Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

" ಅರಿವು "

ಪ್ರೇಮರಾಗವ
ಮಿಡಿಸುವ ಮುನ್ನ
ನಿನ್ನ ಗುಣವ ಅರಿತರೆ
ಎನಿತು ಚೆನ್ನ !!

*ಕಿದ್ವಾಯಿ ರಾಜಶೇಖರ್.

- Raj Raj

14 Feb 2020, 08:38 pm

ಕವಿತೆಯು ನಾನು

ಕವಿತೆ ಬರೆಯುವ ಮನಸು ಅದೆಂತ ಸೊಗಸು ಕಾಗದದ ಮೇಲೆ ಗೀಚುವಾಗ.

ಭಾವಗಳ ನುಡಿಯಾಗಿಸಿ ಬರೆಯೋವಾಗ
ಜೊತೆಯದ ಆಸೆಗಳ ಕನಸು.

ಕನಸುಗಳ ಅಮಲಿನಲ್ಲಿ ಮುತ್ತಿನಂತ ಮಾತುಗಳ ವರಿಸೆ ಅದು ಮನಗಳ ಸೆಳೆದವು.

ಸಾಲುಗಳ ಗೀಚುತ.... ಗೀಚುತ....
ಗೆಳೆಯರಾಗಿ ಹೋದೆವು ಕವಿತೆಯು ನಾನು!

ಗೆಳೆತನದ ಆತುರದಲ್ಲಿದ ಮನಸಿಗೆ ಆಪ್ತನಾದ ನೀನು ನನಗೆ ಆಪ್ತಮಿತ್ರ ನಾಗಬೇಕೆಂಬ ಅಪೇಕ್ಷೆ ನನ್ನದು.

ಹೇಳಿಬಿಡುವೇ ನನ್ನ ಮನವ ಕವಿತೆಗಳ ಎರಡು ಸಾಲಿನಲ್ಲಿ ಕೇಳಲು ಬರುವುದೊಂದು ಮನವೇಂದು ಕಾಯದೆ.

ಕಷ್ಟಗಳನ್ನು ಹೇಳಿಬಿಡುವೇ !!
ಖುಷಿಗಳನ್ನು ಹೇಳಿಬಿಡುವೇ !!
ಕವಿತೆಯ ಎರಡು ಸಾಲಿನಲ್ಲಿ

ಕಣೀರ ಒರೆಸಿಕೊಳ್ಳುವೇ !!
ಖುಷಿಯನ್ನು ಹಂಚಿಕೊಳ್ಳುವೇ !!
ಈ ಕವಿತೆಯ ಎರಡು ಸಾಲಿನಲ್ಲಿ

ಭಾವಗಳ ಬೆರೆಸಿ
ಭಾವನೆಗಳ ವರ್ಣಿಸಿ
ಹಾಲುನೀರಾಗಿ ಬೆರೆತುಹೋಗುವೇ
ಈ ಕವಿತೆಯ ಎರಡು ಸಾಲಿನಲ್ಲಿ.

ಕವಿತೆಗಳ ಬರೆಯುವ ಕವಿಯು ನಾನ್ನಲಾ
ಆದರೆ ಭಾವನೆಗಳ ಗೀಚುವ ಒಂದು
ಹುಚ್ಚನಾದೇ ನಾ.

- Kris

14 Feb 2020, 08:59 am

ಗೆಳೆಯನೆಂಬ ಏಕಾಂತ !

ಕಾದು ಕಳೆದಿಹೇ ವರುಷಗಳ
ಒಂದು ಒಳ್ಳೆ ಗೆಳೆಯನ ಹುಡುಕಿ,
ಭಾಗ್ಯಾ ವಂಚಿತನಾದೆ ಸ್ನೇಹಿತರ ಸಂಗತಿಯಲ್ಲಿ,
ಸಿಕ್ಕರು ಸಿಹಿಯಾದ ಸ್ನೇಹಿತರು ದೂರವಾಗಿ ಹೋದರು ನನ್ನಿಂದ.

ಏನು ಹೇಳಲಿ ನಾ ವಿಧಿಯ ವಿರಹ ಒಂದು ವಿಷವಾಗಿ ವದಿಸಿ ಕಾಣದಂತೆ ಹುದುಗಿ ಹೋಹಿತು ಕಾಲವೆಂಬ ಗೋರಿಯಲ್ಲಿ ನನ್ನ ಗೆಳೆತನ.

ಕಾದು ಕಾಲಗಳು ಉರುಳಿದವು,
ಮರೆಯಗುತ್ತಿದೆ ನನ್ನ ಯವನವು,
ಮಾಯವಾದವು ನಗುವಿನ ಹೆಜ್ಜೆ ಗುರುತುಗಳು ಅನರ್ಥವಾಯಿತು ನನ್ನ ಮನದ ಭಾವಗಳು
ಬೇಡವಾಗಿ ಹೋಗಿದೆ ಈ ಬಾಳು
ಹರುಷ ತರುವ ಒಬ್ಬ ಗೆಳೆಯನಿಲ್ಲದೆ.


ನೀರಮೇಲಿನ ಬರಹದಂತಾಗಿದೇ ನನ್ನ ನಂಬಿಕೆಗಳು ಸೊರಗಿ ಸೋತು ಹೋಗಿವೇ ನನ್ನ ಬಣದ ಕನಸುಗಳು ಇಲ್ಲವಾಯಿತೊಂದು ಅವಕಾಶ ಪಶ್ಚತ್ತಾಪ ಪಡಲು ಮಾಡದ ಪಾಪಗಳಿಗೆ.

ಮೌನಗಳು ಹಿತವಾಗಿ ವೇದನೆಗಳು ವಿಷವಾಗಿ ಹೋದವು ನೋವುಗಳೆ ನೆನಪಾಗಿ ಉಳಿದವು
ನನ್ನ ಎದೆಯಲ್ಲಿ ಏಕಾಂತದ ಗುರುತುಗಳೇ
ನನ್ನ ದಾರಿಯಲ್ಲಿ.

ವಿರಸಗಳೇ ಮೋಡವಾಗಿ ವೇದನೆಗಳ ಮಳೆಯೊಂದು ಸುರಿದಿದೇ ನನ್ನ ಬದುಕಿನ ಭೂಮಿಯಲ್ಲಿ.

- Kris

13 Feb 2020, 07:44 pm

4."ಮಿಡಿತ"

ಮಿಡಿ
ಕವನಗಳು
ನನ್ನದು !

ಮಿಡಿಸುವ
ತುಡಿತಗಳು
ನಿಮ್ಮದು !!

*ಕಿದ್ವಾಯಿ ರಾಜಶೇಖರ್.

- Raj Raj

13 Feb 2020, 07:05 pm

!! ಜ್ವಾಲಾಮುಖಿ !!

ಒಲವಿನ
ನನ್ನಾಕೆ
ಅನುರಾಗದ
ಪ್ರೇಮಮುಖಿ !

ಮುನಿದರೆ
ಮನೆಯೆಲ್ಲ
ಕೊಲಾಹಲದ
ಜ್ವಾಲಾಮುಖಿ !!

* ಕಿದ್ವಾಯಿ ರಾಜಶೇಖರ್.

- Raj Raj

13 Feb 2020, 06:54 pm

ಗಾಯನ ನಿಲ್ಲಿಸಿದ ಕೋಗಿಲೆ

ನಿಮ್ಮ ಹೃದಯ ಅಗಸೆ ಬಾಗಿಲನ ಮುಂದೆ ನೆಟ್ಟ ಬೀದಯ ಗೂಟಗಲ್ಲಿನಂತೆ ಏಕಾಯಿತು?
ನಿಮ್ಮ ಹೃದಯವು ಜಲ ಬತ್ತಿ ದ ಬಾವಿಯಂತೆ ಏಕಾಯಿತು?
ನಿಮ್ಮ ಹೃದಯ ಮಳೆ ತರದ ಒಣ ಸಿಡಿಲಿನ ಗುಂಡಿನಂತೆ ಏಕಾಯಿತು?
ನಿಮ್ಮ ಹೃದಯ ಕಟುಕನ ಕೈಯಲ್ಲಿರುವ ಹತಾರದಂತೆ ಏಕಾಯಿತು?
ನಿಮ್ಮ ಹೃದಯ ವಸಂತಕಾಲದಲಿ ಗಾಯನ ನಿಲ್ಲಿಸಿದ ಕೋಗಿಲೆಯ ಕಂಠದಂತೆ ಏಕಾಯಿತು?

- Siddugouda

13 Feb 2020, 03:00 pm

ಅಗ್ನಿಯೆಂಬ ಸಿಂಹಾಸನ

ಎನ್ನ, ಕರ್ಪೂರದ ರಾಜನ ಗೊಂಬೆಯ ಮಾಡಿ
ಅಗ್ನಿಯೆಂಬ ಸಿಂಹಾಸನದ ಮೇಲೆ ಕುಳ್ಳಿರಿಸಿದರಯ್ಯ
ಅಗ್ನಿಸ್ಪರ್ಶದಿಂದ ಶೂನ್ಯದಲ್ಲಿ ಲೀನವಾಗಿ ಅಡಗಿದೆನಯ್ಯ

ಎನ್ನ, ಮಂಜುಗಡ್ಡೆಯ ಗೊಂಬೆ ಮಾಡಿ
ಮಂಜುಗಡ್ಡೆಯ ಹರಗೋಲಲಿ ಕುಳ್ಳಿರಿಸಿ ತಳ್ಳಿದರಯ್ಯ
ಸಮುದ್ರದ ನೀರನ ಸ್ಪರ್ಶದಿಂದ ಶೂನ್ಯದಲ್ಲಿ ಲೀನವಾಗಿ ಅಡಗಿದೆನೆಯ್ಯ

ಎನ್ನ, ಗಾಳಿ ಗೋಪುರವ ಮಾಡಿ
ಗಾಳಿಯ ಸುಳಿಯೊಳಗೆ ತೂರಿ ಬಿಟ್ಟರಯ್ಯ
ಗಾಳಿಯ ಸ್ಪರ್ಶದಿಂದ ಶೂನ್ಯದಲ್ಲಿ ಲೀನವಾಗಿ ಅಡಗಿದೆನಯ್ಯ

ಶೂನ್ಯದ ಶೂನ್ಯ ಪೀಠದ ಅಧಿಪತಿ ಗುರು ಬಸವ ಪ್ರಿಯ ರೇವಣದಿದ್ದೇಶ್ವರ ನೀವಿರುವಾಗ ನಾ ನಿಶ್ಚಿಂತಿಗೊಂಡೆನಯ್ಯ.


ಕೃಪೆ: ಎಲ್ಲ ಶರಣರು.

- Siddugouda

13 Feb 2020, 02:18 pm

ಅಂಗವೆಲ್ಲ ನಷ್ಟವಾಗುವ ಮುನ್ನ

ಕಣ್ಣುಗಳು ಹಿಂಗಿವ ಮುನ್ನ
ಬೆನ್ನು ಬಾಗಿವ ಮುನ್ನ
ಕೈ ಕಾಲು ಬಿದ್ದು ಹೋಗುವ ಮುನ್ನ
ನೆನಪು ಅರುವು ಮರೆವು ಹಿಡಿವ ಮುನ್ನ
ಚರ್ಮ ಸುಕ್ಕುಗಟ್ಟಿವ ಮುನ್ನ
ಅಂಗವೆಲ್ಲ ನಷ್ಟವಾಗಿ ಅಂತ್ಯದೆಡೆಗೆ ಸಾಗುವ ಮುನ್ನ
ಒಮ್ಮೆಯಾದರೂ ನೆನೆ
ಗುರು ಬಸವ ಪ್ರಿಯ ರೇವಣಸಿದ್ದೇಶ್ವರರನ್ನ, ಅವರೊಬ್ಬರೇ ಮುಕ್ತಿಯ ದಾರಿ ತೋರಿಸುವರು ನೋಡಾ!.

ಕೃಪೆ:ಎಲ್ಲ ಶರಣರು.

- Siddugouda

13 Feb 2020, 01:38 pm

ನಾನವಳಲ್ಲ

ನೀ ನನ್ನ ನೋಡಿ ಮುಗುಳ್ನಕ್ಕೂ...
ಮುಖದಲ್ಲಿ ಮಂದಹಾಸವ ಬೀರಿ...
ನನ್ನ ಮನದಲ್ಲಿ ನಿನ್ನ ಒಲವ ಹರಿಸಿ...
ನಾ ನಿನ್ನ ಬಳಿ ಬಂದು...
ಒಲವ ತಿಳಿಸಬೇಕೆನ್ನುವಷ್ಟರಲ್ಲಿ ನಾನವಳಲ್ಲ ಎಂದು ದೂರ ಸರಿದವಳಲ್ಲವೇ ನೀ...✍️ಮಲ್ಲ....

- Mallesh

13 Feb 2020, 11:42 am

ಅಡಕತ್ತರಿಯಲ್ಲಿ ಸಿಲುಕಿಕೊಂಡಿತು

ಅಡಕತ್ತರಿಯಲ್ಲಿ ಸಿಲುಕಿಕೊಂಡಿತು
ಅಲೆಮಾರಿಯ ಈ ಹೃದಯ!!
ಯಾಮಾರಿ ಮೋಸ ಹೂಯಿತು
ಬಡಪಾಯಿಯ ಈ ಹೃದಯ!!

ಹರೆಯದಲಿ ಅರಳಿದ ಒಲವೊಂದು
ಘಮಿಸುತಲೇ ವಿಷವ ಉಣಿಸಿತು!!
ಮಂತ್ರಮುಗ್ಧನಂತೆ ನಾ ಬಂದೆ
ಮಾಯದ ಹೂವಿಗೆ ಮನಸೋತು!!

ಕತ್ತಲೆ ಕಾಡಿನಲಿ ಕಣ್ಣಿಗೆ ಬಟ್ಟೆ ಕಟ್ಟಿ
ಒಬ್ಬಂಟಿ ಮಾಡಿ ಹೋದೆ ಯಾಕಾಗಿ ನೀ!!
ಎತ್ತ ಓಡಿದರೂನೂ ದಾರಿಯೇ ಕಾಣದು
ಮುತ್ತಿದೆ ಬರೀ ಕತ್ತಲು ನನ್ನ ಸುತ್ತಲೂ!!

ಉರುಲು ಇಲ್ಲದೇ ಕೊರಳು ಬಿಯಾಗಿದೆ
ಕಂಠ ಹರಿದು ಅಳಬೇಕು ಧನಿ ಬಾರದು!!
ಕಂಬನಿಯೇ ವರವಾದ ನನ್ನಯ ಕಣ್ಣಿಗೆ
ಕಾಣುವ ಲೋಕವೆಲ್ಲ ಮಂಜಾಗಿದೆ!!

ಸೂಜಿಗೊಂದು ದಾರವಂತೆ
ಕೂಡಿ ಹೊಲಿಯುವ ಆಟವಂತೆ!!
ನನ್ನ ನಿನ್ನನು ಒಂದು ಮಾಡಿ ಬೆಸೆಯುವ
ಬಂಧವು ಎಲ್ಲೋ ಮರೆಯಾಗಿದೆ!!

- ಪಿ.ಜಿ.ಜ್ಯೋತಿ

13 Feb 2020, 11:41 am