Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಆಸೆಗಳ ಬೆನ್ನತ್ತಿ ಜೀವನದಲ್ಲಿ ಸಾಧಿಸಲು
ಓಡುವ ವಯಸ್ಸಲ್ಲಿ
ಪ್ರೀತಿ ಪ್ರೇಮ ಅಲ್ಲದೆ ದುಶ್ಚಟಗಳಿಗೆ ಬಲಿಯಾಗಿ
ಜೀವನವನ್ನ ಅದೆಷ್ಟೋ ಯುವಕ ಯುವತಿಯರು
ತಮ್ಮ ಜೀವನವನ್ನೆ ಹಾಳು ಮಾಡಿಕೊಳ್ಳುವ ಬದಲು
ತಮ್ಮ ಮನಸ್ಥಿತಿಯನ್ನು ತಮ್ಮ
ಹಿಡಿತದಲ್ಲಿಟ್ಟುಕ್ಕೊಂಡು
ಬದುಕಿನ ಕಡೆ ಗಮನ ಹರಿಸಿದರೆ
ಯಾರ ಜೀವನವೂ ಹಾಳಾಗುವುದಿಲ್ಲಾ.
ಆದರೆ ನಮ್ಮ ಚಂಚಲ ಮನಸ್ಸು
ನಮ್ಮ ಇಡೀ ಜೀವನವನ್ನೇ ಹಾಳು ಮಾಡಿ ಬಿಡುತ್ತದೆ.
✍️ಕನಸುಗಾರ
- varu
29 Mar 2020, 10:21 pm
ನಮ್ಮೊಳಗಿದ್ದಾನೊಬ್ಬ ರಂಕ
ಎಷ್ಟೇ ಹೇಳಿದರೂ ಬಿಡ ನವನು ಬಿಂಕ
ಅಹಂ ತುಂಬಿಕೊಂಡಿದ್ದಾನೆ ಮಂಕ
ಇವನು ಬೆಣ್ಣೆ ತಿಂದ ಕೋತಿ
ಮೇಕೆ ಬಾಯಿಗೆ ವರೆಸಿದಂತವನ ನೀತಿ
ನಾನೇ ಶ್ರೇಷ್ಠ ನೆಂಬ ಭ್ರಾಂತಿ
ಕಂಡದ್ದೆಲ್ಲಾ ...ತನಗೆ ಬೇಕೆಂಬ ಗುಣ
ಮರೆತಿದ್ದಾನೆ ಪ್ರಕೃತಿ ಮಾತೆಯ ಋಣ
ಪ್ರಕೃತಿ ಸಿಡಿದೆದ್ದರೇ ಬೀದಿಯಲ್ಲಿ ನಮ್ಮ ಹೆಣ
ಅವನಿಂದ ಎಚ್ಚರವಾಗಿರಬೇಕು ನಾವೆಲ್ಲಾ
ಪ್ರಕೃತಿಯ ಉಳಿವೇ ನಮಗೆಲ್ಲಾ
ಉಳಿಸದಿದ್ದರೆ ಉಳಿಗಾಲವಿಲ್ಲ!
ಹಾಗಾದರೆ ಇವನ್ಯಾರು ?
ಎಲ್ಲಿಹುದು ಇವನೂರು?
ದುರಾಸೆ, ಸ್ವಾರ್ಥರ ಮನಸೇ ಇವನೂರು.
lakshman. madival.
- lakshman
29 Mar 2020, 09:12 pm
ತಂತ್ರಜ್ಞಾನದಿ ಮೆರೆದ ಜಗ,
ನಿನ್ನೊಲುಮೆ ಮರೆಯಿತಲ್ಲಾ ಬೇಗ,
ಬಲ್ಲ ಸಮಾಜ ನಿನ್ನ ಕಡೆ ಗಮನ ಕೊಡಲಿಲ್ಲ,
ಅದಕಾಗಿ ನೀ ಅವನ ಕಟ್ಟಿ ಮನೆಯಲಿಟ್ಟೆಯಲ್ಲಾ....
ಸಾಕು ಮಾಡು ನೀ ಅವಗೆ ಕೊಟ್ಟ ಗುದ್ದು,
ಕೆಟ್ಟ ಮೇಲೆ ಬಂದಂತೆ ಬುದ್ಧಿ,
ಇನ್ನಾದರೂ ಅವ ಮೇಲೆ ಬರಲಿ ಎದ್ದು,
ಮುಂದೆಂದೂ ತೋರುತಿರುವ ನಿನ್ನ ಮೇಲೆ ಗೌರವವನ್ನ,
ಮರೆತೂ ಮರೆಯಲಾರ ಪ್ರಕೃತಿ ಮಾತೆ ನಿನ್ನ ಕರುಣೆಯನ್ನ....
.... ತಿಪ್ಪೇಸ್ವಾಮಿ.....
- tippu
29 Mar 2020, 01:53 pm
ನನ್ನ ಮುತ್ತಿನ ಗೆಣೆಕಾರ
ಎತ್ತ ಹೋದೆಯ ಎನ್ನ ಮುತ್ತಿನ ಗೆಣೆಕಾರ
ಇತ್ತ ಸಿಕ್ಕೇನ ಕತ್ತಲ ಬಲೆಯಾಗಾ/ಹೊತ್ಯೊಯ್ಯು ಬಾರ
ಹೊತ್ತು ಮುಳುಗ ಹೊತ್ತೀನ ಒಳಗ
ನೀರ ಒಳಗನ ನಲುಗ ಬಿಂಬಯಾಕ
ಕರಗುತೀಯೊ ಎರಗಲೆ ಒಡೆತಕ್ಕ/ಬಾಳ್ಗೆಳೆಯಾ
ಕರೆದೊಯ್ಯಬಾರ ಇರತೇನ ನಿನ್ನ ಸಂಗ
ಸಕಾರ್ದ ಕೆಲ್ಸ ಇರದಿದ್ರ ಏನ; ಹೊಲಕೆಲ್ಸ ಉಂಟಲ್ಲೋ
ತರ್ಕಾರಿ ಬೆಳ್ದು ಹೊತ್ತು ಬಾಳೇನ /ನಂಗೆಳೆಯಾ
ತರ್ಕ ಯಾಕ ಮಾಡತಿ ಕಟ್ಟೋ ತಾಳೀನ
ಹೆತ್ತೋರ ನೆನಪ್ಯಾಕ ಹೆತ್ತೋರಂಗ ಸಾಕತೇನ
ಮುತ್ತು ಮಳೆಚೆಲ್ಲಿ ಸೆರಗ ಮೋಡ ಮುಚ್ಚಿ/ನಂಗೆಳೆಯಾ
ಮುತ್ತೀನ ಹೊಳಿಯಾಗಿ ಉರುಳಿ ಹೊಕ್ಕೇನ
ಕಲ್ಲುಸೀಮೆ ಅಲೆದೆ ಎಲ್ಲು ಸಿಗಲಿಲ್ಲ ನಿನ್ನಂತೋನ
ಎಲ್ಲು ಹೋಗಬ್ಯಾಡ ನಿಲ್ಲು ಎದಿ ಒಳಗ/ನಂಗೆಳೆಯಾ
ಮಲ್ಲೆಯಂಗ ಅರಳಿ ನೆಲ್ಲಂಗ ನಗತೇನ ನಿನ್ನೊಳಗ
ಗಿಣಿಹಾಂಗ ಬಂದೋನ ಎದಿಹಣ್ಣ ಕುಕ್ಕಿದೋನ
ಕನ್ನಡಿ ಹರಳೊಳಗ ಕೆಣಕ್ಯಾವ ನೆರಳ / ಗೆಣೆಕಾರಾ
ಕಣ್ಣೀಗೆ ನಲ್ಲೇ ದಾರಿ ಮರಿತೇನ ಸರದಾರ
ರೊಕ್ಕ ಇದ್ರ ಏನ ರೊಕ್ಕ ಇರದಿದ್ರ ಏನ
ರೆಕ್ಕೆಗೈಯಾಗ ಇರತೀನಿ ತಬ್ಲೀಯಾಂಗಾ/ತಾಯಂತ
ಹಕ್ಕಿಮನೇಯ ಕಟ್ಟಿ ಇಕ್ಕೋ ನನ್ನರಾಣಿಯಾಂಗ
- samna
28 Mar 2020, 06:33 pm
ನಿನ್ನ ಮೊಗದ,
ಅದರದಂಚಿನ ಮುಗುಳ್ನೆಗೆ,
ಕಣ್ಣಂಚಿನ ಕುಡಿನೋಟ,
ಕಂಡ ಕ್ಷಣ ಮತ್ತೆ,
ಮತ್ತೆ ನೋಡಬೇಕೆನಿಸುವ,
ಈ ಭಾವ, ಭ್ರಮೆಯೋ? ಆಕರ್ಷಣೆಯೋ?
ಪ್ರೀತಿಯೋ? ನಾ ಅರಿಯೆ !
ನೀನೇ ಹೇಳೇ ಗೆಳತಿ..........?
ಲಕ್ಷ್ಮಿ ಮಾಣಿಕ್ಯನಹಳ್ಳಿ. ಶಿಕ್ಷಕಿ.
ಬೊಂತಗಹಳ್ಳಿ.
- lakshamma
28 Mar 2020, 05:40 pm
ಓ ಪ್ರಕೃತಿ ಮಾತೆಯೇ,
ಕ್ಷಮಿಸಿಬಿಡು ನಮ್ಮ,
ಇದು ನಾವು ಮಾಡಿದಾ ಕರ್ಮ,
ಅರಿಯದಾದೆವು ನಾವು ಈ ಜಗದ ಎಲ್ಲಾ ಜೀವಿಗೂ ಉಂಟು ಸ್ವಾತಂತ್ರ್ಯ,
ಎಲ್ಲಾ ಪ್ರಾಣಿ-ಪಕ್ಷಿಗಳ ಕಟ್ಟಿಹಾಕಿ ಮಾಡಿದೆವು ಕುತಂತ್ರ,
ಅದಕಾಗಿ ನೀ ಮಾಡಿದೆ ನಮ್ಮ ಬಾಳು ಅತಂತ್ರ ಅತಂತ್ರ....
ಇನ್ನಾದರೂ ತಿಳಿಯಬೇಕಿದೆ ಜಗವು,
ಜಗದೊಡತಿಯು ಮಾತೆ ಪ್ರಕೃತಿಯು,
ಆಕೆಯೊಲುಮೆ ಇಲ್ಲದಿರೆ ಜಗವೆಲ್ಲಾ ವಿಕೃತಿಯು...
..... ತಿಪ್ಪೇಸ್ವಾಮಿ.....
- tippu
28 Mar 2020, 02:30 pm
ಓ ಪ್ರಕೃತಿ ಮಾತೆಯೆ,
ಈ ಜಗದೊಳು ನೀನೆ ಎಲ್ಲಾ,
ನೀನಿಲ್ಲದೆ ಇಲ್ಲಿ ಏನೂ ಇಲ್ಲ ,
ಈ ದುರಾಸೆ ಜನರಿಂದ ನಿನಗೇನೂ ಬೇಕಿಲ್ಲ,
ಆದರೆ ಈ ಜಗಕೆ ನೀನಿಲ್ಲದೆ ಗತಿಯಿಲ್ಲ......
.... ತಿಪ್ಪೇಸ್ವಾಮಿ....
- tippu
28 Mar 2020, 02:07 pm
ಕೊರೊನಾ ನಿನಗೆ
ಕರುಣೆ ಇಲ್ಲವೇ?
ಮಾರಣಹೋಮ ನಡೆಸುತ್ತಿರುವೆ
ಮಂಗಳನ ಅಂಗಳಕ್ಕೆ ಕಾಲಿಡುವ ಕಾಲದಲ್ಲಿ
ಮನೆಯ ಅಂಗಳಕ್ಕೆ ಕಾಲಿ ಡದಂತೆ ಮಾಡಿದೆ
ವಿಶ್ವದೆಲ್ಲೆಡೆ ನಿನ್ನ ಭಯ ಹರಡಿದೆ
ನಿನಗೆ ಕರುಣೆ ಇಲ್ಲವೇ
ಶಾಲಾ ಕಾಲೇಜು ಆಫೀಸ್ ಗಳಿಗೆ ರಜೆ
ಹೊರಗೆ ಬರದಂತೆ ಸಜೆ
ಜನರಿಂದ ದೂರಾಗಿಸಿ ದೇ ಮಜೆ
ನಿನಗೆ ಕರುಣೆ ಇಲ್ಲವೇ?
ಹಾದಿ ಬೀದಿ ಗಳೆಲ್ಲ ಖಾಲಿ
ನಿಂತಿದೆ ಕಾರು ಬೈಕ್ ರೈಡ್ ಜಾಲಿ
ಬಡವರಿಗೆ ಸಿಗದಂತೆ ಮಾಡಿದೆ ಕೂಲಿ
ನಿನಗೆ ಕರುಣೆ ಇಲ್ಲವೇ?
ಭಯ ಭೀತಿಯಲ್ಲಿದೆ ಜನರ ಜೀವನ
ಕೆಮ್ಮಿದರೂ .. ಸೀನಿದರೂ ನೀನಿರುವೆ ಎಂಬ ಅನುಮಾನ
ಹೇ! ಹೆಮ್ಮಾರಿ ನಿಲ್ಲಿಸು ನಿನ್ನ ಯಾನ
ಷೇರು ಮಾರುಕಟ್ಟೆ ಬಿದ್ದೋಗಿದೆ
ಜಗತ್ತಿನ ಆರ್ಥಿಕತೆ ನೆಲಕಚ್ಚಿದೆ
ಅಗತ್ಯ ವಸ್ತುಗಳ ಬೆಲೆ ಗನಕ್ಕೇರುತ್ತಿದೆ
ನಿನಗೆ ಕರುಣೆ ಇಲ್ಲವೇ?
ದೇವಸ್ಥಾನಗಳ ಬಾಗಿಲು ಮುಚ್ಚಿವೆ
ದೇವರು ವೈದ್ಯರ ರೂಪದಲ್ಲಿ ಜನರ ಆರೈಕೆ ಮಾಡುತ್ತಿದ್ದಾರೆ
ನಿನಗೆ ದೇವರ ಭಯವಿಲ್ಲವೇ?
ನಿನ್ನ ನಿಯಂತ್ರಿಸಲು ನಾನಾ ಕಸರತ್ತು
ದೇಶಕ್ಕೆ ಲಾಕ್ ಡೌನ್ ಎಂಬ ಷರತ್ತು
ಕೊ ರೊನಾ ನಿಲ್ಲಿಸು ನಿನ್ನ ಕರಾಮತ್ತು.
lakshman madival
8197706289
http://bit.ly/MookaManasu
- lakshman
28 Mar 2020, 12:05 pm
ಹೆಣ್ಣನ್ನು ಗೌರವಸುವ
ಗುಣವಿಲ್ಲದವನಿಗೆ,
ಅವಳನ್ನು ಪ್ರೀತಿಸುವ
ಯೋಗ್ಯತೆಯೂ ಇಲ್ಲ,,,,ದೇವ್
- ದೇವು,,,,,,ಕನ್ನಡಿಗ
27 Mar 2020, 10:35 pm
ಏಳುಸುತ್ತಿನ ಕೋಟೆ ಲೈಟ ಬೆಳಕಿಗೆ ಸಿಕ್ಕಿ
ಈಗ ಫಳಫಳನೆ ಹೊಳೆಯುತಿದೆ
ಹಳ್ಳಿ ಸೇವಂತಿ ಘಮಾಡಿಸತವ ಕಂಪನಿಕ್ಕಿ
ದರಕಟ್ಟೆ ಹೂವ್ವ ಮಾರಳೆಯುತಿದೆ
ಕನಕಾಂಬರಿ ಬಿರಿಕಣ್ಣ ತೆರೆದು ಮೌನದಲಿ
ದೇವ ಪಾದದಲಿ ಮಾತ ಸವಿತಿದೆ
ಮನುಜ ಬಟ್ಟೆ ಉಟ್ಟದ್ದು ಬೀಮ ಹಿಡಿಂಬನ ತರಿದದ್ದು
ತಿಪ್ಪೆರುದ್ರ ನ್ಯಾಯತಕ್ಕಡಿ ತೂಗಿದೆ
ಮೌರ್ಯಹೆಜ್ಜೆ ತುಳಿದ ಖಿಣಿ ಖಿಣಿ
ಬೆನ್ನ ಖತ್ತೀಗೆ ಬಲಿ ಕೋಟೆಸಿಂಗ ಮದಕರಿ
ಹೈದರನ ಎದೆಗೆ ಇಟ್ಟು ನಡಕ ಧ್ವನಿ
ಎಸ್ಸೆನ್ನರ ವರ್ಧನ ಬದುಕಿಟ್ಟ ಕೋಟೆಧರಿ
ಕಿಚ್ಚಹಬ್ಬೀ ಸುಬ್ಬರಾಯರ ದುರ್ಗಾಸ್ತಮಾನ
ಕಾಯುತಿಹ ಓಬವ್ವನ ವನಕೆ ಕಿಡಿಕಾರಿದೆ
ಸೀಳಿ ಅಸಂಸ್ಕೃತಿ ಉಳಿಸುತ ಹೆಣ್ಣಮಾನ
ದುಂಬಿ ಗುಯ್ ಗುಟ್ಟಿದಂತೆ ಪುತ್ಥಳಿ ನುಡಿದಿದೆ
- samna
27 Mar 2020, 08:49 pm