Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮರ ಬಿಡುವ ಪ್ರತಿ ಹೂ
ಪಿಂದೆ, ಕಾಯಿ ಆಗುವುದಿಲ್ಲ!
ಪ್ರತಿ ಪಿಂದೆ, ಕಾಯಿ ಹಣ್ಣಾಗುವುದಿಲ್ಲ,
ಪ್ರತಿ ಹಣ್ಣು ತಿನ್ನಲು ಯೋಗ್ಯವಾಗಿರುವುದಿಲ್ಲ.....!

ಡಾII ನಾಗೇಶ್ ಮೌರ್ಯ

- ಡಾ ನಾಗೇಶ ಮೌರ್ಯ

09 Jun 2025, 05:13 pm

ಅರಹಂತಾನಾಗುವೆ

ಕಡಲ ದಡದಲ್ಲಿ
ನೀ ಇಟ್ಟ ಪ್ರತಿ ಹೆಜ್ಜೆಯನು
ಅಲೆಯಾಗಿ ಅಳಿಸಿಬಿಡುವೆ

ನೀ ತೊಟ್ಟ ಕೈ ಬಳೆಯ ಸದ್ದಿನಲಿ ಬುದ್ಧನ ತಿಸರಣದ ಝೆಂಕಾರವಿದೆ
ನೀ ಇಟ್ಟ ಕುಂಕುಮದಲಿ
ಮೈತ್ರಿಯ ಭಾವವಿದೆ

ನೀ ಮುಡಿದ ಮಲ್ಲಿಗೆಯ
ಪರಿಮಳದಲ್ಲಿ ಧಮ್ಮದ ಸಾರವಿದೆ
ನೀನು ನೀನಲ್ಲದೆ ನಾನಾಗುವ
ಮರುಗಳಿಗೆ ಅರಹಂತಾನಗುವೆ

ಡಾ ನಾಗೇಶ್ ಮೌರ್ಯ
9743907399

- ಡಾ ನಾಗೇಶ ಮೌರ್ಯ

09 Jun 2025, 09:02 am

ಮೌನ

ಮೌನಕ್ಕೆ ಅರ್ಥಗಳು ಹಲವು
ಅನಾರ್ಥ ಅಪಾರ್ಥಗಳು ಕೆಲವು
ತನ್ನ ಬಗ್ಗೆ ಅರಿಯದ ಮನವು
ಅನ್ಯರಿಗೆ ಬುದ್ಧಿ ಹೇಳುವ ನೆಪವು
ಇನ್ನೊಬ್ಬರ ಬೆಳವಣಿಗೆ ಸಹಿಸದೆ
ಹಂಗಿಸಿ ಮಾತನಾಡುವ ಗುಣವು
ಸಹಿಸಿ ಮುನ್ನಡೆಯಲು ಗಟ್ಟಿಇರಬೇಕು
ನಮ್ಮ ಆತ್ಮ ಬಲವು
-ಪಾವನಿ

- Paavani

08 Jun 2025, 10:09 am

ತಾಜ್ ಮಹಲ್

ಜನರ ಆಕರ್ಷಿಸುವ ಮಹಲ್
ಅದರದೇನೋ ಕಮಾಲ್
ಪ್ರೇಮ ಕುಸುಮಗಳು ಅರಳುವಂತೆ
ಮಾಡುವ ತಾಜ್ ಮಹಲ್.


ಚಂದ್ರವರ್ಣದ ಈ ಮಹಲ್
ಪ್ರೀತಿ ಸಂದೇಶ ಸಾರುವುದು ಇದರ ಗೋಲ್ಮಾಲ್
ಜಗದೆತ್ತರದ ಪ್ರೇಮ ಸೌಧವಿದು
ಅಲ್ಲವೇ ಅಲ್ಲ ರಾಜಕೀಯ ಸೌಧವಿದು.

ಕಾಲ ಚಕ್ರ ಉರುಳಿದರು
ಪ್ರೇಮಿಗಳ ಕಥೆಗಳು ಅಳಿಸಲಿಲ್ಲ.
ಅವರ ನೆನಪುಗಳೆ ವಿಸ್ಮಯ
ಆ ಸೌಧವೇ ಅವಿಸ್ಮರಣೀಯ.

- ಮೇಘಾ ಬೆಳಧಡಿ

07 Jun 2025, 09:39 pm

ನನ್ನ ಪ್ರೇಯಸಿಗೆ♥️???

ಕನಸಲ್ಲಿ ನಾ ನೆನೆಯುವೆ ನಿನ್ನ ♥️
ಮನದಲ್ಲಿ ನೀ ನಿಂತು ಕಾಡುವೆ ನನ್ನ ?
ಎಂದೆಂದೂ ಜೊತೆಯಾಗಿ ಇರುವಾಸೆ ಚಿನ್ನ ?
ಒಂದೊಮ್ಮೆ ಬಂದುಬಿಡು ಉಸಿರೋಗೋ ಮುನ್ನ ?


- Karthik.N Karthik

07 Jun 2025, 04:52 pm

ನನ್ನವಳಿಗಾಗಿ

ನಿನ್ನ ಸಂತೋಷಕ್ಕಾಗಿ ಜೀವನವಿಡೀ ಬದುಕುವ ಆಸೆ ನನ್ನದು
ಕೊಡುವೆಯಾ ಒಂದು ಅವಕಾಶ
ಮುಂದಿನ ಜನ್ಮದ ಕಲ್ಪನೆ ನನಗಿಲ್ಲ ಆದರೆ ಈ ಜನ್ಮವಿಡಿ ನಿನಗಾಗಿ ಬದುಕುವ ಒಂದು ಅವಕಾಶ ಕೊಡು ಸಾಕು ನಿನ್ನ ಹೃದಯದಲ್ಲಿ ಕೊಡು ಸ್ವಲ್ಪ ಜಾಗ
ಹೃದಯದರಸ ನಾಗಿ ಬಾಳುವೆ ನನ್ನ ಉಸಿರಿರುವ ತನಕ

- Karthik.N Karthik

07 Jun 2025, 03:08 pm

ಮನಸಿನ ಮಹಾರಾಣಿ...

ಉರಾಗ ಇತ್ತ ಒಂದು ಸಣ್ಣ ಓಣಿ...
ಆ_ಓನ್ಯಾಗ ಇತ್ತ ನನ್ನ ಮನಸಿನ ಮಹಾರಾಣಿ..
ಮಾಡಿದಾಗ ನನಗ ಕಣ್ಣು ಸೊನ್ನಿ..
ಕೂಗಿ ಕರಿತಿದ್ನಿ ನಾ..ಎ ಚಿನ್ನಿ...
ಮನಸಾರೆ ಪ್ರೀತಿ ಮಾಡಿ ತಿನಿಸಿದ್ನಿ
ಹಾಲಮ್ಯಾಗಿನ ಕೆನಿ...
ಅವಳೆ ನನ್ನ ಪಾಲಿಗೆ ಚಿನ್ನದ ಗಣಿ...
ಚಿನ್ನದ ಗಣಿ...
_ಮಲ್ಲು ಎಸ್ ಬಿರಾದಾರ

- Driving lover { Mallu }

07 Jun 2025, 10:36 am

ಅದ್ಭುತ ಸಮಯ

ಆ ಒಂದು ದಿನ ನನ್ನ ಜೀವನದ ಅತ್ಯಂತ ವಿಶೇಷ ದಿನ
ಅಂದುಕೊಂಡಿರಲಿಲ್ಲ ಆ ಒಂದು ಪುಟ್ಟ ಜೀವ ನನಗೆ ಸಿಗುವುದು ಎಂದು.....

ಆಕಸ್ಮಿಕ ಪರಿಚಯ ನೀನು
ನನ್ನ ಪ್ರತಿ ನೋವು ಖುಷಿಗೆ ಸ್ಪಂದಿಸಿರುವ ನೀನು.‌

ನನ್ನ ತರಲೆ ಮಾತುಗಳ ಸಹಿಸಿಕೊಂಡೆ ನೀನು
ನಿನ್ನ ಪ್ರೀತಿಗೆ ಸೊತವಳು ನಾನು....

ಕಾಳಜಿಯ ತೋರಿದೆ ನೀನು
ನಿನ್ನ ಕಾಳಜಿಯಲಿ ಸುರಕ್ಷಿತಳು ನಾನು...

ಎಲ್ಲಾ ಸಂದರ್ಭದಲ್ಲೂ ಜೊತೆಗಿರುವೇ ನೀನು
ಯಾವ ಸಮಯದಲ್ಲಿ ನನ್ನ ದೂರ ತಳ್ಳುವೆಯೋ ಎಂಬ ಭಯದಲ್ಲೀರುವೇ ನಾನು.‌...

ನನ್ನ ವೈಯಕ್ತಿಕ ಜೀವನದ ದಿನಚರಿ ನೀನು
ನಿನ್ನ ನಿಷ್ಕಲ್ಮಶ ಪ್ರೀತಿ ಸ್ನೇಹದಲಿ ನನ್ನೆ ಮರೆತೇ‌ ನಾನು....

ಯಾರ‌ ಹಾಜರಿಯನ್ನು ಪರಿಗಣಿಸದ ನಾನು
ನೀ ಕಾಣದಿದ್ದಾಗ ಹುಡುಕಾಡುವೇ ನಾನು...

ಕಾದಿರುವೆ ನಿನ್ನ ಪ್ರತಿ ಮಾತಿಗೆ ಮಗುವಾಗಿ ನಾನು
ಬರುವೆಯಾ ಗೆಳೆಯ‌ ನನ್ನೋಡನೆ ಮಾತಾನಾಡಲು ನೀನು...

ಕಲ್ಪನೆಗೂ ಮೀರಿದ ಅದ್ಭುತ ನೀನು..‌...
ಓಡುತ್ತಿರುವ ಸಮಯಕ್ಕೆ ತಡವಾಗಿ ಬಾ ಎಂದು ಮನವಿ ಮಾಡಿರುವೆ ನಾನು...
ಹೀಗೆ ನಿಲ್ಲಬಾರದೇ ಸಮಯ‌ ನಮಗೆಂದು.‌

ನಿನ್ನ ಜೀವನದಲಿ ಖುಷಿ ತುಂಬಿರಲಿ ಆ ಖುಷಿಗೆ ಕಾರಣ ನಾನಗಿರಲಿ...

ಸ್ನೇಹದ ಅರ್ಥ ನಿನಗಾಗಿರುವಾಗ ಆ ಸ್ನೇಹದ ಪ್ರತ್ಯರ್ಥ ನಾನಗಬೇಕು.‌

??
೦೫/೦೨೦೨೫











- Jyothi

05 Jun 2025, 01:27 am

ನನ್ ಚಿಕ್ಕ ಪರಿಚಯ

ನಾನು.....
ನನ್ನ ಕನಸು ಕಾಣುವ
ಕನಸೇ ನಾನು.....
ಕನಸಲ್ಲಿ ಮರೆಯಾಗದೆ
ಕನಸಲ್ಲಿ ಕಾಣದೇ
ಕನಸಲ್ಲಿ ಪರಿಚಯ ವಾದ
ಸುಂದರ ಕನಸು ನಾನು....
ಕನಸಲ್ಲಿ ನಾನು ಒಂದು ಕಂಡೆ
ಸುಂದರ ಕನಸೊಂದು ಶುರುವಾಗಿತು..

..ಹಗಲಿನಲ್ಲಿ ನನ್ನ ಕನಸು..

ದೊಡ್ಡ ಊರು , ಹೆಸರು ವಾಸಿ ಯಾದ

- Anjali c s

02 Jun 2025, 11:41 pm

ಸುಖ ----ದುಃಖ



ದುಃಖ ಮರುಗಟ್ಟಿದಾಗ
ಸಂತೋಷದ ದಾರಿ ತೆರೆಯುತ್ತದೆ
ಆ ದಾರಿಯಲ್ಲಿ
ನಡೆಯಬೇಕು ಅಷ್ಟೇ!
ಆದ್ರೆ ಬಹುತೇಕ ಜನರಿಗೆ
ದಾರಿ ಕಾಣುವುದಿಲ್ಲ
ಕಾರಣ ಅಜ್ಞಾನ.....

ಕಷ್ಟಗಳು ಮೇಲಿಂದ ಮೇಲೆ
ಕಾಡುವಾಗ ದೃತಿಗೆಡದೆ
ಮುನ್ನೆಡೆಯಬೇಕು
ಇಲ್ಲದಿದ್ದರೆ ಕಷ್ಟಗಳು
ನಮ್ಮನ್ನು ದುಃಖದಲ್ಲಿ ಮುಳುಗಿಸುತ್ತವೆ........

ಸುಖವು ಸದಾ ನಮ್ಮ ಜೊತೆ ಇರಬೇಕು ಅಂದರೆ,
ನಾವು ನಮ್ಮ ಮನಸ್ಸನ್ನು
ಶುದ್ಧವಾಗಿ ಇಟ್ಟುಕೊಳ್ಳಬೇಕು
ಇಲ್ಲದಿದ್ದರೆ ನೀರಿನ ಮೇಲಿನ ಗುಳ್ಳೆಯಂತೆ ಸುಖವು ಬಹುಬೇಗ ಮಾಯವಾಗುತ್ತದೆ......

ಸುಖ ಸಂತೋಷಕ್ಕೆ
ಅತೋರೆಯುವ ಮನ
ಮನಸಿನ ಕೃಷಿಗೆ ಮುಂದಾಗದಿರುವುದು
ಅಸವಗಳಿಗೆ ಅಂಟಿಕೊಂಡಿರುವುದು
ದುಃಖಕ್ಕೆ ಕಾರಣ......

ಡಾ II ನಾಗೇಶ್ ಮೌರ್ಯ
9743907399

- ಡಾ ನಾಗೇಶ ಮೌರ್ಯ

02 Jun 2025, 12:26 pm