Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

*ಸಾರ್ವತ್ರಿಕ ಲಸಿಕೆ.......*

*ಜೀವವನ್ನು ಉಳಿಸಲು ಸಾವನ್ನು ತಡೆಗಟ್ಟಲು ಹಾಕಿಸಿ ಲಸಿಕೆ...*
*ಗಂಭೀರವಾದ ಹಾನಿ ಸಾವಿಗೆ ಕಾರಣವಾಗುವ ರೋಗಗಳ ವಿರುದ್ಧ* *ಹೋರಾಡಲು ಹಾಕಿಸಿ ಲಸಿಕೆ...*

*ವಿಶೇಷವಾಗಿ ಶಿಶುಗಳ ಪ್ರತಿರಕ್ಷಣೆ ಅಭಿವೃದ್ಧಿಸಲು ಹಾಕಿಸಿ ಲಸಿಕೆ...*
*ಹಲವು ದೇಶಗಳಲ್ಲಿ ಒಂದು ಕಾಲದಲ್ಲಿ ನಿರ್ನಾಮವಾದ*
*ದಡಾರ,ಡಿಪ್ತೇರಿಯ, ಪೋಲಿಯೋದಂತ ಸಾಂಕ್ರಾಮಿಕ ರೋಗ ತಡೆಯಲು ಹಾಕಿಸಿ ಲಸಿಕೆ...*

*ಅನೇಕ ಲಸಿಕೆಗಳು ಪ್ರತಿರೋಧಕ ಮಾಡುತ್ತವೆ ಎಂದು ಚಿಂತಿಸದೇ ಹಾಕಿಸಿ ಲಸಿಕೆ...
ನೋವು,ಗಂಟು,ಬಾವು,ಜ್ವರ ಎಂದು ಹೇದರದೆ ಹಾಕಿಸಿ ಲಸಿಕೆ...*

*ಹಲವು ಸಮಸ್ಯೆಗೆ ಪರಿಹಾರ ಎನ್ನುವ ಹಾಗೆ ನೋವಿಗೂ ಪರಿಹಾರ ಇರುತ್ತದೆ ಅದಕ್ಕೆ ಎಂದೆಂದಿಗೂ ತಪ್ಪದೆ ನಿಮ್ಮ ಮಕ್ಕಳಿಗೆ ಹಾಕಿಸಿ ಲಸಿಕೆ...*

*ಒಟ್ಟಿನಲ್ಲಿ ಹನ್ನೆರಡು ಮಾರಕ ರೋಗಗಳನ್ನು ತಡೆಗಟ್ಟಲು ಆರೋಗ್ಯದಿಂದ ಇರಲು ಹಾಕಿಸಿ ಸಾರ್ವತ್ರಿಕ ಲಸಿಕೆ... ಸಾರ್ವತ್ರಿಕ ಲಸಿಕೆ... ಸಾರ್ವತ್ರಿಕ ಲಸಿಕೆ...*

*✍️ ವಿ.ಎಸ್ಸ್.ಎಚ್ಚ್ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ.*

- v.s.h

29 Jun 2025, 02:42 am

*ಗರ್ಭ ನಿರೋಧಕ "ಛಾಯ ಮಾತ್ರೆ" ಮಹಿಳೆಯರೆಗೆ.......*

*ಗರ್ಭ ನಿರೋಧಕ ಹಾರ್ಮೋನ್ ರಹಿತ ಆವಿಷ್ಕಾರ ಛಾಯಾ..*
*ಅನಪೇಕ್ಷಿತ ಗರ್ಭಧಾರಣೆ ತಡೆಯಲು ಇದು ಒಂದು ಪಾಯ..*
*ಒಂದು ಪಾಕೆಟ್ ನಲ್ಲಿ ಇರುವವು ಮಾತ್ರೆಗಳು ಎಂಟು..*
*ವಾರಕ್ಕೆ ಎರಡು ಮೊದಲ ಮೂರು ತಿಂಗಳ ಮಾತ್ರೆಗಳ ನಂಟು..*

*ನಾಲ್ಕನೇ ತಿಂಗಳಿಂದ ವಾರದಲ್ಲಿ ಒಂದು
ಸಲ ಸಾಕು ಈ ಮಾತ್ರೆ..*
*ಮಹಿಳೆಗೆ ಏನೂ ತೊಂದರೆ ಮಾಡದು ಈ ಮಾತ್ರೆ..*
*ಮುಟ್ಟಿನ ಮೊದಲ ದಿನದಂದು ಸೇವಿಸಬೇಕು ಮಾತ್ರೆ..*
*ಬಹಳ ಪರಿಣಾಮಕಾರಿ ಈ ಮಾತ್ರೆಯ ಸೇವನೆ..*

*ದೇಹದಲ್ಲಿ ಎಂದಿಗೂ ಆಗದು ಅಡ್ಡ ಪರಿಣಾಮ..*
*ಅರ್ಹ ಮಹಿಳೆಯರಿಗೆಲ್ಲಾ ಛಾಯ ಒಂದು ಅಮೃತನಾಮ..*
*ಛಾಯ ಒಂದು ಅದ್ಭುತವಾದ ಉತ್ತಮ ವಿಧಾನ..*
*ಅಳವಡಿಸಿಕೊಂಡು ಸಾಗಿಸಿ ನೀವೆಲ್ಲಾ ಸುಂದರ ಜೀವನ..*

*ಅರಿತುಕೊಳ್ಳಿ ಪ್ರತಿಯೊಂದು ಕುಟುಂಬ ಕಲ್ಯಾಣ ವಿಧಾನ..*
*ಇದು ತಜ್ಞರ ಒಂದು ದೊಡ್ಡ ಪರಿಶ್ರಮ..*
*ಮಹಿಳಾ ಸಂಕುಲದ ಒಳಿತೆಗೆ ವರದಾನ.*

*✍️✍️ ವಿದ್ಯಾಶ್ರೀ.ಎಸ್ಸ್.ಎಚ್ಚ್*
*ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ*

- v.s.h

29 Jun 2025, 02:37 am

ನಿನ್ನ ಪ್ರೀತಿಯಾ ರಾಧೆ ❤️

ಪ್ರೀತಿ ಎಂಬ ಪದಕ್ಕೆ ಸ್ಪೂರ್ತಿ ನೀನು
ಸಿಗಲಾರದ ಕೃಷ್ನನ್ನು ಮರೆಯಲಾಗದಷ್ಟು
ಪ್ರೀತಿಸಿ ಬಿಟ್ಟೆ....
ನಾನು ರಾಧೆಯೋ ರುಕ್ಮಿಣಿಯೋ ಗೊತ್ತಿಲ್ಲ
ಆದರೆ..,.
ನನ್ನಿಂದ ದೂರ ಆಗಿದ್ದು ಮಾತ್ರ ನನ್ನ ಕೃಷ್ಣನೇ...
ಜಗತ್ತಿನಲ್ಲಿ ಅತಿ ಪರಿಶುದ್ಧವಾದ ಪ್ರೀತಿ ಎಂದರೆ ಅದು
ಸಿಗಲಾರದ ಪ್ರೀತಿ.....
ಹಣೆಬರಹದಲ್ಲಿ ಇಲ್ಲದವನು ಹೃದಯದಲಿ
ದೇವರಾದನು .....
ಒಳ್ಳೆಯ ಗುಣದವನು ಹಾಲಿನ ಮನಸ್ಸಿನವನು ನನ್ನವನು....
ಸೀತೆಯಂತೆ ಜೊತೆ ಇರಲು ಬಯಸಿದರೆ ವಿಧಿ ರಾಧೇಯಂತೆ ದೂರ ಮಾಡಿತು......
ಕಣ್ ನೋಟ ಕಂಡವನು ಕಣ್ ಅಂಚಿನಲ್ಲಿ ಮರೆಯಾದನು.....
ಮರಿಯಲಾಗದಷ್ಟು ಪ್ರೀತಿ ಕೊಟ್ಟು ಮೌನವಾಗಿ ದೂರವಾದನು....
ನನ್ನವನು ಮರಳಿ ಬಂದನೆಂದು ಖುಷಿ ಆಯ್ತು
ಎದ್ದು ನೋಡಿದಾಗ ಬೆಳಗಿನ ಕನಸೆಂದು ನೋವಾಯ್ತು....
ಅದೃಷ್ಟವಿಲ್ಲದ ಹಣೆಬರಹದಲ್ಲಿ
ವಜ್ರ ಒಂದು ಸಿಕ್ಕಿ ಕೈ ಜಾರಿತು....


ನಿನ್ನ ಪ್ರೀತಿಯಾ ರಾಧೆ ❤️......

- kavya s

25 Jun 2025, 12:24 pm

ತಂಪಾದ ಗಾಳಿ

ತಂಪಾದ ಗಾಳಿಯೊಂದು ಬೀಸಿ
ಮನಕೆ ಮೊದ ನೀಡಿ
ತಣ್ಣನೆಯ ತನು ಆದಂತೆ
ಒಂದೆಡೆ ಮನದ ನೋವು ನೂರಾರು
ಸಾಗುತಿರುವ ದಾರಿಯಲಿ ಇನ್ನೊಂದು
ಖುಷಿಯಿಂದ ನನ್ನವರೊಡನೆ ನಕ್ಕ ಘಳಿಗೆ
ಯಾವುದು ಬೇಡವೆಂದು ದೂರ ಹೊರಟರೆ
ಮತ್ತೆ ಸೇರಿದ ಜಾಗ ಅದೇ ...
ನಾನು ಕಂಡ ನನ್ನ ಸಂಗಾತಿಯಲ್ಲಿಗೆ
ನನ್ನ ಮನೆಗೆ....ನಮ್ಮ ಅಮ್ಮನಡೆಗೆ
?ವೈಶಾಖ್ ಶೆಟ್ಟಿ. ಕೆ

- Vaishak Shetty.k (Vaishak shetty.k)

23 Jun 2025, 09:14 am

ದೊರವಾದ ಪ್ರೀತಿಯನು ನೆನೆದು ನಾ ಹುಚ್ಚನಾದೆ..
ಪ್ರೀತಿಸಿದವಳು ಇನೋಬ್ಬನ ಜೊತೆ ನಗುವುದನ್ನು ನೋಡಿ.
ನನ್ನವಳು ಖುಷಿಯಾಗಿರಲ್ಲಿ ಎಂದು ಹಾರೈಸಿದೆ..
ಅಪರಿಚಿತನ ಮಾತುಗಳು

- Dilan Dilu

22 Jun 2025, 09:53 am

ಯೋಗಭ್ಯಾಸ..


ಧೂಪದಂತೆ ಹರಡಿದೆ ಕಡಲಾಚೆ ಯೋಗವು,
ಜನರ ತನು ಮನವ ಕೂಡಿಸೋ ಕಾರ್ಯತಂತ್ರವೂ.

ಪತಂಜಲಿ ಯೋಗಶಾಸ್ತ್ರ ಬಾಳಿಗಾಸ್ತ್ರವು,
ಬಾಲ್ಯದಲ್ಲೇ ವ್ಯಾಯಾಮದ ಬಿತ್ತೋ ಬೀಜ ಶಸ್ತ್ರವು.

ಆರಂಭದ ಅಭ್ಯಾಸ ಸಂಕಲ್ಪ ಮಾಡಲಿ,
ಉತ್ತಮ ಆರೋಗ್ಯಕೆ ಸೂರ್ಯ ನಮಸ್ಕಾರವಿರಲಿ.

ಒತ್ತಡಗಳ ಭಾರವಿಳಿಸಿ ಶಾಂತಿ ತರುವುದು,
ನೆತ್ತರಿನ ಪಾಚಿ ಕಳಚಿ ಶುದ್ಧಗೊಳಿಸುವುದು.

ಪ್ರಾಣಾಯಾಮ, ಧ್ಯಾನವನ್ನು ಮನುಜ ಮಾಡಬೇಕಿದೆ,
ಸದೃಢತೆಯ ಚೈತನ್ಯವು ಅದರ ಲಡಗಿದೆ.

ನಾನೇನು ಎಂಬ ಅರಿವ ಮೌನ ಕೊಡುವುದು,
ಏಕಾಗ್ರತೆ ನೆಲೆಸಿ ಗ್ರಹಿಕೆ ಮೊಳಕೆಯೊಡೆವುದು.


ಆಲಸ್ಯವ ದೂರ ಸರಿಸಿ ಮುಂಜಾವಿನಲಿ,
ಸರ್ವಶಕ್ತಿ ಪಡೆಯಬಹುದು ಯೋಗ ಮಾಡುತ್ತಲಿ.

- nagamani Kanaka

21 Jun 2025, 09:06 pm

ಇಂದು ಜರುಗಿದ ಅತೀ ಭಾರದ ಸಮಸ್ಯೆಯೂ..
ಮುಂದೊಂದು ದಿನದ ಹಗುರದ ಸಂತೋಷವೂ..
ಇಲ್ಲಿ ಎಲ್ಲವೂ ಕ್ಷಣಕ್ಕಿಂತ ಅತ್ಯಂತ ಬಲು ಕ್ಷಣಿಕವೂ..
ಓ ಮನವೇ ನೀ ಹೇಳು ಏತಕ್ಕೇ ಮಂಕಾಗಿ ಅಳುವೂ...
ಇನ್ನು ನಾ ಬಯಸುವ ಯವುದೂ ಶಾಶ್ವತವೂ ಎಲ್ಲಿಹುದು..
???
ಇಂದು ಜರುಗಿದ ಅತೀ ಭಾರದ ಸಮಸ್ಯೆಯೂ..
ಮುಂದೊಂದು ದಿನದ ಹಗುರದ ಸಂತೋಷವೂ..
ಇಲ್ಲಿ ಎಲ್ಲವೂ ಕ್ಷಣಕ್ಕಿಂತ ಅತ್ಯಂತ ಬಲು ಕ್ಷಣಿಕವೂ..
ಓ ಮನವೇ ನೀ ಹೇಳು ಏತಕ್ಕೇ ಮಂಕಾಗಿ ಅಳುವೂ...
ಇನ್ನು ನಾ ಬಯಸುವ ಯವುದೂ ಶಾಶ್ವತವೂ ಎಲ್ಲಿಹುದು..
???

- Asha

20 Jun 2025, 04:31 pm

ಅವಳ ನಗು

ಬರೆಯಲಿ ನಾ ಏನನ್ನ
ಬರೆಯಲೆಂದೆ ಬರೆದೆ ನಮ್ಮುಡುಗಿ ಸೌಂದರ್ಯ ನ
ಮಳೆಯಿಂದ ಭೂಮಿಯ ಪ್ರಕೃತಿ ಹಸಿರಾದರೆ
ಅವಳ ಹೆಸರೇ ನನ್ನೆದೆಯ ಉಸಿರಾಯಿತು
ಜೂಲಿಯಟ್ ಅಂದ ROMEO
ಮರುಳುಗೊಳಿಸಿದರೆ
ಇವಳ ನಗು ಈ SMIRK SANJU ನಿದ್ದೆ ಕೆಡಿಸಿತು
ಕನಸಲ್ಲಿ ಬಂದು ಕಾಡುತಿರುವೆ ನನ್ನ
ಎದುರಿಗೆ ಯಾಕೆ ಬರದೆ ಇರುವೆ ಚಿನ್ನ
ಕನಸಲ್ಲಿ ಬಂದು ನಿದ್ದೆ ಕೆಡಿಸುವ ಬದಲು
ಎದುರಿಗೆ ಬಂದು ಜಗವ ಮರೆಸು ?

BY SMIRK SANJU

- Sanju gubbi Bhagya

19 Jun 2025, 02:46 pm

"ಹೇಗೆ ವರ್ಣಿಸಲಿ ನಿನ್ನ"

"ಹೇಗೆ ವರ್ಣಿಸಲಿ ನಿನ್ನ
ಸ್ವರಗಳಲ್ಲಿ ವರ್ಣಿಸಲಾಗದ
ಸೌಂದರ್ಯ ನಿನ್ನದು..
ವ್ಯಂಜನಗಳಲ್ಲಿ ಅಳೆಯಲಾಗದ
ವ್ಯಕ್ತಿತ್ವ ನಿನ್ನದು...
ಪದಗಳಲ್ಲಿ ಪೋಣಿಸಲಾಗದ
ಪ್ರೀತಿ ನಿನ್ನದು...
ಆದರೆ ನಿನ್ನ ಈ ವರ್ತನೆಯ ಕಂಡು
ನಾ ಹೇಳಿದೆ ಬರಿ ಎರಡು
ಯೋಗವಾಹಗಳಿಂದ
ನಿ ಬಯಸಿದ್ದು ನನ್ನಿಂದ ಕೇವಲ,
ಅಂ...ಅಃ..ಎನ್ನುವ ಎರಡಕ್ಷರ
ವೆಂದು"...
- ಎ.ಆರ್. ರಾಹುಲ್.

- ?.?.?????.

18 Jun 2025, 08:09 am

ನನ್ನವರು

ನನ್ನವರೆಂದರೆ
ನಾ ತಿಳಿದೇ
ಭಾವನೆಗಳ ಬೆಸೆಯುವ
ಸಿಹಿ ಜೇನು
ಜೇನ್ನೋಣಗಳ ಅಟ್ಟಹಾಸ ಅರಿಯಲಿಲ್ಲ.

ನನ್ನವರೆಂದರೆ
ನಾ ತಿಳಿದೇ
ನನ್ನಯ ಪ್ರಪಂಚವೆಂದು
ವಿಕೃಪ ಮನಸ್ಸುಗಳು ಪರಿವಿಗೆಯಿರಲಿಲ್ಲ.

ನನ್ನವರೆಂದರೆ
ನಾ ತಿಳಿದೇ
ಶುದ್ಧ ವಾಯುವೆಂದು
ಮಲೀನತೆಯನು ತಿಳಿಯಲಿಲ್ಲ.

ನನ್ನವರೆಂದರೆ
ನಾ ತಿಳಿದೆ
ಹೃದಯದ ಬಡಿತವೆಂದು
ನಿಷ್ಠುರ ಮನಸ್ಸುಗಳ ಲೆಕ್ಕಾಚಾರವಿರಲಿಲ್ಲ

ನಾನು ನನ್ನವರೆಂದು ಬಿಟ್ಟು
ಸ್ವಾರ್ಥಿ ಆಗಬೇಕಿದೆ
ಪರರು ಕಲಿಸಿದ ಪಾಠವಿದಲ್ಲವೇ
ಕರ್ಮವೂ ಯಾರನ್ನೂ ಬಿಡದ ನಂಟ.

✍️ಮೇಘಾ ಬೆಳಧಡಿ

- ಮೇಘಾ ಬೆಳಧಡಿ

17 Jun 2025, 11:38 am