Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗೆಳೆಯ

ಗೆಳೆತಿ.....ನೀ ಕೇಳಿದೆ...ನನ್ನ ಸ್ನೇಹ ಏಕೆ ನಿನಗೆಂದು....??
ಉತ್ತರ ಇರಲಿಲ್ಲ...ಹೌದು ನಾ ಯಾರು...? ನಾ ನಿನಗೇನೂ..ಏನೂ ಅಲ್ಲವೇ...?
ಮತ್ತೇಕೆ....ನಿನ್ನ ಸ್ನೇಹ ನನಗೆ..ಯೋಚಿಸಿದೆ...ಉತ್ತರ ಹುಡುಕಿದೆ …?
ಕೇಳು.....ನನಗೆ ನೀನೊಬ್ಬಳು ಅಮ್ಮನಂತೆ ಅಕ್ಕರೆ ತೋರುವವಳು ...!!
ಅಪ್ಪನಂತೆ...ಪೋಷಿಸುವವಳು....ಅಕ್ಕಳಂತೆ....ಧೈರ್ಯ ನೀಡುವವಳು....!!
ಮಗುವಿನಂತೆ....ಮುದ್ಧಿಸುವವಳು....ಪ್ರಿಯತಮೆಯಂತೆ ಪ್ರೀತಿಸುವವಳು....!!
ಗೆಳೆತಿ.....ತಿಳಿಯಿತೇ ಕಾರಣ...ನಿನ್ನ ಸ್ನೇಹ ಏಕೆ ನನಗೆಂದು...

ಇಂತಿ ನಿನ್ನ ಗೆಳಿಯಾ ಮಲ್ಲೇಶ್

- mallesh

23 Feb 2020, 12:24 pm

ನನ್ನವಳು

ಪ್ರೀತಿಯನ್ನು ಮಾಡಲು ಕಲಿಸಿದೆ, ಆದರೆ ಮರೆಯುವುದನ್ನು ಕಲಿಸಲಿಲ್ಲ,
ಕನಸಿನ ಗೂಡಿಗೆ ಹಕ್ಕಿಯಾದೆ ಜೊತೆಯಾಗಿ ಹಾರಾಡಲಿಲ್ಲ,
ಮನಸಾರೆ ಪ್ರೀತಿ ಮಾಡಿದೆ ಜೊತೆಯಾಗಿ ಬದುಕಲಿಲ್ಲ, ನೋವಿನಲ್ಲಿ ಸ್ಪಂದಿಸಿದೆ ನನಗೆ ಅರ್ಥವಾಗಲಿಲ್ಲ,
ನಿನ್ನ ನೆನೆಯುವಾಗ ಕಣ್ಗಳು ಒದ್ದೆಯಾಯಿತಲ್ಲಾ,
ನನಗೆ ನೀ ಮರೀಚಿಕೆ ಆದರೂ ನನ್ನ ಕವನಗಳಿಗೆ ಸ್ಫೂರ್ತಿಯಾದೆಯಲ್ಲ.
Creat by sagi

- Sagi Sagar

23 Feb 2020, 09:54 am

ಪ್ರೀತಿ ಮಾತು

#ಮಾನಸಿಕ_ನೆಮ್ಮದಿಗಿಂತ_ ದೊಡ್ಡದಾದ_ ಶ್ರೀಮಂತಿಕೆ #ಈ ಜಗತ್ತಿನಲ್ಲಿ ಯಾವದು ಇಲ್ಲ

- mallesh

23 Feb 2020, 09:04 am

ಶಾಯರಿ

(೧)

ಪ್ರೀತಿಗೆ ಒಟ್ಟ ಮಾತ ಬರಂಗಿಲ್ಲ
ಅದು ಕಣ್ಣಿಂದಲೆ ಮಾತಾಡುತ್ತ
ಖರೇವಂದ್ರ ಅದೂ ಮಾತಾಡಿದರ
ಪ್ರೀತಿ ಬಾಳ ದಿನ ಉಳಿಯಂಗಿಲ್ಲ.

(೨)
ರಾತ್ರಿ ಆಕಿ ನನ್ನ ಕನಸಿನ್ಯಾಗ ಬಂದು
ನಿದ್ದಿ ಬರದಾಂಗ ಹೊಳ್ಯಾಡತೇನಿ
ಆಕಿ ನನ್ನ ನಿದ್ದಿ ಕದಿಯಾಕ ಹತ್ತಿದರ
ಒಂದು ದೂರು ಕೊಡಬೇಕಂತಿನಿ.

ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ

- Marulasiddappa Doddamani

22 Feb 2020, 07:05 pm

ಪ್ರೀತಿ

ಮನಸ್ಸು ಮಾರುತ
ಕನಸ್ಸು ಪರ್ವತ
ಮಾತು ಅಮೃತ
ಭಾವನೆ ಧಿಗಂತ
ಪ್ರೀತಿ ಅನಂತ
ಅದು ಜೀವನದಾದ್ಯಂತ

ರವಿ ಆರಾಧ್ಯ

- TbRaviAradhya

22 Feb 2020, 06:56 pm

ನನ್ನ ತಂಗಿ

ಕಣ್ಣನ್ನು ರಕ್ಷಿಸಲು ಬೇಕು ರೆಪ್ಪೆ
ದೇಹವನ್ನು ರಕ್ಷಿಸಲು ಬೇಕು ಬಟ್ಟೆ
ಮನಸ್ಸಿಗೆ ಬೇಕು ರಕ್ಷೆ
ಕನಸಿಗೆ ಇರಬೇಕು ಕಕ್ಷೆ
ಆದರೆ ನನಗೆ ಬೇಕಾಗಿರುವುದು
ನನ್ನ ತಂಗಿಯ ಪ್ರೀತಿಯ
"ಅಣ್ಣಾ"ಎಂಬ
ಎರಡಕ್ಷರದ "ಭಿಕ್ಷೆ"

ರವಿ ಆರಾಧ್ಯ

- TbRaviAradhya

22 Feb 2020, 06:51 pm

ಪ್ರೀತಿ ಮಾತು

#ಯೋಗ್ಯತೆ #ಅನ್ನೋದು

- mallesh

22 Feb 2020, 06:26 pm

ಪ್ರೀತಿ ಮಾತು

ಯೋಗ್ಯತೆ #ಅನ್ನೋದು

- mallesh

22 Feb 2020, 06:24 pm

ಅಮ್ಮ.

ಬಾಳಿಗೆ ಬಂದವಳು ಕೊಟ್ಟಾಗ ಮುತ್ತು
ಮರೆಯಬೇಡ ನೀ ಅಮ್ಮನ ಕೈ ತುತ್ತು
ಈ ಮಾತು ಈಗ ಎಲ್ಲರಿಗೂ ಗೊತ್ತು
ತಾಯಿ ನಿನ್ನ ಬಾಳಿನ ಸಂಪತ್ತು
ಯಾಕೆಂದರೆ ಸಾಕಿ ಸಲಹಿದಳು ನಿನ್ನನ್ನು ಹೆತ್ತು
ಸಿಗುವುದಿಲ್ಲ ಅವಳಿಗಿಂತ ಬೆಲೆಯುಳ್ಳ ಮುತ್ತು
ಯಾಕೆಂದರೆ ಮಾತೆ ಎಂಬುವುದು ಬೆಳೆ ಬಾಳುವ ಸೊತ್ತು
ಅವಳು ತುತ್ತು ಕೊಟ್ಟ ಆ ಹೊತ್ತು
ನೀ ಮರೆಯಬೇಡ ಯಾವತ್ತೂ
ಯಾಕೆಂದರೆ ಅವಳು ಕೊಡದಿದ್ದರೆ ಆ ಒಂದು
ತುತ್ತು
ನೀ ಹೋಗುತ್ತಿದ್ದೆ ಸತ್ತು ಅವತ್ತು
ಧೈರ್ಯದಿಂದ ಎತ್ತಬೇಡ ಅವಳೆದುರು ನಿನ್ನ ಕತ್ತು
ಯಾಕೆಂದರೆ ನಿನಗೆ ಬಂದಾಗ ಜ್ವರವೆಂಬ ಆಪತ್ತು
ಅವಳು ಹೆದರಿಕೆಯಿಂದ ಸುತ್ತುತ್ತಿದ್ದಳು ನಿನ್ನ ಸುತ್ತು
ಬೇಡುತ್ತಿದ್ದಳು ನಿನಗಾಗಿ ದೇವರಲ್ಲಿ ಅತ್ತು
ಯಾಕೆಂದರೆ ಆ ಕರುಣಾಮಯಿಗೆ ನಿನ್ನ ಮೇಲೆ ಅಪಾರ ಪ್ರೀತಿ ಇತ್ತು
ಅವಳ ಕಣ್ಣಿಂದ ಕಣ್ಣೀರು ಬರುತ್ತಿತ್ತು ಕಿತ್ತು ಕಿತ್ತು
ಈಗಲೂ ಯಾವಾಗಲೂ ಅವಳಿಗೆ ನೀನೆ ಪ್ರೀತಿಯ ಮುತ್ತು

- shareef

22 Feb 2020, 04:25 pm

2. ಹಿತ ವಚನಗಳು.

ತನ್ನ ಕರ್ತವ್ಯದಲ್ಲಿ / ತಾ ನಿಷ್ಠ ವಂತನಾಗಿರದೆ
ನಿಷ್ಟವಂತರ ಕಂಡು ಕರುಬಿದರೇನು ಫಲ /
ಶ್ರೀ ಷಡಕ್ಷರದೇವ //

ಊರೂರು ತಿರುಗಿ /ದೇವರ ದರ್ಶನ ಮಾಡಿದರೇನು ಫಲ
ಹೆತ್ತವರ ಕೃಪಶೀರ್ವಾದವಿಲ್ಲದ ದುರುಳಗೆ /
ಬಂದಿತೆ ಪುಣ್ಯ ಶ್ರೀ ಷಡಕ್ಷರದೇವ //

- Raj Raj

22 Feb 2020, 11:14 am