Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹೃದಯ ತೋಟದಲ್ಲಿ ಅಯಸ್ಕಾಂತದಂತೆ,
ಬಿಡದೆ ನೆಲೆಸುವುದು ಸ್ನೇಹ.
ನೆನಪಾದಾಗ ತುಟಿ ಅಂಚಲಿ ನಗೆ ತರುವುದು ಮರೆಸಿ ವಿರಹ.
ಮಾತಿರದ ಕ್ಷಣ ಆವರಿಸಿ ಹೃದಯವನ್ನ,
ಸವಾಲುಗಳಿಗೆ ಸಂಜೀವಿನಿಯಾಗಿ,
ಪ್ರೋತ್ಸಾಹಿಸುತ್ತೆ ಆಲೋಚನೆಗಳನ್ನ.
ಹತ್ತಿರ ಸುಳಿದಾಗ ಆಡುವ ಮುತ್ತಂತ ಮಾತುಗಳು,
ಆಶ್ರಯದ ಗುಡಿಯೊಳಗೆ ಕೈ ಬಿಡೆನೆಂಬ ಘೋಷಣೆಯಲ್ಲಿ ಬೆರೆತ ಭಾವಗಳು.
ಅಂತರಂಗದ ಒಡಲೊಳಗೆ,
ಅಪರಂಜಿಯಂತೆ ಹೊಳೆಯುವ ಬಾಂಧವ್ಯ,
ಕರಗದು, ತಣ್ಣಗಾದ ದೇಹ ಇಳಯ ಮಡಿಲೊಳಗೆ ಇಳಿದು ಭಸ್ಮವಾಗುವ ತನಕ.
ಕಾರಣಗಳ ಸುಳಿ ಎದ್ದು ಅಬ್ಬರಿಸಿದರೆ,
ಎದೆಯೊಳಿರುವ ಜೀವ ಅಳಿ ತಪ್ಪಿ ನರಳುವುದು.
ವೊಮ್ಮನಸ ಪ್ರೀತಿಎದು,
ಅಗಲಿಕೆಯ ನಿಪವಿರದು,
ಕಾಲ ಸರಿಸಿ ಜೀವಿಸದ ಮೌನಗೀತೆಯದು.
ತಿರುಕನ ಕನಸಂತೆ ಮೆರೆದು ಮುರಿಯುವುದಿಲ್ಲ,
ಖಾತ್ರಿಯಾದ ಮೇಲೆ ಬಾಳು ಸವಿಬೆಲ್ಲ.
ಗೊಂದಲ ವಿರದ ಸ್ನೇಹ ಕೊಡುವುದು ಜೊತೆ ಸಾಗುವೆನೆಂಬ ಪ್ರಮಾಣ,
ಇದ್ದಾಗ, ಬೇಡದೆ ಸಿಗುವ ಸಮಾಧಾನ ಶ್ರೇಷ್ಠ.
ಮೇಘದ ಹನಿಗಳಿಂದ ಮನ ತಂಪಾದಂತೆ,
ಕೊನೆ ಆಸೆಯಲು ನೀರುಣಿಸಿ,
ಸ್ವರ್ಗಕ್ಕೆ ಡಾರಿ ತೋರುವುದು
ಆತ್ಮೀಯ ಸ್ನೇಹ.
- nagamani Kanaka
16 Jun 2025, 09:59 pm
ನಿನ್ನಂತೆ ಮೌನವಾಗಬೇಕು ಬುದ್ಧ.......!
ಚಂಗನೆ ಗಾಳಿಯಲಿ
ತೂರಿ ಬಂದವು
ಅಣುಬಾಂಬುಗಳು ಮಿಸೈಲ್ಗಳು
ಮನುಷ್ಯರನ್ನು ಹುಡುಕುಡುಕಿ ಕೊಲ್ಲುತ್ತಿವೆ.....
ಒಣಪ್ರತಿಷ್ಠೆ ಹುಂಬತನ
ಮನದಲಿ ತುಂಬಿದೆ
ಎಲ್ಲೆಡೆ ಸಾವಿನ ಆಕ್ರಂದನ
ಮುಗಿಲು ಮುಟ್ಟಿದೆ
ಯುದ್ಧದಾಹಿಗಳಿಗಾ
ನಿನ್ನಂತೆ ಮೌನವಾಗಬೇಕು ಬುದ್ಧ.......!
ಕಟ್ಟಡಗಳು ಉರುಳಿದವು
ಕನಸ್ಸುಗಳು ಭಗ್ನಗೊಂಡವು
ಶಾಂತಿಯ ಜೀವನ ಕೋಲಾಹಲಗೊಂಡಿದೆ
ಕಣ್ಣು ಮುಚ್ಚಿ ನಿದ್ದೆ ಮಾಡಲಾಗುತ್ತಿಲ್ಲ
ಸತ್ತವರೆದುರಲ್ಲಿ ಅನ್ನ ಹೇಗೆ ಉಣ್ಣಲಿ
ನಿಟ್ಟುಸಿರಲಿ ಸುಮ್ಮನೇಕೆ ಕೂರಲಿ
ಕೇಳುತ್ತೇನೆ ಅವರಿಗೆ
ನೀವು ಮನುಷ್ಯರೇ?
ನಿಮ್ಮಿಬ್ಬರ ತೆವಲಿಗೆ ನಮಗೇಕೆ ಶಿಕ್ಷೆ?
ಪ್ರಶ್ನಿಸಲೇ ಬೇಕು ನಿನ್ನಂತಯೇ
ಬುದ್ಧ..........!
ಡಾ ನಾಗೇಶ್ ಮೌರ್ಯ
9743907399
- ಡಾ ನಾಗೇಶ ಮೌರ್ಯ
16 Jun 2025, 05:28 pm
ನೀನೊಂದು ನಿಲುಕದ ನಕ್ಷತ್ರ
ಯಾರಿಗೂ ಗೋಚರವಾಗದ ತ್ಯಾಗಮಯಿ
ನೀ ತಿಳಿಸಿಕೊಟ್ಟೆ ಬದುಕು ನಡೆಸುವ ಕ್ರಮ ನಿಸ್ವಾರ್ಥ ಬದುಕಿನ ಜನಕ ಸಂಯಮದ ಸೂರ.
ಸೈನಿಕರಂತೆ ನನ್ನ ರಕ್ಷಕ
ಸಿಪಾಯಿಯಂತೆ ಕಾಯಕಯೋಗಿ
ನನಗಾಗಿ ಕರಗುವ
ನಿನ್ನ ಮನ ಮಂಜಿನ ಗಿರಿ.
ಕನಸಿನಲಿ ಬಂದು
ಮನಸಲ್ಲಿ ನಿಂತು
ನಕ್ಕು ನಗಿಸುತಾ ಹೆಗಲ ಮೇಲೆ ಹೊತ್ತು
ಊರು ಸುತ್ತಿಸಿದ ಮಹಾನಾಯಕ.
ಜೀವನದಿದ್ದಕ್ಕೂ ನೊಂದು ಬೆಂದು ನಗುಮೊಗದಿಂದ ಎಲ್ಲವ ಸ್ವೀಕರಿಸಿ ಕತ್ತೇತ್ತಿ ನೋಡದೆ ಜವಾಬ್ದಾರಿಯನ್ನು ಹೊತ್ತು ಬದುಕ ನಡೆಸಿದವನಲ್ಲವೇ ನನ್ನ ಅಪ್ಪ.
✍️ಮೇಘಾ ಬೆಳಧಡಿ
- ಮೇಘಾ ಬೆಳಧಡಿ
16 Jun 2025, 01:14 pm
ಆ ನಿನ್ನ ಕುಡಿ ನೋಟ...
ಆಡಿದೆ ನನ್ನ ಮನದಿ ತುಂಟಾಟ...
ಆ ನಿನ್ನ ಸುಂದರ ಕಣ್ಣುಗಳು,
ಬೇಡವಾಗಿಸಿವೆ ಬೆಳದಿಂಗಳು,
ಅವು ಏನೋ ಹೇಳ ಬಯಸಿವೆ ಎನಗೆ,
ಅರ್ಥವಾಗದಾದಾಗ ನನಗೆ,
ಮಾಡಿವೆ ಉಪಾಯ,
ಬೇಡಿವೆ ಮುಂಗುರುಳ ಸಹಾಯ,
ಅರಿತಿರುವೆ ನೀ ನನ್ನ,
ಅದೇಕೆ ಅರಿಯದಾದೆ ನಾ ನಿನ್ನ,
ಮರೆತೂ ಮರೆಯಲಾರೆ ಇನ್ನು ನಿನ್ನ,
ಇನ್ನಾದರೂ ನಂಬು ನೀ ನನ್ನ....
--- tippu---
? 7619149648
- tippu
15 Jun 2025, 12:48 pm
ಮರಳಿ ಕರೆಯಲಿ ಹೇಗೆ
ತಿರುಗಿ ಬಾರದವನು ನೀನು,,
ಮಿಂಚಂತೆ ಮಾಯವಾದೆ
ಸಿಡಿಲು ಬಡಿದಂತೆ ಬಿಟ್ಟು
ಈ ಕಣ್ಣೀರಿಗೆ ಕಾರಣ ಏನೆಂದು
ಹೇಳಲಿ ಕೇಳಿದವರಿಗೆ ನಾನು,,
ಕನವರಿಕೆ ನಿನ್ನದೇ ಕನಿಕರಿಸಿ
ಬಂದುಬಿಡು ಅಪ್ಪ ಒಮ್ಮೆ
ಕನಸಲ್ಲಿ ಕಂಡಂತೆ...
ಎಮ್.ಎಸ್.ಭೋವಿ...✍️
.
.
.
.
- mani_s_bhovi
15 Jun 2025, 10:06 am
"ಹುಟ್ಟಿಗೂ ಅರ್ಥವಿಲ್ಲ
ಬದುಕಿಗೂ ಅರ್ಥವಿಲ್ಲ
ಸಾವಿಗೂ ಅರ್ಥವಿಲ್ಲ
ಹುಟ್ಟು-ಸಾವುಗಳ ಕದನವ ಕಂಡು,
ಬದುಕು, ದಿಕ್ಕು ತಪ್ಪಿತ್ತು ನೋಡಾ"...
- ಎ.ಆರ್.ರಾಹುಲ್.
- ?.?.?????.
14 Jun 2025, 08:42 am
ನನ್ನೀ
ಹೃದಯ
ಬಯಸಿದೆ
ನಿನ್ನನೇ
ನನ್ನೀ
ಹೃದಯದ
ಬೀದಿಯಲ್ಲಿ
ಮೆರೆಸುವೆ
ನಿನ್ನನೆ
ಮೆರವಣಿಗೆಗೆ ಒಪ್ಪಿಗೆ ನೀಡುವುದೇಯ ನಿನ್ನಿಹೃದಯ
ಶ್ರೀ........
- Bharath K S
13 Jun 2025, 01:33 pm
ಲೇ ಇವಳೇ...
ನುಗ್ಗೆ ಸೊಪ್ಪು ನುಗ್ಗೆಕಾಯಿ
ತಗೊಂಡು ಬರ್ತೀನಿ,
ಸೊಪ್ಪು ಹಾಕಿ ಮೋಸಪ್ಪು ಮಾಡಿ
ನುಗ್ಗೆಕಾಯಿ ಕಬಾಬು ಮಾಡು..
ರಾತ್ರಿ ಬಾಗಿಲು ಕಿಡಿಕಿ ಭದ್ರಪಡಿಸು
ಹವಮಾನ ವರದಿ ಹೇಳಿದೆ
ಗುಡುಗು ಮಿಂಚಿನ ಮಳೆ
ಬರುತ್ತೆ ಅಂತ...
ಎಮ್.ಎಸ್.ಭೋವಿ...✍️
.
.
.
.
- mani_s_bhovi
10 Jun 2025, 08:44 pm
ಬಾನಿನ ಮರೆಯಲ್ಲಿ ಮೋಡಗಳ ಸಮ್ಮಿಲನ
ಸಂಜೆ ಸೂರ್ಯನ ಹೊಂಬಣ್ಣದ ಬೆಳಕಿನಲಿ ಕಡಲ ಅಲೆಗಳ ಸಂಚಲನ...
ನವ ವಸಂತದ ತಂಗಾಳಿಯಲಿ ಕೋಗಿಲೆಗಳ ಗಾಯನ
ಚಿಗುರಿದ ಮಾಮರದ ಎಲೆಗಳಲಿ ಅರಳಲು ಸಜ್ಜಾಗಿರುವ ಕಾನನ...
ಕಾಮೋ೯ಡದ ಕಗ್ಗತ್ತಲಲಿ ಮಯೂರಗಳ ನತ೯ನ
ಸುರಿವ ವಷ೯ಧಾರೆಯಲಿ ಚಿಗುರುವ ಚೈತ್ರದ ಕವನ...
ಎದೆ ನಡುಗಿಸುವ ಗುಡುಗಿನ ನಡುವಲಿ ಝೇಂಕರಿಸುವ ಸಿಡಿಲಿನ ಗಾನ
ವೃಷ್ಠಿಯ ನಂತರದ ನಿಶ್ಶಬ್ದದಿ ಮೃಗಕಗಗಳ ಕಲರವದ ಗಾನ...
ಸುಡುವ ಕಡಲ ತೀರದಿ ನೀಲಿ ಮುಗಿಲ ತಪ್ಪಲಲಿ ನಡೆವ ದೋಣಿಯ ಯಾನ
ಇದೆಲ್ಲಕ್ಕೂ ಕಾರಣವು ವಸುಂಧರೆಯ ಪರಿಭ್ರಮಣೆಯ ಲಯದ ಚಲನ...
- Kavya Mari
09 Jun 2025, 10:46 pm
ನಿಗಿ ನಿಗಿ ಎಂದು ಬೆಂಕಿಯಯಂತೆ ಕಂಗೊಳಿಸುವ
ಗುಲ್ ಮೋಹರ್ ಹೂ
ಬಿಟ್ಟಿರುವ ಮರಗಳ ಸಾಲು
ನೀಲಾಕಾಶದಲಿ ತೆಲಾಡುವ
ಕಪ್ಪನೆಯ ಮೋಡಗಳು
ಹಿಮಾರಾಶಿಯನು ಹೊದ್ದು ಮಲಗಿರುವ ಪರ್ವತಗಳು
ನವಗ್ರಹದೊಳಗಿನ ಅಷ್ಟಾಂಗ ಸುಂದರಿಯರು
ಪಂಚಶೀಲಾದೊಂದಿಗೆ ವ್ರತ
ಕೈಗೊಂಡು
ದಶ ಪಾರಾಮಿತಗಳನ್ನು ಪೂರೈಸಿ
ಸರದಿ ಸಾಲಿನಲಿ ಕಾಯುತ್ತಿದ್ದಾರೆ
ನಿನ್ನ ಬರುವಿಕೆಗಾಗಿ......
ಡಾ ನಾಗೇಶ್ ಮೌರ್ಯ
9743907399
- ಡಾ ನಾಗೇಶ ಮೌರ್ಯ
09 Jun 2025, 05:15 pm