Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

...ನನ್ನವರು ಯಾರು ಇಲ್ಲ...

ನಾನು ನಂದೇ ಎನ್ನುವುದು ಯಾವುದು ಇಲ್ಲ.
ದೇಹ ಆತ್ಮವೆಂಬುವುದೇ ನನ್ನದಲ್ಲ.
ನಾನು ನಮ್ಮದು ಅನ್ನೋ ಅಹಂಕಾರ
ಯಾಕೆ ಬೇಕು ಈ ಜಗತ್ತನಲ್ಲಿ...

ಅಪ್ಪ-ಅಮ್ಮ ಕೊಟ್ಟ ಜನ್ಮವಿದ್ದು
ಯಾರೋ ಜಾತಕ ನೋಡಿ ಹೆಸರಿಟ್ಟರೋ
ನಾವು ಕಲಿವ ವಿದ್ಯೆ-ಕೆಲಸ
ಒಂದ್ಕೊಂಡು ಸಂಬಂಧವಿಲ್ಲ...

ಸತ್ತ ಮೇಲೆ ದೇಹ ಆತ್ಮ
ಬೇರೆ ಆಗುವುದು
ಮೂರು ದಿನ ದುಃಖದ ನೋವು
ನಾಲ್ಕು ದಿನ ಅವರ ಚಿಂತೆ..

ನನ್ನವರು ಅನೋವರು ಯಾರು ಇಲ್ಲ
ನಮ್ಮದ್ದು ಅನ್ನೊದು ಯಾವುದು
ಕೊನೆಗೆ ಉಳಿಯುವುದಿಲ್ಲ....
ಇದ್ನ ತಿಳಿದವನು ಎಂದಿಗೂ ಸೋಲುವುದಿಲ್ಲ..

- Ajay

03 Apr 2020, 09:12 pm

ಕೃತಿಚೌರ್ಯ

ಕವಿಯೋರ್ವನ ಕಲೆಗೆ
ಅರಳಿದ ಕವಿತೆಗಳೆಲ್ಲ
ಭಾವನೆಯ ಸುವಾಸನೆಯನ್ನು
ಓದುಗರಿಗೆ ಪಸರಿಸುತ್ತಿತ್ತು,
ಕವಿಯಲ್ಲದವನ ಕಳ್ಳ
ಕೈಚಳಕದ ಮೋಡಿಗೆ ಬಲಿಯಾಗಿ
ಕದ್ದ ಕವಿತೆಗಳು ಉಳಿದದ್ದು
ಕೇವಲ ಕವಿತೆಯಾಗಿ
ಪ್ರಶಂಸೆಯ ಮಡಿಲೊಳಗೆ
ಬಿದ್ದು ಓಡಾಡಿ,ನರಳಾಡಿ,
ಕೊನೆಯುಸಿರೆಳೆದರೂ
ಕಡೆತನಕ ಅವನಿಂದ ಸಿಕ್ಕಿಲ್ಲ
ಕವಿ ಮತ್ತು ಕವಿತೆಗೊಂದು ಅರ್ಥ,

- ಅಕ್ಷತ

03 Apr 2020, 01:59 pm

ಪರಿಶುದ್ಧ ಪ್ರೀತಿ

ಕಾಡುವ
ದಟ್ಟ ದರಿದ್ರ
ಬಡತನದಲ್ಲಿ
ಮೊಗದಲ್ಲಿ
ಮೂಡುವ
ನಗುವಿಗೆ
ಶ್ರೀಮಂತಿಕೆ
ತುಸು ಜಾಸ್ತಿ,
ಅಹಂ ಇಲ್ಲ
ಆಡಂಭರವಿಲ್ಲ.
ಪರಿಶುದ್ದ
ಪ್ರೀತಿಯೇ ಎಲ್ಲಾ..

- ಅಕ್ಷತ

03 Apr 2020, 01:58 pm

●●●ನೆನಪ ಇಬ್ಬಿನಿ

ಜಾವದ ಸಿಂಹ ಬೆಳಗಿನಲ್ಲಿ
ದೇವಲೋಕದ ಹಕ್ಕಿ
ಕಣಿವೆ ಗುಡ್ಡದಿ ಬಿದ್ದ ಮಂಜುಹನಿಗಳ ಹೆಕ್ಕಿ
ಮುಗಿಲಿಗೆ ಮುಡಿಸಿ ಕಾಮನ ಬಿಲ್ಲ
ಆಡುತೈತಾ ನೋಡೋಣು ಬಾರ ಗೆಣೆಯ

ನಾನ ನೀನ ಅವನ ಬೇಗ
ನೇಹದ ಹುಟ್ಟ ಹಾಕತೀಗ
ತೇಲಿಸಿ ಖುಷಿಯ ಕಡಲಲಿ ನಗೆದೀಪ
ಇಬ್ಬಿನಿಯ ಹಿಡಿದು ಬೊಗಸೆ ತುಂಬಿ
ಆಟವನ ಆಡಿ ತರೋಣು ಬಾರ ಗೆಣೆಯ

ನವಿಲ ಮಲಗಿದ ಜೋಗಿ ಬೆಟ್ಟ
ಕಿರಣವ ರೆಕ್ಕೆ ಮುಡಿದು
ತಂಪುಗಾಳಿಗೆ ಮೈಯ್ಯತೂಗತಾ
ಕಿಣಿಕಿಣಿ ಸದ್ದು ಮಾಡದ
ಕೂಟವು ಕೂಡಿ ಕುಣಿಯೋಣು ಬಾರ ಗೆಣೆಯ

ಹೊತ್ತನ ಕಾಣ ಸ್ನೇಹತೀರಕ
ನೀರಿಗಿಳಿಯೆ ತೊಯ್ಯುತ
ಏರಿ ಬರತಾವ ಅಲೆಗಳು ಕೆಡೋವೋಕ
ಹುರಿಬಿಗಿದ  ಚಿತ್ತದಕೂಟಕ
ನಲಿದು ಕೂಗಿ ಈಜೋಣು ಬಾರ ಗೆಣೆಯ

ಅಲ್ಲಿರುವ ಹಕ್ಕಿ ಸಾಲಂತೆ
ಗಿಡಬಳ್ಳಿ ಬಿರಿದ ಹೂವ್ವ
ಬೆರಳೊಳು ತುಂಬಿ ಬಿದಿರಪುಟ್ಟಿಗಾಕತ
ಹೂವಂತೆ ಬಾಳತುಂಬುತ
ಪ್ರಕೃತಿಯ ಚೆಂಡಾಟಕ ತರೋಣು ನಡಿಗೆಣೆಯ

"ನೆನಪ ಇಬ್ಬನಿ", ಪ್ರತಿಲಿಪಿಯಲ್ಲಿ ಓದಿರಿ :
https://kannada.pratilipi.com/story/27gkjij5vrt7?utm_source=android

- samna

02 Apr 2020, 08:43 pm

ಕುರುಡ ಕಂದೀಲು

ಅಪ್ಪ ನೀ, ಇಷ್ಟು ಬೇಗ ಬದುಕಿನ ಸಂತೆ ಮುಗಿಸಿ ಎದ್ದು ಏಕೆ ಹೋದೆ? ಮೇಲೆ ನಿಂತು ನಿನ್ನ ಕೂಗಿ ಕರೆದವರಿಗೆ ದಿಕ್ಕಾರವಿರಲಿ.

ಅವ್ವ ಸುಡು ಬಿಸಿಲೊಳಗೆ ನೆತ್ತಿ ನೆಗ್ಗಿಸಿಕೊಂಡು, ಬೆನ್ನು ಬಾಗಿಸಿಕೊಂಡದ್ದು ನಿನಗೆ ಕಾಣಲಿಲ್ಲವೆ?

ತುತ್ತು ಅನ್ನಕ್ಕೂ, ಅವ್ವ, ಅಜ್ಜಿ, ಅಕ್ಕ ,ತಂಗಿ, ನಾನು ಊರ ಬೀದಿಯಲಿ, ಓಣಿ ಓಣಿಯಲಿ ನಿಂತು ಅಂಗಲಾಚಿದ್ದು ನಿನಗೆ ಕಾಣಲಿಲ್ಲವೆ?

ತೇಪೆ ಹಚ್ಚಿದ ಅಜ್ಜಿ-ಅವ್ವಳ ಸೀರೆ, ಅಕ್ಕ-ತಂಗಿಯ ಲಂಗ ದಾವಣಿ ನಿನಗೆ ಕಾಣಲಿಲ್ಲವೇ?

ನಿನ್ನ ಸಮಾಧಿ ಬಳಿಗೆ ನಾವೆಲ್ಲರೂ ಎಷ್ಟೋ ಸಾರಿ ಬಂದು, ಬಿರುಕು ಬಿಟ್ಟ ನೆಲದ ಸಂಧಿಯಲಿ ಕೂಗಿ ಕರೆದರೂ ನಿನಗೆ ಕೇಳಿಸಲಿಲ್ಲವೇ?

ನೀ ಬಿಟ್ಟು ಹೋದ ಹೊಲಿಗೆ ಯಂತ್ರ, ರಾತ್ರಿ ಎದ್ದು ಎದೆ ಎದೆ ಬಡೆದುಕೊಂಡು ಮತ್ತೆ ಬೋರಲು ಬಿದ್ದು,ಅಳುವ ಸದ್ದು ನಿನಗೆ ಕೇಳುತ್ತಿಲ್ಲವೆ?

ನೀ ಸುತ್ತಿ ಇಟ್ಟು ಹೋದ ಮಡುಗಟ್ಟದ ದುಃಖದ ದಾರದ ರೀಲಿನ ಉಂಡೆ ನಮ್ಮೆಲ್ಲರ ಕಾಲಿಗೆ, ಕೈಗೆ, ಕುತ್ತಿಗೆಗೆ ಸುತ್ತಿಕೊಂಡು ನಮಗೆ ಉಸಿರುಗಟ್ಟಿಸುತ್ತಿದೆ ಇದು ನಿನಗೆ ಕಾಣುತ್ತಿಲ್ಲವೇ?

ನೀ ಬಿಟ್ಟು ಹೋದ ಮುರುಕ ಸಂಧುಕದ ಪೆಟ್ಟಿಗೆ ನಮ್ಮ ಬದುಕಿಗೆ ಜೀವಂತ ಶವದ ಪೆಟ್ಟಿಗೆಯಾಗಿ ದಿನವೂ ನಮ್ಮನ್ನು ಹಂಗಿಸುತ್ತಿದೆ. ಇದು ನಿನಗೆ ಕಾಣುತ್ತಿಲ್ಲವೇ?

ನೀ ಹೋದ ದಿನದಿಂದ ಆ ಚಂದ್ರ ನಮ್ಮ ತೂತು ಬಿದ್ದ ಸೂರ ಮೇಲೆ ಬೆಳದಿಂಗಳು ಚಲ್ಲಿಲ್ಲ, ಆ ನಕ್ಷತ್ರಗಳು ಹಲ್ಲು ಕಿಸದೇ ಇಲ್ಲ ,ನಿನಗೇಕೆ ಇದು ತಿಳದಿಲ್ಲ?

ಹೊಟ್ಟೆಯೊಳಗೆ ಹೊತ್ತುಕೊಂಡು ಉರಿಯುವ ಉದರಾಗ್ನಿಗೆ ಅಗ್ನಿಶಾಮಕ ಕಳಸಲು ಹೇಳುವವರು ಯಾರು

ನಿನ್ನ ಹೆಗಲ ಮೇಲೆ ಕುಳಿತು ಜಾತ್ರೆಗೆ ಹೋಗಿ ಬಲೂನ, ಪೀಪಿ, ಮೆನಸಿನಕಾಯಿ ಬಜಿ ಕೊಂಡಿಸಿಕೊಳ್ಳುವ ಕನಸು ಎದೆಯಲ್ಲಿ ಹಾಗೆ ಬಿಕ್ಕಿ, ಬಿಕ್ಕಿ ಸಾಯುತ್ತಿದೆ.

ಕತ್ತಲೆಯ ರಾತ್ರಿಯಲಿ, ಈ ಕುರುಡು ಕಂದೀಲ ಬೆಳಕಿನಲ್ಲಿ ಬದುಕಿನ ಕವನ ಅಂಗಾತವಾಗಿ ಅನಾತವಾಗಿ ಮಲಗಿದೆ. ಎಬ್ಬಿಸಲು ನೀ ಎಂದು ಬರುವೆ?

ರಚಣೆ: ರೇವಣಸಿದ್ದ ವೀ ಗೌಡರ

- Siddugouda

02 Apr 2020, 07:22 pm

ಕಣ್ಮುಚ್ಚುವ ಮುನ್ನ

ಕಣ್ಮುಚ್ಚುವ ಮುನ್ನ ಕ್ಷಣ ಕಾಲ ತೆರೆದಿಡುವೆ ನನ್ನಿ ಎದೆಯನ್ನ ನೋಡು ಭಾ ಗೆಳತಿ ನನ್ನೊಳಗೆ ನಿನ್ನ... ಅಲ್ಲಲ್ಲಿ ಹುದುಗಿಹುದು ನೀ ಬಿಟ್ಟ ಹೂ ಭಾಣ ಕತ್ತೊಗೆದು ಅಪ್ಪಿಕೋ ಕಣ್ಮುಚ್ಚುವ ಮುನ್ನ....ದೇವ್

- ದೇವು,,,,,,ಕನ್ನಡಿಗ

02 Apr 2020, 02:25 pm

ಗುರು

ಓ ಗುರುವೇ........
ಮನಸು ಬಯಸಿದ್ದು ನಿಮ್ಮನ್ನು
ಆಗಿಯೇ ಬಿಟ್ಟಿರಿ ಜೀವನದ ಒಂದು ಭಾಗವಾಗಿ.........
ಕಲಿಸಿದಿರಿ ಕ್ರಿಯೆಯನ್ನು ಉತ್ತಮ ಗುರುಗಳ ಮೂಲಕ ತಿಳಿಯಿತು ಅದರ ಒಳಗಿತ್ತು ಪಂಚ ಸೂತ್ರಗಳು
ಎಲ್ಲಿರಿಗೂ ಒಳಿತನ್ನು ಮಾಡಿರಿ ಎಂದು
ಫಲಿಸಿತು ಆ ನಿಮ್ಮ ಮೌನ ಧ್ಯಾನ
ತಿಳಿಯಿತು ಆ ಧ್ಯಾನದ ಮರ್ಮ
ಅರಿತು ಕೇಳುವೆ ನಾ ನಿಮ್ಮ ಧ್ಯಾನ
ಪರವಶಳಾಗುವೇ ನಾ ಆಗ.
ಭಾವುಕತೆಯ ಆ ನಿಮ್ಮ ಸತ್ಸಂಗ
ಎಲ್ಲರೊಳಗಾಗುವುದು ಆ ನನ್ನ ಮನ.
ಮನಸಲ್ಲಿ ನೆಲೆಯಾದಿರಿ ನೀವು ದೇವಾ
ಇದೋ ಈ ನನ್ನ ಪುಟ್ಟ ಕವನ.........
ಜೈ ಗುರುದೇವ್

- An

01 Apr 2020, 09:59 pm

ಜೋತೆಜೋತೆಯಲಿ

ಒಲವೆಂಬ ಹೋತ್ತಿಗೆಯ ಬಂಧಿಸಲೆ ನಿನ್ನ ಎದೆಯಲಿ
ಪ್ರತಿಕ್ಷಣವು ಕಳೆಯ ಬಯಸಿದೆ ಮನ ನಿನ್ನೆದೆಯ ಗೂಡಲಿ
ನಿನ್ನೋಂದಿಗೆ ಆಡ ಬಯಸುವೆ ನನ್ನ ಜೀವನದ ಜೋಕಾಲಿ
ನೀನಿಲ್ಲದೆ ಬರೀ ಮೌನವೆ ತುಂಬಿಹುದು ಬಾಳಲಿ
ಬೆರಳ ಹಿಡಿದು ನಡೆಯುವೆಯಾ ಎಂದಿಗೂ ನನ್ನ ಜೋತೆಜೋತೆಯಲಿ

- Chaitra Kulkarni

01 Apr 2020, 06:28 pm

ಮೌನ ಮಾತಾದಾಗ...

ಕವಿತೆ ಬರೆಯಲು ಪ್ರಾರಂಭಿಸಿದ್ದೆ ನಾ ನೀನಗಾಗಿ
ನೀ ಸಿಕ್ಕೆ ಅಂದು ನನಗೆ ವರವಾಗಿ
ನಾ ಕಾಯುವೆ ಎಂದಿಗೂ ನಿನ್ನ ಪ್ರೀತಿಗಾಗಿ
ಬಿಗಿ ಹಿಡಿದಿರುವೆ ಜೀವವ ಆ ಕ್ಷಣಕ್ಕಾಗಿ
ಮೌನ ಯಾವಾಗ ಬದಲಾಗುವುದು ಮಾತಾಗಿ
ಹೇಳಿಬಿಡು ಒಮ್ಮೆ ಪ್ರೀತಿಯ ಸಿಹಿಯಾಗಿ
ಮರುಕ್ಷಣವೆ ಬರುವೆ ನಾ ನಿನ್ನ ಜೋತೆಯಾಗಿ...

- Chaitra Kulkarni

01 Apr 2020, 06:19 pm

...ಉತ್ತರ ಹೂಡಿಕೊಡುವೆಯಾ...

ನಿನ್ನ ಮುಖದದಂಚಿನ
ಕಿರು ಮುತ್ತಿನ ಮುಗುಳುನಗೆ
ನಿನ್ನ ಆ ಸುಂದರವಾದ
ಕಣ್ಣಂಚಿನ ಕುಡಿನೋಟ.....

ನಿನ್ನ ಸೌಂದರ್ಯಕ್ಕೆ
ನನ್ನ ಮನ ಸೋತು ನಿಂತಿದೆ
ನೀ ಆ ಮುಖದಲ್ಲಿನ ನಗು
ನನ್ನ ಹೃದಯದ ಬಾಗಿಲು ತೆರೆದಂತಾಗಿದೆ...

ಇದು ಭ್ರಮೆನಾ, ಪ್ರೀತಿನಾ,
ಸ್ನೇಹನಾ, ಇಲ್ಲ ಆಕರ್ಷಣೆನಾ ?
ಇದಕ್ಕೆ ಕಾರಣವನ್ನು
ನಾ ಅರಿಯದೆ ಕಾಗಳಾಗಿದ್ದೇನೆ...

ಹೇ ಜೀವವೇ
ನೀ ಒಮ್ಮೆ ಬಂದು ಈ ಪ್ರಶ್ನೆಗೆ
ಉತ್ತರ ಹೂಡಿಕೊಡುವೆಯಾ
ನೀ ಬರುವ ದಾರಿಯನ್ನೇ ನಾ ನೋಡುವೆ....

- Ajay

01 Apr 2020, 06:06 pm