Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಭಾರತಾಂಬೆ

ನಮಿಸಿರಿ ಇದೋ ತಾಯಿ
ಭಾರತಾಂಬೆ ಯು ಇವಳು
ತ್ರಿವರ್ಣ ದ ಧ್ವಜವನ್ನವಳು
ಎತ್ತಿ ಹಿಡಿದು ತೊರುತ್ತಿಹಳು //ಪ//

ತಲೆಯಮೇಲೆ ಹಿಮದ ಗಿರಿ
ಅಡಿಗೆ ಮೂರು ಶಾಂತ ಜಲಧಿ
ನಾರುಮಡಿಯ ಉಟ್ಟು ನಿಂತು
ಕಿರು ನಗೆಯ ಬೀರುತಿಹಳು //ಚ// //೧//

ಬೇದ ಭಾವವನ್ನು ಅಳಿದು
ಭಾರತೀಯ ರಾಗಿರೇನುತಾ
ಶಾಂತಿಮಂತ್ರ ಕೈಯ್ಯಲ್ಹಿಡಿದು
ಭರದಿ ಮುಂದೆ ಸಾಗುತಿಹಳು //೨//

ಜಾತಿ _ಬೇದ ವನ್ನು ಮರೆತು
ಜಗಕೆ ದೀಪ ವಾಗಿರೇನುತ
ಜಯದ ಮಾಲೆ ಹಾಕಿಕೊಂಡು
ಜನಕೆ ಅಭಯ ನೀಡುತಿಹಳು //೩//

ಅಂಬೆ ನಿನ್ನ ಕರದ ಕರುಣೆ
ಎಮ್ಮ ಶಿರದ ಮೇಲೆ ಇರಲಿ
ಶಾಂತ ಮೂರ್ತಿ ಭಾರತಾಂಬೆ
ನಿನಗೆ ನಮಿಸುತಿಹೇವು ತಾಯಿ //೪//


ಕಲ್ಮೇಶ ಬಡಿಗೇರ
9743539657
............ಬಾದಾಮಿ........

- Kalmesh Badiger

09 Aug 2020, 01:02 pm

ಸತ್ತ ಪ್ರಜೆಗಳು 

ಕೊಂದರಪ್ಪ ಕೊಂದರು ಧರ್ಮವನ್ನೆ ಕೊಂದರು ಧರ್ಮವಂತರಾದ ಭಾರತೀಯರನ್ನೆ ಕೊಂದರು ಸುಟ್ಟರಪ್ಪ ಸುಟ್ಟರು ಸತ್ಯವನ್ನೇ ಸುಟ್ಟರು ಸತ್ಯವಂತರನ್ನ ಜೀವಂತ ಸುಟ್ಟು ಬಿಟ್ಟರು ಅಧಕಾರವೆಂಬ ಹೆಂಡ ಕುಡಿದು
ಸಿಕ್ಕ ಸಿಕ್ಕವರ ತುಳಿದು ತುಳಿದು
ಜನ್ಮ ಕೊಟ್ಟ ತಾಯಿಯನ್ನೆ ಮಾರಿಬಿಟ್ಟರು 


ಓದು ಬರಹ ಬರೋದಿಲ್ಲ ಕುರ್ಚಿ ಮೇಲೆ ಕೂರೊ ಆಸೆ ಮುಚ್ಚಿಕೊಂಡು ತಿರುಗಬೇಕು ನಾವು ಅವರ ಮೀಸೆ ನಾವು ಎಷ್ಟೇ ಒದ್ದಾಡಿದ್ರು ಸಿಕ್ಕೋದು ಪುಡಿ ಕಾಸೆ ಕಾಲು ಇಟ್ಟ ಕಡೆ ಎಲ್ಲ ಬರಿ ಚುಚ್ಚೋ ಮುಳ್ಳೆ ಸಿಕ್ಕುತೈತೆ ಕಣ್ಣು ಬಿಟ್ರೆ ಸುತ್ತ ಮುತ್ತ ಪಾಪಸ್ಕಳ್ಳಿ ಹೂವೆ ಕಾಣುತೈತೆ ಪಾಪ ಹೆಣ್ಣು ತಾನೆ ಹೆಂಗೆ ಮುಡಿಗೆ ಮುಡ್ಕೋತೈತೆ ಎದ್ದು ನಿಂತು ಪ್ರಶ್ನೆ ಮಾಡೋರ್ಯಾರು ಇಲ್ಲ 
ಕುತ್ಗೆ ಪಟ್ಟಿ ಹಿಡಿದು ಕೇಳೊ ಭೂಪ ಹುಟ್ಟೇ ಇಲ್ಲ
ನಾವು ನೀವು ತೆಪ್ಪಗಿರೋದು ಒಳ್ಳೇದಲ್ವ 
ಥೂ...... ನಮ್ ಜನ್ಮಕೆ 


ಒಳ್ಳೆ ವ್ಯಕ್ತಿ ನೋಡಲಿಲ್ಲ ಮತ ಹಾಕಿ ಬಿಟ್ಟೆವಲ್ಲ 
ದೇಶ ಪೂರ ದೋಚೋಕೆ ಸಿದ್ದರಾಗಿಬಿಟ್ಟರಲ್ಲ
ವಿಷವೃಕ್ಷದಂತೆ ಬ್ರಷ್ಟಚಾರ ಹುಟ್ಟಿ ಕೊಂಡಿತಲ್ಲ 
ಗಾಂಧಿ ಬುದ್ಧ ನೇತಾಜಿಯನ್ನು ನೆನೆಯಲಿಲ್ಲ ಲಂಚವೆಂಬ ಭೂತ ಸಿಕ್ಕ ಸಿಕ್ಕವರ ದೋಚಿಕೊಂಡು ತಾಯ ಬಿಟ್ಟು ಮಲತಾಯ ಆರೈಕೆ ಮಾಡಿಕೊಂಡು ಎಷ್ಟು ಹೊತ್ತು ಕೂರೋದು ಕಣ್ಣು ಮುಚ್ಚಿಕೊಂಡು ಆದ್ರೂ ನಾವು ಎದೆ ತಟ್ಟಿಕೊಂಡು ಹೇಳಬೇಕು 
ಭವ್ಯ ಭಾರತದ ಸತ್ತ ಪ್ರಜೆಗಳು 
ಎಲ್ರೂ ಹೇಳಿ ನಾವು ಸತ್ತ ಪ್ರಜೆಗಳು

- ಜಿ. ಪ್ರಕಾಶ್

09 Aug 2020, 03:36 am

ನರಜನ್ಮ

ದೇಹದ ರಾಜ್ಯಕೆ ಮನಸೆ ಅರಮನೆ 
ಆತ್ಮವೇ ರಾಜಕುಮಾರ 
ಸತ್ಯದ ತೇರಿಗೆ ನ್ಯಾಯವೇ ಕುದುರೆ 
ಜ್ಞಾನವೇ ಕೈಚಾಟಿ 
ಹೊರಡಲಿ ಜೀವನ ಯಾನ

ಪ್ರಕೃತಿ ದೇಗುಲ ದುಡಿಮೆಯೇ ದೇವರು 
ಶ್ರಮವೇ ಆರಾಧನೆ ವಿದ್ಯೆಯು ಶಿಖರ 
ಸಾಧನೆ ಗೋಪುರ ಛಲವೇ ನಿನ್ನಯ ಚಲನೆ

ನಗುವೇ ಮಲ್ಲಿಗೆ ಸ್ನೇಹವೇ ಸೌಗ೦ಧ 
ಆಸೆಗಳೇ ನೆರೆಹೊರೆಯವರು
ಹುಟ್ಟು ಹಗಲು ಸಾವು ಇರುಳು 
ನೆನಪುಗಳೇ ಘಳಿಗೆಗಳು

- ಜಿ. ಪ್ರಕಾಶ್

09 Aug 2020, 03:31 am

ಮೂಕ ಕೋಗಿಲೆ

ಯಾವುದಾದರು ಕನಸಿನ ಕೂಪದೊಳಗೆ     
ಮುಳುಗಿಸೆನ್ನ ಮನಸನು, ದಾರಿ ಕಾಣದಾಗಲಿ 
ಮರಳಿ ತನ್ನೆದೆಯ ಸೇರಲು 

ಎತ್ತಣದೊಲವಿನೊಳಗೆ ಸತ್ತ ಮಸಣದ ಹೂಗಳು       
ಎಷ್ಟೇ ಅರಳಿ ನಕ್ಕರೂ ಗಂಧವ ಕಾರದಿರಲಿ 
ಮುಂಜಾವಿನ ನಸುಗಂಪಲಿ ಎದ್ದ ರವಿತೇಜನು     
ಮತ್ತೆಂದು ತನ್ನ ಕಿರಣವ ಬೀರದಿರಲಿ          ಕಪ್ಪು ಮೋಡದಲ್ಲಡಗಿರುವ ಮಳೆಯ ಹನಿಗಳು       
ಮತ್ತೆ ಭೂರಮೆಯ ಮೈಯ ಸೋಕದಿರಲಿ 
ಹಾಳು ಹುಣ್ಣಿಮೆಯ ಬೆಳಕಲಿ ಮನಸಿದು    ನೆನೆದು ನೆನೆದು ನಡುಗಿ ಕೊರಗಿದೆ              ಬಟ್ಟ ಬಯಲಿನಲಿ ಕುರುಡು ಹೃದಯವು    ತನ್ನ ಕಣ್ಗೆಜ್ಜೆಯ ಕಳಚಿ ಹೊರಟಿದೆ            ಕನಸು ಮನಸಿನ ಬೇಕು ಬೇಡದಮಲಿನಲಿ          ಮೂಕ ಕೋಗಿಲೆ ಹಾಡಿದೆ,                      ಮೂಕ ಕೋಗಿಲೆ ಹಾಡಿದೆ

- ಜಿ. ಪ್ರಕಾಶ್

09 Aug 2020, 03:29 am

ಬದುಕು ಎಂಬ ಜಟಕಾ ಬಂಡಿ

ಬದುಕು ಎಂಬ ಜಟಕಾ ಬಂಡಿ

ಗುರಿಯಿಲ್ಲದ ಕಡೆಗೆ ಓಡುತ್ತಿದೆ

ಕಲ್ಲು ಮುಳ್ಳು ಒಂದೂ ನೋಡದೆ

ಮನಸಾ ಇಚ್ಛೆ ಓಡುತ್ತಿದೆ

ತನ್ನ ತನವ ಮರೆತು ಓಡುತ್ತಿದೆ


ಬೇಡದ ಕನಸನ್ನ ಕಂಡು

ತನ್ನ ಕನಸನ್ನು ಕಸವಾಗಿ ಕಂಡು

ಕಾಣದ ಆಸೆಯನ್ನುಂಡು

ಕರೆದಾಗ ಬರಲಾರದ ಮೊಂಡು

                              ಈ ಜೀವ


ಮೋಡದ ಎದೆಯನ್ನು ಹಿಂಡಿ

ಮಳೆಹನಿಯ ಕಸಿವಂತ ನೂರಾರು ದಂಡು

ಓಡುವ ಬೆಳಕನ್ನು ಹಿಡಿದು

ತನ್ನ ಕೊಳಕನ್ನು ತೊಳೆವಂತ ಹಿಂಡು

ಸಾವಿರ ಹೂಗಳ ಕಸಿದು

ತನ್ನ ಕೊರಳಿಗೆ ಹಗ್ಗವ ಒಸೆವ

                           ಈ ಜೀವ

- ಜಿ. ಪ್ರಕಾಶ್

09 Aug 2020, 03:18 am

ನಿಜವಾದ ಪ್ರೀತಿ♡♡

ನಿಜವಾದ ಪ್ರೀತಿ ಕುರುಡರ ರೀತಿ
ನೋಡಿದರೆ ಕಾಣದು
ಸ್ಪರ್ಶಿಸಿದರೆ ತಿಳಿಯುವುದು
ಅದರ ಆಳದ ರೀತಿ
ಅದೇ ನಿಜವಾದ ಪ್ರೀತಿ ..♡♡♡

- PAVITHRA SP MANDYA

08 Aug 2020, 10:20 pm

ನಿಜ ಪ್ರೀತಿ

ಪ್ರೀತಿ ಸಿಗಬೇಕು ಎಂಬ ಆಸೆ ಇರಬೇಕು
ಆದರೆ ಹಠ ಇರಬಾರದು
ಹಠದ ಪ್ರೀತಿ ಚಟ ಏರಿಸುತ್ತದೆ

- PAVITHRA SP MANDYA

07 Aug 2020, 10:21 pm

ಲೇಖನಿ

ತಂದವರಾರೋ ಈ ಲೇಖನಿನ
ಮಾಡಿರಬಹುದೆ ಇದು ಪ್ರೀತಿನ
ಕಾಗದದ ಮೇಲೆ ಚುಂಬಿಸುವ
ಪ್ರತಿಯೊಂದು ಅಕ್ಷರ
ಹೇಳುತಿದೆ ಪ್ರೆಮಗವನ

- HussainSab

07 Aug 2020, 08:33 am

ಕ್ಷಮಿಸಿಬಿಡು ನನ್ನ ಗೆಳತಿ

ನಿನ್ನ ಪ್ರೀತಿಯ ಅಲೆಯಲ್ಲಿ
ಅಂದು ಬರೆದನು ಅಂದಗಾತಿಯೆಂದು
ನಿನ್ನ ಮೋಸದ ಪ್ರೀತಿಗೆ
ಇಂದು ಬರೆದನು ಮೋಸಗಾತಿಯೆಂದು

ನಾವು ಇದ್ದರೂ ಸತ್ತರು
ಪ್ರೀತಿ ಪ್ರೀತಿಯಾಗಿರುವುದೆ ವಿನಃ
ಆಟದ ಗೊಂಬೆಯಲ್ಲ
ಕ್ಷಮಿಸಿಬಿಡು ನನ್ನ ಗೆಳತಿ

- ರಾಜು ಹಾಸನ

07 Aug 2020, 12:43 am

ಮೋಸಗಾತಿ

ಪ್ರೀತಿಸಿ ಮುದ್ದಿಸಿದ
ಜೀವಾ ಬಿಟ್ಟು ಹೋದೆಯ
ಪಂಜರದ ಗಿಳಿಯಾಗಿ

ಪ್ರೀತಿಗಾಗಿ ಸುತ್ತಿದೆ
ನಿನ್ನ ಹಿಂದೆ ಹಿಂದೆ
ನೀ ಹಾಕಿದೆ ನನಗೆ ಬೆನ್ ಹಿಂದೆ ಚೂರಿ

ಏ ಮೋಸಗಾತಿಯೇ ನೀ ಇಲ್ಲದೆ
ಬದುಕಲು ಸಾಧ್ಯವಿಲ್ಲದಿದ್ದರೂ
ನಾ ಬದುಕುವೇ ಜನ್ಮ ಕೊಟ್ಟ ಜೀವಗಳಿಗಾಗಿ

- ರಾಜು ಹಾಸನ

07 Aug 2020, 12:00 am