Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೀಗೊಂದು ಆಸೆ

ತೇಲುವ ಅಲೆಗಳ ರಭಸಕ್ಕೆ ಸಿಕ್ಕಿ ಮುಳುಗುವಾಸೆ ;
ಆ ಅಲೆಗಳ ಆಂತರ್ಯದಲ್ಲಿ ಅಲೆಯುವ ಅಲೆಮಾರಿ( ಜಲಚರ) ನೀನಾದರೆ.....

ನೆನಪಿನ ದೋಣಿಯಲಿ ತೀರದ ತೀರವ ಸೇರುವಾಸೆ;
ಆ ನೆನಪಿನ ನಾಲೆಯ ನೆನಪುಗಳ ನಾವಿಕ ನೀನಾದರೆ....

ತಾರಾಗಣದಲ್ಲಿ ಹೊಳೆಯುವ ತಾರಕೆ ನಾನಾಗುವಾಸೆ;
ಆ ತಾರಕೆಯ ಪರಿವೀಕ್ಷಕ ಕೇವಲ ನೀನಾದರೆ....

ಬಡಿಯುವ ಹೃದಯದ ಬಡಿತವು ನಾನಾಗುವಾಸೆ;
ಆ ಹೃದಯವಂತ ಕೇವಲ ನೀನಾದರೆ.....

ನಿಷ್ಕಲ್ಮಶ ಪ್ರೀತಿಯ ಒಲವಿನ ನಾಯಕಿ ರಾಧೆ ನಾನಾಗುವಾಸೆ;
ಆ ಒಲವಿನ ಕೊಳಲನೂದುವ ನೀಲಶ್ಯಾಮ ಕೇವಲ ನೀನಾದರೆ.......

- tejavathikn

27 Aug 2020, 09:39 pm

ಕೈಗನ್ನಡಿ

ಇರುವಾಗ ಓಡಿ ಬರುವರು
ಹತ್ತಿರ ಹತ್ತಿರ
ಇಲ್ಲದಿದ್ದರೆ ಓಡಿ ಹೋಗುವರು
ದೂರ ದೂರ

ಇದ್ದಾಗ ಕೊಡುವುದಿಲ್ಲ
ಒಂದೊಂತ್ತಿನ ಅನ್ನ
ಸತ್ತಾಗ ಮಾಡಿ ತಿನ್ನುವರು
ಪಿಂಡದ ಅನ್ನ

ಇದ್ದಾಗ ದೂರ ತಳ್ಳುವರು
ಸತ್ತಾಗ ಮುತ್ತಿಕೊಳ್ಳುವರು
ಬಿಟ್ಟು ಹೋದದ್ದನ್ನು
ಬಾಚ್ಚಿಕೊಳ್ಳುವರು

- ರಾಜು ಹಾಸನ

27 Aug 2020, 06:09 pm

ಗೆಳಯ-ಗೆಳತಿಯರಿಗಾಗಿ

ಪ್ರೀತಿಯೆಂಬುದು
ಬಳ್ಳಿಯ ಹೂವಿನಂತೆ
ನೋಡಲು ಬಲು ಚಂದವೆಂದು
ನೋಡಬೇಕೆ ಹೋರೆತು
ಮುಟ್ಟಿದರೆ ಚುಚ್ಚುವುದು
ಬಳ್ಳಿಯ ಮುಳ್ಳಿನಂತೆ
ಸುರಿಯುವುದು ರಕ್ತ
ಹರಿಯುವುದು ಕಣ್ಣೀರು
ಪ್ರೀತಿಯಲ್ಲಿ ಬಿದ್ದರೆ
ಪ್ರೇಮಿಯಾಗುವರು
ಪ್ರೀತಿಯಲ್ಲಿ ಸೋತರೆ
ಹುಚ್ಚರಾಗುವರು
ಕೈ ಕೊಟ್ಟು ಹೋದ ಪ್ರೀತಿ
ಕಲಿಸುವುದು ಜೀವನದ ಪಾಠ

- ರಾಜು ಹಾಸನ

27 Aug 2020, 12:15 am

*ಅವಳ ಪ್ರೀತಿ ನನಗಾಗಿ*.....

*ಅವಳ ಪ್ರೀತಿ ನನಗಾಗಿ*.....

ನನ್ನೋಳಗಿನ ಪ್ರೀತಿಯ ಸಂದೇಶ ತಿಳಿಸಲು ಬಂದೆ
ಒಪ್ಪಿಕೋ ನನ್ನ ಪ್ರೀತಿಯ ರಾಜಕುಮಾರಿ ...
ನಿನ್ನ ಭಾವನೆಗಳಿಗೆ ಸ್ಪಂದಿಸಿ
ನೀರೆರೆದು ಪೋಷಿಸಿ ಬೆಳಸಿ
ಪಾರಿವಾಳದಂತೆ ನಿನ್ನ ಕನಸುಗಳ
ನನಸು ಮಾಡಿ ರೆಕ್ಕೆಗಳ ಕಟ್ಟಿ
ಆಗಸದೀ ಹಾರಾಡಿಸುವೆ.....
ನನ್ನಿ ಪ್ರೀತಿಯ ಒಲಮೆಯ ತೋರು ಬಾ ಗೆಳತಿ

ನಿನ್ನ ಸೌಂದರ್ಯಕ್ಕೆ ಮಾರುವ ಹೋದ
ಮನ್ಮಥನು ನಾನು
ನನ್ನ ಹೃದಯದ ಅಂತರಾಳದಲಿ ರತಿಯಂತೆಯೇ
ಕಾಣುವೆ ನೀನು...
ನೀ ನನ್ನಿಂದ ದೂರವಾಗಿ ಪ್ರೀತಿಯ ಬೇಗೆಯಲ್ಲಿ
ಸುಟ್ಟು ಬಿಡಬೇಡ..
ಬಂದು ಸೇರು ನನ್ನ ಪ್ರೀತಿಯ ಆಹ್ವಾನಕೆ
ನನ್ನ ಎದೆಯ ಗೂಡಿನೊಳಗೆ..

ಸೀತೆಯ ಅಂದವಾದ ಸೌಂದರ್ಯಕೆ
ರಾವಣನಂತವನೇ ಮಾರುಹೋದ
ಭಗವದ್ಗೀತೆಯನ್ನೇ ಬೋಧಿಸಿದ ಶ್ರೀ ಕೃಷ್ಣ
ರಾಧೆಯ ಮನಸ್ಸನ್ನೆ ಕಳ್ಳನಂತೆ ಕದ್ದ..
ಶಿವನ ಕೋಪಕ್ಕೆ ಸುಟ್ಟು ಹೋದ
ರತಿ- ಮನ್ಮಥರು ಪ್ರೀತಿಯಲ್ಲೆ ಹೊಂದಾದರು.
ನನ್ನ ನಿಶ್ಕಲ್ಮಶ ಪ್ರೀತಿಯ ಒಪ್ಪಿಕೊ..
ಜೋತೆಯಾಗಿ ಸೇರಿ....

ಮುಂದಿನ ಜೀವನದ ಬಂಡಿ ಏಳೆಯೋಣಾ..

ರಚನೆ-ಸಂಜೀವ್ ಚಿನ್ನೇನಹಳ್ಳಿ

- Bhavish tv

26 Aug 2020, 10:07 pm

ಕ್ಷಮಿಸಿಬಿಡಿ ಗುರುವೇ

ಅರ್ಥ- ಅನರ್ಥಗಳ
ನಡುವಿನ ಹೋರಾಟ
ಕ್ಷಣಹೊತ್ತಿನ ಮನಸ್ಸಿನ ಆಟ
ವಿಘಟಿಸಿತು ಸಂಬಂಧಗಳ
ಒಮ್ಮೆ ಕ್ಷಮಿಸಿಬಿಡಿ ಗುರುವೇ !

ಗುರು-ಶಿಷ್ಯರ ಸಂಬಂಧ
ಬಿಡಿಸಲಾಗದ ಅನುಬಂಧ
ಸಂಕುಚಿತತೆಯ ನೋಟ
ಕಲಿಸಿತು ಜೀವನಕ್ಕೆ ಪಾಠ
ಒಮ್ಮೆ ಕ್ಷಮಿಸಿಬಿಡಿ ಗುರುವೇ !

ಅನಿರೀಕ್ಷಿತ ನಿಮ್ಮ ಪರಿಚಯ
ಸಾಧನೆಯ ಹೊಸ ಅಧ್ಯಾಯ
ಕೆರೆಯ ಕೂರ್ಮ ನಾನು
ಅರಿಯದಾದೆ ಸಾಗರದ ಆಳವನು
ಒಮ್ಮೆ ಕ್ಷಮಿಸಿಬಿಡಿ ಗುರುವೇ !



ಶಾರದ

- ಶಕುಂತಲಾ

26 Aug 2020, 04:23 pm

ಕೈಗನ್ನಡಿ

ಇರುವಾಗ ಓಡಿ ಬರುವರು
ಹತ್ತಿರ ಹತ್ತಿರ
ಇಲ್ಲದಿದ್ದರೆ ಓಡಿ ಹೋಗುವರು
ದೂರ ದೂರ

ಇದ್ದಾಗ ಕೊಡುವುದಿಲ್ಲ
ಒಂದೊಂತ್ತಿನ ಅನ್ನ
ಸತ್ತಾಗ ಮಾಡಿ ತಿನ್ನುವರು
ಪಿಂಡದ ಅನ್ನ

ಇದ್ದಾಗ ದೂರ ತಳ್ಳುವರು
ಸತ್ತಾಗ ಮುತ್ತಿಕೊಳ್ಳುವರು
ಬಿಟ್ಟು ಹೋದದ್ದನ್ನು
ಬಾಚ್ಚಿಕೊಳ್ಳುವರು

- ರಾಜು ಹಾಸನ

26 Aug 2020, 03:30 pm

ಆಕಾಂಕ್ಷೆ

ಕನಸು ನನಸಾಗಲು ಬಯಸುತಿರುವೆ ನಾ..
ನನಸಾಗಲು ಒಗ್ಗೂಡಿಸು ನಿನ್ನ ಕೈಗಳನು..
ಭಯದಲ್ಲಿ ಧೈರ್ಯ ವಾಗಿ..
ದ್ವೇಷ ದಲ್ಲಿ ಪ್ರೀತಿ ಯಾಗಿ..
ಕೋಪದಲ್ಲಿ‌ ಶಾಂತಿಯಾಗಿ..
ಜಡದಲ್ಲಿ‌ ಉಲ್ಲಾಸವಾಗಿ..
ಇಲ್ಲದ ಗತಿಯಲ್ಲಿ‌ಗುರಿಯಾಗಿ..
ಮುನ್ನಡೆಸು‌‌ ನನ್ನನೂ.‌..
ಓ ಮನಸೇ ಬಂದುಬಿಡು
ಮುನ್ನೂಗೋಣ ಜೊತೆಯಾಗಿ..
ಬಾನೆತ್ತರದಿ ಹಾರೋಣ..
ಕಷ್ಟದಿ ಸುಖವ ನೀಡೋಣ ..
ಎಲ್ಲರನು ಪ್ರೀತಿಸೋಣ..
@ಮೇಘ ಗಣೇಶ್

- Megha s

25 Aug 2020, 06:39 pm

100÷100 ×100 = 100%

ಹಸಿದವನಿಗೆ
ಅನ್ನದ ಬೆಲೆ ತಿಳಿದಿರುವುದೇ ಹೊರೆತು
ಹೊಟ್ಟೆ ತುಂಬಿದ ವ್ಯಕ್ತಿಗಲ್ಲ
ಬಡತನವೆಂಬುದು ಜನರಿಗಲ್ಲದೆ
ಮೃಗಗಳಿಗೆ ಬರುವುದೇ

ಬಡವರ ಗೋಳು ತಿಳಿಯದ ನಾಯಕ
ಆಳುವ ಅರಸನದ್ದಾರೇನು
ಗುಡಿಯೋಳಗಿನ ಕಲ್ಲ ಕಂಬವದ್ದಾರೇನು
ಆಳುವ ಅರಸ ಆಳಗದ್ದಿದರು
ಆಳು ಆಳುವ ಅರಸನಗಬಲ್ಲ

ಸ್ಪರ್ಶ ತಿಳಿಯಾದ ಕಲ್ಲು
ದೇವರಗುವುದದ್ದಾರೆ
ಕಷ್ಟ ಸುಖಗಳಿಗೆ ಸ್ಪಂದಿಸುವ ಮನುಜ
ದೇವರಿಗೆ ದೇವರಾಗಬಲ್ಲನ್ನು
ತಿಳಿಯೋ ಮಂಕುತಿಮ್ಮ

- ರಾಜು ಹಾಸನ

25 Aug 2020, 06:27 pm

ಅಜ್ಜ

ಅಜ್ಜ ಅಜ್ಜ ನಮ್ಮಜ್ಜ
ಕಥೆಯನು ಹೇಳು ನಿನಜ್ಜ
ಕುಂತು ಕೆಳುತಿರೆ ನಾವೆಲ್ಲಾ
ಮೈ ಜುಂ ಅನಬೇಕು ಕೇಳಜ್ಜ //

ರಾಜನ ಕಥೆ ಯ ಹೇಳಜ್ಜ
ರಾಣಿಯ ಕಥೆಯ ಹಾಡಜ್ಜ
ರಾಜಾ ರಾಣಿ ಎರಡು ಹೇಳದೆ
ಮಂತ್ರಿಯ ಆಟವ ಆಡಿಸಜ್ಜ //

ಕೈಯ್ಯಲ್ಲಿ ಕೋಲು ಹಿಡಿಯಜ್ಜ
ಹೊಲಗಳ ಕಡೆಗೆ ನಡೆಯಜ್ಜ
ಕಾಗೆ,ಕೋಗಿಲೆ ಗಿಳಿಗಳ ತೋರುತಾ
ಅದರಂತೆ ಹಾಡಲು ಕಲಿಸಜ್ಜ //

ಕತ್ತಲಾಗಲು ನಮ್ಮನ್ನೆಲ್ಲ
ಮಾಳಿಗೆ ಮೇಲೆ ಕರೆ ಅಜ್ಜ
ಚುಕ್ಕೆ,ಚಂದ್ರಮರ ತೋರುತ
ಅವುಗಳ ಎಣಿಸಲು ಹೇಳು ನಮ್ಮಜ್ಜ //

ಶಾಲೆಯ ಓದು ಸಾಕಜ್ಜ
ಮನೆಗೆಲಸ ಎಲ್ಲ ಮುಗಿತಜ್ಜ
ಮಲಗುವ ಮೊದಲು ಮೆಲ್ಲಗೆ
ನಮಗೆ ಹಾಡನು ಹೇಳು ನೀ ಅಜ್ಜ //

ಕಲ್ಮೇಶ ಬಡಿಗೇರ
9743539657
.........,..ಬಾದಾಮಿ.......

- Kalmesh Badiger

25 Aug 2020, 05:59 pm

ಸಿಗ್ನಲ್

ಕತ್ತಲೆಯಲ್ಲಿ ಕೆಂಪನೆ ದೀಪ
ಮಿಣ ಮಿಣ ಮಿನಗುತಲಿತ್ತ
ಸಿಗ್ನಲ್ ನಲಿ ಒಂದು ಎರಡು
ಟಕ್ ಟಿಕ್ ಮೂಡುತಲಿತ್ತ//

ಎಲ್ಲಿಂದಲೋ ಬಂದ ಕಾರು
ಪಕ್ಕದಲಿ ನಿತ ಗೊಂಡಿತ್ತ
ಒಳಗಿರುವ ದಂತದ ಗೊಂಬೆ
ಕಣ್ ಕಣ್ ಮಿಟುಕಿಸು ತಿತ್ತಾ//

ಅದು ಎಂತಾ ಸುಂದರಿ ಎಂದು
ಎಲ್ಲರೂ ನೋಡುತಲಿದ್ರಾ
ಆ ಗೊಂಬೆಯ ಪಡೆಯಲು
ಪುಣ್ಯವು ಇರ್ಬೇಕಂದ್ರ//

ಕಾರೊಳಗಿನ ಚಂದ್ರನ ಬೆಳಕು
ಬೆಳಗುತ ಹೊಳೆಯುತ್ತಿತ್ತು
ಆದ ಕಣ್ಣಿಗೆ ಕಣ್ ಸೇರಿಸಲು
ಜನ ಹವಣಿಸುತ್ತಿತ್ತು//

ಅಷ್ಟೊತ್ತಿಗೆ ಅರವತ್ ಆಗೋಗಿತ್ತ
ಗ್ರೀನ್ ಸಿಗ್ನಲ್ ಬಿದ್ದಾಗಿತ್ತ
ಕಣ್ ಬೇರೆಸುವುದ ರೊಳಗೆ
ಕಾರ್ ಕೈ ಮಾಡಿ ಹೊರಟೋಗಿತ್ತ //

ಕಲ್ಮೇಶ ಬಡಿಗೇರ
9743539657
.............ಬಾದಾಮಿ..........

- Kalmesh Badiger

25 Aug 2020, 07:39 am