Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಮ್ಮ ಐ ಲವ್ ಯು

ತಾಯಿಯ ಕರುಳ ತನಿಸೋ ವರವ ನೀಡೋ
ದೇವನೇ ಜಗದಿ ಧನ್ಯನಗುವೇ ನಾ !!
ಶತಕೋಟಿ ದೇವರ ಅನುಗ್ರಹವ ಕಾಣುವೆ ಅವಳ ಮಡಿಲಲ್ಲಿ ಲೋಕದಿ ಪುಣ್ಯನಗುವೇ ನಾ !!

ಅಮೃತಕ್ಕಿಂತಲು ಮಿಗಿಲು ಅಮ್ಮನ ಎದ್ದೆ ಹಾಲು
ಸ್ವರ್ಗಕ್ಕಿಂತಲು ಮಿಗಿಲು ಅಮ್ಮನ ಮುದ್ದು ಮಡಿಲು ಕಾಣದ ದೇವರ ಹುಡುಕದೆ ತಾಯಿಗೆ ಕೈಯ ಮುಗಿವೆ ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂದು ನಾನು ಅರಿವೇ.

ನಾನು ಪಡೆದ ಪುಣ್ಯ ತಾಯಿ ಒಬಳು
ನನ್ನ ಹಡೆದ ಕರುನಾಡ ತಾಯಿ ಒಬಳು
ದರೆಯ ತುಗೋ ಭೂಮಿ ತಾಯಿ ಒಬಳು
ಮಾತೆಯ ಸೆರಗಿನಲ್ಲಿ ಸುರಕ್ಷಿತನ್ನು ಎಂದೂ ನಾನು.
ಅಮ್ಮ ನಿನ್ನ ಋಣವ ತೀರಿಸೋ ವರವ ಬೇಡುವೆ ನಾ.

ಬದುಕ ಕಳಿಸೋ ಮೊದಲ ಗುರುವು ಅವಳು
ನನ್ನ ಪ್ರೀತಿಯ ಮೊದಲ ಒಲವು ಅವಳು
ಕಷ್ಟ ಸಮಯದಿ ಹೆಗಲು ನೀಡೋ ಗೆಳೆಯನಾಗುವಳು
ಕಾಯಿಲೆಯಲ್ಲಿ ಬಳಲೋವಾಗ ನಿನಗೆ ವೈದ್ಯನಾಗುವಳು
ಅವಳ ಬದುಕೆಲ್ಲ ನಿನ್ನ ನಗುವಿಗಾಗಿ ಜೀವಿಸುವಳು.

ಅಮ್ಮ ನಿನ್ನ ಮಹತ್ವ ಹೇಳಲು ವರ್ಣಮಾಲೆಯ ಅಕ್ಷರಗಳು ಸಾಲದು.
ಕಿರಣ್ ಕ್ರೀಸ್

- Kris

22 Feb 2020, 07:52 am

ಓ ನನ್ನ ನಲ್ಲೆ

ಓ ನನ್ನ ನಲ್ಲೆ ನಿನಗೋಸ್ಕರ ತಂದೆ ಹೂ ನಲ್ಲೆ
ಆದರೆ ನಿನ್ನ ತಲೆ ಮೇಲೆ ಕೂದಲೇ ಇಲ್ವಲ್ಲೇ

- hanumanaik lamani

21 Feb 2020, 11:13 pm

ಓ ನನ್ನ ನಲ್ಲೆ

ಚಂದ್ರನಿಲ್ಲದ ರಾತ್ರಿ
ತುಂಬಾ ಕತ್ತಲು
ಚಂದ್ರನಿಲ್ಲದಾ ರಾತ್ರಿ
ತುಂಬಾ ಕತ್ತಲು
ಗಗನದಲ್ಲಿ ನಿಂತು
ನಕ್ಕುಬಿಡು ಒಮ್ಮೆ
ಗಗನದಲ್ಲಿ ನಿಂತು
ನಕ್ಕುಬಿಡು ಒಮ್ಮೆ
ಜಗದ ತುಂಬಾ
ಬೆಳದಿಂಗಳಾ
ಬೆಳಕು ಚೆಲ್ಲಲಿ

ರವಿ ಆರಾಧ್ಯ

- TbRaviAradhya

21 Feb 2020, 09:59 pm

ಯಾಕೆ ಹಿಂಗೆ

ಕೆಲವೊಂದು ಸಲ,
ಕೆಲವರು
ಕೆಲವರಿಗೆ
ಕೇವಲವಾಗಿ ಬಿಡುತ್ತಾರೆ
ಯಾಕೆ ಹಿಂಗೆ......?

ರವಿ ಆರಾಧ್ಯ

- TbRaviAradhya

21 Feb 2020, 08:27 pm

ಶಿವರಾತ್ರಿ

ಮಾಘ ಮಾಸ ಕೃಷ್ಣ ಚತುರ್ದಶಿಯದು
ದೇವತೆಗಳಲ್ಲಿ ಅತ್ಯಂತ ನಿಗೂಢನಾಗಿಹ
ಲೋಕಕಲ್ಯಾಣಕ್ಕಾಗಿ ವಿಷವ ಆಪೋಶಿಸಿಹ
ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ
ಪಂಚಭೂತಗಳ ಒಡೆಯನಾಗಿಹ ಶಿವನಿಗೆ
ಪಾರ್ವತಿಯೊಂದಿಗೆ ಭೂ-ಸಂಚಾರ ಯೋಗ.

ಪರ್ವತ ರಾಜನ ಮಗಳಾದ ಪಾರ್ವತಿಯು
ಸದಾ ಶಿವನ ಸೇವೆಯಲ್ಲಿ ತೊಡಗಿಕೊಂಡು
ಆಹಾರ ತ್ಯಜಿಸಿ ಧ್ಯಾನ, ಪ್ರಾರ್ಥನೆಯಿಂದ
ಶಿವನ ಪ್ರೀತಿಯನ್ನು ಒಲಿಸಿಕೊಂಡು
ದೇವಾನುದೇವತೆಗಳ ಸಮಕ್ಷಮದಲ್ಲಿ
ಮದುವೆಯಾದ ಸುಂದರ ದಿನವಿದು.

ಗಂಗೆಯನ್ನು ತಲೆಯ ಮೇಲೆ ಹೊತ್ತು
ಎದೆಯಲ್ಲಿ ಗೌರಿಯನ್ನು ಕುಳ್ಳಿರಿಸಿ
ಸುಬ್ರಹ್ಮಣ್ಯನನ್ನು ಸರವಾಗಿ ಧರಿಸಿ
ನಂದಿಯ ಮೇಲೆ ಕುಳಿತುಕೊಂಡ
ಕೈಲಾಸವಾಸಿಯ ರುದ್ರತಾಂಡವನಿಗೆ
ಭೂಸಂಚಾರ ಮಾಡುವ ಸುಮಧುರ ದಿನ.

ಭೂಮಿಯ ಮೇಲಿನ ಜೀವರಾಶಿಗಳು
ಸೂರ್ಯೋದಯಕ್ಕೂ ಮುನ್ನ ಎದ್ದು
ಶುಚಿರ್ಭೂತರಾಗಿ ಶಿವ ನಾಮವ ಜಪಿಸತ್ತಾ
ರಾತ್ರಿಯೆಲ್ಲ ಜಾಗರಣೆಯಿಂದ ಇದ್ದು
ರಾತ್ರಿಯ ಕತ್ತಲೆಯ ನಂತರ ಬರುವ
ಬೆಳಕಿನ ಅರ್ಥ ಹುಡುಕುವ ದಿನವದು.

ಆಡಂಬರ ಮುಕ್ತ, ಭಸ್ಮವ ಬಳಿದಿಹ,
ಹುಲಿಚರ್ಮ ಉಟ್ಟ, ಧ್ಯಾನಪ್ರಿಯನಿಗಾಗಿ
ಹಗಲು ಉಪವಾಸ, ರಾತ್ರಿ ಜಾಗರಣೆ ಮಾಡಿ,
ಶಿವನ ಕೃಪೆಗೆ ಪಾತ್ರವಾಗುವ ಶುಭದಿನ.
ಉಪವಾಸ, ಜಾಗರಣೆ ಮತ್ತು ಶಿವಧ್ಯಾನಗಳ
ಸಂಗಮವೇ ಭೂಲೋಕದಲ್ಲಿ ಶಿವರಾತ್ರಿ.

- ಅಕ್ಷತ

21 Feb 2020, 06:45 pm

ಬಯಸಿದ ಭಯ

ಹಸಿರು ವನದಲ್ಲಿ ಹಸಿದು ಬಂದ ಹಸು ತುಸು ಹಸಿರು ಹುಲ್ಲನ್ನು ಬಯಸಿತ್ತು
ಹಾಗೆ ಮುಸುಕಿನ ವ್ಯಕ್ತಿಯು ನಸುಕಿನ ವೇಳೆ ಪುಸು ಕನೆ ಪಿಸುಗುತ್ತಾ ಹೇಳುವ ಮಾತು ಭಯವಾಗುತ್ತಿತ್ತು

- hanumanaik lamani

20 Feb 2020, 10:04 pm

ಜವಾನ್ ಮತ್ತು ರೈತನ ನೋವಿನ ಮಾತು

ಪ್ರೀತಿ ಒಂದು ದಿನ ಕಳೆದರೆ ನೋವಾಗುತ್ತದೆ ಮನಸ್ಸಿಗೆ
ತಾಯಿ ಲಾಲಿ ಒಂದು ದಿನ ಕಳೆದರೆ ನೋವಾಗುತ್ತದೆ ಮಗುವಿಗೆ
ವರ್ಷದ ಬೆಳೆ ಒಂದು ದಿನ ಕಳೆದರೆ ನೋವಾಗುತ್ತದೆ ನಮ್ಮ ರೈತನಿಗೆ
ಆದರೆ ನಮ್ಮ ಯೋಧರ ಜೀವ ಒಂದು ದಿನ ಕಳೆದರೆ ನೋವಾಗುತ್ತದೆ ಭಾರತಾಂಬೆಯ ಜನತೆಗೆ
ಅದಕ್ಕೆ ಅನ್ನೋದು ಜೈ ಜವಾನ್ ಜೈ ಕಿಸಾನ್

- hanumanaik lamani

20 Feb 2020, 09:53 pm

ಮನದ ನೋವು

ಮನದ ನೋವು ಮರೆಯಲು ಮಸಣದ ದಾರಿ ಹುಡುಕುವುದು ಎಷ್ಟು ಸರಿ
ಬಿಟ್ಟುಹೋದ ಹುಡುಗಿಯ ಪ್ರೇಮವನ್ನು ಮರೆಯಲು ಬಾರಿನ ದಾರಿ ನೋಡುವುದು ಅದೆಷ್ಟು ಸರಿ
ಆದರೆ ಜೀವನದಲ್ಲಿ ಯಾವುದೇ ರೀತಿ ಮಳೆ ಗಾಳಿ ಎನ್ನದೆ ತನ್ನ ಆಹಾರ ಹುಡುಕುತ್ತಾ ಹೋಗುವ ಇರುವೆಯನ್ನು ನೋಡಿ ನೀನು ಅರಿ
ಅದುವೇ ಜೀವನದಲ್ಲಿ ಜೀವಿಸುವ ಜೀವನದ ಶೈಲಿಯ ಪರಿ

- hanumanaik lamani

20 Feb 2020, 09:49 pm

" ಕಲಿಗಾಲ " " ಕಲಿಗಾಲ "

ಬಂದಿದೆ ಬಂದಿದೆ ಕಲಿಗಾಲ
ಬೀಸಿದೆ ತನ್ನಯ ಜಾಲ
ತುಂಬಿದೆ ನಾಡಲಿ ದ್ವೇಷದ ಜ್ವಾಲೆ
ಕೊಲೆ ದರೋಡೆ ದೊಂಬಿಗಳ ಸರಮಾಲೆ //

*ಕಿದ್ವಾಯಿ ರಾಜಶೇಖರ್.

- Raj Raj

20 Feb 2020, 09:40 pm

* ಹಿತ ವಚನಗಳು *

ಭಕ್ತಿಯಲಿ ನಿಷ್ಠೆಯಿಲ್ಲದೆ/ಮಾತಲ್ಲಿ ಗುಣವಿಲ್ಲದೆ
ನಡೆಯಲ್ಲಿ ನುಡಿಯಿಲ್ಲದ ಮನುಜ/
ದಾನವನಿದಂತೆ ನೋಡ ಶ್ರೀ ಷಡಕ್ಷರದೇವ //

ಒಳಗೆ ಕುಟಿಲ,ಹೊರಗೆ ವಿನಯತೋರಿ ನೀ ಕೆಡಬೇಡಯ್ಯ/
ತನು-ಮನ-ಧನವ ನಾಕೊಟ್ಟೆನೆಂದು ನುಡಿಯ ಬೇಡಯ್ಯ/
ಮಾಡುವಾತನಾವಲ್ಲ ನೀಡುವಾತ ನಮ್ಮ ಶ್ರೀ ಷಡಕ್ಷರದೇವ ಕಾಣಯ್ಯ//

*ಕಿದ್ವಾಯಿ ರಾಜಶೇಖರ್.

- Raj Raj

20 Feb 2020, 09:24 pm