Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅತಿಯಾದ ಪ್ರೀತಿ ಚುಚ್ಚುವುದು ಮುಳ್ಳಾಗಿ
ಅತಿಯಾದ ನಂಬಿಕೆ ಕೊಲ್ಲುವುದು ಖಡ್ಗವಾಗಿ
ಅತಿಯಾದ ಚಿಂತೆ ಸುಡುವುದು ಬೆಂಕಿಯಾಗಿ
- ರಾಜು ಹಾಸನ
16 Sep 2020, 12:29 am
ನಾ ಕಂಡ ದೇವತೆ ನೀನು
ನಿನ್ನ ಮಾಡೆಯಲಾರದ ಪಾಪಿ ನಾನು
ಮಾತೆಂದೂ ಸಿಗಲಾರದ ಗೊಂಬೆ ನೀನು
ಮತ್ತೆಂದೂ ಮರೆಯಲಾರದ ಪಾಪಿ ನಾನು ❤️❤️
ಅಮರ ಪ್ರೇಮಿ, ನಾಗೇಂದ್ರ, ಕುಣಿಗಲ್
7349111068
- nagendra
15 Sep 2020, 11:54 pm
ನೋಟ
ನಗರವ ನೋಡಲು ಹೊರಟನು ಹಳ್ಳಿಯ ಗಮಾರ
ಗಮಾರಗೆ ತಿಳಿಯದು ನಗರದ ನೋಟ
ನೋಟವ ನೋಡುತ ದಿಕ್ಕೆಟ್ಟು ನಿಂತ
ನಿಂತನು ದರ್ಪದಿ ನೋಡುತ ಸುತ್ತಲು ಓಡುವ ಗಾಡಿಯ
ಗಾಡಿಯ ಶಬ್ದದಿ ಕಿವಿ ಮುಚ್ಚಿಕೊಂಡನು
ಮುಚ್ಚಿಕೊಂಡನು ತನ್ನ ಮೂಗನೂ ಧೂಳಿಗೆ
ಧೂಳ ಹತ್ತಿ ಕುಳಿತಿದ್ದವು ಗಿಡಮರ ಎಲ್ಲವೂ
ಎಲ್ಲವೂ ಹೊಸದು ನೋಟವು ಸಾಲದು
ಸಾಲದು ಜೇಬಲಿ ಕುಳಿತಿಹ ದುಡ್ಡದು!
ದುಡ್ಡೆ ದೊಡ್ಡಪ್ಪ ನಗರದ ಜೀವನ
ಜೀವನ ಹಳ್ಳಿಯಲಿ ಬಲು ಸುಂದರ
ಸುಂದರ ಪರಿಸರ ಪರಿಶುದ್ಧ ಜಲವು
ಜಲಮಾಲಿನ್ಯವು ನಗರದ ಕೊಳೆ ಹೊಳೆಯು
ಹೊಳೆಯುತಲಿಹುದು ಕಟ್ಟಡದ ಬಣ್ಣದ ಬೆಳಕು
ಬೆಳಕು ಬೇಕೇ ಬದುಕಲಿ ನಗರಕೆ ನುಗ್ಗು
ನುಗ್ಗುತ ಕತ್ತೆಯ ತರದಲಿ ದುಡಿಯುತ
ದುಡಿಯುತ ದುಡ್ಡನು ತಾ ಕೂಡಿಡುತ
ಕೂಡಿಟ್ಟ ದುಡ್ಡಲಿ ತನ್ನೂರಿಗೆ ಬಂದು
ಬಂಧು ಬಳಗವ ಸೇರಿ ಸಂತಸದಿ ಜೀವಿಸು..
@ಪ್ರೇಮ್@
12.09.2020
- PremUdayKumar
15 Sep 2020, 11:16 pm
ಬದುಕು
ಭ್ರಮೆಯಲಿ ಬದುಕುವ ಬದುಕದು ಬಾಡುವ ಸುಮದಂತಲ್ಲವೇ ಬುವಿಯಲ್ಲಿ?
ಬಂಧನ ಬೇಡವು ಬೇಸರ ಬರದಿರೆ ಭಯವದು ಬರಬಾರದು ಬದುಕಿನಲಿ..
ಬಾಡದೆ ಇರಲಿ ಹೂವಿನ ಹಾಗೆ ಭವಿತವ್ಯದ ಭಂಡಾರ ಕನಸುಗಳು
ಭೋರ್ಗರೆಯುವ ಜಲಧಿಯ ತೆರದಿ ಬೊಬ್ಬಿರಿಯುತಲಿವೆ ಭಾವಗಳು!
ಬೇರಿನ ತುದಿಯದು ನೀರಾಹಾರವ ಹೀರುವ ಹಾಗಿದೆ ಜೀವನ ಕ್ಷಣವು
ಬೇಗೆಯು ನಿತ್ಯವೂ ಬೆಂಬಿಡದೆ ಕಾಡಿದೆ ಬಾಳಿಲಿ ಬೇಕದು ಸಂಯಮವು..
ಬೀಜವ ಹಾಕಿ ಗಿಡವನು ನೆಟ್ಟೊಡೆ ಹಣ್ಣನು ಸೇವಿಪರುಂಟೇನು ಜಗದಲಿ?
ಬೇರಿನ ಮೇಲೆ, ಕೆಳಗಡೆ ಕೂಡ, ಗೊಬ್ಬರ ನೀರನು ಹಾಕುವುದಲ್ಲದೆ ಪಾಲನೆ ಪೋಷಣೆ ಕಲಿ ರೈತನಲಿ!
ಬವಣೆಯು ಇರದೆ ಬದಲಾವಣೆ ಇರದು ಭವದ ಭಾಗ್ಯದ ಬಲೆಯಲ್ಲಿ
ಬೂರುಗ ಹೂವಿನ ಹಾಗೆಯೇ ಪರಿಮಳ ಸಮಾಜ ಸೇವೆಯ ಕೈಯಲ್ಲಿ..
ಬೊಗಳೆಯ ಬಿಡುತಲಿ ಬೇಡುವ ಜನರದು ಬಳಗವೇ ಇಹುದು ನಾಡಿನಲಿ
ಬೇಸರಗೊಳ್ಳದೆ ಪ್ರೀತಿಯ ಮನದಲಿ ಬಾಳಲು ಕಲಿ ನೀ ಬದುಕಿನಲಿ..
@ಪ್ರೇಮ್@
14.09.2020
- PremUdayKumar
15 Sep 2020, 11:13 pm
ಶಿಶುಗೀತೆ
ವರ್ಣ ಮಾಲೆ
ಅರಸನ ಹಾಗೆ
ಆಟಕೆ ಹೋಗೋ
ಇಲಿಯನು ಕಂಡು
ಈಟಿಯ ತಾರೋ
ಉದ್ದದ ಈಟಿಯ
ಊರುತ ಬಾರೋ
ಋಷಿಯಂತೆ ಕುಳಿತು
ಎಲೆಗಳ ಮರೆಯಲಿ
ಏರು ತಗ್ಗಿನಲಿ
ಐದಾರು ದಿಕ್ಕಿನಲಿ
ಒಲವಲಿ ಬದುಕುತ
ಓಡಲು ಬಿಡದೆ
ಔಷಧ ಹಾಕಿ
ಅಂಗಳದಿ ಹುಡುಕಿ
ಅಃ ಇಲಿಯ ಹಿಡಿದೇ ಬಿಟ್ಟೆ!
@ಪ್ರೇಮ್@
10.09.2020
- PremUdayKumar
15 Sep 2020, 11:12 pm
ನಗು ನಗುತಾ ಹೋದಳು
ಮರೆತು ಬಿಟ್ಟು ಹೋದಳು
ನೋಡಿ ಅಳೋದು ಯಾಕಲೇ
ಹೋದೊಳ್ ಹೋದೊಳ್ ಹೋಗಲಿ
ಬಂದೊಳ್ ಬಂದೊಳ್ ಬರಲ್ಲಿ
ಕುಡಿದು ಸಾಯೋದು ಯಾಕಲೇ
ಬಿಟ್ಟು ಹೋದೊಳ ನೆನೆದು
ಕುಡಿದು ಕುಣಿಯೋದು ಯಾಕಲೇ
ಕುಡಿದು ಗೋರಿಯಾಗಬೇಡಲೇ
- ರಾಜು ಹಾಸನ
15 Sep 2020, 07:01 pm
ನಿನ್ನ ಅಂಗೈಯ ತಾಕಿ ಮದರಂಗಿಗೂ, ಮುದ್ದಾದ ರಂಗು ಬಂದಿದೆ.
ನಿನ್ನ ಅಂಗಾಲ ಪಾದ ಪದ್ಮ ತಾಕಲೆಂದೇ ಈ ಧರಣಿ, ಧರಣಿ ಕುತ್ತಿದೆ.
ನೀನು ಅಂಗಳದಲ್ಲಿ , ತಿಂಗಳ ಬೆಳಕಿನಲಿ ಆಡುತ್ತಿದ್ದಾರೆ ಇಂಗೆ.
ಒಟ್ಟೊಟ್ಟಿಗೆ ಎರಡೆರಡು ಚಂದ್ರನ್ನ ನೋಡದಂಗೆ ಅಗೋಯ್ತು ನಂಗೆ.
ನಿನ್ನ ಕಾಡುವ ಕಣ್ಣುಗಳು ಅವಳದು ಹರಳುಗಳು.
ನಿನ್ನ ತೂಗುವ ಉಬ್ಬುಗಳು ಕಮನಬಿಲ್ಲುಗಳು.
ನಿನಾಡುವ ಮಾತುಗಳು ಸಿಹಿ ಜೇನಿನ ಬಿಂಧುಗಳು.
ಕಣ್ಣಿನ ನೋಟಗಳು ತಲೆ ತಿರುಗಿಸೋ ರಾಟೆಗಳು.
ನಿನ್ನ ನೋಡಿ ಬಾಗುತೈತೆ ಅ ಸೂರ್ಯಕಾಂತಿ.
ನಿನ್ನ ನೋಡುವ ಕ್ಷಣವೆಲ್ಲ, ನನಗೆ ಸಂಕ್ರಾಂತಿ.
- NaveenkumarK
15 Sep 2020, 10:37 am
ಮರುಜನ್ಮ ಒಂದಿದ್ದರೆ
ಮತ್ತೆ ಹುಟ್ಟಿ ಬಾ ಹುಡುಗಿ
ನನಗಾಗಿ..
ಬತ್ತಿ ಹೋದ ಹೃದಯ ದಲ್ಲಿ
ಮತ್ತೆ ಪ್ರೀತಿಯ ಹನಿ
ಮಳೆಯಾಗಿ...
ಕೃಷ್ಣ ಬಿಲ್ಲಾಡಿ ಮೇಲ್ ಬೈಲು
- krishna Billadi melbailu
15 Sep 2020, 10:15 am
ಪ್ರೀತಿ ಮಾಡಿದರೆ
ಬದುಕು ಬಂಗಾರ
ಸ್ನೇಹ ಮಾಡಿದರೆ
ಬದುಕು ಬಲು ಸುಂದರ
ಮದ್ಯಪಾನ ಮಾಡಿದರೆ
ಆರಾಡಿ ಮೂರಾಡಿ ಗ್ಯಾರಂಟಿ
- ರಾಜು ಹಾಸನ
15 Sep 2020, 10:13 am
- Nagana Gowda
15 Sep 2020, 01:20 am