Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹಾಗೆ ಸುಮ್ಮನೆ

ಯಾರು ಬಲ್ಲವರು ಇಲ್ಲ
ಯಾರು ಹೋಗಿ ಬಂದವರು ಇಲ್ಲ
ಯಾರು ನೋಡಿ ಬಂದವರು ಇಲ್ಲ
ಕಣ್ಣಿಗೆ ಕಾಣದ ಸ್ವರ್ಗ ನರಕಕ್ಕೆ

ಯಾವ ದೇವಾ ಲೋಕವು ಇಲ್ಲ
ಯಾವ ಪಾತಾಳ ಲೋಕವು ಇಲ್ಲ
ಸದ್ಯಕ್ಕೆ ಇರುವುದು ಒಂದೇ ಲೋಕ
ಅದೇ ನಮ್ಮ ನಿಮ್ಮೆಲ್ಲರ ಭೂ ಲೋಕ

ಸ್ವರ್ಗ ನರಕ ಎಲ್ಲಿಯು ಇಲ್ಲ
ಇಲ್ಲಿಯೇ ಇರುವುದು ಎಲ್ಲ
ನಾವು ಇಲ್ಲಿರುವುದು ಸುಮ್ಮನೆ
ಹೋಗಬೇಕು ಎಲ್ಲ ಬಿಟ್ಟು
ಕಾಲ ಬಂದಾಗ ಹಾಗೆ ಸುಮ್ಮನೆ

- ರಾಜು ಹಾಸನ

24 Sep 2020, 02:14 am

ಪ್ರಶ್ನೆಗೆ ಸಾಕ್ಷಿಯೇ ಉತ್ತರ

ಜನ್ಮ ಕೊಟ್ಟ ತಂದೆ ತಾಯಿ
ಬದುಕಲು ಜಾಗ ಕೊಟ್ಟ ಭೂ ತಾಯಿ
ದಣಿವು ನೀಗಿಸಿದ ಕಾವೇರಿ ತಾಯಿ
ಹಸಿದ ಹೊಟ್ಟೆಗೆ ಅನ್ನ ಹಾಕಿದ ರೈತ
ಜೀವಿಸಲು ಗಾಳಿ ಬೆಳಕು ಕೊಟ್ಟ ಪ್ರಕೃತಿ
ಎಲ್ಲರನ್ನೂ ಕಾಯುವ ಸೈನಿಕ
ಕಣ್ಣಿಗೆ ಕಾಣುವ ನಿಜವಾದ ದೇವರುಗಳು

- ರಾಜು ಹಾಸನ

24 Sep 2020, 01:30 am

ಕಾಡುವ ಹುಡುಗಿಯೇ

"ಪದೇ ಪದೇ ಕಾಡುವ ಹುಡುಗಿಯೇ ಹೇಳು ನೀ ಯಾರು? "
ನನ್ನ ಜೀವನದಿ ಬಂದೆ ಖುಷಿಯೆoಬ ಹೆಸರಿನಲ್ಲಿ.
ನನ್ನಲೇ ಕಾಣದಂತ ಹೊಸದಿ ರೂಪವನ್ನು ಬಿತ್ತರಿಸುತ ಹೃದಯದಲ್ಲಿ.
ನೀ ನಗುತಿರುವೆ ಮರುಳುಗಾಡಿನಲ್ಲಿ ನೀರು ಚಿಮ್ಮುವ ಪರಿಯಲ್ಲಿ.
ನನ್ನ ಜೀವನದ ಗೋಡೆಯಲ್ಲಿ ನೀ ಇರುವೆ ಎಂದು ಮಾಸದ ಬಣ್ಣದ ಥರದಲ್ಲಿ.
ನೂರಾರು ಹುಡುಗಿಯರು ಕಣ್ಣು ಮುಂದೇ ಬಂದರು ನಿನ್ನ ಮುದ್ದಾದ ಮುಖ ಮಾತ್ರ ಕಾಡುವುದು ಕನಸಿನಲ್ಲಿ.
ಇರಲು ನೀನ್ಯಾರು, ಉಳಿಸಿಕೊಳ್ಳಲು ನಾನ್ಯಾರು
ಇಷ್ಟೆಲ್ಲ ಕೊಟ್ಟ ನಿನಗೆ ನಾ ಕೇಳುವುದು ಒಂದೇ ಕೊನೆಯಲ್ಲಿ
ಸಾವಿನ ಅಂಚಿನಲ್ಲಿ ಬಿಡುವಿಯ ನೀರು ಬಾಯಲ್ಲಿ?................

- MadhumalaH

23 Sep 2020, 11:22 pm

ಪುಂಗಿ ದಾಸ

ಜಲ ಗಂಡಾಂತರ ವಾಯು ಗಂಡಾಂತರ
ಅಗ್ನಿ ಗಂಡಾಂತರ ಕಾದಿದೆ ನಿಮ್ಮಗೆಂದು
ಬುಡುಬುಡುಕೆ ಬಿಡುವ ಜ್ಯೋತಿಷಿಯೇ
ಒಂದು ದೊಡ್ಡ ಗಂಡಾಂತರ ಈ ಸಮಾಜಕ್ಕೆ

ತರ ತರವಾಗಿ ಪುಂಗಿ ಊದಿ
ಪಂಗನಾಮ ಹಾಕುವ ಪುಂಗಿ ದಾಸನ
ಪುಂಗಿ ತಾಳಕ್ಕೆ ತಕ್ಕಂತೆ ಕುಣಿದು
ಹಳ್ಳಕ್ಕೆ ಬೀಳುವರು ಈ ದಡ್ಡ ಜನರು

ಯಾರ ಕಣ್ಣಿಗೂ ಕಾಣದ ಪೀಡೆ ಪಿಶಾಚಿಗಳು
ಅ ದಿಕ್ಕು ಈ ದಿಕ್ಕಿನಲ್ಲಿವೆಂದು
ಬುರುಡೆ ಬಿಟ್ಟು ನಂಬಿಸಿದ್ದವನೇ
ದೊಡ್ಡ ಪೀಡೆ ಪಿಶಾಚಿ ಈ ಮನುಕುಲಕ್ಕೆ

- ರಾಜು ಹಾಸನ

23 Sep 2020, 11:15 pm

ಪ್ರೇಮ ರೋಧನೇ

ಬೇಡ ಮಗ ಬೇಡ
ಈ ಎಣ್ಣೆ ಸಿಗರೇಟು ಸಹವಾಸ
ಬಿಟ್ಟು ಬಿಡು ಮಗ ಬಿಟ್ಟು ಬಿಡು
ಈ ಹೆಂಡ ಸಾರಾಯಿ ಕುಡಿಯೋದು
ಅವಳ ನೆನಪು ಮರೆತು
ಒಮ್ಮೆಲೇ ಅತ್ತು ಬಿಡು ನೀ
ಜೋರಾಗಿ ನಕ್ಕು ಬಿಡು ನೀ
ಹೋಗ್ಬೇಡ ಮಗ ಹೋಗ್ಬೇಡ
ನೀ ಅವಳ ಹಿಂದೆ ಹಿಂದೆ
ಹೋಗಿ ಸಾಯಬೇಡ
ಅಳಬೇಡ ಮಗ ಅಳಬೇಡ
ನೀ ಅತ್ತು ಅತ್ತು ಆಳಾಗಬೇಡ
ಸತ್ತು ಸಮಾಧಿಯಾಗಬೇಡ
ನಗು ನಗುತ್ತಾ ಬಾಳು
ಪ್ರೀತಿಸಿ ಹೋದವಳ ನೆನಪಲ್ಲಿ

- ರಾಜು ಹಾಸನ

23 Sep 2020, 04:39 pm

ಬಾರಿ ಆವಾಂತರ

ಆಸೆಯನ್ನು ಹೊತ್ತು ತಂದ ಮನುಷ್ಯ
ಹೊತ್ತು ತರಲಿಲ್ಲ ಆಯಸ್ಸನ್ನು
ಮನುಷ್ಯ ಆಯಸ್ಸನ್ನು
ಹೊತ್ತು ತಂದಿದ್ದರೆ ಕಾದಿರುತ್ತಿತ್ತು
ಭೂಮಿಗೆ ದೊಡ್ಡ ಗಂಡಾಂತರ
ಅಂತು ಇಂತು ತಪ್ಪಿತು ಬಾರಿ ಆವಾಂತರ

- ರಾಜು ಹಾಸನ

23 Sep 2020, 01:37 pm

ಕಾಲದ ಕೈ ಗೊಂಬೆ

ಇದು ಯಾಂತ ಲೋಕವಯ್ಯಾ
ಯಾರು ಬಲ್ಲವರಿಲ್ಲ ಯಾರು ಕಂಡಿಯಾರಿಲ್ಲ
ಈ ಭೂ ಲೋಕದ ನಾಟಕವ
ಮನುಜನ ಗೊಂಬೆಯಾಟವಾ
ಒಬ್ಬರ ಕಂಡರೆ ಒಬ್ಬರಿಗೆ ಆಗುವುದಿಲ್ಲ
ಕಂಡಾಗ ನಗು ನಗುತ್ತಾ ನುಡಿಯುವರು
ಬೆಲ್ಲ ತುಪ್ಪದ ಮಾತು
ಮನದಲ್ಲಿ ಹಾಗೆಯ ತುಂಬಿಕೊಂಡು
ಕಾಲಕ್ಕೆ ತಕ್ಕಂತೆ ನಟಿಸಿ ನರ್ತನ ಮಾಡುವರು
ಬಣ್ಣ ಬಣ್ಣದ ಮುಖವಾಡ ಧರಿಸಿ
ಇಲ್ಲಿ ಯಾರೂ ಯಾರ ಕೈ ಗೊಂಬೆಯಲ್ಲ
ಯಾಲ್ಲರು ಕಾಲದ ಕೈ ಗೊಂಬೆಯಾಗಿರುವರಯ್ಯ

- ರಾಜು ಹಾಸನ

23 Sep 2020, 11:33 am

ಹೇಳಿ ಹೊರಟ್ಟವಳೇ..

ಭಾವನೆಗಳ ಹುಡುಕಾಟದಲ್ಲಿ, ಭಾರದ ಭಾಗವಾಗಿ ಉಳಿದವಳೇ.
ವರಿಸಲು ಬಂದಾಗ , ಹೃದಯದ ಬಾಗಿಲು ಮುಚ್ಚಿದವಳೇ.
ನಿ ನನಗೆ ಎಲ್ಲಾ ಎಂದರು, ನೀ ನನ್ನವನಲ್ಲ ಎಂದು ಹೇಳಿ
ಹೊರಟ್ಟವಳೇ..

ಬೇಡಿ ಬೇಡಿ ಕೇಳಿದರೆ, ಅದರಲ್ಲಿ ಪ್ರೀತಿ ಎಲ್ಲಿದೆ.
ಬೇಡ ಎಂದು ಹೇಳಿ ಹೊರಟ್ಟವಳನ್ನೇ ಮನಸ್ಸು ಮೆಚ್ಚಿದೆ.

- NaveenkumarK

23 Sep 2020, 11:13 am

ಮನ ಮಿಡಿಯುವ ಕಥೆ

ಇಂದು ಮುಳುಗಿ ನಾಳೆ ಉದಯಿಸುವ
ಸೂರ್ಯ ಚಂದ್ರರನ್ನ ನೋಡ್ತಿವೋ ಗೋತ್ತಿಲ್ಲ
ಜೀವನವೆಂಬುದು ಕ್ಷಣಿಕ
ಯಾವಾಗ ಹೇಂಗೆ ಎಲ್ಲಿ ಯಾಕ್
ಹೋಗುತ್ತೆ ಅಂತ ಯಾರಿಗು ಏನು ಗೋತ್ತಿಲ್ಲ
ಆದರೂ ನಾವು ನಮ್ಮವರಿಂದ ದೂರಾಗಿ
ಮಣ್ಣಲ್ಲಿ ಮಣ್ಣಾಗಿ ಎದೆಯ ಮೇಲೆ
ಮಣ್ಣಿನ ಗೋರಿ ಕಟ್ಟಿಕೊಂಡು ಮಲಗಿದ್ದರೂ
ಆಗಾಗ ಬಂದು ಕೂಗಿ ಕರೆಯುವಳು
ಕರುಳು ಬಳ್ಳಿಯ ಕಂದನ ನೆನೆದು
ಒರೆಸುವಳು ಕಂದನ ಗೋರಿಯ
ತನ್ನ ಕಣ್ಣೀರ ಮಳೆಯ ಸುರಿಸಿ
ಹೊವಿನ ಮಾಲೆಯ ಶೃಂಗಾರ ಮಾಡಿ
ತಿಂಡಿ ತಿನಿಸುಗಳನ್ನು ತನ್ನ ಸೇರಗಲ್ಲಿ
ಕಟ್ಟಿ ತಂದು ಗೋಳಾಡುವಳು
ಮನ ಮಿಡಿಯುವಂತೆ ಕೂಗಿ ಕರೆಯುತ್ತಾ
ಇದೆ ಅಲ್ಲವೇ ಕರುಳ ಬಳ್ಳಿಯ ಸಂಬಂಧ
ಅದಕ್ಕೆ ಹೇಳುವುದು ತಾಯಿಯೇ ದೇವರೆಂದು

- ರಾಜು ಹಾಸನ

23 Sep 2020, 12:12 am

ಪ್ರೀತಿಯ ಬಂದ

ಪ್ರೀತಿಸುವೆ ನಿನ್ನ ಮನದಣತಿಯಂತೆ
ಕಲ್ಮಶವಿಲ್ಲದೆ
ಆರಾಧಿಸುವೆ ನಿನ್ನ ಭಾವನೆಗಳ ತುಸು ಲೋಪ ಬಾರದಂತೆ
ನಿನ್ನವರನ್ನು ಕಾಣುವೆ ನನ್ನವರಂತೆ
ನಿನ್ನಲ್ಲಿ ಬೆಸೆಯುವ ನಿನ್ನುಸಿರಿನಂತೆ
ನಿನ್ನ ಸುಖ-ದುಃಖಗಳಲ್ಲಿ ಜೊತೆಯಿರುವೆ ನೆರಳಿನಂತೆ
ನೀ ಇರುವ ತನಕ ನಾ ಜೊತೆಗಿರುವೆ
ನೀನಿಲ್ಲದಿರೆ ನಾ ನಿಂಬಾಲಿಸುವೆ ನಿನ್ನ ಆತ್ಮದಂತೆ
ನಾವಿಬ್ಬರೂ ಒಂದೇ ಆತ್ಮ ಎರಡು ದೇಹವಿದ್ದಂತೆ

- HarishKumarm

22 Sep 2020, 08:53 pm