Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹ್ಯಾಂಗ ಮರೆಯಲ್ಲಿ ನಾ ಚೆಲ್ವಿ ನಿನ್ನ
ಒಮ್ಯಾರ ಹೇಳೆ ನನ್ನ ಒಡತಿ ಅದ್ಯಾಂಗಂತ?
ಒಂದು ಮಾತಾಗ ಮರಿ ಅಂತೀಯಾ ನನ್ನ
ಬಾರೀ ದೊಡ್ ಮಂದಿ ಆದಿ ನೀ ಈಗ
ಇನ್ಯಕಾ ಈ ಹೈದ ನಿನ್ನ ಜೊತೆಯಾಗ ಅಲ್ಲಾ?
ಹೇ ಕೇಳೇ ಒಡತಿ ನೀಯ್ಯಾರಾ, ನಾಯ್ಯಾರ
ಅಂತಿದ್ವಿ ಆಗ ನೆನಪಾಯ್ತಿ ನಿಂಗ ಚೆಲ್ವಿ
ಆಮ್ಯಾಕ ನೀ ಏನಂದಿ ಮರೆತಾ, ಮಾರಾಯ್ತಿ?
ನೀನೇ ನನ್ ಉಸಿರು ನನ್ ಒಡೆಯ ನೀ
ನಾ ಎಂದು ಬಿಡಲ್ಲ ನಿನ್ನ ಈ ಜನುಮದಾಗ
ಗ್ಯಪ್ತಿ ಬಂತಾ ನಿನ್ ಮಾತು ಒಸಿ ಮಾತಾಡು
ಅಂಗೆಲ್ಲಾ ಹೇಳಿ ಇಪ್ಪಾಟಿ ಪೀರುತಿ ಕೊಟ್ಟಿ
ನೀ ಮರಿ ಅಂತಿ ಎಷ್ಟ್ ದಪ ಹೇಳುದ್ರು ನೀ
ಕೇಳಕಿಲ್ಲಾ ನಾ ಹೋಗ್ ಹೋಗ್ ಅಟ್ಟಿಗೆ
ಮರಿಯಾಕ ನಾ ನೀ ಅಲ್ಲಾ ನನ್ನೊಡತಿ
ಈ ಜನುಮಕ ನೀನೇ ನನ್ನ ಒಡತಿ
ನೀ ಏನ್ನಾರ ಹೇಳು ನಾ ಕೇಳೀನಿ ಅಂತ ತಿಳಿಬೇಡ
ಹ್ಯಾಂಗ ಮರೆಯಲ್ಲಿ ನಾ ಚೆಲ್ವಿ ನಿನ್ನ
ಒಮ್ಯಾರ ಹೇಳೆ ನನ್ನ ಒಡತಿ ಅದ್ಯಾಂಗಂತ
- ಹಂಸ ಕುಲಾಲ್✍️✍️✍️
ಮರೆತು ಬಿಡು ನನ್ನ ನೀ ಎಂದು ಹೇಳಿದ ಅವಳ ನುಡಿಗೆ ಅವನ ಮರು ಉತ್ತರ.
ಜಾನಪದ ಶೈಲಿ ಪ್ರಯತ್ನಿಸುವ ಹಂಬಲ ನನ್ನಲ್ಲಿ ಹೆಚ್ಚಾಯಿತು. ಆಗಾಗಿ ಈ ಪ್ರಯತ್ನ.
ನಿಮ್ಮ ಅಭಿಪ್ರಾಯ ತಿಳಿಸಿ.
- ಹಂಸವೇಣಿ
10 Mar 2020, 02:13 pm
ಮನದಾಳದ ಮಾತು ಬರಲಿಲ್ಲ ನನ್ನ ಮನದಿಂದ
ತುಟಿಯಂಚಿನ ಮಾತು ಬಾರದೆ ಹೋಯಿತು ತುಟಿಯಿಂದ
ನನ್ನ ಚೆಲುವೆ ಅರಿಯಲಿಲ್ಲ ನನ್ನ, ತನ್ನ ಮನದಿಂದ
ಬದುಕು ಬರಡಾಯಿತು, ನಾ ಪ್ರೀತಿಸಿದ ಪ್ರೀತಿಯಿಂದ......
- ದೇವು,,,,,,ಕನ್ನಡಿಗ
09 Mar 2020, 11:05 pm
ಸಾಲವೆಂಬ ರಾಕ್ಷಸ ಮನದೊಳಗಿರಲು...!
ಸಾಧ್ಯವೆ ನಾ ನೆಮ್ಮದಿಯಿಂದ ಬದುಕಲು..!!
ದುಡಿದು ಹರಿಸಿದರು ಮೈಯಲ್ಲಿ ಬೆವರು....!!
ನನ್ನಂತವರಿಗೆ ಸಿಕ್ಕಲ್ಲ ಆ ಲಕ್ಷ್ಮೀ ದೇವರು......!!
ಅದಕಾಗಿ ನಾ ಕುಡಿಯುವೆ ಬಾರಲ್ಲಿ ಬೀರು....!!!
- Harish Gowda
09 Mar 2020, 10:50 pm
ವಿದ್ಯಾ ನೀ ಒಂದು ಮಾಯೆ
ನನ್ನಮೇಲೆ ಇದ್ದಿದ್ದರೆ ನಿನ್ನ ಛಾಯೆ..
ಇಂದು ಐಶ್ವರ್ಯ ಸೌಂದರ್ಯರರು ನನ್ನ ಸುತ್ತಮುತ್ತ...!!
!!ವಿದ್ಯಾ!!
ನಿನ್ನ ಮಹತ್ವ ತಿಳಿದಯದೆ ಕೆಟ್ಟೆ...
ಹಣದ ಹಿಂದೆ ಬಿದ್ದು ನೆಮ್ಮದಿಯಾ ಬಿಟ್ಟೆ..,
ವಿದ್ಯೆ ಇರುವಲ್ಲಿ ಲಕ್ಷ್ಮೀ ಹೊರತು
ಲಕ್ಷ್ಮೀ ಇರುವಲ್ಲಿ ವಿದ್ಯೆ ಅಲ್ಲಾ ಎಂಬಾ ತತ್ವ ತಿಳಿಯಿರಿ....
ಬದಕಲಿ ನೆಮ್ಮದಿಯ ಕೆಲಸವ ಪಡೆದು ತೃಪ್ತಿ ಪಡೆಯಿರಿ....
- Harish Gowda
09 Mar 2020, 09:51 pm
ಎದೆಬಾಗಿಲಲಿ ಕಟ್ಟಿ ತೋರಣತಳಿರ
ಮುದನೀರ ಎದೆಅಂಗಳಕ ಚೆಲ್ಲೀ...
ಕಸನೆಲ್ಲ ಗುಡಿಸಿ ತಿದ್ದಿ ಮುಂಗುರುಳ
ಕಾದಿದ್ದೇನೆ ಹೊಯ್ದು ರಂಗವಲ್ಲೀ...
ನೆಡೆದ ಹೆಜ್ಜೆಗಳ ಮೇಲೆ ಹೆಜ್ಜೆಇರಿಸಿ
ತುಳಿದಿದ್ದೇನೆ ಕನಸಿನ ಏಳಪದೀ..
ಬರುವದಾರಿಗೆ ಕಣ್ಣದಿಟ್ಟಿಯ ಹರಿಸಿ
ಕಾದಿದ್ದೇನೆ ಇಂಗುತ ಜೀವನದೀ...
ತನುಮುಗಿಲಲಿ ಕಲ್ಪವೃಕ್ಷ ನಾಟಿ
ನೆನಪಚಂದ್ರಮ ಇಣಕಿಹ ಕಾಡುತ..
ಬಯಕೆಗುದುರೆಯ ಮುರಿದು ಕಾಲ
ಕಾದಿದ್ದೇನೆ ಒಳಗೊಳಗ ಸುಡತ...
ಕೊರೆವ ತಂಡಿಗಾಳಿಗೆ ಹರೆಯ ತುಡಿದು
ಇರುಳ ಕಪ್ಪು ಕವಿದು ನುಂಗುತಲೀ..
ಕಿರುಹಣತೆ ಬೆಳಗ ಮೊಗದಿ ಮುಡಿದು
ಮರುಳಿಡಿದು ಕಾದಿಹೆ ಬಾಳತಮದಲಿ...
- samna
09 Mar 2020, 08:00 pm
ಮರೆತರು ಮರೆಯಲಾಗದ ನೆನಪು,ಸುಟ್ಟರೂ ಸುಡದಿರುವ ಕನಸು,ಕೊಂದರು ಸಾಯದ ಮನಸ್ಸು,ಇದಕ್ಕೆ ಕರಣ ನೀನ್ನ ಪ್ರೀತಿ,ಕೆಲವೊಮ್ಮೆ ಹೇಳದೆ ಕೇಳದೆ ಬಂದೆ,ಹೋಗುವಾಗ ಕಣ್ಣೀರಿನ ಜೋತೆಗೆ ಜೀವನವನ್ನೇ ಕೊಂದೆ....ಪ್ರೀತಿ ನೀ ಶಾಶ್ವತನಾ...?? ದೇವು,,,,,,,
- ದೇವು,,,,,,ಕನ್ನಡಿಗ
09 Mar 2020, 10:46 am
ಪ್ರೀತಿ ಎಂಬ ಗುಲಾಬಿ
ಗಿಡವ ನೆಟ್ಟು
ರಕ್ತವೆಂಬ ನೀರು ಚಲ್ಲಿ
ನಂಬಿಕೆ ಎಂಬ ಬೇಲಿ ಹಾಕಿ
ಸಾಗರವೆಂಬ ಕನಸಿನಲ್ಲಿ ಕಾಯುತ್ತಿದೆ ನಾ
ಅಲೆ ಅಪ್ಪಳೆಸಿ
ಸಿಡಿಲು ಬಡಿದು
ದರಾಕಾರವಾಗಿ ಮಳೆಯ
ಸುರಿಸಿ ಹೋದಯಾ ನೀ.......ದೇವು
- ದೇವು,,,,,,ಕನ್ನಡಿಗ
08 Mar 2020, 10:52 pm
"ಕಲೆಗಾರ ನಾನಲ್ಲ"
"ಕವಿಗಾರ ನಾನಲ್ಲ"
ಭಾವನೆಗಳೊಂದಿಗೆ ಬದುಕುವುದು ಬಿಟ್ಟು,
ಬೇರೇನು"ಗೊತ್ತಿಲ್ಲ"
ಆಸ್ತಿಯೂ"ನನಗಿಲ್ಲ"
ಆಸೆಯೂ"ನನಗಿಲ್ಲ"
ನಿಮ್ಮ"ಸ್ನೇಹ-ಪ್ರೀತಿ"ಬಿಟ್ಟು,
ಬೇರೇನು"ಬೇಕಿಲ್ಲ"
- ದೇವು,,,,,,ಕನ್ನಡಿಗ
08 Mar 2020, 10:50 pm
ಹೇ ಹೆಣ್ಣೇ ಕುಟುಂಬದ ಕಣ್ಣು ನೀ,
ಮಣ್ಣಿನಲ್ಲಿ ಕೆಲಸ ಮಾಡುವ ಹೊನ್ನು ನೀ,
ದೇಶವನ್ನಾಳುವ ಧೀರ ಹೆಣ್ಣು ನೀ,
ಚಂದ್ರನ ಮೇಲೂ ಕಾಲಿಟ್ಟ ಅಗೋಚರ ಶಕ್ತಿ ನೀ.
ಜನ್ಮ ನೀಡಿ ತಾಯಿಯಾದೆ,
ಉಸಿರು ನೀಡಿ ದಾನಿಯಾದೆ,
ಅನ್ನ ನೀಡಿ ದಾಸೋಹಿಯಾದೆ,
ಕರುಣೆ ತೋರಿ ಕರುಣಾಮಯಿಯಾದೆ.
ಶಿಕ್ಷಣ ನೀಡುವ ಶಿಕ್ಷಕಿಯಾದೆ,
ಒಳ್ಳೆ ದಾರಿ ತೋರುವ ಮಾರ್ಗದರ್ಶಕಿಯಾದೆ,
ನ್ಯಾಯ ನೀಡುವ ನ್ಯಾಯಾಧೀಶಳಾದೆ,
ಅನ್ಯಾಯ ಅಳಿಸುವ ನಾಯಕಿಯಾದೆ.
ಪತಿಯ ಸೇವೆಗೆಂದು ಸತಿಯಾದೆ,
ಪತಿಯ ಸುಖದುಃಖದಲ್ಲಿ ಸಮಪಾಲಿನವಳಾದೆ, ತಾಳ್ಮೆಯಲ್ಲಿ ಜಾನಕಿಯಾದೆ,
ಕ್ಷಮಿಸುವ ಕ್ಷಮಯಾಧರಿತ್ರಿ ನೀನಾದೆ.
........ರೋಹಿಣಿ ಪಾಟೀಲ
- RohiniPatil
08 Mar 2020, 03:09 pm
ನಿಟ್ಟುಸಿರು ಬಿಡುತ
ಕುಳಿತಿದ್ದೇನೆ ಕಿಟಕಿಗೊರಗಿ ಏಕಾಂಗಿ..
ಬಿಟ್ಟು ಹೋದ ಹೆಜ್ಜೆಗಳ
ದಿಟ್ಟಿಸತ ಎದೆಯನಲ್ಲೆ ತಂಗಿ..
ಕಣ್ಣಕಂಬನಿ ಕಂಡೀತೆಂದು
ಕನ್ನಡಕ ಕಪ್ಪಗಾಜ ಅಚ್ಚಿ...
ಬಣ್ಣವೆಲ್ಲ ಮಬ್ಬುಕಾಣಲೆಂದು
ತೆಗೆಯದಿದ್ದೇನೆ ಮುಚ್ಚಿ..
ಹಿಂಗದೆ ಜಾರಿತೊಂದು
ಅವನಸಂಗಚಿತ್ರದ ಕಣ್ಣೀರ ಹರಳು..
ಎದೆ ಸನಿಹಕೆ ತಾ ಬಂದು
ಬಿಚ್ಚಿತು ಕಥೆಯಾದವನ ತಿರುಳು..
ಕಂಪಿಸತಿವೆ ತುಟಿ ಒಣಗಿ
ನುಡಿತೊದಲು ಅವನೊಲವ ಗುನಗಿ...
ಮೌನ ಕೊನರತಿದೆ ತೂಗಿ
ಎದೆಮೊಗ್ಗ ಹನಿತೊಯ್ದು ಇಬ್ಬನಿಯಾಗಿ....
ಕಿಟಕಿಯಾಚೆ ತೋರಲೆಳಸಿ
ತೂರಿಬರುವ ಬೆಳಕ ಕನ್ನಡಕಕೆ ತೋರಿ...
ಎದೆಸೋತಿತು ಮೌನಕೆದರಿ
ಮನಹಾರಿದೆ ಹುಡಕತ ನಲ್ಲನದಾರಿ...
- samna
08 Mar 2020, 12:44 pm