Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸುಪ್ರಭಾತ

ಕುಡಿದು ಬಂದಾಗ
ಬಂದರು ಶತೃಗಳು ರಣರಂಗಕ್ಕೆ
ಸೌಟು ಪೊರಕೆ ಹಿಡಿದು
ನೆಡೆಸಿದ್ದರು ಚರ್ಚಾ ಭಾಷಣ
ಭಾಗವಹಿಸಿದರು ಊರ ಜನ
ಸುರು ಮಾಡಿದರು ಮಂಗಳಾರತಿ
ಜಾಗರಣೆ ಮಾಡಿದರು ರಾತ್ರಿಯೆಲ್ಲಾ
ಬೆಳಗ್ಗೆದು ನೋಡಿದರೆ
ಮತ್ತೆ ಹಾಡಿತು ಕೋಗಿಲೆಯಂತೆ
ಮತ್ತೆ ಸುರುವಾಯಿತು ಸುಪ್ರಭಾತ

- ರಾಜು ಹಾಸನ

09 Sep 2020, 01:32 am

ಜ್ಞಾನೋದಯ

ತಲೆ ಕೆಡಿಸಿಕೊಂಡು
ಯೋಚಿಸುತ್ತಾ ಕುಡಿದೆ
ಒಂದು ಬಾಟಲ್ ಎಣ್ಣೆ
ಹುಟ್ಟು ಸಾವು ಏಕೆಯೆಂದು

ಎಷ್ಟೇ ಕುಡಿದು ಯೋಚಿಸಿದರೂ
ಅರ್ಥವಾಗಲಿಲ್ಲ ಕೊನೆಯತನಕ
ಖಾಲಿಯಾಗಿದ್ದು ಮಾತ್ರ
ಎಣ್ಣೆ ಬಾಟಲ್ ಗಳು
ಒಂದರ ನಂತರ ಮತ್ತೊಂದರಂತೆ

ಆಗ ಅರ್ಥವಾಯಿತು
ಒಂದು ಖಾಲಿಯಾದರೆ
ಮತ್ತೊಂದು ಬರುವುದು
ಹುಟ್ಟು ಸಾವು ಹೀಗೆ ಎಂದು
ಆದರೂ ತಿಳಿಯಾದು
ಹುಟ್ಟು ಸಾವಿನ ಅಂತರ

- ರಾಜು ಹಾಸನ

08 Sep 2020, 11:25 pm

ಸಾವಿನಲ್ಲೂ ಸಮಾನತೆ

ಕೆಲವರು ಹಸಿದು ಸಾಯುವರು
ಕೆಲವರು ತಿಂದರು ಸಾಯುವರು
ಇನ್ನೂ ಕೆಲವರು ತಾನು ತಿನ್ನದೆ
‌ ತಿನ್ನಲು ಬಿಡದೆ ಸಾಯುವರು
ಬಡವ ಶ್ರೀಮಂತನೆನದೇ
ಬಿಟ್ಟು ಹೋಗುವುದು ಜೀವಾ
ಗಾಳಿಯ ಅಲೆ ಅಲೆಯಾಗಿ
ಸಾಯುವುದು ದೇಹ
ಸೇರುವುದು ಮಣ್ಣಲ್ಲಿ ಮಣ್ಣಾಗಿ
ನೆನಪುಗಳು ಮಾತ್ರ ಅಮರ ಮಧುರ

- ರಾಜು ಹಾಸನ

08 Sep 2020, 12:40 am

ಕಾಣದ ಕಡಲು

ಮುಸ್ಸಂಜೆಗೆ ಮಲಗಿ
ಮುಂಜಾನೆಗೆ ಇರ್ತೀವೂ ಗೋತ್ತಿಲ್ಲ
ಆದ್ರೂ ಆಸೆಗಳಿಗೆ ಕಮ್ಮಿ ಇಲ್ಲ
ಕನಸುಗಳಿಗೆ ಕೊನೆಯೇ ಇಲ್ಲ
ಇಂದು ನಾಳೆಯ ಚಿಂತೆಯೇ ನಮಗೆಲ್ಲ

ಮೈ ತುಂಬಾ ಬಟ್ಟೆ
ಹೊಟ್ಟೆ ತುಂಬಾ ಊಟ
ಕಣ್ಣ್ ತುಂಬಾ ನಿದ್ರೆ
ಕೈ ತುಂಬಾ ಕೆಲಸ ಇದ್ದಾರೆ ಸಾಕು
ಮುಗಿಯುವುದು ಜೀವನ
ಕಣ್ಣಿಗೆ ಕಾಣದಂತೆ

- ರಾಜು ಹಾಸನ

07 Sep 2020, 11:59 pm

ಆಸೆ

ಆಸೆ ಯೋಚನೆ, ನೆನಪುಗಳು
ಹತೋಟಿಯಲ್ಲಿದ್ದಾಗ
ಬಂಡೆಗಲ್ಲಿನ ಮೇಲೂ ನಿದ್ದೆ ಬರುತ್ತೆ.

ಅದೇ ಆಸೆ ಯೋಚನೆ, ನೆನಪುಗಳ
ಗಲಾಟೆ ಮನಸ್ಸಿನಲ್ಲಿ ಹೆಚ್ಚಾದಾಗ
ಬೆಚ್ಚನೆಯ ಹಾಸಿಗೆ ಕೂಡ ಚುಚ್ಚಿ ಎಬ್ಬಿಸೀದಂತಾಗುತ್ತದೆ.......... ಮಂಜು

- ManjuDm

07 Sep 2020, 10:53 pm

ನಾನು ಮತ್ತು ಪ್ರೀತಿ

ನನಗೆ ತಿಳಿದು ತಿಳಿಯಾದೆ
ನನ್ನೆದೆಯಲ್ಲಿ ಹುಟ್ಟಿತು ಪ್ರೀತಿ
ಪ್ರೀತಿಯಿಂದ ಅಪ್ಪಿಕೊಂಡೆನು
ನನ್ನವಳ ಪ್ರೀತಿಯ
ಕಟ್ಟಿಕೊಂಡೆನು ಕನಸುಗಳ
ನನ್ನ ಮಡದಿಯೆಂದು

ಒಬ್ಬರಿಗೆ ಒಬ್ಬರು ಪ್ರೀತಿಸಿದೆವು
ಇದ್ದರೂ ಸತ್ತರು ಒಟ್ಟಿಗೆಯೆಂಬಂತೆ
ಇಬ್ಬರು ಹಂಚಿಕೊಳ್ಳುತ್ತಿದ್ದೇವು
ಹೃದಯಾದ ಮಾತು ಮನಸ್ಸಿನ ನೋವು
ಬಿಟ್ಟಿರಲಾರದಷ್ಟು ಅಚ್ಚಿಕೊಂಡೆವು
ಮನಸು ಕೊಟ್ಟೆವು ಒಬ್ಬರಿಗೆ ಒಬ್ಬರು

ತುದಿಗಾಲಲ್ಲಿ ನಿಲ್ಲುತ್ತಿದೆವೂ
ನೋಡಲು ಮಾತನಾಡಲು
ದಿನಾಲೂ ಕಿತ್ತಾಟವಾಡುತ್ತಿದ್ದೆವು
ಮಾತನಾಡುವ ಸಲುವಾಗಿ
ನನ್ನವಳು ಕಾಣದಿದ್ದರೆ
ನಾ ಆಗುತ್ತಿದೆ ಹುಚ್ಚನಂತೆ
ಅವಳು ಕೂಡ ಬಿಟ್ಟು ಇರಲಾರಳು
ಈ ನನ್ನ ಪ್ರೀತಿಯಿಲ್ಲದೆ

ಯಾರ ಕಣ್ಣು ಬಿತ್ತೋ ಗೋತ್ತಿಲ್ಲ
ನಮ್ಮಿಬ್ಬರ ಪ್ರೀತಿಗೆ
ದೇವರೆ ನಾಚುತ್ತಿದ್ದ ಅಂದು
ನಮ್ಮಿಬ್ಬರ ಪ್ರೀತಿ ಕಂಡು
ದೇವರೇ ಕೊರಗುತ್ತಿದ್ದಾನೆ ಇಂದು
ಹೊಡೆದು ಹೋದ
ನಮ್ಮಿಬ್ಬರ ಪ್ರೀತಿಯ ಕಂಡು
ಆದರೂ ಮರೆಯೋದುಂಟೆ
ನಮ್ಮ ಪ್ರೀತಿಯ

- ರಾಜು ಹಾಸನ

07 Sep 2020, 12:59 am

ಮಾತು

ಮಾತುಗಳು ಮುತ್ತಿನಂತೆ
ಕೆಲವೊಮ್ಮೆ ಸುಂದರ ಸ್ವಾತಿಮುತ್ತಿನಂತೆ,
ಇನ್ನೂ ಕೆಲವೊಮ್ಮೆ ಪರರ ಹೃದಯದಲಿ
ಕಿರಿಕಿರಿ ಮುತ್ತು ಕೊಂಡಂತೆ...!!

ಚಿಂತೆಯಲ್ಲಿ ಬೆಂದವನಿಗೆ
ಮಾತುಗಳು ವ್ಯರ್ಥವಂತೆ ,
ಏಕಾಂಗಿಯಾದವನಿಗೆ ಮಾತೆಯೆಲ್ಲವಂತೆ !!!

ಅಂತೆ , ಕಂತೆಗಳ ನಡುವೆ
ಬದುಕಿದವನಿಗೆ ಜೀವನವೇ ಸಾಕಂತೆ ,
ಹೇಳುವವನಿಗೆ , ಅವನಿಗಿಂತ
ಇತರರ ಜೀವನದಲ್ಲಿ ಧೋಷವಂತೆ !!!

ಮಾತು ಬರದವನಿಗೆ ಶಾಪವಂತೆ .
ಮೌನ ಕೆಲವೊಮ್ಮೆ ಅಸ್ತ್ರವಂತೆ ...!!

- Deepak R

06 Sep 2020, 01:32 pm

ಗುರು

ಜೀವನದಲ್ಲಿ‌ ಪ್ರತಿಯೊಬ್ಬರಿಗೂ ಅವರದೇ ಆದ ಕಲೆ,ಹವ್ಯಾಸ,ಮುನ್ನುಗುವ ಛಲ ಇದ್ದೇ ಇರುವುದು...
ಅವರನ್ನು ಮತ್ತಷ್ಟು ಎತ್ತರಕ್ಕೆ ಮುನ್ನುಗ್ಗಿಸುವವರು ಬೇಕಾಗುವರು...
ನನ್ನ ಜೀವನದಲ್ಲೂ ಒಬ್ಬರು ಪ್ರೇರೇಪಣೆಯಾಗಿ ಬಂದರು..
ನಮ್ಮೆಲ್ಲರ ಒಳಿತಿಗಾಗಿ‌ ಕಷ್ಟ ಪಟ್ಟರು..
ನಮ್ಮ ಸಣ್ಣ ಒಂದು ಒಳ್ಳೆ ಕೆಲಸ,ಅಂಕ ನೋಡಿ ಹುರಿದುಂಬಿಸಿದರು..
ಪಾಠವನ್ನು ಓದಿ,ಅರ್ಥೈಸಿ,ಆನಂದಿಸಿ ಕಲಿಯಲು ತಿಳಿಸಿದರು..
ಭೇದ- ಭಾವವಿಲ್ಲದೆ ಪ್ರತಿಯೊಬ್ಬರಿಗೂ ಬುದ್ದಿ ಪಾಠ ವಿದ್ಯಾದಾನ‌ ಮಾಡಿದರು..
ಕನಸ ಕಂಡೆ ನನ್ನ ಜೀವನವು ಅವರಂತೆ ಆಗಬೇಕೆಂದು..
ಕೊನೆಗೂ ನನಸಾಯಿತು ಆ‌ ನನ್ನ ಕನಸು..
ಓ ಗುರುವೇ
ನನ್ನ ನಮಸ್ಕಾರಗಳು ನಿಮ್ಮ ಚರಣಗಳಿಗೆ..

@ಮೇಘ ಗಣೇಶ್

- Megha s

06 Sep 2020, 10:24 am

ಶಿಕ್ಷಕರು ನೀವು

ಶಿಕ್ಷಕರು ನೀವು
ಜ್ಞಾನದ ರಕ್ಷಕರು
ಮೂಲಾಕ್ಷರ ಕಲಿಸಿ
ಮಕ್ಕಳಿಗೆ ವ್ಯಕ್ತಿಯ
ರೂಪ ಕೊಟ್ಟವರು ನೀವು

ಅಜ್ಞಾನದ ಕತ್ತಲೆಯ ಹೋಗಲಾಡಿಸಿ
ಸುಜ್ಞಾನದ ದೀಪ ಬೆಳಗಿಸಿ ದವರು ನೀವು
ತಿದ್ದಿತೀಡಿ ವಿದ್ಯಾರ್ಥಿಯ ಜೀವನ
ರೂಪಿಸಿದವರು ನೀವು

ಮಕ್ಕಳು ಎಡವಿದಾಗ
ದಿಗ್ದರ್ಶನ ತೋರಿದವರು ನೀವು
ಮಕ್ಕಳ ಸಾಧನೆಯ ಹಾದಿಗೆ
ದಾರಿದೀಪವಾದವರು ನೀವು

ಮಕ್ಕಳಿಗೆ ಮಾರ್ಗದರ್ಶನ ನೀಡುತ
ದೇಶದ ಒಳಿತಿಗೆ ಶ್ರಮಿಸುತ
ಭವ್ಯ ಭಾರತ ಕಟ್ಟಿದವರು ನೀವು

ನೋವನ್ನು ನುಂಗಿ
ಕಷ್ಟಗಳನ್ನು ಸಹಿಸಿಕೊಂಡು
ಮಕ್ಕಳ ಡಗೆ ಮುಗುಳ್ನಗೆ ಬೀರಿ
ಮಕ್ಕಳ ಭವಿಷ್ಯ ರೂಪಿಸಿದವರು ನೀವು

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

05 Sep 2020, 07:46 pm

ಹೆಣ್ಣಿನ ಶೋಷಣೆ

ಮಗಳಿಗೆ ಕೊಡುವರು ಆಭರಣವಾ
ಕರುಳು ಬಳ್ಳಿಯ ಪ್ರೀತಿಗಾಗಿ
ವರನಿಗೆ ಕೊಡವರು ಉಡುಗೊರೆಯ
ಮಗಳು ಚೆನ್ನಾಗಿರಲೆಂದು

ತಾಯಿಯೋಬ್ಬಳು ಮನೆಯಲ್ಲಿದ್ದರೆ
ಗುಡಿಸಿಲು ಇರುವುದು ಅರಮನೆಯಂತೆ
ಕುಡುಕ ಗಂಡನಿದ್ದರೆ
ಅರಮನೆಯು ತಿಪ್ಪೇ ಗುಂಡಿಯಾಗುವುದು

ಸೆರಗು ಕಟ್ಟಿ ಸಾಕುವಳು
ಮನೆ ಮಂದಿಯ ತಾಯಿಯಾಗಿ
ಕುಡಿದು ಕಳೆಯುವನು ಮನೆ ಮಂದಿಯ
ಕುಡುಕ ಗಂಡನಾಗಿ

ದುಡಿದು ಸಾಕುವುದು ಹೆಂಡತಿ
ಕುಡಿದು ವಾಲಾಡುವುದು ಗಂಡಸು
ಬಾಳುವುದು ಸಂಗಾತಿಯ ನೆರಳಲ್ಲಿ
ಆದರೂ ಬೇಕು ವರದಕ್ಷಿಣೆ ತಿಂದು ತೇಕಲು

ಮಗಳು ಸುಖವಾಗಿರಲೆಂದು ಕೊಡುವರು
ಕೂಡಿಟ್ಟ ದುಡ್ಡು ವರದಕ್ಷಿಣೆಯಾಗಿ
ಆದರೂ ತಪ್ಪಿಲ್ಲ ಹೆಣ್ಣಿನ ಗೋಳು
ವರನು ಸುಖವಾಗಿರಲೆಂದು ಕೊಡುವುದಿಲ್ಲ
ವಧು ದಕ್ಷಿಣೆಯ
‌ ಆದರೂ ನಿಂತಿಲ್ಲ ಹೆಣ್ಣಿನ ಶೋಷಣೆ

- ರಾಜು ಹಾಸನ

05 Sep 2020, 12:51 am