Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬಾನಿನ ಮರೆಯಲ್ಲಿ ಮೋಡಗಳ ಸಮ್ಮಿಲನ
ಸಂಜೆ ಸೂರ್ಯನ ಹೊಂಬಣ್ಣದ ಬೆಳಕಿನಲಿ ಕಡಲ ಅಲೆಗಳ ಸಂಚಲನ...
ನವ ವಸಂತದ ತಂಗಾಳಿಯಲಿ ಕೋಗಿಲೆಗಳ ಗಾಯನ
ಚಿಗುರಿದ ಮಾಮರದ ಎಲೆಗಳಲಿ ಅರಳಲು ಸಜ್ಜಾಗಿರುವ ಕಾನನ...
ಕಾಮೋ೯ಡದ ಕಗ್ಗತ್ತಲಲಿ ಮಯೂರಗಳ ನತ೯ನ
ಸುರಿವ ವಷ೯ಧಾರೆಯಲಿ ಚಿಗುರುವ ಚೈತ್ರದ ಕವನ...
ಎದೆ ನಡುಗಿಸುವ ಗುಡುಗಿನ ನಡುವಲಿ ಝೇಂಕರಿಸುವ ಸಿಡಿಲಿನ ಗಾನ
ವೃಷ್ಠಿಯ ನಂತರದ ನಿಶ್ಶಬ್ದದಿ ಮೃಗಕಗಗಳ ಕಲರವದ ಗಾನ...
ಸುಡುವ ಕಡಲ ತೀರದಿ ನೀಲಿ ಮುಗಿಲ ತಪ್ಪಲಲಿ ನಡೆವ ದೋಣಿಯ ಯಾನ
ಇದೆಲ್ಲಕ್ಕೂ ಕಾರಣವು ವಸುಂಧರೆಯ ಪರಿಭ್ರಮಣೆಯ ಲಯದ ಚಲನ...
ವಸಂತ ಕಾವ್ಯ
- Kavya Mari
29 Sep 2025, 10:32 am
ಕಣ್ಣೇ ಪ್ರೀತಿಗೆ ಸಾಕ್ಷಿ...
ಜನುಮ ಜನುಮಕೂ ಆತ್ಮ ಸಾಕ್ಷಿ...
ಗಲು ಗಲ್ಲೆನುವ ನಿನ್ನ ಗೆಜ್ಜೆಯಲಿ...
ನಾ ಕಂಡೆ ನಾಚುವ ಕೆಂಪೇರಿದ ಸೂರ್ಯನ ಅಂದ...
ಜಲ್ ಜಲ್ಲೆನ್ನುವ ನಿನ್ನ ಬಳೆಗಳಲ್ಲಿ...
ನಾ ಕಂಡೆ ಬೆಳದಿಂಗಳ ಪೂರ್ಣ ಚಂದ್ರನ ಚಂದ...
ಕಾದಿದೆ ನನ್ನೀ ಮನ ನಿನ್ನೇ ಸ್ವಾಗತಿಸಲು... ಕಾದಿದೆ ನನ್ನೀ ಕಂಗಳು ನಿನ್ನೇ ಕಾಣಲು...
ಕದ್ದು ಕದ್ದು ನಾ ನಿನ್ನ ಕಂಡಾಗ ನೀ ನನ್ನ ನೋಡಿದ ನೋಟ...
ನನ್ನ ಹೊಟ್ಟೆಯೊಳಗೆ ಬಿಟ್ಟಂತಾಗಿದೆ ರಂಗು ರಂಗಾದ ಚಿಟ್ಟೆಗಳ ಆಟ...
ಕಾದಿರುವೆ ನಿನಗಾಗಿ...
ನೀನೆಂದು ಬರುವೆ ನನಗಾಗಿ...
ಕಾದಿದೆ ನನ್ನೀ ಹೆಜ್ಜೆಗಳು ನಿನ್ನೊಡನೆ ಸಪ್ತಪದಿಯನ್ನಿಡಲು...
ಕಾದಿದೆ ನನ್ನೀ ಜೀವನ ನಿನ್ನ ಸಂಗಾತಿ ಯಾಗಲು...
ವಸಂತ ಕಾವ್ಯ
- Kavya Mari
29 Sep 2025, 10:26 am
ಬೇಸಿಗೆ ರಜೆಯಲಿ ಮಾವಿನ ಸುಧೆಯಲಿ
ರುಚಿಕರ ಹಣ್ಣು ಸಿಗುತಹಲಿಹುದು.
ನನ್ನಯ ಅಪ್ಪನು ಹಣ್ಣನು ನೋಡಿ
ಬುಟ್ಟಿಯ ಹೊತ್ತು ಮನೆಯೆಡೆ ನಡೆದನು
ಹಣ್ಣನು ನೋಡಿ ಜೋಲ್ಲನು ಸುರಿಸಿ
ಚಪ್ಪರಿಸುತ್ತ ಹಣ್ಣನು ಸವಿದೆನು
ರುಚಿಕರ ಹಣ್ಣು ಗಮ ಗಮ ಹಣ್ಣು
ಎಷ್ಟು ಸವಿದರು ಆಸೆ ತೀರದ ಹಣ್ಣು
ಮಾವಿನ ಹಣ್ಣಿನ ಮಜವಿದು ನೋಡಿ
ಹೋಳಿಗೆ ಶಿಕರ್ಣಿ ಮಧುರ ಮಿಲನವ ನೋಡಿ
ಪುಟಾಣಿಗಳೆಲ್ಲ ಆಟವ ಆಡುತಾ ದಣಿವಾರಿಸಲು ಸವಿಯನು ಸವಿಯುತ ರಜೆಯನು ಕಳೆದೆವು ಅಮೃತದಿ.
- ಮೇಘಾ ಬೆಳಧಡಿ
28 Sep 2025, 12:48 am
ಕುದುರೆ ಏರಿ ಬಂದ ರಾಜಕುಮಾರ
ಅವನಿಗೆ ಮನಸೊತಳು ನನ್ನಜ್ಜಿ ಸರಳ
ಮದುವೆ ಸಂಸ್ಕಾರದ ಜೀವನ ನಡೆಸುತಲಿರಲು
ಬಿರುಗಾಳಿಯೇ ಬಿಸಿತೊಮ್ಮೆ ಜೀವನದ ಹಾದಿಯಲಿ.
ಊರು ಬಿಟ್ಟು ಊರಿಗೆ ನಾಲ್ಕು ಮಕ್ಕಳ
ಕಟಗೊಂಡು ಜೀವನಾ ನಡಸ್ತೀದಾಳ
ಹರಕ ಸಿರಿ ಹರಕ ಪೋಲಕಾ ತಿನ್ನಾಕ ಕೂಳಿಲ್ಲ
ಮಲಗಾಕ ಸೂರ ಇಲ್ಲ ಆದರೂ ಗಂಡೆದೆಯವಳು.
ಗಿರಣಿ ಮುಂದ ಕುಂತಾಳ ಹಿಟ್ಟ ಬೆಡ್ಯಾಳ
ತಂದ ಹಿಟ್ಟನ್ಯಾಗ ರೊಟ್ಟಿ ಮಾಡ್ಯಾಳ
ರೊಟ್ಟಿಯೊಳಗ ಅದೆಂತ ರುಚಿ ಅಂತೀರಿ
ಅಮೃತನು ಅಸುಯ್ಯಾ ಪಟ್ಕೊಳುಹಂಗಯಿತ್ತ.
ಪ್ರೀತಿ ಮಮತೆ ನೀಡ್ತಾನೆ ಮಕ್ಕಳಗೆ ಸಂಸ್ಕಾರ
ಕಲಸ್ಯಾಳ, ಮುತ್ತಿನಂತ ಮಕ್ಕಳೀಗ ಮುದಕಿನ ದುರತಳ್ಳ್ಯಾರ ಕಸರಿಲ್ಲದ ಪ್ರೀತಿಯೊಳಗ ಕಲ್ಲ ಹುಡ್ಕೊ ಮಕ್ಳಿoದ ನೋವುಂಡು ಯಮನ ಪಾದಾ ಸೆರ್ಯಾಳ.
- ಮೇಘಾ ಬೆಳಧಡಿ
28 Sep 2025, 12:07 am
- Chaitra Patil
22 Sep 2025, 06:55 pm
ಹಾಳುಗೆಡದಿರು ಮನುಜ ಮಾಣಿಕ್ಯದಂತಹ ಬದುಕನ್ನು,
ತಾಳವಿಲ್ಲದ ಜೀವಕೆ ನವೀನತೆಯ ರಂಗುಚೆಲ್ಲಿ,
ಸೃಷ್ಟಿ ಸ್ಥಿತಿಗತಿಯ ಮರೆತೆಯೇನು?
ಸಸ್ಯ ಸಂಕುಲವ ತೊಳಿದು ನೀನು!
ದೇವ ಧನ್ವಂತರಿಯ ವರಪ್ರಸಾದವಿದು
ಆಚಾರ್ಯ ಚರಕರಿಂದ ಬಂದ ಬಳುವಳಿಯು ಇದುವು.
ಜೀವಸಂಕುಲಕೆ ಪರಮ ಅಮೃತವು ಇದುವು
ನವ ನವೀನತೆಯ ಲೇಪಹಾಕಿ ಹೊಸಿದು ಹಾಕದಿರು ಮನುಜ.
ಪರಂಪರಗತವಾಗಿ ಬಂದ ನಮ್ಮ ಈ ಸಂಸ್ಕೃತಿಯ,
ಜೀವ ಜ್ಯೋತಿ ಬೆಳಗುವ ಈ ಆಯುರ್ವೇದವ.
- ಶ್ರೀದೇವಿ ಉದಯ್ ಆತ್ರಾಡಿ
- Shridevi
20 Sep 2025, 06:26 am
ಯಪ್ಪಾ ಬ್ಯಾಡಾಂದ್ರೂ ಕೇಳಲಿಲ್ಲಾ ಪೋರೀ
ಹೋಗತ್ತಿದ್ಲು ಅವನ ಹಿಂದೆ ಹಾರಿ ಹಾರೀ
ಅಪ್ಪಾ, ಅಮ್ಮಾ ಹೇಳತ್ತಿದ್ರು ಸಾರಿ ಸಾರಿ
ಹೋಗಬೇಡ್ವೆ ಅವನಾ ಹಿಂದೆ ಚಕೋರೀ
ಅಪ್ಪಾ ಅಮ್ಮಂಗೇ ಹೇಳತ್ತಿದ್ಲು ಸಾರೀ
ನಾ ಹಚ್ಕೊಂಡೀನಿ ಅವನಾ ಭಾರೀ....
ಹೋಗತ್ತಿದ್ಲು ಅವಳದೇ ದಾರೀ..
ಸುತ್ತುತ್ತಿದ್ಲು ಅವನ ಬೈಕನೇರೀ..
ಬುದ್ಧಿ ಮಾತು ಕೇಳಲಿಲ್ಲಾ
ತಿದ್ದಿಕೊಂಡು ನಡೀಲಿಲ್ಲ
ಕತ್ತಲಾದ್ರು ಮನೆಗೆ ಬರಲೇ ಇಲ್ಲಾ
ಮುಂದಿನ ಜೀವನ ಅವಳಿಗೆ ಹೊಳೀಲೇ ಇಲ್ಲಾ
ಅವನು ಮಾತ್ರ ಕಲಿತಿದ್ದ ಬರೋಬ್ಬರಿ
ಕರ್ಕೊಂಡು ಹೋಗುತ್ತಿದ್ದ ಭಾರಿಗೆ ಬಾರಿ ಬಾರೀ
ಆಗೋದ್ಲು ಒಂದಿನ ಬಸುರೀ..
ಹೋದ ಅವನು ಹೊಳೆ ಮೀನ್ಹಂಗೆ ಜಾರೀ..
ಬಾಯಿ ಬಾಯಿ ಬಡ್ಕೊಂಡ್ಳು ಖೋಡೀ.
ನನ್ನ ಹಾಗೆ ನೀವಾಗ ಬೇಡೀ..
ಕೇಳ್ತಾವ ಬಿಸಿ ರಕ್ತದ ಜೋಡೀ..
ಕೆಟ್ಟ ಮೇಲೆ ಬುದ್ಧಿ ಬಂತು ನೋಡೀ.
- abhi.s.j
19 Sep 2025, 10:45 pm
ಕಾಣದ ಮುದ್ದಾದ ಅಂದನ
ನೋಡಿ ನಾಚುತ ನಾಚುತ
ಸೂರ್ಯನು ಮೆಲ್ಲನೆ ಕೆಂಪೇರಿ
ಅಂಬರದಿ ಗೊತ್ತಾಗದೆ ಜಾರುತಿಹನು
ಬಾನಗಲಕ್ಕು ಬೆಳದಿಂಗಳ ಚೆಲುತಾ
ಪೂರ್ಣ ಚಂದಿರನು ಮತ್ತೆ ಬಂದನು
ಬೆಳದಿಂಗಳ ರೆಷಿಮೆಯಾ
ಸೀರೆಯಾ ಹುಡಿಸಲು
ಕಂಗಳಲಿ ಮೌನದಿ ಮಾತಾಡಿ
ಕಣ್ಣಂಚಲೆ ಕರೆದ ಹೊರೆ ನೋಟಕೆ
ತಂಪಾದ ತಂಗಾಳಿಯೂ ಕೂಡ
ನನ್ನನು ಸೋಕಿ ಮಾಯವಾಯಿತು
ತುಟಿಯಂಚಲಿ ಅರಳಿದ
ಹೂನಗೆಯ ಸಂತಸಕೆ ಮಳೆಬಿಲ್ಲು
ಕೂಡಾ ಮೆಲ್ಲನೆ ನಾಚುತ
ಆಗಸದ ಮೆಟ್ಟಿಲನು ಏರಿ ರಂಗೇರುತಿಹುದು
ಕವಿಯೋಬ್ಬ ಕಲ್ಪನೆಯಲ್ಲೆ
ಹೊಸದಾದ ಜಾಡು ಹಿಡಿದು
ಕಲ್ಪಿಸಿ ಬರೆಯುತ ವರ್ಣಿಸಿದನು
ಸೌಂದರ್ಯ ರಾಶಿಯೆಲ್ಲಾ
ಅರಳಿದ್ದು ನಿನ್ನಿದಲೆ ಎಂದು...
ನಾಚಿದ ಮನಸ್ಸು ನೀರಾಗಿ
ಕಾಲ್ ಬೆರಳಲ್ಲಿ ರಂಗೋಲಿ ಹಾಕುತ
ಮನಸಲ್ಲಿ ಚಡಪಡಿಕೆ ಹೆಚ್ಚಾಗಿ
ಸುಮ್ಮನೆ ಉಗುರು ಕಚ್ಚುತ
ಕಂಗಳು ಮೌನದಿ ಆಸೆಗಳ ಸೂಚಿಸಿವೆ
ಹೀಗೆ ಕನಸಲ್ಲೊಂದು
ಕನಸ ನೆನೆದು ನೆನೆದು ಬರೆದೆನು
ಕನಸಿನ ಕನ್ಯಾ ಸುಕುಮಾರಿಗೆ
ನನ್ನ ಕಲ್ಪನೆಯ ಚೆಂದಗಾತಿಗೆ...
- abhi.s.j
19 Sep 2025, 10:41 pm
ಹೇ ಗೆಳತಿ ನೀ ಕಣ್ಣೋಟದಿ
ಕಾಮನ ಬಿಲ್ಲಿನೊಳು ಬಿಟ್ಟ
ಅನುರಾಗ ಬಾಣ
ಎನ್ನೆದೆಯನಿರಿದು
ಒಲವ ಮೂಡಿಸಿತಲ್ಲೆ ,
ಇನ್ನೇಕೆ ನಿನಗೆ ಸಿಗ್ಗಿನಾ ಪರದೆ,
ಸರಿಸಿಬಿಡೊಮ್ಮೆ
ನಿನ್ನ ನವಿರ ಸಿಗ್ಗನು ನೇಪತ್ಯಕೆ...!
ನೀ ಬಿಟ್ಟ ಸುಮಬಾಣ
ಕುಂಚವಾಗಿ ಚಿತ್ರಿಸಿತು ನಿನ್ನ
ನಲ್ಮುಖದ ಭಾವಚಿತ್ರವ.
ಎನ್ಮನದಿ ನೂರಾರು
ಆಕಾಂಕ್ಷೆಗಳು ಸಂಚಯಿಸಿ,
ಮೋಹರಾಗವ ಹಾಡುತ,
ಅನುರಾಗ ಲಹರಿಯ
ಜೊತೆಗೂಡಿದೆ.
ಚಂದದುಹೆಯ
ತುರಗವೇರಿದ ನಿನ್ನ
ಒಲವ ಲಹರಿ ಎಲ್ಲೆ
ಮೀರಿ ಅನಂತಾಕಾಶದಿ
ಸದ್ದಿಲ್ಲದೆ ಸಾಗಿ
ಭವ್ಯ ಭಾವ
ಲಹರಿಯಲಿ ಚಲಿಸಿದೆ.
- abhi.s.j
19 Sep 2025, 10:25 pm
ಮಳೆಗಾಲದಲ್ಲೂ ನನ್ನ
ಮನಸ್ಸು ತಂಪಾಗುತ್ತಿಲ್ಲ
ಊಹಿಸು ಗೆಳತಿ ಅದೆಂತ
ಕೊಳ್ಳಿ ಇಟ್ಟಿರುವೆ ನನ್ನ ಹೃದಯಕ್ಕೆ..
- abhi.s.j
19 Sep 2025, 10:19 pm