Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನ ಮನಸ್ಸು

ನನಗೆ ಎನೋ ಅನಿಸುತಿದೆ ಇಂದು
ನನ್ನಲಿ ನಾ ಇಲ್ಲ ಇಂದು
ಕೂನೆಗೆ ಹುಡುಕಾಡಿದೆ ನನ್ನ ಮನಸ್ಸನ್ನು
ಆದರೆ ತಿಳಿಯಿತು ಅದು ನಿನ್ನಲಿ ಇದೆ ಎಂದು
ನನ ಮನಸ್ಸು ನನ್ನಲಿ ಇರಲು ಬಯಸುತಿಲ್ಲ
ಏಕೆಂದರೆ ಅದು ಬಯಸಿದೆ ನಿನ್ನ ಪ್ರೀತಿ ಅರಮನೆಯಲ್ಲಿ ಬದುಕಲು
ಮನಸ್ಸೇ ನೀ ಅಲ್ಲೇ ಇರು ನಾ ಬಂದು
ಸೇರುವೇ ನಿನ್ನಲ್ಲೇ.....ಣ

- RoopaGowtham

05 Apr 2020, 11:11 pm

ಕೊರೋನಾ ಕೊಂದಿದ್ದು ನಾನೇ!!

ಹೇ .. ಕೊರೋನ
ನನ್ನ ಹಣೆತೆಯ ಬೆಳಕಿನ ಜ್ವಾಲೆಗೆ
ಹೆಣವಾಗಿ ಹೋಗು
ಮರಳಿ ಧರೆಗೆ ಬಾರದೆ ಬೂದಿಯಾಗು.

ಭಾರತ.......
ಸಪ್ತರ್ಷಿಗಳು ನಡೆದಾಡಿದ ತಪೋ ಭೂಮಿ
ಗಂಗೆ ತುಂಗೆ ಹರಿವ ಪುಣ್ಯ ಭೂಮಿ
ಕೆಟ್ಟ ಹುಳುಗಳಿಗೆ ಇಲ್ಲಿ ನೆಲೆಯಿಲ್ಲ
ಒಗ್ಗಟ್ಟಿನ ಬಲವೆ ಇಲ್ಲಿ ಎಲ್ಲ

ಇಲ್ಲಿ....
ಸರ್ವಧರ್ಮಗಳ ಒಗ್ಗಟ್ಟಿನ ಬಲವಿದೆ
ನಿನ್ನನ್ನು ನಾಶಗೊಳಿಸುವ ಛಲವಿದೆ
ಮಂತ್ರ ತಂತ್ರಗಳ ಬಲೆಯಿದೆ

ನೆನಪಿರಲಿ ನಿನಗೆ........
ನಿನ್ನ ಮೇಲಿದೆ ಎಲ್ಲರ ಕೋಪ
ತಿಥಿ ಮಾಡಲೆಂದೇ ಮನೆ ಮುಂದೆ ದೀಪ.

lakshman .madival teacher

- lakshman

05 Apr 2020, 08:20 pm

ಕೊರೊನಾ ವೈರಸ್

*ಕೊರೊನಾ ವೈರಸ್*
ಮಹಾ ಮಾರಿಯಂತೆ ಜನರಿಗೆ ಗೋಳು ಹಿಡಿಸೈತಂತ್ತೆ
ಇದರ ಹೆಸರು ಕೊರೊನಾ ವೈರಸ್ ಅಂತೆ
ಜಗದ ಜನರ ಜೀವ ತಗಿತೈತಂತ್ತೆ
ಬಡವ,ಶ್ರಿಮಂತ ಬೇದವಿಲ್ಲವಂತೆ ಎಲ್ಲರಲ್ಲಿ ಹೊಗತಿನಿ ಅಂತೈತಂತ್ತೆ
ಇದುವೆ ಕೊರೊನಾ ವೈರಸ್ ಅಂತೆ||

ಜಗದಲಿ ಜನರ ನಿದ್ದೆ ಗೆಡಿಸೆತಂತ್ತೆ
ವಿಜ್ಞಾನಿಗಳೊಗೆ ತಲೆನೋವಾಗೆತಂತ್ತೆ
ಮಕ್ಕಳ ಭವಿಷ್ಯವಾದ ಪರೀಕ್ಷೆ ಜೊತೆ ಆಟ ಆಡಾಕತ್ತೆತಂತ್ತೆ
ಜನರ ಸಂತೋಷದ ಸಂಭ್ರಮಗಳನ್ನು ಕಿತಗೊಂಡೈತಿ
ವ್ಯಾಪಾರಿಗಳ ವ್ಯವಾಹಾರಕ್ಕೆ ಕಂಠಕವಾಗೆತಿ
ಅದುವೆ ಕೊರೊನ್ ವೈರಸ್ ಅಂತೆ||

ಕ್ಷಣ ಮಾತ್ರದಲ್ಲಿ ಇಡಿ ವಿಶ್ವವನ್ನು ಆವರಿಸೆತಿ,ಜನರ ನಿದ್ದಿಗೆಡಿಸೆತಿ
ಮುಟ್ಟಿದರು,ಕೆಮ್ಮಿದರು ಅಂಟಿಕೊಳ್ಳತೈತಂತ್ತೆ
ಮುಖಕ್ಕೆ ಮಾಸ್ಕ್ ಹಾಕಿಕೊಳ್ಳೊತರಾ ಮಾಡೆತಿ ಇದುವೆ ಕೊರೊನ್ ವೈರಸ್ಂತೆ||

ಎಲ್ಲರನ್ನು ಹೊರ ಹೋಗದಂತೆ ಬಂದನ ಹಾಕೆತಿ
ಜನರ ನಡುವಿನ ಭಾಂದವ್ಯ ದೂರ ಮಾಡಕತ್ತೆತ್ತಿ
ಮಕ್ಕಳು, ವೃದ್ದರಿಗೆ ಬೇಗ ಹರಡತೈತಂತೆ
ಕೊರೊನಾ ವೈರಸ್ ಕೊಲ್ಲಲ್ಲು ವಿಜ್ಞಾನಿಗಳು ಮದ್ದು ಕಂಡು ಹಿಡಿಯ್ಯಾಕತ್ತಾರಂತ್ತೆ
ಹುಟ್ಟಿದ ವೈರಸ್ಗೆ ಕೊನೆ ಎಂಬುದು ಇದೆ ಅಂತೆ
ಅದುವೆ ಕೊರೊನಾ ವೈರಸ್ ಅಂತೆ||

ಎಲೆ ಕೊರೊನಾ ನೀನು ಮಾಡುವುದು ಸರಿನಾ
ಇನ್ನೂ ಉಳಿಗಾಲವಿಲ್ಲ ನಿನಗಾ ಬಿಡುವುದಿಲ್ಲ ನಮ್ಮ ವಿಜ್ಞಾನಿಗಳು ನಿನ್ನ
ಬೇಗ ತೊಲಗು ಇಲ್ಲಿಂದ
ಬೇಡುವೆನು ದೇವರಲ್ಲಿ ನಾನು||

ರಚನೆ:ಎಸ್.ಕೆ.ಆಡಿನ.ಶಿಕ್ಷಕರು

- S.K.ADIN

05 Apr 2020, 04:10 pm

ಮುಖಪುಟ

ಕಳೆದು ಹೋದ ನೆನಪುಗಳು ಸಾವಿರ
ಕಾಣಿಸದ ಮುಖಪುಟದಲಿ,
ನೀ ಓದದೇ ಹೋದೆ ಪುಟ ತಿರುವಿ
ಬರೆದವನ ಬಯಕೆ ಅರಿಯದೆ۔

ಕಾರ್ಮೋಡವೆ ಕರಗಿ ಮಳೆ ಹನಿಯಾಗಿ ಬಿದ್ದರೂ
ಇನ್ನೂ ನಿನ್ನ ಮನ ಕರಗದೆ,
ನೀ ಹೇಳದೇ ಹೋದ ಕಾರಣವೇನೇ ಇದ್ದರೂ
ನೆನಪುಗಳಿಂದಾದರೂ ನಿನ್ನಮನ ಕೊರಗದೇ ?

- chidananda chida

05 Apr 2020, 01:57 pm

ದೀಪ

ಹಣತೆ ಹಚ್ಚಾ ಗೆಣತೀ
ಪ್ರೀತಿ ಎಣ್ಣೆ ಸುರಿದು
ತನು ಬತ್ತಿಯ ಬಿಗಿದು
ಜ್ಞಾನಾಗ್ನಿಯ ತೀಡಿ
ಬೆಳಕ ಹೊತ್ತಿಸ ಸತ್ತು ಬಿಡಲಿ ಒಳಅಂಧಕಾರ ರಕ್ಕಸ

ಅಶಾಂತಿ ಅಸಹಿಷ್ಣ
ಕತ್ತಲಾಭ್ಧಿಯ ಕುಡಿದು
ದೀಪವೆಂಬ ಅಗಸ್ತ್ಯ
ಅಟ್ಟಿಬಿಡಲಿ ಬಡಿದು
ಮತ್ತೆಬಾರದ ಕತ್ತಲೆಯ ಕಪ್ಪಿನ ಸುಳಿಗೆ ಸಿಕ್ಕಿಸ

ಪ್ರಕೃತಿಯ ಎದುರ
ಹಿಡಲಣಿತ ಹೆಜ್ಜೆಗಳ
ಕೆಡವಲಿ ದೊಪ್ಪನೆ
ನೆಲದಳಿಲಿಗೆ ಕಿವಿಗಳ
ಬೆಳಕೊಟ್ಟಿಗೆ ಕೊಡತ ಬೆಳಕದು ಪಯಣಿಸಲಿ

ತಮಜ್ಞತೆ ಅಳಿದು
ವಿಜ್ಞಾನ ಉಳಿದು
ಆಧ್ಯಾತ್ಮತೆ ಬೆಳಿದು
ಬ್ರಹ್ಮಬೆಳಗು ಎದ್ದು
ನೆಲದಜೀವಗಳ ತಪ್ಪ ಮನ್ನಿಸೆನಲು ದೀಪದಲಿ

ನಮ್ಮೊಳಗ ತೆರೆದು
ದೇವನೆದುರು ಭಕ್ತಿ ತೋರಿ
ಪ್ರೀತಿ ಬೆಳಕ ಕರೆದು
ತೊಯ್ಯೋಣ ತಾಯ ಧರಿ
ಮನಷತ್ವ ಮಮತೆಬೆಳಗ ಪಕ್ಷಿಯ ತೇಲಿಸೋಣ ನಭಕ

- samna

05 Apr 2020, 01:09 pm

ಹೆಣ್ಣು ಎಂಬ ದೈವ ಅವಳು

ಎಲೆ ಗಂಡು ಕುಲವೇ ಹೆಣ್ಣು ಎಂಬ ದೈವ ಅವಳು
ಋತುಸ್ರಾವದ ನೋವನ್ನೆ ತಡೆದುಕೊಂಡವಳು
ನಿನ್ನ ಹೊರುವಾಗ ನರಕಕ್ಕೆ ಹೋಗಿ ಬಂದವಳು
ಹಸುಗೂಸು ಇದ್ದಾಗ ಹಾಲುಣಿಸಿದವಳು
ಅಕ್ಕ ತಂಗಿಯಾಗಿ ಜೊತೆಯಾಗಿ ಬೆಳೆದವಳು
ಜೀವನ ಸಂಗಾತಿಯಾಗಿ ಬಾಳ ಬೆಳಗುವವಳು
ನಿನ್ನೆಲ್ಲ ಆಸೆ-ಬಯಕೆಗಳ‌ ತಣಿಸಿದವಳು
ಗಂಡಸಿನ ಕಾಮ ಕೃತ್ಯಕ್ಕೆ ಬಲಿಯಾದವಳು
ಇಷ್ಟೆಲ್ಲಾ ನೋವುಂಡರು ಗಂಡು ಕುಲದಿಂದ
ಹೆಣ್ಣು ಬಯಸುವುದು ಎರಡನ್ನೆ
ನೀವು ಅವಳಿಗೆ ಕೊಡುವ ಗೌರವ ಮತ್ತು ಪ್ರೀತಿಯನ್ನೆ

- Basavaraj.

05 Apr 2020, 01:07 pm

ಮೂಗುತಿಗೆ ಮೌಲ್ಯ

ಕಿರು ನಾಚಿದ ಮೊಗದಲ್ಲಿನ ಮೂಗುತಿಯ ಅಂದ,
ಹೊಳೆಯುವ ಮೂಗುತಿಯು ನೋಡಲು ಚಂದ,
ಮೂಗುತಿಯ ಹೊಳಪಿಗೆ ಪೈಪೋಟಿ ನೀಡುವಂತಿದೆ ಹೆಣ್ಣಿನ ಕಣ್ಣಿನಂದ,
ಈ‌‌ ಅಂದ-ಚಂದಕ್ಕೆ ಮೌಲ್ಯ ಬಂದತ್ತು ಧರಿಸಿದಾಕೆಯಿಂದ,
ಮೂಗುತಿಯ ಅಂದದಿಂದ ದುಪ್ಪಟ್ಟಾಯ್ತು ಹೆಣ್ಣಿನಂದ.

- Guruprasad P

05 Apr 2020, 10:54 am

ಮನವ ಕರಗಿಸಿದ ಮಲ್ಲಿಗೆ ಹೂ

ನಗು ಮರೆತ ತುಟಿಗಳ ಮಧ್ಯ ಕಂಡಿತು ಮುಗುಳು ನಗೆ
ಉತ್ಸಾಹದ ಚೆಲುಮೆ ಚಿಗುರಿತು ಬದುಕಿನ ಪುಟದಲ್ಲಿ
ಮರಿಚಿಕೆಯಾದ ಸಂತೋಷದ ಕ್ಷಣ ಮರಳಿ ಬಾಳಿಗೆ ನೀ ತಂದು ಕೊಟ್ಟಿ ಚೆಲುವೆ ॥

ಪ್ರೀತಿ ಅರಿಯದ ಮನಸ್ಸಲ್ಲಿ ಅರಳಿಸಿದೆ ಒಲವಿನ ಒಲುಮೆ
ಸ್ನೇಹ ಬಾಂಧವ್ಯದ ಹೊಸ ಬದುಕಿಗೆ ನಿನಾದೆ ಮುನ್ನುಡಿ
ನವ ಕನಸಿಗೆ ಬಳೆದೆ ಕಾಮನ ಬಿಲ್ಲಿನ ರಂಗೂ
ಜೀವಕ್ಕೆ ಹೊಸ ಜೀವನ ನೀಡಿದೆ ಅಂಧಕಾರದ
ಹೊಂಬಿಸಿಲಿನ ಹೂವೇ ॥

ಸಂಬಂಧಗಳ ಹೂದೋಟದಲ್ಲಿ ಅರಳಿತು ಪ್ರೀತಿಯ ಮೊಗ್ಗು
ಕನಸು ರಂಗೇರಿತು, ಮನಸ್ಸು ಹುಚ್ಚೆದಿತು,
ಆಸೆ ಮುಗಿಲೆರಿತು, ಜೀವ ಹೂವಾಯಿತು,
ಬದುಕಿನ ಜ್ಯೋತಿ ಬೆಳಗಿಸಿದ ಕೋಮಲೆ
ಮನವ ಕರಗಿಸಿದ ಮಲ್ಲಿಗೆ ಹೂವು ನಿನಾದೆ ॥
❤❤❤

ಡಿ ಜೆ ವಿಶಾಲ
7996014212

- Vishal Hiremath

05 Apr 2020, 10:36 am

ಮಾತಿನ ಮಿತಿ

ಅತಿಯಾದ ಮಾತು
ತಳಹಿಡಿದ ಆಹಾರದಂತೆ
ತಿನ್ನುವುದು ತುಂಬಾ ಕಷ್ಟ
ಆದರೂ ಕೆಲವರು ತಿನ್ನುವರು.

ಅತಿ ಕಡಿಮೆ ಮಾತು
ಉಪ್ಪಿಲ್ಲದ ಆಹಾರದಂತೆ
ತಿನ್ನಲಾಗದೆಂದೇನಿಲ್ಲ
ಆದರೂ ಎಲ್ಲರೂ ತಿನ್ನಬಹುದು.

ಹಿತಮಿತವಾದ ಮಾತು
ರುಚಿಕರವಾದ ಆಹಾರದಂತೆ
ಹೊಟ್ಟೆ ತುಂಬುವಷ್ಟು
ತಿಂದು ತೇಗಬಹುದು..

- ಅಕ್ಷತ

05 Apr 2020, 10:21 am

ಒಲವು...❤

ಅಪ್ಪಳಿಸುವ ಸಮುದ್ರದಲೆಯಂತೆ
ನಿನ್ನ ಮೌನ ಹೃದಯಕ್ಕೆ ನೋವ ನೀಡುತಿದೆ ಪ್ರತಿಬಾರಿ...
ಬರಡಾಗಿರುವ ಮರುಭೂಮಿಯು ಹೇಳುತಿದೆ ನನ್ನ ಒಂಟಿತನವ ಸಾರಿ...
ಕತ್ತಲ ಕಾನನದಿ ಸಾಗುತಿದೆ ನಿನಿಲ್ಲದೆ ನನ್ನ ಜೀವನದ ದಾರಿ...
ಹಾದಿ ತಪ್ಪುತಿದೆ ನೀ ತೋರೆದ ಕ್ಷಣದಿಂದ ಬದುಕಿನ ಗುರಿ...
ನಾ ಕಾಣುವ ಕನ್ನಡಿಯ ಪ್ರತಿಬಿಂಬದಿ ನೀ ಮಾಯವಾದಾಗ ಕಳಚಿತು ನನ್ನ ನಗುವಿನ ಗರಿ...
ಕಾದಿರುವೆ ದಡದಲಿ ನಿನಗಾಗಿ, ನನ್ನೋಲವ ದಾಹವ ನಿಗಿಸಲು ಒಮ್ಮೆ ನೀರಂತೆ ಹರಿ...

- Chaitra Kulkarni

05 Apr 2020, 12:04 am