Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಾಹಿತ್ಯ ಸಂಜೀವಿನಿ -ಮುಕ್ತ - ವಿಮುಕ್ತ

ಎಂದಿಗಯ್ಯ ಎಂದಿಗೆ ಕಾಲ ಯಮನ ಅಟ್ಟಹಾಸ ಕೊನೆಯಾಗುವುದು ಎಂದಿಗೆ???

ಸಣ್ಣ ಜೀವಿ ಸೂಕ್ಷ್ಮಜೀವಿ ಅಣುವಿನಷ್ಟು ಗಾತ್ರ ನೀನು ನಿನ್ನ ಜನನ ಅದೇ ಚೀನಾ

ಇಂಥ ಶಕ್ತಿ ಉಂಟೆ ಒಂದು ಸಣ್ಣ ಜೀವಿಗೆ?
ದಿನದಿನವು ಸಹಸ್ರ ಸಂಖ್ಯೆ ಸೋಂಕಿಗೆ!

ಪ್ರಾಣ ಹರಣ ಮಾಡಿದ್ದೊಂದೇ ಸಾಲದೆ ನಿನ್ನ ಬಯಕೆ ತೃಪ್ತಿಗೆ?
ಬದುಕಿನಲ್ಲಿ ಬವಣೆ ತಂದು ತಂದೆ ಬಾಳ ಬಂಡಿ ದುಸ್ಥಿತಿಗೆ!


ಮರೆತ ಪಾಠ ಕಲಿವ ಪಾಠ ತಂದೆ ಮನುಜ ಮತಿಗೆ

ಏನು ಹೇಳಬಯಸಿದೆ? ಯಾವ ನೀತಿ ಕಲಿಸಿದೆ?
ಏನು ನಿನ್ನ ಸಿದ್ಧಾಂತ?
ಏನು ನಿನ್ನ ರಾದ್ಧಾಂತ


ಭವ್ಯ ದೇಶ ಕಟ್ಟುವಕನಸನು ನುಚ್ಚುನೂರು ಮಾಡಿದೆ
ಕನಸು ಕಾಣೋ ಕಣ್ಮನಗಳಿಗೆ ತಣ್ಣೀರೆರಚಿದೆ?

ಕುಣಿದು ನಲಿದು ಬೆಳೆದು
ಬರುವ ಮನೆ ಮನಗಳ
ಮುಗ್ಧ ಹೃದಯ ಕುಸುಮಗಳ
ಕುಡಿಯ ಚಿವುಟಿ
ಬೀಗಮುದ್ರೆ ಹಾಕಿದೆ

ಇದು ಕಾಲ ಒಡೆಯನ ಕೋವಿಡ್ ರೂಪ
ಜೀವನ ಏರುಪೇರಿನ ಪ್ರತಿರೂಪ ಈ ಬವಣೆ ಎಲ್ಲಾ ದೇಶಗಳ ಯಥಾರೂಪ

ಲಸಿಕೆಗಾಗಿ ಕಾಯೋಣ
ಅಂತರ ಪಾಲಿಸೋಣ ಸ್ಯಾನಿಟೈಸರ್ ಬಳಸೋಣ ಶುಚಿತ್ವ ಕಾಪಾಡೋಣ
ನಿರ್ಲಕ್ಷ ಬಿಡೋಣ
ಲಕ್ಷ್ಯ ಇಡೋಣ
ಈ ಸಂಕಲ್ಪ ಮಾಡೋಣ

✍️ ನವಿಲೆ ನಾಗರಾಜು
ಕನ್ನಡ ವಿಭಾಗದ ಮುಖ್ಯಸ್ಥರು

- Naga raju

31 Jul 2020, 10:02 pm

ನರಿ

ಕಾಡಿನ ಒಳಗೆ ನರಿಯದು
ಒಂದು ಪುಟ್ಟನೆ ಮನೆಯಿತ್ತು
ಜಿಮ್ಮಿ,ಕಮ್ಮಿ,ನಿಮ್ಮಿ ಅಂತಾ
ಮರಿಗಳ ಜೊತೆ ಗಿತ್ತು

ಆಲೆ- ಮೂಲೆ ಅಲೆದು
ಸವಿಯಲು ಜೆಣನು ತರುತಿತ್ತು
ಹಾಲನು ಉಣಿಸುತಾ ಮಕ್ಕಳ
ಹೊಕ್ಕಳ ನೆಕ್ಕುತ ಲಿರುತಿತ್ತು

ಅಮ್ಮನ ಮೇಲೆ ನಿಮ್ಮಿಯು
ಜಿಗಿದು ನೆಗೆಯುತ ಲಿರು ತಿತ್ತು
ಜಿಮ್ಮಿ,ಕಮ್ಮಿ ಅಮ್ಮನ ಕೆನ್ನೆಗೆ
ಮುತ್ತನು ಕೊಡುತಿದ್ವು

ಸುಮ್ಮನೆ ಮಲಗಲು ಬಿಡದೆ
ಅಮ್ಮನ ಕಾಡುತ ಲಿರುತಿದ್ವು
ಅಮ್ಮನ ಮಾತನು ಮೀರದೆ
ಮಕ್ಕಳು ಸುಮ್ಮನೆ ಇರುತಿದ್ವು

ಜೋಗುಳ ಹಾಡುತ ಮಕ್ಕಳ
ನಿದ್ರೆಗೆ ಕಳಿಸಿಯೆ ಬಿಡುತ್ತಿತ್ತು
ಆಕಳಿಸುತ್ತಲೆ ಅಮ್ಮನೂ
ನಿದ್ರೆಗೆ ಜಾರಿ ಯೇ ಬಿಡುತ್ತಿತ್ತು


ಕಲ್ಮೇಶ ಬಡಿಗೇರ
9743539657
.........ಬಾದಾಮಿ.....

- Kalmesh Badiger

31 Jul 2020, 06:17 pm

ಕೊಲ್ಲುವುದದ್ದಾರೆ ಕೊಂದುಬಿಡು

ಕವಿಗಾರನಲ್ಲದಿದ್ದರು
ನಾ ಬರೆದೆನು ಕವಿತೆಗಳನ್ನ
ನಿನ್ನ ಒಂದೊಂದು ಮಾತಿಗೂ
ನೀ ತಿಳಿದು ತಿಳಿಯಾದೆ ಆಡಿದ ಮಾತಿಗೆ
ಹೋಡೆದೋಯಿತ್ತು ಈ ನನ್ನ ಮನಸ್ಸು
ನೀ ಕೊಲ್ಲುವ ಮನಸಿದ್ದರೆ ಕೊಂದುಬಿಡು
ಖಡ್ಗದಂತ ಮಾತುಗಳು ಏಕೆ ಗೆಳತಿ
ನಾ ಬರೆದ ಕವಿತೆಗಳು ನನಗೆ ಮುಳ್ಳಾದರು
ಹೂವಿಗಲಿ ನೀ ನೆಡೆಯೋ ದಾರಿಗೆ

- ರಾಜು ಹಾಸನ

31 Jul 2020, 10:01 am

ಇಂತಿ ನಿನ್ನ ಗೆಳಯ

ನಾ ಕವಿಗಾರನಲ್ಲದಿದ್ದರು
ನಾ ಬರೆದೆನು ಕವಿತೆಗಳನ್ನ
ನಿನ್ನ ಒಂದೊಂದು ಮಾತಿಗೂ
ನೀ ತಿಳಿದು ತಿಳಿಯಾದೆ ಆಡಿದ ಮಾತಿಗೆ
ಹೋಡೆದೋಯಿತ್ತು ಈ ನನ್ನ ಮನಸ್ಸು
ನೀ ಕೊಲ್ಲುವ ಮನಸಿದ್ದರೆ ಕೊಂದುಬಿಡು
ಖಡ್ಗದಂತ ಮಾತುಗಳು ಏಕೆ ಗೆಳತಿ
ನಾ ಬರೆದ ಕವಿತೆಗಳು ನನಗೆ ಮುಳ್ಳಾದರು
ಹೂವಿಗಲಿ ನೀ ನೆಡೆಯೋ ದಾರಿಗೆ
ಇಂತಿ ನಿನ್ನ ಗೆಳಯ

- ರಾಜು ಹಾಸನ

31 Jul 2020, 01:10 am

ಮಾತು

ಮಾತಾಡೋ ಸಮಯದಿ..
ಮೌನಿಯಾದೆ..
ಮನದ ಮಾತು ಹೇಳೊ ಸಮಯದಿ ದೂರವಾದೆ..
ಕಾಣದ ಪ್ರೀತಿ ಮನದಲ್ಲೇ ಉಳಿದಿದೆ..
ಮರು ಮಾತಾಡುವಾಗ ಹಾದಿ ಬೇರೆಯಾಗಿದೆ..
ಕೊನೆಗೂ ಮನದ ಮಾತು ಹೇಳಿಕೊಂಡೆವು ಗೆಳೆಯರಾಗಿ..
ಇರಲಿ ನಿನ್ನ ಜೀವನ ಸುಖವಾಗಿ..
ಇದೇ ನನ್ನ ಹಾರೈಕೆ ಕೊನೆಯದಾಗಿ..

@ಮೇಘ ಗಣೇಶ್

- Megha s

30 Jul 2020, 03:31 pm

ಅರು(ಋ)ಣ ಅರು(ಋ)ಣ

ನಿತ್ಯ ನಿಯಮ ಮೀರದೆ
ಬೆಳಕು ನೀಡುವ ಅರುಣ
ಏಳೇಳು ಜನ್ನ ತಳೆದು ಬಂದರೂ
ತೀರಿಸಲಾರೆವು ನಿನ್ನ ಋಣ...!

- Sanganabasayya Hampasagaramath

29 Jul 2020, 06:03 pm

ಬಾಲ್ಯ

ನಿಸರ್ಗ ದ ಸೌಂದರ್ಯವ
ವಿವರಿಸಲು ಅಸಾಧ್ಯ..
ಹೊಲ ಗದ್ದೆ ನೋಡಿದಾಗ
ನೆನಪಾಗುವುದು ಬಾಲ್ಯ..
ಉಗಿ ಬಂಡಿಯಂತೆ ಹತ್ತಾರು ಪುಟಾಣಿ ಮಕ್ಕಳು..
ಹೊರಟ ಬಂಡಿ ನಿಲ್ಲುವುದು ಶಾಲೆಯ ಸಮೀಪ..
ಸ್ವರ್ಗಕ್ಕಿಂತ ಮಿಗಿಲು ಈ ಬಾಲ್ಯದ ಸುಖ
ಮನಸೋತೋದೆ ನಾನು
ಈ ದೃಶ್ಯವ ಕಂಡು..
ಪುನಃ ಆವರಿಸಿಕೊಂಡಿದೆ ಮನಸಿನ ಬುತ್ತಿಯಲ್ಲಿ
ಈ ಸುಂದರ ಸುಮಧುರ ನೆನಪುಗಳು...
@ಮೇಘ ಗಣೇಶ್

- Megha s

29 Jul 2020, 12:55 pm

ನೊಂದ ಜೀವಾ

ಹೇಳಲು ಕೇಳಲು
ಬಲು ಅಂದ ಚೆಂದ
ಪ್ರೀತಿಯ ಪಿಸುಮಾತು
ಸಹಿಸಲು ಬಲುಕಷ್ಟ
ದೂರವಾದ ಮನಸುಗಳ
ಚುಚ್ಚುಮಾತು
ನೋಡಲಾಗದು
ಕಣ್ಣೀರು ತುಂಬಿದ
ಒಂಟಿ ಹೃದಯಾದ
ಮನಸ್ಸಿನ ಗೋಳಾಟ

- ರಾಜು ಹಾಸನ

29 Jul 2020, 01:23 am

ನನ್ನ ಕನಸು...

ಭಾರತಕೆ ಜೈ....
ಕರ್ನಾಟಕಕೆ ಜೈ....
ನಾವು ಭಾರತೀಯರು....
ಕನ್ನಡಮ್ಮನ ಪುತ್ರರು....
ಮುಗಿದದಿನದ ಮೆಲುಕು ಹಾಕಿ....
ಬರುವದಿನದ ಭರವಸೆಯಲಿ....
ತ್ಯಾಗಸಹಿತ ಸ್ವಾರ್ಥರಹಿತ....
ಹೊಸ ನಾಡನು ಕಟ್ಟುವ....
ಸಫಲತೆಯ ಪಡೆಯುವ....
ಭಾರತೀಯರೆನ್ನುವ....
ಒಂದುಗೂಡಿ ಹಾಡುವ....
ದೇಶಕಾಗಿ ದುಡಿಯುವ....
ನಾವು ಒಂದೇ ಅನ್ನುವ....
ಭಾರತೀಯರೆನ್ನುವ....

- ಸಾಹಿತ್ಯಶ್ರೀ

28 Jul 2020, 10:54 pm

ಹಸಿರು

ಕಾಯುವಿಕೆಗಿಲ್ಲದಾಯ್ತು ಕೊನೆ ಮೊದಲು
ನಿನ್ನದೋ ಅದೇ ಭರವಸೆಯ ಸಾಲು
ಒಂದೇ ದಿನದಲ್ಲಿ ತೋರಿಸಿಬಿಡುವೇ ಚುಕ್ಕಿ ಚಂದ್ರಮರ
ಮರುದಿನವೇ ನಾನಾಗಿ ಬಿಡುವೆ ಒಂಟಿ ಮರ

ನಿನಗೆ ನನ್ನ ಅವಶ್ಯಕತೆ ಮುಗಿಯಿತು ಎನಿಸಿದರೂ
ನನ್ನ ಮನದ ಮೂಲೆಯಲ್ಲೆಲ್ಲೊ ಆಸೆಯ ಚಿಗುರು
ಕಾಯುತ್ತಲೇ ಇರುವೇ ನೀ ತಿರುಗಿ ಬರುವವರೆಗೂ
ನಿನ್ನ ನೆನಪುಗಳು ಮನದಲ್ಲಿ ಸದಾ ಹಸಿರು!!

- Dima

28 Jul 2020, 12:02 am