದ್ದರೂ ಗೆಳೆಯರ್ ಡ್ರೆಸ್ ಹಾಕ್ಕೊಂಡು ಕಾಲೇಜ್ ದಲಿ ಬಿಲ್ಡಪ್ ಕೊಟ್ಟದ್ದು
ಮನುಷ್ಯ ಜಾತಿ ಒಂದೇ ಎಂಬ ತತ್ವ ಬದಕಲ್ಲಿ ಅಳವಡಿಸಿಕೊಂಡದ್ದು.
ಆ ದಿನಗಳು ಎಲ್ಲಿ ಹೋದವು...

- Siddugouda

12 Feb 2020, 04:13 pm

!! ಪ್ರೀತಿ ಗೂಡು !!

ಪ್ರೀತಿ ಎಂದರೆ....
ನೀತೀಯ ಗೂಡು....
ನಾವೇ ಸೃಷ್ಠಿಸಿಕೊಂಡ...
ಕಷ್ಠ-ಸುಖದ
ಬೀಡು !!

ಕಿದ್ವಾಯಿ ರಾಜಶೇಖರ್.

- Raj Raj

12 Feb 2020, 02:34 pm

ಪ್ರೇಮು

ನಲ್ಲ-ನಲ್ಲೆ
ಪ್ರೀತಿ-ಪ್ರೇಮ
ನೂರು ಗ್ರಾಮು
ಸಂಸಾರ-ಗಿಂಸಾರ
ಬಿರುಕು ಬಿಟ್ರೆ
ಹಾಕಿಸಬೇಕು ನೋಡು
ಪ್ರೇಮು !!

-ಕಿದ್ವಾಯಿ ರಾಜಶೇಖರ್.

- Raj Raj

12 Feb 2020, 02:24 pm