Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

@ಬದುಕಿಗೊಂದು ಬುಲೇಟು@

ಸಂಸಾರದಲಿ,
ತುತ್ತು ಕಡಿಮೆಯಾದರು,
ಮುತ್ತು ಕಡಿಮೆಯಾಗಬಾರದು,
ಇದೆ ಸುಖ ಸಂಸಾರದ ಗುಟ್ಟು
ಬಿಡದೆ ಹಾಕಿ ಸಾಧಿಸು ಪಟ್ಟು.

- sanjayG

03 May 2020, 08:44 am

ಬದುಕಿನ ಗಾಡಿ

ಬೇಕೆಂದು ಒಂದು ಗಾಡಿ
ಅಲ್ಲಿ ಇಲ್ಲಿ ಸುತ್ತಾಡಿ
ಸುಸ್ತು ಆಯ್ತು ನೋಡಿ
ಕೋನೆಗೆ ಬಂದಿದ್ದು ನಾಲ್ಕು ಜನರ ಹೆಗಲ ಮೇಲೆ ನನ್ನ ಬಾಡಿ

✍️ವಿ.ಶಿವಾನಂದ

- Shivanand V Anandadavar

02 May 2020, 11:43 pm

ಕಾಯುತ ಕುಳಿತೆ ನಿನಗಾಗಿ...

ಅವಳಿಗಾಗಿ ಕಾಯುತ್ತಾ
ಹೃದಯ..
ಮರೆತಿದೆ ಹೃದಯದ ಬಡಿತದ
ಸಮಯ..
ಕುಳಿತಿರುವೆ ನಾ ಕಾಯುತ್ತ
ಅವಳಿಗೆ...
ಬರಬಾರದೆ ಓ ಗೆಳತಿ ನೀ ನನ್ನ ಹೃದಯದ
ಊರಿಗೆ..

- Vishwa PS

02 May 2020, 09:53 pm

ಕಾಯಕ ಯೋಗಿ """""""""""

ಕಾಯಕವೇ ಕೈಲಾಸವೆಂದು ಪ್ರತಿಪಾದಿಸಿದ
ಕಾಯಕ ಯೋಗಿ
ಜಾತಿಮತ ಧರ್ಮದ ಮೌಢ್ಯವೆಂಬ ತಮವ
ಅಳಿಸಲು ಹೋರಾಡಿದ ಭೈರಾಗಿ !

ಮನದಲಿ ದೇವರನರಸಿ ಎಂದು ಬೆಳಕು ತೋರಿದೆ
ಕ್ರಾಂತಿಯ ಹರಿಕಾರನಾಗಿ
ವಿಶ್ವಮಾನವ ನೀನಿಂತೆಲ್ಲರ ಮನದೆ ಜಗಜ್ಯೋತಿ
ಬಸವೇಶ್ವರನೆಂದು ಅಜರಾಮರವಾಗಿ !

ಮಾನವತೆಯ ಸೆಲೆಯಲಿ ಧರ್ಮವ‌ ಅರಿತ ಬೆರಗು
ಅನುಭವ ಮಂಟಪದಲಿ ವಚನಗಳ ಸೊಬಗು

ಜಗದ ಮೌಢ್ಯವ ಬದಲಾಯಿಸಲು ಅನವರತ
ಗುಡುಗು
ದಯವೇ ಧರ್ಮದ ಮೂಲವಯ್ಯ ಎಂದು
ಸಾರಿದ ನಿಮ್ಮಿಂದ ಮಾನವತಾವಾದಿಯೆಂಬ
ಹೆಸರಿಗೆ ಮೆರುಗು !

- Shaku Thanks Amma Shaku

02 May 2020, 08:05 pm

ಕೊರೋನಾ

ಕೊರೋನಾ ಮಹಾ ಮಾರಿ
ಕೊಲ್ಲುತ್ತಿದೆ ಎಲ್ಲರ ಮೇಲಾರಿ
ಇದಕ್ಕಿಲ್ಲ ಯಾವುದೇ ಬೇದಭಾವ
ಪರದಾಡುತಿಹರು ಉಳಿಸಲು ಜೀವ !

ಚೀನಾದ ವುಹಾನ್ ನಲ್ಲಿ ಜನನ
ದಶದಿಕ್ಕಿನಲ್ಲಿ ಮರಣಮೃದಂಗನ
ಕೋಟೆ- ಕೊತ್ತಲಗಳ ದಾಟಿ
ಬಡವ- ಬಲ್ಲಿದರ ಭೇಟಿ

ಬೀಗುತಿದ್ದ ವಿಶ್ವದ ದೊಡ್ಡಣ್ಣನೂ;
ಆದ ಕೊರೋನಾ ಮುಂದೆ ಸಣ್ಣವನು
ಸರ್ವಾಧಿಕಾರಿಗಳ ಸಾಮ್ರಾಜ್ಯಗಳೆಲ್ಲ
ಕೊರೋನ ಬಲೆಯಲ್ಲಿ ವಿಲವಿಲ

ಭಾರತಕ್ಕೆರಗಿದ ಮಹಾಮಾರಿ
ತೋರುತ್ತಿದೆ ಸ್ಮಶಾನದ ದಾರಿ
ಪ್ರಧಾನಿ ಲಾಕ್ ಡೌನ್ ಜಾರಿ
ತೊಲಗಿಸಲು ಸಕಲ ತಯಾರಿ

ಹೋರಾಟಕ್ಕೆ ರಣರಂಗ ಸಿದ್ದ
ಶಸ್ತ್ರಸಜ್ಜಿತ ಕರೋನ ಸದಾ ಬದ್ದ
ಸ್ವಚ್ಛತೆ,ಸಾಮಾಜಿಕ ಅಂತರ
ಇವೆರಡೇ ನಮ್ಮೆಲ್ಲರ ಅಸ್ತ್ರ

ಊಸರವಳ್ಳಿಯಂತ ಗುಣಾಣು
ಪಾಪಿ ಕೊರೋನಾ ವೈರಾಣು
ಉಳಿಸಲು ವೈದ್ಯರ ಹರಸಾಹಸ
ನಿಯಂತ್ರಿಸಲು ಆರಕ್ಷಕರ ವನವಾಸ

ನಮ್ಮ ರಕ್ಷಣೆಗೆ ಹೊರಾಡುವವರಿಗೆ
ನೀಡೋಣ ಒಂದು ಸಲಾಮು
ಮುಂದಾಗೋಣ ದೇಶ ಸೇವೆಗೆ
ಲೇಪಿಸುತ್ತ ಕೊರೋನಾಗೆ ಮುಲಾಮು



ಶಾರದ

- ಶಕುಂತಲಾ

02 May 2020, 09:44 am

ಸಮಯ

ಕಾಯುವಾಗ ಕಡೆಗಣಿಸಿ ಹೋದೆ,
ಆದರೀಗ ಅದೇ ಸಮಯ
ನಿನ್ನನ್ನೆ ಕಾಯಿಸಿ ಕಡೆಗಣಿಸುತ್ತಿದೆ..!

- Megha

01 May 2020, 08:36 pm

ಸುಂದರಿ

ಮೂಗುತಿ ಸುಂದರಿ,
ಮುಂಗುರಳ ಸರಿಸಿ,
ಕಾಡುತಿಹಳು ಪರಿವೆಯಿಲ್ಲದೆ
ಪ್ರೀತಿಯ ಲಹರಿ ಹರಿಸಿ...!

- Megha

01 May 2020, 06:53 pm

ಮೌನ ಮುರಿದು ಮಾತಾಡಿದೆ,

ಮೌನ ಮುರಿದು ಹೇಳುತ್ತಿರುವೆ
ಗೆಳೆಯ ಗೆಳತಿಯರೆ ನಾ ಇಂದು,
ಪ್ರೀತಿಯೊಂದೇ ಜೀವನವಲ್ಲ ಎಂದು
ಕಡೆಗಣಿಸಬೇಡಿ ಹೆತ್ತವರನ್ನು ಎಂದು,

ಹತ್ತಿ ಗೆಳೆಯ -ಗೆಳತಿಯರೆ
ನೀವು ಸಾಧನೆಯ ಶಿಖರ,
ಆಗಾ ಹುಡುಕಿಕೊಂಡು ಬರುವುದು
ಪ್ರೀತಿಯೇ ನಿಮ್ಮ ಹತ್ತಿರ,

ತಂದೆ -ತಾಯಿಯ ನೋಡಿಕೊಳ್ಳಿ ಚೆನ್ನಾಗಿ
ಅವರ ಆಶೀರ್ವಾದವಂದಿದ್ದರೆ ಸಾಕು,
ಬದುಕಿ ಬಾಳುವಿರಿ ಜೀವನದಲ್ಲಿ ನೀವು ಸುಖವಾಗಿ.

:-ವೀಣಾ ಲಿಂಗಣ್ಣ

- Veena

01 May 2020, 06:37 pm

ಭೂಮಿ

ಭೂಮಿ ತಾಯಿ ಹಸಿರು ಸೀರೆ ಉಟ್ಟಾಳ
ಕಲಕಲ ನಗುತ್ತಾಳ ಜೀವರಾಶಿಗಳಿಗೆ ಹೊಟೆ ನೆತ್ತಿ
ನೋಡುತಾಳ ಅವಳೇ ಸಕಲ ಜೀವರಾಶಿಗಳ
ಮಹಾತಾಯಿ.

- UMESH KHAJJIDONI

01 May 2020, 05:48 pm

ನೆನಪಿನ ಬುತ್ತಿ

ಬರೆದಿದ್ದೆ ಗೆಳತಿ ನಿನ್ನ ಹೆಸರಲಿ
ಕಥೆ, ಕವನ, ಕಾದಂಬರಿ,

ಆದರೆ ನನಗೆ ಉಳಿದಿರುವುದು ಈಗ
ಆ ನಿನ್ನ ನೆನಪುಗಳೇ ಬರೀ,

ನೆನಪಿದೆಯಾ ಗೆಳತಿ ನಿನಗೆ ಆ ಕ್ಷಣ
ನಾನು ಸ್ವಲ್ಪ ಮರೆಯಾದರೆ ಸಾಕು
ತಾಳುತ್ತಿದ್ದೆ ನೀ ಮೌನ,

ಎಷ್ಟು ಸುಂದರ ಆ ಹಳೆಯ ನೆನಪುಗಳು
ಮತ್ತೆ ಮತ್ತೆ ನಿನ್ನ ನೆನಪಾಗುವುದು ಗೆಳತಿ
ಓದುವಾಗ ನಿನಗಾಗಿ ನಾ ಬರೆದ ಕವಿತೆಗಳು.

:-ವೀಣಾ ಲಿಂಗಣ್ಣ

- Veena

30 Apr 2020, 11:47 pm