Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜೀವನ ಕ್ರಮ

ಹಸಿವೆ ನೀಗಿಸಲು
ಅನ್ನವು ಬೇಕಲ್ಲ
ಅನ್ನವ ಪಡೆಯಲು
ಕೆಲಸವಿರಲೇ ಬೇಕಲ್ಲ

ಮಾಲೀಕ ಕಾರ್ಮಿಕ
ಇಬ್ಬರೂ ಒಂದೇ
ಕೆಲಸ ಮಾಡದೆ ಅವಂಗೆ
ಬದುಕೇ ಇಲ್ಲ.

ಮಾಲೀಕ ತಾ ಮಿಗಿಲು
ಸೇವಕ ತಾ ಕೀಳು
ಕಸುಬಿಗೆ ಅದು
ಎಂದೂ ಗೊತ್ತಿಲ್ಲ.

ಮಾಡುವ ಕಾರ್ಯದಿ
ಶ್ರದ್ಧೆ ನಿಷ್ಠೆ ತೋರಲು
ಗೌರವ ಸನ್ಮಾನ
ಒಲಿದು ಬರುವುದು ಸುಳ್ಳಲ್ಲ.

ನಿನಗೊಲಿದ ಕಾಯಕ
ನಿನಗದು ಶ್ರೇಷ್ಠ
ಕೂಲಿಯೊ ನಾಲಿಯೊ
ಅವಮಾನ ನಿನಗಿಲ್ಲ

ಅವರಿವರ ಎಣಿಸದೆ
ನಿನ್ನ ಕಾಯಕ ಪೂಜಿಸಲು
ನಿನ್ನಂಥ ಕಾರ್ಮಿಕ
ಬೇರೆಲ್ಲೂ ಸಿಕ್ಕಲ್ಲ..

ಕಾಯವು ಚಿಕ್ಕದು
ಕಾಯವು ದೊಡ್ಡದು
ಕಾಯಕದಲ್ಲಿ ಎರಡಿಲ್ಲ
ಅರಿತರೆ ನಿನಗೆ ಸೋಲಿಲ್ಲ.

- Ravinayaknayak

06 May 2020, 09:18 pm

.....ಕೊರೋನ.....

ಎಲ್ಲೆಲ್ಲಾವಿರುವೆ ನಾ ಕಾಣೆನು ನಿನ್ನ
ಹುಡುಕೋಣವೆಂದರೆ ನೀನೆಷ್ಟು ಸಣ್ಣ
ಸಾಕಾಯ್ತು ನನಗೆ ಶುಚಿಗೂಳಿಸಿ ನನ್ನ!

ನೀ ಬಂದ ದಾರಿ ಅದೆಷ್ಟು ಅಸ್ಪಷ್ಟ
ಪಡುತಿಹರು ಇಲ್ಲಿ ಜನರೆಲ್ಲಾ... ಸಂಕಷ್ಟ
ಎಣಿಸಲಾಗಲೇ ಇಲ್ಲ ನಮಗಾದ ನಷ್ಟ!

ಪ್ರವಾಸಿಯು ಬಂದಾಗ ಪ್ರವೇಶಿಸಲಿಲ್ಲ ಮನೆಯ,
ಮಾಡಿದರು ತಪಾಸಣೆಯೂ.. ಅವನ ಹಣೆಯ
ಆಗಮನವಾಗದವನ ಕಂಡು ನಿರ್ಗಮಿಸಿದನಾ ಗೆಳೆಯ!

ಆರ್ಥಿಕ ಸಂಕಷ್ಟದಿ ಆದರು ನೂರಾರು ದಿವಾಳಿ
ಕಾಯುತ್ತಲೇ ಇರುವೆವು ದವಾ ಒಂದ ಬರಲಿ
ಪ್ರಾರ್ಥಿಸುವೆವು ಬರಬೇಡ ಮತ್ತೇಂದೂ... ಮರಳಿ!

ನಿನ್ನ ನಾಮ ಕೇಳಿ,ಮಾಡಿದರು ದೇವನ ಸ್ಮರಣ
ನಿನ್ನ ಮುಟ್ಟಿದವರು ಆದರೆಷ್ಟು ಮರಣ
ಇಟ್ಟರೊಂದು ನಿಂಗೆ ಹೆಸರ,ಅದೇನೋ.. *ಕೊರೋನ*!!

...‌✍

- ಅಬುರಯ್ಯಾನ್,ಹಂಡೇಲು

06 May 2020, 07:41 pm

ಚಿಗುರು

ಕನಸು ಒಡೆದಿದೆ ಚಿಗುರು
ಮನಸ್ಸೆಲ್ಲ ಮೊಂಪರು
ನಿನ್ನ ಪಡೆಯುವ ಪೊಗರು
ನಿನ್ನಲ್ಲಿ ಆದರೆ ಪ್ರೀತಿ ಸುರು
ನನ್ನ ಆರ್ಭಟ ನೂರಾರು
ಎಷ್ಟೆ ಬರಲಿ ಜನರು
ನೀನು ಎದರದಿರು
ಬರುವಿಕೆಗಾಗಿ ಕಾಯುತ್ತಿರು
ಮುಗುಳು ನಗೆಯಲ್ಲೆ ನೀನಿರು
ಒಂದಾಗೊಣ ನಾವಿಬ್ಬರೂ
ನನ್ನ ಒಲುಮೆಯ ಚಿಗುರು

- Shivakumara S

06 May 2020, 07:34 pm

ಪಿಸುಮಾತು

ಕವನಗಳ ಬರೆಯುವುದಕ್ಕೆ ಉತ್ತಮ ವೇದಿಕೆ ಪಿಸುಮಾತು,
ಕವನಗಳೇ ನನ್ನ ಸ್ವತ್ತು,
ಬರೆದಿರುವೆ ಕವನಗಳ ಅದೇಷ್ಟೋ ಆಸೆಗಳ ಹೊತ್ತು,
ನನ್ನ ಕಲ್ಪನೆಗಳಿಗೆ ಬರಹ ರೂಪ ಕೊಟ್ಟು,

ಮುಟ್ಟಲಿ ನನ್ನ ಕವನಗಳು
ಜನರ ಮನಸು,
ಅದೇ ನನ್ನ ಕನಸು.

:- ವೀಣಾ ಲಿಂಗಣ್ಣ

- Veena

06 May 2020, 06:59 pm

ಮನಸ್ಸು!

ನಾ ಕಲ್ಲಾಗುವನೆಂದಾಗ,ಕಲ್ಲು ನಾನಾಗುವೆನೆಂದಿತು,
ಕಲ್ಲೇ ನಾನಾಗುವೆನೆಂದಾಗ
ನಾನೇಕೆ ಕಲ್ಲಾಗಬೇಕೆಂದಿತು
ಮನಸ್ಸು!

- mahi

06 May 2020, 03:55 pm

ಒಲುಮೆ ಸಿರಿಯ ಪಡೆವೆ

ನರ ನಾಡಿಯಲ್ಲಿ
ಸ್ವರ ವೀಣೆ ಮಿಡಿದು
ಹಾಡಿಹುದು ಪ್ರೇಮ ಶೃತಿಯ!!
ನಿನ್ನ ಅಂದ ಚೆಂದ
ನನ್ನ ಕಣ್ಣ ಒಳಗೆ
ಆಗಿಹೆನು ಮಂದ ಮತಿಯು!!

ನನ್ನ ಹೃದಯದಲ್ಲಿ
ರವಿ ಉದಯವಾಗಿ
ದಿನ ಮಣಿಯ ಹೊತ್ತು ತಂದ!!
ನಿನ್ನ ಬಿಂಬ ಕಂಡು
ಬೆಳದಿಂಗಳಲ್ಲಿ
ಶಶಿ ಮರೆಗೆ ಸರಿದು ನಿಂದ!!

ಕನಸೆಂಬ ಗಡಿಗೆ
ನೀ ಅದರ ಒಳಗೆ
ನವ ಭಾವ ತುಂಬುತಿರುವೆ!!
ನನ್ನ ಬಾಳಿನಲ್ಲಿ
ನೀ ಬರಲು ನಲ್ಲೆ
ನಾ ಒಲಮೆ ಸಿರಿಯ ಪಡೆವೆ!!

- ಪಿ.ಜಿ.ಜ್ಯೋತಿ

06 May 2020, 03:51 pm

ಯಾರಿವಳು?!

ಯಾರಿವಳು?ಎಂದೆನಿಸಿಕೋಳ್ಳಬೇಡ
ಯಾರಿವಳು! ಎಂದೆನಿಸಿಕೋ.
ಯಾರಿವಳು!ಎಂದಾಗ
ನೀ ನಡೆದ ದಾರಿ ಹೇಳಬೇಕು.
ಬಾ ನನ್ನ ದಾರಿಯಲ್ಲಿ,ನಿನ್ನ ನೋಡಿ ಬೇರೆಯವರು ಹೇಳುವಂತೆ ಮಾಡುವೆನು ಯಾರಿವಳು! ಎಂದು.

- mahi

06 May 2020, 03:45 pm

ಜೀವದ ಗೆ‌ಳೆಯ

ಹುಟ್ಟಿನ ಗೆ‌ಳೆಯನಿವನು,
ಜೀವನದ ಕೋನೆಗೆ ಬರುವನು,
ದೇವರಿಗೂ ಬಿಡದವನು,
ಮತ್ತೆ ಹುಟ್ಟಿನ ಜೋತೆಗೆ ಹುಟ್ಟುವನು.
ಅವನೇ ಸಾವು ಎಂಬ ಹೆಸರುಳ್ಳವನು,
ನಮ್ಮನ್ನು ಬಿಗಿದಪ್ಪಿ ಬರಮಾಡಿಕೋಳ್ಳುವನು.

- mahi

06 May 2020, 01:15 pm

ಕಂಬನಿ

ಮನದಲ್ಲಿನ‌ ಹೇಳ ತೀರದ ದುಗುಡುಗಳೆಲ್ಲ‌ ಇಂದೆಕೊ ಮಾಯವಾಗಿದೆ... ಸಂತೋಷ ಮನೆ ಮಾಡಿದೆ.. ಈ ಸಂತೋಷ ಇನ್ನೆಷ್ಟು ದಿನ.. ಹಿಂದೆ ಆದ ನೋವುಗಳು ಇಂದು ಮಲಗಿರಬಹುದು. ಅವು‌ ಎದ್ದಾಗ ಮತ್ತದೆ ಹಳೆ ನೆನಪಿನ ಚಿತೆ ಆರಿಸಲು ಕಂಬನಿಯನ್ನು ಕರೆಯಲೇಬೇಕು....
....✍️.ರಾಮ್.

- ರಾಮ್

06 May 2020, 12:29 pm

ಮಾಸದ ನೋವು

ನನ್ನ ಬದುಕು ಒಂದು ಸುಂದರ ಚರಿತೆ
ನಾನೊಂದು ಅದ್ಭುತ ಪಾಠ ಕಲಿತೆ

ನಗು, ನಲಿವಿಗೆ ಇರಲ್ಲಿಲ್ಲ ಕೊರತೆ
ಆಗು ,ಹೋಗುಗಳಿಗೆ ಇರಲ್ಲಿಲ್ಲ ಚಿಂತೆ

ಇದರ ನಡುವೆ ನಡೆದ ಕತೆ
ಬದುಕಿಗೆ ನೀಡಲು ಆದ್ಯತೆ
ಬಂದಳು ಒಬ್ಬಳು ಪ್ರಾಣ ಕಾಂತೆ
ನಡೆಸಿ ಮನದಲ್ಲಿ ಮಾತುಕತೆ
ಆಗುವೆನೆಂದು ನನ್ನ ಜೊತೆ
ಮೂಡಿಸಿ ಪ್ರೀತಿಯ ಸಕರತೆ
ಹೆಚ್ಚಿಸಿ ಸಂತಸದ ಸೌಮ್ಯತೆ
ಹಾಡಿ ಅನುರಾಗದ ಗೀತೆ
ಹೆಚ್ಚಿಸಿ ಪ್ರೀತಿಯ ಘನತೆ
ಕಟ್ಟಿ ಕನಸಿನ ಕತೆ
ಆಡಿ ಮರೆಯಲಾಗದ ಮಾತುಕತೆ
ಹೆಚ್ಚಿಸಿ ಬಾಳಿನ ಕಾತುರತೆ
ಮೀರಿಸಿ ಪ್ರೀತಿಯ ಅಣತೆ
ಹೇಳಿ ನೆಪಮಾತ್ರದ ಕತೆ
ನಿನ್ನ ಬಿಟ್ಟಿಲಾರದಂತೆ
ಮೂಡಿಸಿ ನನಗೆ ಚಿಂತೆ
ನನ್ನಲ್ಲಿ ನನಗೆ ಪ್ರಜ್ಞೆ ಇಲ್ಲದಂತೆ
ನೀನು ಮಾಡಿದೆ ನನ್ನ ಹುಚ್ಚನಂತೆ
ಬಿಟ್ಟು ಹೋದೆಯಲ್ಲ ಕಾಂತೆ
ಇಲ್ಲ ನೀನು ಇಂದು ನನ್ನ ಜೊತೆ

ಸ್ವಲ್ಪದಿನದನಂತರ ನಾ ನಿನ್ನ ಮರೆತೆ
ಬದುಕಿನ ಪುಟದಲ್ಲಿ ನಿನ್ನೊಂದು ಮರೆಯದ ಕವಿತೆ

- Shivakumara S

06 May 2020, 12:12 pm