Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಒಂಟೆ ಬಂದೈತಣ್ಣ ಊರಲ್ಲಿ
ಡುರುಕಿಯ ಹೊಡೆಯುತ್ತಾ
ದುಬ್ಬದ ಮೇಲೆ ಗುಬ್ಬಿಯ
ಗೂಡನು ಹೊತ್ತು ಬಂದೈತಣ್ಣ //
ಉದ್ದನೆ ಕಾಲು ಗಿಡ್ಡನೆ ಬಾಲ
ಎಷ್ಟುದ್ದ ಇರುವುದು ನೋಡಣ್ಣ
ಕತ್ತನು ಎತ್ತಿ ಹಾವಿನ ಹಾಗೆ
ಅತ್ತಿತ್ತ ನೋಡುತಲಿಹುದು ಬಾ ಅಣ್ಣ //
ಒಂಟೆಯ ನೋಡಲು ಊರಿನ
ಭಂಟರ ದಂಡೆ ಸೇರಿತು ನೋಡಣ್ಣ
ಕೊರಳಿನ ಗಂಟೆಯ ಸದ್ದಿಗೆ ಚಿಣ್ಣರು
ಕುಣಿಯುತ ಬಂದರು ಬಾ ಅಣ್ಣ //
ಹೆಜ್ಜೆಯ ಎಣಿಸಲು ಹುಚ್ಚೆದ್ದು ಹೋಗಿ
ಪೆಚ್ಚು ಮೊಗದಲಿ ಮರಳಿದರು ನೋಡಣ್ಣ
ಮಕ್ಕಳ ಮುಂದೆ ಗಂಟೆ ಗಟ್ಟಲೆ ಕೂತು
ಒಂಟೆಯ ಮಾತು ಕಟೆದರು ಕೇಳಣ್ಣ //
ಕಲ್ಮೇಶ ಬಡಿಗೇರ
9743539657
. ........ಬಾದಾಮಿ....
- Kalmesh Badiger
04 Oct 2020, 01:54 pm
ಕಾಣದ ಕಡಲಲಿ ಏನಿದೆಯೋ ನಾ ಕಾಣೆ
ನೀ ಕಂಡಿದ್ದರೆ ಹೇಳುಬಾ ಓ ಜಾಣೆ
ಕಾಣಬೇಕೆಂಬ ಹಂಬಲ ಕಾಣದ ಕಡಲನು
ಸೇರಬೇಕೆಂದು ಕಾತುರ ಕಾಣದ ಕಡಲಿಗೆ
- kannadatiyabhavanegalu
04 Oct 2020, 12:59 pm
ಬಣ್ಣದ ಲೋಕದ ಬುಗುರಿಯಲಿ
ತಿರುಗುತ ಲಿರುವೇನು ನಾನಿಲ್ಲಿ
ಭೂತ ಭವಿಷ್ಯದ ಪರಿವೆ ಇಲ್ಲದೆ
ಕುಳಿತಿರುವೆ ನೋಡು ಮರೆತಿಲ್ಲಿ //
ಚಿನ್ನದ ಮಾತುಗಳು ಇನ್ನೆಲ್ಲಿ
ಕಣ್ಣಿಗೆ ಕಾಣದೆ ನೀ ಇಲ್ಲೇಲ್ಲು
ಬಡ ಬಡಿಸುತಿರುವೆ ನಾನಿಲ್ಲಿ
ಕೆಳಿಸದೇನೋ ನೀನಗಲ್ಲಿ //
ಪ್ರೇಮಿಗಳ ದಿನ ಇನ್ನೆಲ್ಲಿ
ಮಧುರ ಮಾತು ಮರೆತಿಲ್ಲ
ನೆನಪಿಸುತ್ತಿರುವೆ ನಾನಿಲ್ಲಿ
ಕನವರಿಸುತಿರುವೆ ಕೇಳಿಲ್ಲಿ //
ನೆನಪಿನ ಕಾಣಿಕೆ ಕಾಣದಾಯ್ತೆ
ಕುಣಿಯುವ ಕಾಲು ನಿಂತೊಯ್ತು
ಕಣ್ಣಿಗೆ ಕತ್ತಲೆಯು ಕಾವಿದಾಯ್ತು
ನೀ ಬರದೆನ್ಮನ ಬರಿದಾಯ್ತು //
ಬಂತೆ ಬಂತು ನೋಡು ಆದಿನ
ಗುಲಾಬಿ ಕೊಟ್ಟ ಕ್ಷಣದ ದಿನ
ಪ್ರೀತಿಸುವ ಆಸೆಯೂ ಚಿಗಿತ
ಆ ಮಧುರ ಗಳಿಗೆಯ ದಿನ //
ಕಲ್ಮೇಶ ಬಡಿಗೇರ
9743539657
........ಬಾದಾಮಿ.......
- Kalmesh Badiger
04 Oct 2020, 09:09 am
ಹದಿನಾರರ ಹುಡುಗಿ ನಾನು
ಭಿನ್ನಾನದ ಬೇಡಗಿಯು ನಾನು
ಬ್ಯಾಸರಕೀ ಮೂಡತಾವ
ನನಗ ಆಸರಕ ಬೇಡತಾವ //
ಎಳೆ ಮನಸಿನ ಆಳದಲಿ
ಮಜ್ಜಿಗೆ ಕಡದಂಗೆ ಆಗಿ
ಗೆಜ್ಜೆ ಕಾಲ್ ಕುಣಿಸತಾವಾ
ಎದೆ ನಡುಗಿ ಹಾಡತಾವ //
ಜೋಡಿ ಗಿಳಿಗಳ ಕಂಡು
ಜೊತೆ ಇರದೆ ನಾ ನೊಂದು
ಕಥೆ ಹೇಣೆಯುತ ಕುತಂಗಾತ
ನನ್ನ ಕನಸೆಲ್ಲ ಬಲಿತಂಗಾತಾ //
ಮಕ್ಕಳ ಮಾತನು ಮುರಿದು
ಅಕ್ಕರೆಯ ಆಟವನ್ನು ಅಳಿಸಿ
ಹುಬ್ಬಿಗೆ ಕೈ ಹಚ್ಚಿ ಹುಡುಕುತಾವ
ಮಬ್ಬಾದ್ರ ಮನಸು ಮುದರತಾವ //
ಕಲ್ಮೇಶ ಬಡಿಗೇರ
9743539657
......ಬಾದಾಮಿ.......
- Kalmesh Badiger
04 Oct 2020, 08:53 am
ನಮ್ಮನೆ ಅಂಗಳದಲ್ಲಿ ಒಂದು
ಅಜ್ಜನ ಆಲದ ಮರ ವಿಹುದು
ಮಂಗನ ಮರಿಯು ಕೊಂಬೆಯ
ಮೇಲೆ ನೆಗೆಯುತ ಜಿಗಿಯುವುದು //
ಕೈಯನು ತೋರಲು ಛಂಗನೆ ಹಾರಿ
ಕುಣಿಯುತ ಹಾರುತ ಬರುವುದು
ಕೈಯನು ನೀಡಲು ಕುಲಕುತಾ
ಮುತ್ತನು ಕೊಟ್ಟಂತೆ ಮಾಡುವುದು //
ತಲೆಯನು ಕೆದರುತಾ ಕೂಡಲು
ಬಂದು ಹೇಣನು ನೋಡುವುದು
ಹಣ್ಣನ್ನು ಕೊಡಲು ಹಲ್ಲನು ಕಿರಿದು
ಗಬ ಗಬಾ ತಿನ್ನುತ್ತಾ ಕೂಡುವುದು //
ಅಂಗಿಯ ತೊಡಿಸಲು ಮೈಯ್ಯನು
ಪರಚುತ ಮರವನು ಏರುವುದು
ಆ ಕಡೆ ಈ ಕಡೆ ಜಿಗಿಯುತ್ತಾ ಮಂಗವು
ಜೀಕವ ಹೋಡೆಯುತ ನಲಿಯುವುದು //
ಆಳುವ ಮಕ್ಕಳ ದ್ವನಿಯ ಕೇಳಲು
ಅರಚುತಾ ಓಡೋಡಿ ಬರುವುದು
ಅಮ್ಮನ ಕೈಯಲಿ ರೊಟ್ಟಿಯ ಕಂಡು
ಕಿರಚುತಾ ಮೈ ಪರಚುತ ಕೂಡುವುದು //
ಅಜ್ಜನ ಕೊಲನು ಕೈಯಲಿ ಕೊಟ್ಟರೆ
ನಟನೆಯ ಮಾಡುತ ಲಿರುವುದು
ಕಟ್ಟೆಯ ಮೇಲೆ ಕುಳಿತರೆ ಸಾಕು
ನಮ್ ಜೊತೆ ಆಟವ ಆಡುವುದು //
ಕಲ್ಮೇಶ ಬಡಿಗೇರ
9743539657
.....ಬಾದಾಮಿ.......
- Kalmesh Badiger
04 Oct 2020, 08:38 am
ಜವಾರಿ ತಳಿ ಇದು ನಮ್ಮನೆ ಕೋಳಿ
ಆ ಆ ಎನ್ನಲು ಓಡುತಾ ಬರುವುದು
ಕಾಳನು ಕಾಣಲು ಕೊಕ್ಕರೋಕ್ಕ ಎಂದು
ನೆಲ ಕುಕ್ಕುತಾ ಕೆದರುತಾ ನಿಲ್ಲುವುದು //
ಅಮ್ಮನ ದ್ವನಿಯನು ಕೇಳಲು ಕೋಳಿ
ಕಾಲಲಿ ಗಿರಕಿಯ ಹೊಡೆಯುವುದು
ಚಿಕ್ಕ ಮಕ್ಕಳ ಪರಿವೆ ಇಲ್ಲದೆ ಕೊಳಿಯು
ಕೊಕ್ಕರೊಕ್ಕ ಎನ್ನುತಾ ಹಾರುವುದು //
ತಿಪ್ಪೆಯ ಮೇಲಿನ ತೆಪ್ಪವ ಕೆದರುತಾ
ದಪ್ಪನೆ ಹುಳುಗಳ ಮೇಯುವುದು
ಚಿಂವ್ ಚಿಂವ್ ಎನ್ನುವ ಪುಟಾಣಿ ಮರಿಗೆ
ಕುಕ್ಕುತಾ ಗುಟುಕನು ನೀಡುವುದು //
ಬೆಕ್ಕನು ಕಂಡರೆ ರೆಕ್ಕೆಯ ಬಿಚ್ಚುತಾ
ಕೊಕ್ಕರೋಕ್ ಎನ್ನುತ್ತಾ ಹಾರುವುದು
ಕಣ್ಣಿಗೆ ಕುಕ್ಕಿ ಮೈಯನು ಪರಚುತಾ
ಸೊಕ್ಕನು ಅಡಗಿಸಿ ಕಳಿಸುವುದು //
ಸಜ್ಜೇಯ ಜೋಳದ ಚೀಲವ ಕುಕ್ಕಿ
ಕಚ್ಚಿ _ ಬಿಚ್ಚಿ ಕೆದರಿ ಹಾಕುವುದು
ಅಜ್ಜಿಯ ದಿಂಬು ಕೌದಿಯ ಕೆದರಿ
ಹರಿದು ಮುರಿದು ತಾ ಹಾಕುವುದು //
ಕಲ್ಮೇಶ ಬಡಿಗೇರ
9743539657
........ಬಾದಾಮಿ.......
- Kalmesh Badiger
04 Oct 2020, 08:18 am
ಮುದ್ದು ಗೊಂಬೆ ಮುದ್ದು ಗೊಂಬೆ
ನೀ ನನ್ನ ಅಂದದ ಗೊಂಬೆ
ನೋಡಲು ಬಲು ಚಂದ
ನೀ ನನ್ನ ಬಣ್ಣದ ಗೊಂಬೆ
ಸಂಪಿಗೆ ಮೂಗಿನ
ಮಿಣ ಮಿಣ ಮಿಂಚುವ
ಮಿಂಚುಳ್ಳಿ ಕಣ್ಣಿನ
ಬಂಗಾರದ ಗೊಂಬೆ
ಉದ್ದ ಜಡೆಯ ಕೋಮಲಾಂಗಿ
ನಕ್ಕು ನಲಿಯುವ ಮುದ್ದಿನ ಅರಗಿಣಿ
ನೀ ನನ್ನ ಮುದ್ದು ಗೊಂಬೆ
- ರಾಜು ಹಾಸನ
03 Oct 2020, 12:22 am
ಜೀವನವಿದು ಹುಟ್ಟು-ಸಾವಿನ ಪಯಣ
ಜನಿಸಿ ಬರುವೆವು ಅಳುತ್ತಾ, ಬಂದು ಅಳುವೆವು ಮತ್ತಷ್ಟೂ
ನಮ್ಮ ಮೊದಲ ಅಳುವಿನ ಧನಿಯೇ,ಹೆತ್ತವರ ಒಡಲ ಸಂತೋಷ
ಜೀವನದಿ ಬರುವ ಮತ್ತಷ್ಟು ಕಷ್ಟಗಳಿಗೆ ಹೆತ್ತವರೇ ಆಧಾರ
- Ranjitha
02 Oct 2020, 05:48 pm
ಹಾದಿ ಬೀದಿಯಲ್ಲಿ ಬಿಸಾಡಿದ ಕಲ್ಲು
ಊರ ಮುಂದಿನ ಬೆಟ್ಟದ ಕಲ್ಲು
ಜೀವವಿಲ್ಲದ ನೀರೊಳಗಿನ
ಬಂಡೆಯ ಕಲ್ಲು ದೇವರದಾರೆ
ಮನೆಯೊಳಗಿನ ಖಾರ ಆಡಿಸುವ ಕಲ್ಲು
ಬರಿ ಒಳಕಲ್ಲಾಗುವುದಯ್ಯ
ಜೀವವಿಲ್ಲದ ಕಲ್ಲಿಗೆ
ದೇವರೆಂದು ಹೊಗಳುವ ಜನ
ಜೀವವಿರುವ ಮನುಷ್ಯಗೆ
ದೆವ್ವವೆಂದು ತೆಗಳುವರಯ್ಯ
ಜೀವವಿಲ್ಲದ ಕಿತ್ತೋದ ಧರ
ಕಟ್ಟಿಕೊಂಡು ಶ್ರೇಷ್ಠನಾಗುವ
ಮನುಷ್ಯಗೆ ಫಲಿಸುವುದು
ಮುಕ್ತಿ ಮೋಕ್ಷ ಸ್ವರ್ಗ ನರಕ
ಹುಟ್ಟಿನಿಂದ ಸಾಯುವ ತನಕ
ದೊಡ್ಡ ದೊಡ್ಡ ಹಗ್ಗವ ಕುತ್ತಿಗೆಗೆ
ಸುತ್ತಿಕೊಂಡು ಸಾಯುವ
ಮೂಕ ಪ್ರಾಣಿಗಳಿಗೆ ಇಲ್ಲವೇ
ಮುಕ್ತಿ ಮೋಕ್ಷ ಸ್ವರ್ಗ ನರಕ
- ರಾಜು ಹಾಸನ
02 Oct 2020, 10:25 am
ಕನ್ನಡನಾಡಿನ ಹೆಮ್ಮೆಯ ಪುತ್ರನಾ
ಹೇಳುವೆ ಕನ್ನಡಾಂಬೆಗೆ ಜೈ ಜೈ ಜೈ
ಹಿಂದೂಸ್ತಾನ ವ ಗರ್ವದಿ ಕಾಣುತ
ಭಾರತಾಂಬೆ ಗೆ ಹೇಳುವೆ ಜೈ ಜೈ ಜೈ //
ಗಂಗಾ ಯಮುನಾ ಸಿಂಧು ಸರಸ್ವತಿ
ಬ್ರಹ್ಮಪುತ್ರ ಸರಯೂ ನರ್ಮದಾ
ಗೋದಾವರಿ ಕೃಷ್ಣೆ ಕಾವೇರಿ ತಪತಿ
ಒಡಲೊಳಗಡಗಿದ ನದಿಗಳ ದೇಶ //
ತೇಗ ಶ್ರೀಗಂಧ ಚಂದನ ಅಶ್ವಥ
ಮಾವು ಹಲಸು ಬಾಳೆ ನೇರಳೆ
ಮಲ್ಲಿಗೆ ಸಂಪಿಗೆ ಸೇವಂತಿ ನೈದಿಲೆ
ಕೃಷಿಕ ಸಾಹಿತಿ ಕಲಾವಿದರ ದೇಶ//
ಕಾಶ್ಮೀರದ ತಾಯಿ ಶಾರದೆ ಸುಂದರ
ರಾಮೇಶ್ವರ ಮಹಾದೇವನ ಮಂದಿರ
ಪುರಿಯ ಶ್ರೀ ಜಗನ್ನಾಥನ ವಿಸ್ಮಯದ
ದ್ವಾರಕಾ ದೀಶ ಶ್ರೀ ರಾಧಾಕೃಷ್ಣರ ದೇಶ //
ಹಿಂದೂ ಸನಾತನ ಬೌದ್ಧ ಜೈನರ
ಸಿಖ್ ಧರ್ಮ ಗಳಿಗೆ ಜನ್ಮವ ನೀಡಿದ
ಸಿದ್ಧ ಶರಣ ಗುರು ಪರಂಪರೆಯ
ಸರ್ವಜನಾಂಗವ ಸಲುಹಿದ ದೇಶ //
ಭಾರತಾಂಬೆಯ ಕನ್ನಡದ ಕುವರನಾ
ಕೋಟಿ ಶರಣಾರ್ಥಿಗಳ ಅರ್ಪಿಸುತಾ
ಕನ್ನಡ ಶ್ರೀ ಭುವನೇಶ್ವರಿಗೆ ಜೈ ಜೈ ಜೈ
ಭಾರತ ಮಾತೆಗೆ ಹೇಳುವೆ ಜೈ ಜೈ ಜೈ //
ಕಲ್ಮೇಶ ಬಡಿಗೇರ
9743539657
........ಬಾದಾಮಿ........
- Kalmesh Badiger
01 Oct 2020, 09:46 pm