ಕಾಡಿನ ದುಷ್ಟ ಪ್ರಾಣಿಗಳು
ಆಟಹಾಸ ಮೆರೆಯುವುದು
ಸಾಧು ಪ್ರಾಣಿಗಳ ಪ್ರಾಣದೊಂದಿಗೆ
ನಾಡಿನ ದುಷ್ಟರು
ಆಟಹಾಸ ಮೆರೆಯುವುದು
ಮುಗ್ಧ ಜನರ ಜೀವನದೊಂದಿಗೆ
ದುಷ್ಟ ಪ್ರಾಣಿಗಳ
ಬೇಟೆಗೆ ಬರುವನು ಬೇಟೆಗಾರ
ದುಷ್ಟರ ಸಂಹಾರಕ್ಕೆ ಬರುವನು
ಮಹಾನಾಯಕ ಜೈ ಭೀಮ್
ದೇವರಿಂದ ನಾವಲ್ಲ
ನಮ್ಮಿಂದ ದೇವರು
ನಮ್ಮ ಸೃಷ್ಟಿಕರ್ತ ದೇವರಲ್ಲ
ದೇವರ ಸೃಷ್ಟಿಕರ್ತರು ನಾವು
ದೇವರು ನಮ್ಮನ್ನು ರಕ್ಷಿಸುವುದಿಲ್ಲ
ನಾವೇ ದೇವರನ್ನು ರಕ್ಷಿಸುವುದು
ಜನರಿಂದ ಹುಟ್ಟಿ
ಜನರಿಂದಲೇ ರಕ್ಷಣೆ ಪಡೆಯುವ
ಹಾದಿ ಬೀದಿಯಲ್ಲಿ ಬಿದ್ದಿರುವ
ಕಲ್ಲಿನ ಚೂರು ದೇವರಾಗುವುದೇ
ದೇವರಿಗಾಗಿ
ಹಬ್ಬ ಹರಿದಿನವೆಂದು
ಅನ್ನ ನೀರು ತಿನ್ನದೆ
ಉಪವಾಸ ಮಾಡುವ ದಡ್ಡ ಜನ
ಒಂದು ಕ್ಷಣ ಗಾಳಿ ಸೇವಿಸದೇ
ಮಾಡಲಿ ಉಪವಾಸ
ಮುರ್ಚೆ ಬಂದು ಬಿದ್ದಾರೆ
ಜನ ವೈದ್ಯರು ಬರುವರೆ ವಿನಃ
ಹಾದಿ ಬೀದಿಯಲ್ಲಿ ಬಿದ್ದರುವ
ಕಲ್ಲು ದೇವರಲ್ಲ
ಅಪ್ಪ ಅಮ್ಮನ ಮನಸ್ಸು
ಮಕ್ಕಳ ಮನಸ್ಸಿನಂತೆ
ಅವರನ್ನು ಮಕ್ಕಳಂತೆ
. ನೋಡಿಕೊಳ್ಳುವುದರಲ್ಲಿ ಸಿಗುವಾ
ಖುಷಿ ಸ್ವರ್ಗಕ್ಕಿಂತ ಮಿಗಿಲು
ಕೊನೆಗಾಲದಲ್ಲಿ
ಅಪ್ಪ ಅಮ್ಮ ಬಯಸುವುದು
ಪ್ರೀತಿಯಿಂದ ನಾವು ಆಡುವ
ನಾಲ್ಕೇ ನಾಲ್ಕು ಮಾತುಗಳು
ತಮ್ಮ ಮಕ್ಕಳು ತಮ್ಮ ಜೊತೆಯಲ್ಲಿ
ಇರಬೇಕೆಂಬುದೇ ಹೊರೆತು
ಅನ್ನ ನೀರಲ್ಲ ಸಿರಿ ಸಂಪತ್ತಲ್ಲ
ನಮ್ಮಿಂದ ಇಷ್ಟು ಆಗದಿದ್ದರೆ
ನಾವು ಬದುಕಿ ಸಾಧಿಸುವುದಾದರೂ ಏನು