ಬಾಳು ಹೂಸದಾಗಿ ಶುರುವಾದಾಗ ಬಾಳಿನೂಂದಗೆ ಸಹಪಾಠಿವಾಗುವ ಸಣ್ಣ ಸಣ್ಣ ಆಸೆಗಳೆ
ಆಸೆ ಈಡೇರಿ ನನಸಾದರೆ ಹೂಮಳೆ
ಆಸೆ ಕನಸಾದರೆ ಕಂಬನಿಯ ಹೊಳೆ
ಹೂಸಬಾಳಿನ ಹೂಸಿಲಲಿ ನಿಂತ ನನ್ನ ಗೆಳತಿಗೆ
ತಲೆ ತಿರುಗಿ ಬರುವಂತೆ ಹೂತ್ತದಳು ಹೆಗಲಿಗೆ ಮೆತ್ತಗೆ ತಿಳಿದಿತ್ತು ಅಷ್ಟೂತ್ತಿಗೆ ಆ ಬಾಲೆಗೆ
ನಾ ಬಂದು ಬಿದ್ದಿರುವೆ ಸಂಸಾರವೆಂಬ ಬಲೆಗೆ
ಅದರೂಡೆಯರು ಅತ್ತೆ ಮಾವ ಎಂಬ ಮೆಚ್ಚುಗೆ
ಅವರ ಕಠೋರ ನುಡಿಗಳೇ ಆದವು ಮುಳ್ಳಿನ ಹಾದುಗೆ...
ದಾರಿಯೆ ಕಾಣದಂತಾಗಿದೆ ನಾ ಏನ ಮಾಡಲಿ ನನ್ನ ಗೆಳತಿ ಅಪ್ಪಿದ ಮೆಚ್ಚಿದ ಗೆಳತಿಗೆ ನಾ ಮಾಡಲಾರನೇ ಹೂಳಿತನ್ನ ಕರೆತಂದು ಅವಳನ್ನ ಹೇಳಿಸಿದೆ ನೀತಿ ಪಾಠವನ್ನ ಅದನೂಪ್ಪಿದ ಅವಳು ವಿದಾಯ ಹೇಳುತ್ತ ಸೇರಿದಳು ಅತ್ತೆ ಮನೆ
ಕುಹ ನೋಟ ಬೀರುತ್ತ ನುಡಿದಳು ನೀನೇಕೆ ಬಯಸುವೆ ನಿನ್ನಂತೆ ಇರಲು ನನ್ನನು
ನಾ ಮೌನಿಯಾದೆ
ಏ ಮಹಿಳ ಮಣಿಗಳ ಎಲ್ಲರ ಮೌನದ ಹಿಂದೆ ಕಥೆಯೇ ಇದೆಯಲ್ಲವೇ.....
ಕನಸಿನಲ್ಲಿ ನೀನು ಬಂದಂತೆ
ಕಣ್ಣಿನಲ್ಲೇ ನೀನು ಕರೆದಂತೆ
ಕಿವಿಯಲ್ಲೇನೋ ಪಿಸು ನುಡಿದಂತೆ
ನಗುವೇ ಯಾಕೆ ಏನು ತಿಳಿಯದಂತೆ
ನಿನ್ನ ಕೈ ಹಿಡಿದು
ಒಂದೆರಡು ಕವನ ನುಡಿದು
ಅಪ್ಪುಗೆಯ ಬಯಸುವೆನು
ನೀನು ಒಪ್ಪಿದರೆ..
ನಿನ್ನ ಕೈ ಹಿಡಿದು
ಬರೆಯುವೆನು ಕಾಗದದ ಮೇಲೆ
ನನ್ನ ಎಲ್ಲಾ ಭಾವನೆಗಳ ಸುರಿದು
ತಿದ್ದಿ ಬಿಡು ನಾ ತಪ್ಪಿದರೆ
ಅಪ್ಪಿ ಬಿಡು ನೀ ಒಪ್ಪಿದರೆ
ಹೃದಯ ಬರೆದ ಕವನ ಸಂಕಲನಕ್ಕೆ
ನಿನ್ನ ಮೌನವೇ ಮುನ್ನುಡಿ...
ನಿನ್ನ ನೆನಪುಗಳೇ ಪರಿವಿಡಿ
ನಿನ್ನ ಕನಸುಗಳೆ ಪುಟವಿಡಿ
Written By:-MS ಯಾದವ್.
ಹಾಯ್, ಹಲೋ ಪರದೇಶಿ ವ್ಯಾಮೋಹ ಬಿಡಿ.
ಯಾವ್ ಭಾಷೆಗೂ ಕಮ್ಮಿ ಇಲ್ಲ ನಮ್ಮ ಕನ್ನಡ ನುಡಿ.
ಕನ್ನಡ ನಾಡು ಎಂದಿಗೂ ಮರೆಯಲಾಗದ ಗಂಧದ ಗುಡಿ.
ಏನೇ ಬಂದರೂ ನೀ ಕನ್ನಡಕ್ಕಾಗಿಯೇ ಮಡಿ.
ಕನ್ನಡವ ಎಂದಿಗೂ ಹೃದಯದಲ್ಲಿಯೇ ಸೇರೆ ಹಿಡಿ.
ಕಾವೇರಿಯನ್ನು ಕಣ್ಣೀಗೋತ್ತಿ ಕೈ ಮುಗಿದು ಕುಡಿ.
ಕನ್ನಡತಾಯಿಯ ತಲೆ ಮೇಲೆ ಹೋತ್ತು ನಡಿ.
ಕನಸು ಕಾಣುವಾಗಲು ಕನ್ನಡವನ್ನೇ ಮಿಡಿ.
ಉಸಿರೋದರು ಕಾಯಿ ನೀ ಕನ್ನಡದ ಗಡಿ.
ಅರಿಶಿಣ-ಕುಂಕುಮ ಎಷ್ಟು ಚೆಂದ ಕನ್ನಡಕ್ಕೆ ನೋಡಿ.
ಮಾಡಿಹುದು ಕನ್ನಡಿಗರ ಮನಸ ಮೋಡಿ.
ಕನ್ನಡಕ್ಕೆ ಅವಮಾನವಾದರೆ ಎದ್ದು ನಿಲ್ಲವುದು ಹೃದಯದ ನಾಡಿ.
ಕನ್ನಡ ಯಾವಾಗಲೂ ಬೆಂಕಿಯ ಕಿಡಿ.
ಕರ ಮುಗಿದು ಹೇಳುವೆ ನಾನೆಂದಿಗೂ ಕನ್ನಡದ ಕುಡಿ....