ಕುಡಿದು ಬಂದಾಗ
ಬಂದರು ಶತೃಗಳು ರಣರಂಗಕ್ಕೆ
ಸೌಟು ಪೊರಕೆ ಹಿಡಿದು
ನೆಡೆಸಿದ್ದರು ಚರ್ಚಾ ಭಾಷಣ
ಭಾಗವಹಿಸಿದರು ಊರ ಜನ
ಸುರು ಮಾಡಿದರು ಮಂಗಳಾರತಿ
ಜಾಗರಣೆ ಮಾಡಿದರು ರಾತ್ರಿಯೆಲ್ಲಾ
ಬೆಳಗ್ಗೆದು ನೋಡಿದರೆ
ಮತ್ತೆ ಹಾಡಿತು ಕೋಗಿಲೆಯಂತೆ
ಮತ್ತೆ ಸುರುವಾಯಿತು ಸುಪ್ರಭಾತ
ಕೆಲವರು ಹಸಿದು ಸಾಯುವರು
ಕೆಲವರು ತಿಂದರು ಸಾಯುವರು
ಇನ್ನೂ ಕೆಲವರು ತಾನು ತಿನ್ನದೆ
ತಿನ್ನಲು ಬಿಡದೆ ಸಾಯುವರು
ಬಡವ ಶ್ರೀಮಂತನೆನದೇ
ಬಿಟ್ಟು ಹೋಗುವುದು ಜೀವಾ
ಗಾಳಿಯ ಅಲೆ ಅಲೆಯಾಗಿ
ಸಾಯುವುದು ದೇಹ
ಸೇರುವುದು ಮಣ್ಣಲ್ಲಿ ಮಣ್ಣಾಗಿ
ನೆನಪುಗಳು ಮಾತ್ರ ಅಮರ ಮಧುರ
ನನಗೆ ತಿಳಿದು ತಿಳಿಯಾದೆ
ನನ್ನೆದೆಯಲ್ಲಿ ಹುಟ್ಟಿತು ಪ್ರೀತಿ
ಪ್ರೀತಿಯಿಂದ ಅಪ್ಪಿಕೊಂಡೆನು
ನನ್ನವಳ ಪ್ರೀತಿಯ
ಕಟ್ಟಿಕೊಂಡೆನು ಕನಸುಗಳ
ನನ್ನ ಮಡದಿಯೆಂದು
ಒಬ್ಬರಿಗೆ ಒಬ್ಬರು ಪ್ರೀತಿಸಿದೆವು
ಇದ್ದರೂ ಸತ್ತರು ಒಟ್ಟಿಗೆಯೆಂಬಂತೆ
ಇಬ್ಬರು ಹಂಚಿಕೊಳ್ಳುತ್ತಿದ್ದೇವು
ಹೃದಯಾದ ಮಾತು ಮನಸ್ಸಿನ ನೋವು
ಬಿಟ್ಟಿರಲಾರದಷ್ಟು ಅಚ್ಚಿಕೊಂಡೆವು
ಮನಸು ಕೊಟ್ಟೆವು ಒಬ್ಬರಿಗೆ ಒಬ್ಬರು
ತುದಿಗಾಲಲ್ಲಿ ನಿಲ್ಲುತ್ತಿದೆವೂ
ನೋಡಲು ಮಾತನಾಡಲು
ದಿನಾಲೂ ಕಿತ್ತಾಟವಾಡುತ್ತಿದ್ದೆವು
ಮಾತನಾಡುವ ಸಲುವಾಗಿ
ನನ್ನವಳು ಕಾಣದಿದ್ದರೆ
ನಾ ಆಗುತ್ತಿದೆ ಹುಚ್ಚನಂತೆ
ಅವಳು ಕೂಡ ಬಿಟ್ಟು ಇರಲಾರಳು
ಈ ನನ್ನ ಪ್ರೀತಿಯಿಲ್ಲದೆ
ಯಾರ ಕಣ್ಣು ಬಿತ್ತೋ ಗೋತ್ತಿಲ್ಲ
ನಮ್ಮಿಬ್ಬರ ಪ್ರೀತಿಗೆ
ದೇವರೆ ನಾಚುತ್ತಿದ್ದ ಅಂದು
ನಮ್ಮಿಬ್ಬರ ಪ್ರೀತಿ ಕಂಡು
ದೇವರೇ ಕೊರಗುತ್ತಿದ್ದಾನೆ ಇಂದು
ಹೊಡೆದು ಹೋದ
ನಮ್ಮಿಬ್ಬರ ಪ್ರೀತಿಯ ಕಂಡು
ಆದರೂ ಮರೆಯೋದುಂಟೆ
ನಮ್ಮ ಪ್ರೀತಿಯ
ಜೀವನದಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ಕಲೆ,ಹವ್ಯಾಸ,ಮುನ್ನುಗುವ ಛಲ ಇದ್ದೇ ಇರುವುದು...
ಅವರನ್ನು ಮತ್ತಷ್ಟು ಎತ್ತರಕ್ಕೆ ಮುನ್ನುಗ್ಗಿಸುವವರು ಬೇಕಾಗುವರು...
ನನ್ನ ಜೀವನದಲ್ಲೂ ಒಬ್ಬರು ಪ್ರೇರೇಪಣೆಯಾಗಿ ಬಂದರು..
ನಮ್ಮೆಲ್ಲರ ಒಳಿತಿಗಾಗಿ ಕಷ್ಟ ಪಟ್ಟರು..
ನಮ್ಮ ಸಣ್ಣ ಒಂದು ಒಳ್ಳೆ ಕೆಲಸ,ಅಂಕ ನೋಡಿ ಹುರಿದುಂಬಿಸಿದರು..
ಪಾಠವನ್ನು ಓದಿ,ಅರ್ಥೈಸಿ,ಆನಂದಿಸಿ ಕಲಿಯಲು ತಿಳಿಸಿದರು..
ಭೇದ- ಭಾವವಿಲ್ಲದೆ ಪ್ರತಿಯೊಬ್ಬರಿಗೂ ಬುದ್ದಿ ಪಾಠ ವಿದ್ಯಾದಾನ ಮಾಡಿದರು..
ಕನಸ ಕಂಡೆ ನನ್ನ ಜೀವನವು ಅವರಂತೆ ಆಗಬೇಕೆಂದು..
ಕೊನೆಗೂ ನನಸಾಯಿತು ಆ ನನ್ನ ಕನಸು..
ಓ ಗುರುವೇ
ನನ್ನ ನಮಸ್ಕಾರಗಳು ನಿಮ್ಮ ಚರಣಗಳಿಗೆ..