ನಿನ್ನ ಕಣ್ಗಳ ಕಾಂತಿಯಲ್ಲಿ
ನನ್ನ ಹೃದಯ ಬೆಳಗುತ್ತಿದೆ
ಬೆಳಗಿನ ಈ ದೃಶ್ಯಕಾವ್ಯ ನನ್ನನ್ನು
ತನ್ನ ತೆಕ್ಕೆಯಲ್ಲಿ ಸೆಳೆಯುತ್ತಿದೆ
ನಿನ್ನ ಹೆಜ್ಜೆಯೂ ಗೆಜ್ಜೆಯ ನಾದಕ್ಕೆ
ಲಜ್ಜೆ ಕಳೆದು ಮುಂಜಾವು ಮುಗುಳ್ನಗೆ
ಬೀರುತ್ತಿದೆ
ಮಟಮಟ ಮಧ್ಯಾಹ್ನ
ಚಟಪಟ ವೆಂದು ಸುಡುತಲಿತ್ತು ಬಿಸಿಲು
ಬಿಸಿಲಿನ ಧಗೆ ತಾಳಲಾರದೇ
ಮತ್ತೆ ಮತ್ತೆ ಸುರಿಯುತಲಿತ್ತು ಬೆವರು
ಮಟಮಟ ಮಧ್ಯಾಹ್ನ
ಅದೆಲ್ಲಿಂದಲೋ ಓಡೋಡಿ ಬಂತು
ಮೋಡ ಕ್ಷಣದೊಳಗೆ
ಚಿಟಪಟ ವೆಂದು ಸುರಿಯುತ್ತಲಿತ್ತು
ಮಳೆ
ನಿನ್ನಯ ಬೆಡಗಿಗೆ
ಮನವು ಕಳೆದು ಹೋಯಿತು ಮೆಲ್ಲಗೆ
ನಿನ್ನ ನಡಿಗೆಗೆ
ಮನದಲ್ಲಿ ಸುರುವಾಯ್ತು ಗುಡುಗೆ
ನಿನ್ನ ಚೆಲುವಿಗೆ
ಮರೆತು ಹೋಯ್ತು ನನ್ನ ಮೆರುಗೆ
ನಿನ್ನ ನುಡಿಗೆ
ಸ್ವರವೆ ಇಲ್ಲ ನನ್ನ ಮಾತಿಗೆ
ನಿನ್ನ ಕಾಣದ ಗಳಿಗೆ
ನಿಷ್ಕ್ರಿಯವಾದಂತೆ ಮೆದುಳಿಗೆ
ನೀನು ಇಲ್ಲದೆ ನನ್ನ ಜೊತೆಗೆ
ನಿಶಕ್ತಿ ಆದಂತೆ ನನಗೆ
ಹೇಗೊ ಇದ್ದೆ ನನ್ನ ಪಾಡಿಗೆ
ನೋವುಂಟು ಮಾಡಿದೆ ನನ್ನ ಮನಸ್ಸಿಗೆ
ನಿಸರ್ಗ ಸೃಷ್ಟಿ ಮಾಡಿದ ದೇವರು. ಉಳಿಸಲು ಬಿಡುತ್ತೀಲ್ಲ ನಮ್ಮ ಈ ಮಾನವರು. ಗಿಡ ಕಡಿದು ಆಗುತ್ತಿರುವರು ಅಸುರರು. ಭೂಮಿ ತಾಯಿಯನ್ನು ಸಿಳುತ್ತಿರುವವರು ಗಿಡ ನೆಟ್ಟು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ನಮ್ಮ ನಾಡಿನ ಯುವಕರು
ದುಃಖವು ಅವರಿಸಿದಂತೆ ಮೌನವು ತಬ್ಬಿಬಾಗಿದೆ ನೆನೆಪಿನ ಲೋಕದಲ್ಲಿ ಒಬ್ಬಂಟಿಗನಾಗಿ ನಲುಗಲು ಆಗುತ್ತಿಲ್ಲ ಮರಳಿಬಾರದಿರು ನೆನೆಪೆ ಮರಣ ಹೊಂದುವ ತನಕ ...ಮರೆಯಲಾಗದ ಅನುಭಂದವಿದು ಕಂದನ ವಯಸ್ಸಿನಲ್ಲೆ ತಂದೆಯ ಕಳೆದುಕೊಂಡೆ.. ತಂದೆಯಂತೆ ಸಾಕಿದ ತಾತಾ ನಿನ್ನ ಹೇಗೆ ಮರೆಯಲ್ಲಿ ನಿನ್ನ ಒಲುಮೆಯ ತಾತಾ*