Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಾನೋಬನೆ ಪ್ರೇಮಿ...

ನಿನ್ನ ಹೃದಯದ ಅಳದಲಿ ಇರುವವನು ನಾನೋಬನೆ ಪ್ರೇಮಿ ,
ನೀ ನನ್ನ ಬೇಡ ಎಂದರೆ ನನ್ನ ಹೃದಯ ಸಾಗರದಲ್ಲಿ ಹೇಳುವುದು ಸುನಾಮಿ ...!

ಪ್ರೀತಿಯಾಂಬ ಬರದ ದಾಹದ ಮೇರೆಗೆ ,
ಪ್ರೀತಿಯಾಗಿದೆ ನೀರು ತಂದ ನೀರೆಯ ಪಾಲಿಗೆ ...!

ಒಪ್ಪಿದೆ ನಿನ್ನ , ನಾ ಬದಲಾಗುವ ಮುನ್ನ ,
ಕಾಯಿಸದೆ ನೀನು ಸ್ವೀಕರಿಸು ನನ್ನ ...!

- NaveenkumarK

08 Jun 2020, 02:33 pm

ಸ್ಮರಣೆ

ಬಾನಂಗಳದಿ ಹಾರಾಡುತ್ತಿರುವ ಖಗಗಳೇ
ಭುವಿಯಿಂದ ನೀಲಾಕಾಶದೆಡೆಗೆ ನಿಮ್ಮ ಪಯಣ
ಈ ಪಯಣದಲ್ಲಿ ನಿಮಗೆ ಸಿಕ್ಕ ಗೆಳೆಯರೂಡಣೆ
ಬನ್ನಿ ನಾ ಪರಿಚಯಿಸುವೆ ನನ್ನ ಕವನಾಲೋಕದ ಜಾಣ ಜಾಣೆಯರನು.....

ಜಾಣ್ಮೆಯ ಮೆರೆದ ಕನ್ನಡ ಸಾಹಿತಿಗಳು
ಹೆಮ್ಮೆಯ ನೀಡಿದ ವಿಜ್ಞಾನಿಗಳು ಮುದದೂಂದಿಗೆ ನೆಮ್ಮದಿ ನೀಡುವ ಕವನಗಳನ್ನು ಬರೆದ ಕವಿಗಳಿಗೆ ನಿಮಗೀದೊ ಹೆಮ್ಮೆಯ ನಮನ...



ಅಕ್ಷರ ಕಲಿಸಿದ ನನ್ನಮ್ಮ ಅದನು ಅನುಕರಿಸಿದ ಕಂದಮ್ಮ ಜೀವನದ ದಾರಿಗೆ ಗುರುಗಳು ಬೇಕಮ್ಮ
ಅವರೇ ನಮ್ಮ ನೆಚ್ಚಿನ ಶಿಕ್ಷಕರಮ್ಮ
ಶಿಕ್ಷಣವೇ ಕಲಿಸುವುದು ಬದುಕುವ ಲಕ್ಷಣ....

- RoopaGowtham

08 Jun 2020, 08:10 am

ದೇವರೇ.... ನಂಬಲೆ ನಿನ್ನ

ನೂರು ನೋವ ನಡುವೆ
ಒಂದು ನಗುವ ಇಡುವೆ
ಒಂದೇ ನೋವ ಕೊಟ್ಟು
ಬದುಕ ನಗುವ ಅಳಿಸುವೆ

ನೋವ ನಲಿವ ನಡುವೆ
ನಮ್ಮ ದೇನಿದೆ
ನಿನ್ನ ಕರುಣೆ, ಕಲಾಪಗಳಿಗೆ
ನಾವೇ ದಾಳಗಳಲ್ಲವೆ...

- dvja

07 Jun 2020, 09:36 pm

ನನ್ನ ತಮ್ಮ

ಒಡಲ ಹಂಚಿಕೊಂಡ ನಿನಗೆ ಉಸಿರಲ್ಲಿ ಪಾಲು ಕೊಟ್ಟಾಯ್ತು ನಿನ್ನ ಅಮ್ಮನ ಮಡಿಲಲ್ಲಿ ಕಂಡಾಗಲೇ.

ನೋವನಂಚಿಕೊಳ್ಳುವೆ ನಲಿವಲ್ಲಿ ನಾನು ನಗುವಾಗುವೆ ಮನದಲ್ಲಿ ಇನ್ನೂ ಪುಟ್ಟ ಮಗುವು ನೀನು ನನಗಿಂತ ಎತ್ತರ ಬೆಳೆದರೂನು.

ನಿನ್ನಾಸೆ ಕನಸೆಲ್ಲಾ ನನಸಾಗಲಿ,
ನೀ ಸಾಗುವ ಹಾದಿಯಲ್ಲಿ ಕಲ್ಲು ಮುಳ್ಳು ಪ್ರೀತಿಯ ಹೂವಾಗಲಿ.

ನೂರು ಜನುಮ ಕಳೆದರೂನು
ನನ್ನ ಮೊದಲ ಗೆಳೆಯ ನೀನು,
ತಮ್ಮನಾದರೇನೂ ಅಪ್ಪನ
ಇನ್ನೊಂದು ರೂಪ ನೀನು.

- ಚುಕ್ಕಿ

07 Jun 2020, 08:29 pm

ಒಂಟಿತನ

ದೇವರ ಕನಸು ಸುಂದರ
ಧರಣಿ ನಿನ್ನ ಮಂದಿರ
ಕಣ್ಣಿಗೆ ಚೆಲುವಿನ ಚಿತ್ತಾರ
ಸಾಧ್ಯವೇ ಈ ಸೃಸ್ಟಿ ರಚಿಸಲು ಯಾರ

ಸುಖ ದುಃಖಗಳ ನಡುವೆ ಜೀವನ ಒಂದು
ಕಣ್ಣು ಸವಿಯದ ಕನಸು ನೂರೊಂದು
ಬಾಳಲಿ ನೋಡಿದೆ ವಿಚಿತ್ರ ಒಂದೊಂದು

ದುಃಖದ ಬಾಳಿಗೆ ಸುಖದ ಕನಸು
ಕನಸು ನನಸಾದರೆ ಬಾಳು ಸೊಗಸು

ಒಂಟಿ ಬಾಳಿಗೆ ಬೆಕೊಂದು ಆಸರೆ
ಕನಸು ನನಸು ಸೇರಿದರೆ
ಬರಡು ಜೀವನದಲಿ ಚಿಲುಮೆ ಪುಟಿದರೆ
ಸಾರ್ಥಕತೆ ಈ ಜನ್ಮದಾರೆ


ವಿನೋದ್ ಡಿಸೋಜ

- AAA little star

07 Jun 2020, 02:25 pm

ಜೀವನ

ಹುಟ್ಟು ಸಾವಿನ ನಡುವೆ
ಮೂರು ದಿನದ ಬಾಳ್ವೆ
ಸತ್ಯ ಸುಳ್ಳು ಲೆಕ್ಕದ ನಡುವೆ
ಗೆಲ್ಲುವುದು ಯಾವಾಗಲು ಸತ್ಯವೇ

ಜೀವನಕೆ ಮಾಡುವರು ಹೋರಾಟ
ನನ್ನದು ನಿನ್ನದು ಎನ್ನುವ ಹೊಡೆದಾಟ
ಯಾಕೆ ಇಷ್ಟೊಂದು ಪರದಾಟ
ಯಾರಿಗೂ ಇಲ್ಲ ತಾಳ್ಮೆಯ ಪಾಠ

ಹುಟ್ಟಿದ ನಂತರ ಬರುವುದು ಸು:ಖದು:ಖಗಳು
ಸುಳ್ಳಿನ ಹಾದಿ ಯಾವಾಗಲು ಗೋಳು
ಸತ್ಯದ ಬದುಕಿಗೆ ಬರದು ಸೋಲು
ಇದನ್ನು ಅರಿತು ಯಾವಾಗಲು ಬಾಳು


ವಿನೋದ್ ಡಿಸೋಜ

- AAA little star

07 Jun 2020, 01:45 pm

ಪ್ರೀತಿ

ರಂಗೇರಿದ ಬಾನಂಗಳದಲಿ ಚಿಲಿಪಿಲಿ
ಹಾರುವ ಹೂ ಗಳ ಇಂಚರ...
ತಂಪಾದ ಬೀಸುವ ಗಾಳಿಗೆ
ಇಲ್ಲ ಪ್ರೀತಿಗೆ ಅಂತರ...

ಚುಂಬಿತ ಧರಣಿಗೆ
ಮಂಜು ಮುತ್ತಿನ ಚಿತ್ತಾರ...
ವೃಕ್ಷಗಳ ನಡುವಿನಲಿ ಕಿರಣಗಳಿಗೆ
ಪ್ರೇಮಿಗಳ ಮೊಗದಲಿ ಆತುರ...

ಜುಳುಜುಳು ಜಲದ ಸಂಗೀತಕೆ
ನೃತ್ಯ ಮಾಡುವ ಜಲಚರ...
ರಂಗುರಂಗಿನ ಹೂ ಗಳಿಗೆ
ಈ ಪ್ರೀತಿ ನಿರಂತರ ...

ವಿನೋದ್ ಡಿಸೋಜ

- AAA little star

07 Jun 2020, 01:04 pm

ಗೆಳತಿ...

ಸೋತೆ ನ ಅವಳ ಗೆಳೆತನಕೆ
ಮನಸ್ಸು ಮನಸಿನ ಒಡೆತನಕೆ
ನಯನ ನಯನಗಳ ಮಿಲನಕೆ
ಹೃದಯ ಹೃದಯಗಳ ಅಂತರಾಳಕೆ...

ಗೆಳತಿ ಅಂತ ಕರೆಯಲೆ
ಸಂಗಾತಿ ಅಂತ ತಿಳಿಯಲೇ
ಪ್ರೀತಿಗೆ ಹಾತೊರೆಯಲೆ
ಸ್ನೇಹಕೆ ಕೈ ಜೋಡಿಸಲೇ...

ಕೈ ಹಿಡಿದು ಸಾಗೋಣ ಜೊತೆಜೊತೆಯಾಗಿ
ಮನಸಿನ ಕನಸಿಗೆ ಸಾಕ್ಷಿಯಾಗಿ
ಹೃದಯದ ಪ್ರೀತಿಗೆ ಒಡೆತಿಯಾಗಿ
ಏಳು ಜನ್ಮಕು ಬಾ... ಗೆಳತಿಯಾಗಿ..

ವಿನೋದ್ ಡಿಸೋಜ...

- AAA little star

07 Jun 2020, 12:26 pm

ಈ ಹೃದಯದಿ ನಿನ್ನ ಹೆಸರಿದೆ

ಈ ಹೃದಯದಿ ನಿನ್ನ ಹೆಸರಿದೆ-೮

ಅವಳ್ಯಾರು?
ಇಲ್ಲಿ ಇರುವುದಾದರೂ ಯಾಕೆ?
ಅದೇನು ವಿಧಿಯ ನಿರ್ಧಾರ?
ಮತಷ್ಟು ಅವನ ಪ್ರೀತಿಗೆ ಇದು ಪರೀಕ್ಷೆ ಇರಬಹುದು

ಕೀರ್ತಿ ಬರುತ್ತಿದ್ದಂತೆ
ಎದುರಲ್ಲೇ ಓಡಿ ಬಂದಳು ಆ ಪುಟ್ಟ ಪೋರಿ ಸ್ಪಂದನಾ. ಒಂದೊಮ್ಮೆ ಹಿಂದೆ ನೋಡಿ ಮತ್ತೊಮ್ಮೆ ಮುಂದೆ ನೋಡುತ್ತಾ ಓಡಿ ಬರುತ್ತಿದವಳ, ಹಿಡಿಯಲು ತನ್ನ ಮಂಡಿ ನೆಲಕ್ಕೆ ತಾಗಿಸಿ ಕುಳಿತ್ತಾ. ಎರಡು ಕೈಗಳಿಂದ ಬಾಚಿ ತಬ್ಬಿದ ಹಣೆಗೊಂದು ಮುತ್ತಿಟ್ಟು  ಮೇಲೆ ಎದ್ದು ನಿಂತ.

"ಮಾಮ ಬಿಡಿ ಬಿಡಿ"

ಎಂದು ಮುದ್ದು ನುಡಿಯಲ್ಲಿ ಕೆಳಗಿಳಿಸಲು ಕೇಳಿದ್ದಳು. ಬಿಡದೇ ಅವಳ ಚಬ್ಬೀ ಕೆನ್ನೆಗೆ ಮುತ್ತಿಟ್ಟ. ತನ್ನ ಮುದ್ದು ದುಂಡು ಪುಟ್ಟನೆಯ ಕೈಗಳಿಂದ ತನ್ನ ಕೆನ್ನೆ ಸವರಿ ಕೊಂಡು. ಅವನ ಹಣೆಗೆ ಮುತ್ತ ನೀಡಿದ್ದಳು. ಸೌರಭ್ ತನ್ನ ಕೆನ್ನೆ ತೋರಿಸಿದ ಅವುಗಳಿಗೂ ಸಿಹಿ ಮುತ್ತುಗಳು ದೊರಕಿತ್ತು.

ಶ್ರಾವ್ಯಳ ಆಗಮನ. ಸ್ಪಂದನಾಳನ್ನ ಅರಸುತ್ತಾ ಬಂದಳು. ಅವಳ ಮಾತು ಕೇಳಿ, ಬೇರೆ ಅರಿವು ಇಲ್ಲದೆ ಹತ್ತಿರ ಬಂದು ಅವಳ ಕಾಲು ಹಿಡಿದು ಬೇಡ ಎಂದು ಹಠ ಮಾಡಿದ್ದರೂ, ಬಿಡದೇ ಪುಟ್ಟ ಕಾಲುಗಳಿಗೆ ಶೂಸ್ ಹಾಕಿದಳು.

" ಕೃಷ್ಣ,,,, ಎಷ್ಟು ಹಠ ನಿಂದು ಶೂ ಬಿಚ್ಚಿದ್ರೆ ಎರಡು ಕೊಡ್ತೀನಿ"
ಎಂದಳು ನಗುತ್ತಾ.

ಶ್ರಾವ್ಯಳಿಗೆ ಸೌರಭ್ ಗಮನಕ್ಕೆ ಬಾರಲೇ ಇಲ್ಲ. ಸ್ಪಂದನಾಳನ್ನ ಮುದ್ದು ಮಾಡುತ್ತಾ ನಿಂತಳು.
ಆಗಲೂ ಗಮನಿಸದೆ.

ಕ್ಷಣಕ್ಕೆ ಸೌರಭನಿಗೆ ಯಾವುದೋ ಪುಟ್ಟ ಕೋಗಿಲೆ ಮುದ್ದು ಮಾಡುತ್ತಿರುವಂತೆ ಕಂಡಿತು. ಶ್ರಾವ್ಯ ಸ್ವಭಾವ , ಹಠದಲ್ಲಿ ಮಕ್ಕಳಂತೆ ಹೇಗೋ ಅವಳ ಧ್ವನಿ ಕೂಡ ಪುಟ್ಟ ಮಕ್ಕಳಂತೆ. ಒಂದೊಂದು ಪದಕ್ಕೂ ಪೂರ್ಣವಿರಾಮ ನೀಡಿ ಮಾತನಾಡಿದ್ದಾರೆ ಕನ್ನಡ ಪದಕ್ಕೆ ಒಂದು ಅಲಾಂಕರ ಅನಿಸುತ್ತದೆ.

ಇಳಿಸೂರ್ಯನ ಜೊತೆಗೆ
ಸಂಜೆ ಬಾನ ದಿಕ್ಕಲ್ಲೇ ನೋಟ
ಸಾಗರದ ನಡುವೆ ಕೂತು
ಅಲೆಗಳು ಹೇಳೋ ಸಂಗೀತಾ


ಕೇಳಿ ಮನ ಹೇಗೆ ಇರುತ್ತದೆ, ಒಮ್ಮೆ ಕಣ್ಣು ಮುಚ್ಚಿ ಈ ಕ್ಷಣ ಅಲ್ಲಿ ನಾವಿರುವೇವು ಎಂದು ಭಾವಿಸಿ ಆ ಅಲೆಯ ಸಂಗೀತಾ ಆಲಿಸುತ್ತಿರುವೇವು.
ಹೇಗನಿಸಿತ್ತು?
ಇಲ್ಲಿ ಮೂಡಿದ ಭಾವವೇ
ಶ್ರಾವ್ಯಳ ಧ್ವನಿಯಲ್ಲಿ ಅಡಗಿದೆ.


ಮುಂದುವರೆಯುವುದು,,,,,,,,
- ಹಂಸ ಕುಲಾಲ್ ✍️✍️✍️

- ಹಂಸವೇಣಿ

07 Jun 2020, 12:19 pm

ಮೋಸದ ಪ್ರೀತಿ

ತುಂಬ ನೋವಲಿದ್ದ ಮನಕ್ಕೆ
ನಗುವಾಗಿ ಬಂದೆ ನೀನು.
ಕಾಣದ ಪ್ರೀತಿಯ ನೀ
ಕಣ್ಮುಂದೆ ತೋರಿಸಿದವಳು ನೀ.
ಬೇಜಾರಲ್ಲಿ ಕೂತಾಗೆಲ್ಲಾ
ನನ್ನ ಮೊಗದಲ್ಲಿ ನಗುವ ತರಿಸಿದವಳು ನೀ.
ಕಷ್ಟವೆಂದಾಗಲೆಲ್ಲಾ ನನ್ನ
ಕಷ್ಟಕ್ಕೆ ನಾ ಸ್ಪಂದಿಸುವೆ ಎಂದವಳು ನೀ.
ಅಂದು ದುಖ:ದಲ್ಲಿದ್ದಾಗಲೆಲ್ಲಾ ಸಮಾಧಾನಿಸಿದವಳು ನೀ.
ಇಂದು ನಿನ್ನ ನೆನಪಲ್ಲಿ ನಾ
ಕಣ್ಣೀರ ಸುರಿಸುತ್ತಿದ್ದರೂ
ಒಂಟಿಯಾಗಿ ನರಳುತ್ತಿದ್ದರೂ
ನೀ ಏಕೆ ಬರುತ್ತಿಲ್ಲಾ ನನ್ನ ಸನಿಹ.
ನಾ ಏಕೆ ಬೇಡವಾದೆ ನಿನಗೆ.
ಪ್ರತಿ ಬಾರಿ ಮೋಸವಾಗುವುದು
ಏಕೆ ನನಗೆ.
ಈ ಪ್ರೀತಿ ಮಾಯೆಯೋ
ಇಲ್ಲಾ ಪ್ರೀತಿಯ ನಾಟಕ ಮಾಡುವವರು ಮಾಯಯೋ
ತಿಳಿಯದಾಗಿದೆ ಈ ಮನಕೆ.

✍️ಕನಸುಗಾರ.

- varu

07 Jun 2020, 08:03 am