Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ ಅವ್ವ

ತನ್ನ ತಂದೆ =ತಾಯಿಗೆ ಮಗಳಾದವಳು
ಗಂಡನಿಗೆ ಹೆಂಡತಿಯಾಗಿ ಬಂದವಳು
ಅವಳು ಮಗ =ಮಳಿಗೆ ಜನ್ಮ ನೀಡಿದವಳು
ಅತ್ತೆಗೆ ಮಗಳಾದವಳು
ಮಾವನಿಗೆ ಸೊಸೆಯಾದವಳು
ಮಕ್ಕಳಿಗೆ ಪ್ರಪಂಚವಾದಗಳು
ಪ್ರೀತಿಯಲ್ಲಿ ಸೌಕಾತಿಯಾದವಳು
ಬಡತನದಲ್ಲಿಯೇ ಹೆಚ್ಚು ಪ್ರೀತಿ ತೋರಿಸಿದಳು
ತನ್ನ ನೋವು ಗಳಿಲ್ಲ ಮುಚ್ಚಿಟ್ಟ ಶ್ರೀಮಂತೇ
ತನಗಾಗಿ ಏನನ್ನು ಬಯಸದವಳು
ಮನೆಯಲ್ಲಿ ತನ್ನ ಮುಖ್ಯ ಪಾತ್ರ ವಹಿಸಿದವಳು
ತನ್ನ ಆಸೆ ಬಯಕೆಗಳನ್ನು ಬದಿಗಿಟ್ಟವಳು
ಹಗಲು ರಾತ್ರಿ ಎನ್ನದೆ ಮನೆಯಲ್ಲಿಯೇ ದುಡಿದವಳು
ತನ್ನ ಜೀವನವನ್ನು ಬಿಟ್ಟು ತನ್ನವರಿಗಾಗಿ ಮುಡುಪಾಗಿಟ್ಟವಳು
ಅವಳೇ ನನ್ನವ್ವ

- Rakesh A

01 Aug 2025, 02:36 pm

⛵ ಜೀವನ ನಾವೆ ⛵

ಹಾದು ಹೋದ ಕಣ್ಣುಗಳು
ಆಡಿ ಹೋದ ಮೌನ ಮಾತು
ಕಿವಿಗಳು ಶ್ರವಿಸದಿರಬಹುದು
ಭಾವನೆಗಳಿಂದ ಭಾರವಾದ
ಬಡ ಹೃದಯದ ಗತಿಯೇನು?

ನನ್ನದೂ ಒಂದು ಬದುಕು,
ಜನರಲೆಯುವ ಅಳತೆ ಕೋಲಿನ
ಬಳಕೆಗಷ್ಟೇ ಉಪಯೋಗಕಿರುವವನು
ಅನ್ನುವವರು ಅನ್ನಲಿ ಎನ್ನಬಹುದಿತ್ತು
ಕಣ್ಣುಗಳು ಸುಮ್ಮನಿರಬೇಕೇ

ಸಾತು ನೀಡುವ ಪ್ರಿಯ ಮಿತ್ರ
ಕತ್ತಲ ಇರುಳಿನ ಆಣೆ,
ಚಿಮ್ಮುವ ಕಣ್ಣ ಧಾರೆಯ ರಭಸಕೆ
ಗಲ್ಲದಿ ತಟಸ್ಥವಾದ ಮೊರೆ
ಎಲ್ಲಿ ನಿಯಂತ್ರಣ ತಪ್ಪುವುದೋ
ಎನ್ನುವ ಭಯ ಎನಗೆ!

ಮನದಲೇ ಸುಕ್ಕುಹಿಡಿದ
ಭಾವನೆಗಳ ರಾಶಿಗೆಲ್ಲಿದೆ ಬೆಲೆ?
ಬಳಿ ಸುಳಿವ ಸಾವಿರ
ಆಲೋಚನಾ ಬಳ್ಳಿಗಳ ತೋಟಕೆ
ನೀರ ಹುಯ್ದು ಹಾಯುವ ಗಾಳಿ ನಾನು,
ಹಿಡಿಯಲೆತ್ನಿಸಿ ಸೋತೂ ಸೋಲದೆ
ಉದುರುವ ಬಣ್ಣದ ಎಲೆಯನು
ಕುಳಿತು ಕಾಯುತಿರುವೆನು ಇನ್ನೂ

- ಅಮಾಯಕ

- Introvert Soul

30 Jul 2025, 07:34 pm

ಸ್ನೇಹ ಬಾಂಧವ್ಯ

ನದಿ ದಂಡಿ ಮೇಲೊಂದು ಮರವಿತ್ತು
ನೂರಾಯೆಂಟ ಹಕ್ಕಿ ಅಲ್ಲಿ ಕುಳಿತಿತ್ತು
ಎರಡ ಹಕ್ಕಿ ಸ್ನೇಹ ಬೇಳೆದಿತ್ತು

ಕಷ್ಟ ಸುಖದಲ್ಲಿ ಪಾಲಿತ್ತೂ
ಕೂಡಿ ಉನ್ನುವುದರಲ್ಲಿ ಒಂದೇ ತುತ್ತು
ಆಡಿದ ಆಟಾ ನೆನಪಾತೂ
ನೆನಪೊಂದೇ ಕಾಣಿಕೆ ಆತು

ಬೇಟೆಗಾರ ಬಂದಾ ಮರಕಡೆಗೇ
ಬಿಲ್ಲು ಬಾಣ ಹಿಡಿದಾ ಕೈಯೊಳಗೆ
ಗುರಿ ಇಟ್ಟಾ ಹಕ್ಕಿಗೇ
ಬಾಣ ತಾಗಿ ಹಕ್ಕಿ ಬಿತ್ತು ನೆಲಕೇ

ಗೆಳೆಯನ ಕಳಕೊಂಡ ಹಕ್ಕಿ
ಅಳುತ್ತಾ ಹೇಳಿತು ಬಿಕ್ಕಿ, ಬಿಕ್ಕಿ
ನನ್ನ ಹೋಡೆ ಮೋದಲು
ಸೇರಬೇಕು ಗೆಳೆಯನ ಒಡಲು

ಆಡಿದ ಆಟಾ ನೆನಪಾತೂ
ಮಾಡಿದ ತುಂಟಾಟ ಮನಸ್ಸಲ್ಲಿತ್ತು
ನೆನಪೊಂದೇ ಕಾಣಿಕೇ ಆತು
ಗೆಳೆತನಾ ಅಗಲಿ ಹೋತು

ಮಂಜುಳಾ ನಾಗರಾಜ ✍️

- ಮಂಜುಳಾ ನಾಗರಾಜ

27 Jul 2025, 12:37 pm

ಝಂಕಾರ

ಬಣ್ಣ ಬಣ್ಣಗಳ ಚಿಟ್ಟೆಗಳೆ
ಪುಷ್ಪಗಳ ಮಕರಂದ
ಹೀರಲು ಹೊರಟಿಹೆಯಾ
ಸದ್ದನು ಮಾಡದೆ ಸುಗ್ಗಿಯ ಮಾಡುತ
ನಡೆದಿದೆ ನಿನ್ನಯ ಝoಕಾರ.

ಹಾರುತ ತೇಲುತ ರಾಗವ ಹೇಳುತ
ತನ್ಮಯಳಾದೆ ಈ ದಿನ ಸುದಿನ
ಮಕ್ಕಳು ನಿನ್ನ ಹಿಂಬಾಲಿಸುತ
ಹಿಡಿಯಲು ಹೊರಟವು ಮುಂದಾಗಿ
ನಿನ್ನಯ ಅಂದವು ಸೊಬಗಿನ ಚಂದವು.
ಕಣ್ಮನ ಸೆಳೆದವು ಕಿವಿ ಗಿಂಪನ್ನು ತಂದವು.

- ಮೇಘಾ ಬೆಳಧಡಿ

26 Jul 2025, 06:19 pm

- AAA little star

26 Jul 2025, 02:42 pm

ಬಾಳೊಂದು ಪಯಣ

ಬಾಳೊಂದು ಪಯಣ ದಾಟಬೇಕು ಎಲ್ಲವನ ಕಷ್ಟ ಸುಖವೇಂಬ ಪೈರಿ ಹತ್ತಬೇಕೋ ನೀ ಏರೀ
ಜ್ಞಾನವೆಂಬ ಕೂದುರಿ
ಓಡಿಸೋ ನೀ ಮನಸಾರೀ

ಏಳು ಬೀಳುವಿನ ಸಂತೇ ದಾಟಿ
ಹತ್ತಬೇಕೋ ಜಯವೆಂಬ ಮೇಟಿ
ಯಾವುದು ಸ್ಥಿರವಲ್ಲ ಮಾನವ
ತಿಳಿದುಕೊಳ್ಳೋ ನೀನ್ನ ಅಂತರಾಳವ

ನಾನು ನನ್ನದು ಬಿಡುವರೆಗೂ
ಸಿಗದು ಮೋಕ್ಷ ನಿನಗೆಂದಿಗೂ
ಶರಣು ಹೋಗು ಗುರುವಿಗೇ
ಕಾಯುವನೋ ಕೊನೇವರೆಗೆ

ಗುರು ಸಿದ್ದಾರೂಡರೂ ಇಹರು ಬೆನ್ನಿಗೆ
ಕಷ್ಟ ಸುಖದ ಭಯವಿಲ್ಲಾ ಎನಗೆ
ಕಾಯುವನು ನಿತ್ಯಾ ನೆನೆದವರಿಗೇ
ಬಾಳಿನ ಪಯಣ ಮುಗೀವರೆಗೆ
ಕಾಯುವನೋ ಕೊನೇವರೆಗೆ

ಗುರು ಸಿದ್ದರೂಡರು ಇಹರು ಬೆನ್ನಿಗ
ಕಾಯುವನು ಕೊನೇವರೆಗೆ
ಗುರು ಸಿದ್ದರೂಡರಿಹರು ಬೆನ್ನಿಗೆ
ಕಾಯುವನು ಕೊನೇವರೆಗೆ


- ಮಂಜುಳಾ ನಾಗರಾಜ

26 Jul 2025, 02:01 pm

ಭಾವಗಳೆದುರು

ಮನದಾಳದೀ ಕೂತಿಹುದು ನೂರಾರು ಭಾವಗಳು
ಕಣ್ಣ ರೆಪ್ಪೆಯಲ್ಲಿ ಅಡಗಿಹುದು ಭಾವನೆಗಳ ನೋವುಗಳು, ಮರೆಯಬೇಕೆಂದರೆ ಮರೆಯಾಗದ ಚಿತ್ರಣಗಳು ಕಾಡುತಿಹುದು ಪದೇ ಪದೇ ಬೆಂಬಿಡದ ಬೇತಾಳದಂತೆ.

ಜೀವನವೆಂದರೆ ಇದೇನಾ ನೋವುಗಳ
ಸರ ಮಾಲೆಗಳು ಹೆಣದಂತೆಲ್ಲ ಆಗುವುದು ಸುಂದರಮಾಲೆ ಮಾಲೆಗೆ ಹಾಕಿದ ಗಂಟುಗಳು ಬಿಡಿಸಲಾಗದ ಬಂಧನಗಳು,

ಜೀವಕ್ಕೆ ಬೆಲೆ ಇಲ್ಲದ ಜಗತ್ತಿನಲ್ಲಿ
ಬದುಕುತಿರುವೆವು ನಾವೆಲ್ಲ
ಪ್ರಾಣಿಗಳೇ ಲೇಸೆಂದು ಬದುಕುವ
ಪರಿ ಮಾನವನದು.
ನಾ ಮೇಲು ನೀ ಮೇಲು ಎನ್ನುತಾ
ಒಂದು ದಿನ ಹೋಗುವೆವು
ಇಹಲೋಕವನ್ನು ತ್ಯಜಿಸಿ.

- ಮೇಘಾ ಬೆಳಧಡಿ

25 Jul 2025, 07:32 pm

ನನ್ನವನು.

ಅವನೆಂದರೆ ಆಸೆಯೂ ಅಲ್ಲ ಆಕರ್ಷಣೆಯೂ ಅಲ್ಲ ಅವನೆಂದರೆ ನನ್ನಲ್ಲೇ ಮೂಡಿದ ಮಧುರವಾದ ಭಾವನೆ... ಅವನು ನೋಡಲು ಮುಗ್ಧ ಮನಸಿನ ಭಾವನೆ ಹೊದಿರುವನು.. ನಗುವಲ್ಲೇ ನೋವ ಮರೆಸೋ ಮನಸ್ಸಿಗೆ ತನ್ನಗೆ ನೋವಿದದ್ದರು ಇತರಿಗಾಗಿಯೇ ನೋವ ಮುಚ್ಚಿಡುವನು ನನ್ನವನು .. ಯಾರಿಗು ಸೋಲದವಳು ನನ್ನವನ ಗುಣಕ್ಕೆ ಸೋತೆನು..

- Pavithra S

19 Jul 2025, 05:08 pm

ಮನಪರಿವರ್ತನೆ

ಸಿಟ್ಟು -ಸೇಡವಿನ ಕೈಗೆ ತಾಳ್ಮೆಯ ಪಾಠ ಹೇಳಬೇಕು
ರಾಗ-ದ್ವೇಷದ ಬುದ್ದಿಗೆ ನೆಮ್ಮದಿಯ ವಾಸನೆ ಹಂಚಬೇಕು
ಸೇಡು-ಕೇಡಿನ ಭಾವಕ್ಕೆ ಸಂತೋಷದ ಬಣ್ಣ ಹಚ್ಚಬೇಕು
ಸಂಚು-ಹೊಂಚಿನ ಮನಕ್ಕೆ ಶಾಂತಿಯ ರುಚಿ ಬಡಿಸಬೇಕು
ಚಂಚಲ-ಮಂಚ'ಲ ದೇಹಕ್ಕೆ ಕೊಂಚ ಸಾಹಿತ್ಯ ಬೇಕೇ-ಬೇಕು


ಸುಗ್ಗಿ.....





- ಆರ್. ಎಸ್ .ಸುಗ್ಗಿ

18 Jul 2025, 09:38 am

- ಹನುಮಂತ ಹೊನ್ನಪ್ಪ ಕುರಿ ಜುಮಲಾಪೂರ

15 Jul 2025, 04:06 pm