ಓ ಪ್ರಕೃತಿ ಮಾತೆಯೆ...
ಕ್ಷಮಿಸಿ ಬಿಡು ನಮ್ಮ,
ಇದು ನಾವು ಮಾಡಿದಾ ಕರ್ಮ,
ಅರಿಯದಾದೆವು ನಾವು,
ಈ ಜಗದಿ ಏಲ್ಲಾ ಜೀವಿಗೂ ಉಂಟು ಸ್ವಾತಂತ್ರ್ಯ,
ಎಲ್ಲಾ ಪ್ರಾಣಿ ಪಕ್ಷಿಗಳ ಕಟ್ಟಿ ಹಾಕಿ ಮಾಡಿದೆವು ಕುತಂತ್ರ,
ಅದಕಾಗಿ ನೀ ಮಾಡಿದೆ ನಮ್ಮ ಬಾಳು ಅತಂತ್ರ ಅತಂತ್ರ....
ಇನ್ನಾದರೂ ತಿಳಿಸಿಯಬೇಕಿದೆ ಜಗವು,
ಜಗದೊಡತಿಯು ಮಾತೆ ಪ್ರಕೃತಿಯು,
ಆಕೆಯೊಲುಮೆ ಇಲ್ಲದಿರೆ,
ಜಗವೆಲ್ಲಾ ವಿಕೃತಿಯು......
........ತಿಪ್ಪೇಸ್ವಾಮಿ......
ನಮ್ಮ ಅಣ್ಣಾ ನ ಪ್ರೀತಿ ಅನ್ನೋದು ಅಮ್ಮನ ಮಡಿಲು ಇದ್ದಾಗೆ.
ಅಕ್ಕರೆಯ ಅರಸ ಅವನು
ಗುಣದಲ್ಲಿ ಚಿನ್ನ-ಬಂಗಾರ ಅವನು
ನನ್ನ ಶಕ್ತಿ ಅವನು.
ಏನೆ ಆಗಲಿ ಎನೆ ಬರಲಿ ನಿನ್ನ ಜೊತೆ ನಾನ ಇದೀನಿ ಅನ್ನುವ ದೈರ್ಯ ಅವನು
ನಡಿಗೆಯಲ್ಲಿ ವಿರತನ ಶುರತನ ವನ್ನೂ ಮೀರಿಸಿದಾತಾನು ಅವನು.
✍️ ಅಣ್ಣಾ ನಿನಗೆ ನನ್ನ ಕೋಟಿ ಕೋಟಿ ನಮನಗಳು
ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಬಿಕ್ಕಿ ಬಿಕ್ಕಿ ಅತ್ತ ರಾತ್ರಿ
ನೆನಪುಗಳ ಜೊತೆಗೆ ಜೀವನ ಮಾಡುತ್ತಿದೆ ಈ ನನ್ನ ಹೃದಯ
ರಾತ್ರಿ ಬಾನಿನ ನಲ್ಲಿ ಹುಟ್ಟುವ ಚುಕ್ಕಿ ಚಂದಿರ ನಿಗು ಗೊತ್ತು ಈ ನನ್ನ ನೋವು.
ನಿನಗೇಕೆ ಅರ್ಥವಾಗುತ್ತಿಲ್ಲ ಈ ನನ್ನ ಮನದ ನೋವು.
ಛೇ ಎಂತಹ ಪರಸ್ಥಿತಿ ನನ್ನದು ಸಾಕ ಎನಿಸಿದೆ ಈ ಜೀವನ . ✍️
ಹೇ ಕೇಳ ನನ್ನ ಒಡೆಯ..ನಿನ್ನ ನೆನಪು ನನ್ನ ಬೀಡ ದಂಗ ಕಾಡ್ತಾ ಇದೇ ವಶಿ ನನ್ನ ಸಂಗಡ ಕುಂತು ಕಷ್ಟ ಸುಖ ಮಾತಾಡ್ಬೇಕು ಅಂತ ನಿಂಗ ತಿಳೀತಾ ಇಲ್ವಾ ಹೇಳ ನನ್ನ ದೇವ್ರು.
ನಿನ್ನ ನೆನಪು ನನ್ನ ಬೀಡ ದಾಂಗ ಕಾಡ್ತಾ ಇದೆ ಒಮ್ಮ್ಯರ ನನ್ನ ಬೆಟ್ಟಿ ಆಗು .ಅಟ್ಟಿ ಮೇಲೆ ಕುಂತು ಕಷ್ಟ ಸುಖ ಮಾತಾಡವುನು .
✍️ಮರೆಯಲಾಗದ ನಿನ್ನ ನೆನಪು.
ಬೇವು ಬೆಲ್ಲವನ್ನು ಸವಿದು
ಸಿಹಿ ಕಹಿಯನ್ನು ಸಮನಾಗಿ ಹಂಚಿಕೊಂಡು
ಏಳು ಬೀಳುಗಳನ್ನು ಲೆಕ್ಕಿಸದೆ ನಲಿದು
ನಮ್ಮೆಲ್ಲರನ್ನು ಸಮಾನ ಮನಸ್ಸಿನಿಂದ ಮುನ್ನಡೆಸಲು ಮರಳಿ ಬಂದಿದೆ ಹೊಸ ಸಂವತ್ಸರ.
ಬಂಧೂ - ಮಿತ್ರರು ಒಟ್ಟುಗೂಡಿ ಒಂದೆಡೆಗೆ ಸೇರಿ.
ರಂಗವಲ್ಲಿ, ಮನೆಯನ್ನು ತೋರಣಗಳಿಂದ ಸಿಂಗರಿಸೋಣ ಬನ್ನಿ.
ಎಣ್ಣೆಯ ಜಳಕವನ್ನು ಮಾಡಿ.
ದೇವರಿಗೆ ಪೂಜೆಯನ್ನು ವಿಧಿ -ವಿಧಾನಗಳಿಂದ ಪೂರ್ಣಗೊಳಿಸಿ.
ಬೇವು ಬೆಲ್ಲವನ್ನು ಸೇವಿಸಿ, ಮನೆ ಮಂದಿಗೆಲ್ಲ ಮತ್ತು ಮಿತ್ರರಿಗಲ್ಲ ಹಂಚಿ ಯುಗಾದಿ ಹಬ್ಬ ಆಚರಿಸಿ
ಎಲ್ಲರಿಗೂ ಒಳ್ಳೆದಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ .
ಮತ್ತೊಮ್ಮೆ ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು