ಕಾದು ಕಳೆದಿಹೇ ವರುಷಗಳ
ಒಂದು ಒಳ್ಳೆ ಗೆಳೆಯನ ಹುಡುಕಿ,
ಭಾಗ್ಯಾ ವಂಚಿತನಾದೆ ಸ್ನೇಹಿತರ ಸಂಗತಿಯಲ್ಲಿ,
ಸಿಕ್ಕರು ಸಿಹಿಯಾದ ಸ್ನೇಹಿತರು ದೂರವಾಗಿ ಹೋದರು ನನ್ನಿಂದ.
ಏನು ಹೇಳಲಿ ನಾ ವಿಧಿಯ ವಿರಹ ಒಂದು ವಿಷವಾಗಿ ವದಿಸಿ ಕಾಣದಂತೆ ಹುದುಗಿ ಹೋಹಿತು ಕಾಲವೆಂಬ ಗೋರಿಯಲ್ಲಿ ನನ್ನ ಗೆಳೆತನ.
ಕಾದು ಕಾಲಗಳು ಉರುಳಿದವು,
ಮರೆಯಗುತ್ತಿದೆ ನನ್ನ ಯವನವು,
ಮಾಯವಾದವು ನಗುವಿನ ಹೆಜ್ಜೆ ಗುರುತುಗಳು ಅನರ್ಥವಾಯಿತು ನನ್ನ ಮನದ ಭಾವಗಳು
ಬೇಡವಾಗಿ ಹೋಗಿದೆ ಈ ಬಾಳು
ಹರುಷ ತರುವ ಒಬ್ಬ ಗೆಳೆಯನಿಲ್ಲದೆ.
ನೀರಮೇಲಿನ ಬರಹದಂತಾಗಿದೇ ನನ್ನ ನಂಬಿಕೆಗಳು ಸೊರಗಿ ಸೋತು ಹೋಗಿವೇ ನನ್ನ ಬಣದ ಕನಸುಗಳು ಇಲ್ಲವಾಯಿತೊಂದು ಅವಕಾಶ ಪಶ್ಚತ್ತಾಪ ಪಡಲು ಮಾಡದ ಪಾಪಗಳಿಗೆ.
ಮೌನಗಳು ಹಿತವಾಗಿ ವೇದನೆಗಳು ವಿಷವಾಗಿ ಹೋದವು ನೋವುಗಳೆ ನೆನಪಾಗಿ ಉಳಿದವು
ನನ್ನ ಎದೆಯಲ್ಲಿ ಏಕಾಂತದ ಗುರುತುಗಳೇ
ನನ್ನ ದಾರಿಯಲ್ಲಿ.
ವಿರಸಗಳೇ ಮೋಡವಾಗಿ ವೇದನೆಗಳ ಮಳೆಯೊಂದು ಸುರಿದಿದೇ ನನ್ನ ಬದುಕಿನ ಭೂಮಿಯಲ್ಲಿ.
ನಿಮ್ಮ ಹೃದಯ ಅಗಸೆ ಬಾಗಿಲನ ಮುಂದೆ ನೆಟ್ಟ ಬೀದಯ ಗೂಟಗಲ್ಲಿನಂತೆ ಏಕಾಯಿತು?
ನಿಮ್ಮ ಹೃದಯವು ಜಲ ಬತ್ತಿ ದ ಬಾವಿಯಂತೆ ಏಕಾಯಿತು?
ನಿಮ್ಮ ಹೃದಯ ಮಳೆ ತರದ ಒಣ ಸಿಡಿಲಿನ ಗುಂಡಿನಂತೆ ಏಕಾಯಿತು?
ನಿಮ್ಮ ಹೃದಯ ಕಟುಕನ ಕೈಯಲ್ಲಿರುವ ಹತಾರದಂತೆ ಏಕಾಯಿತು?
ನಿಮ್ಮ ಹೃದಯ ವಸಂತಕಾಲದಲಿ ಗಾಯನ ನಿಲ್ಲಿಸಿದ ಕೋಗಿಲೆಯ ಕಂಠದಂತೆ ಏಕಾಯಿತು?
ಕಣ್ಣುಗಳು ಹಿಂಗಿವ ಮುನ್ನ
ಬೆನ್ನು ಬಾಗಿವ ಮುನ್ನ
ಕೈ ಕಾಲು ಬಿದ್ದು ಹೋಗುವ ಮುನ್ನ
ನೆನಪು ಅರುವು ಮರೆವು ಹಿಡಿವ ಮುನ್ನ
ಚರ್ಮ ಸುಕ್ಕುಗಟ್ಟಿವ ಮುನ್ನ
ಅಂಗವೆಲ್ಲ ನಷ್ಟವಾಗಿ ಅಂತ್ಯದೆಡೆಗೆ ಸಾಗುವ ಮುನ್ನ
ಒಮ್ಮೆಯಾದರೂ ನೆನೆ
ಗುರು ಬಸವ ಪ್ರಿಯ ರೇವಣಸಿದ್ದೇಶ್ವರರನ್ನ, ಅವರೊಬ್ಬರೇ ಮುಕ್ತಿಯ ದಾರಿ ತೋರಿಸುವರು ನೋಡಾ!.
ನೀ ನನ್ನ ನೋಡಿ ಮುಗುಳ್ನಕ್ಕೂ...
ಮುಖದಲ್ಲಿ ಮಂದಹಾಸವ ಬೀರಿ...
ನನ್ನ ಮನದಲ್ಲಿ ನಿನ್ನ ಒಲವ ಹರಿಸಿ...
ನಾ ನಿನ್ನ ಬಳಿ ಬಂದು...
ಒಲವ ತಿಳಿಸಬೇಕೆನ್ನುವಷ್ಟರಲ್ಲಿ ನಾನವಳಲ್ಲ ಎಂದು ದೂರ ಸರಿದವಳಲ್ಲವೇ ನೀ...✍️ಮಲ್ಲ....