Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಶ್ರೀ ಕೃಷ್ಣದೇವರಾಯ...

ಶ್ರೀಕೃಷ್ಣದೇವರಾಯ..
ಶ್ರೀಕೃಷ್ಣದೇವರಾಯ..
ವಿಜಯನಗರದ ಸೌಂದರ್ಯ...
ವಿಜಯನಗರದ ಸೌಂದರ್ಯ..

ತುಂಗೆಭದ್ರೆ ದಡದಲಿ ಉದಯಿಸಿದ ನಾಡು
ವಿದ್ಯಾರಣ್ಯರು ಸ್ಥಾಪನೆಗೈದ ಹಂಪೆಯನಾಡು
ಸಂಗೀತ ಶಿಲ್ಪ ಕಲೆಗಳ ವೈಭೋಗಸಿರಿನಾಡು
ಕರ್ನಾಟಕದ ಹೆಮ್ಮೆಯ ನಮ್ಮಯ ನಾಡು
ಒಂದಾಗಿ ಹಾಡೋಣ.
ಒಂದಾಗಿ ಕುಣಿಯೋಣ

ಈ ನೆಲೆಯ ಶೃಂಗಾರ ಸೀಮೆಯೋ
ಈ ನೆಲ ಬಂಗಾರ ಭೂರಮೆಯೋ
ಕೀರ್ತಿಯ ಹಬ್ಬಿಸೋಣ.
ಕಲೆಗೆ ತಲೆ ಬಾಗೋಣ
ಬಣ್ಣಿಸಲಾಗದ ಈ ನೆಲ
ಬಂಗಾರ ಕಡಲು ಈ ಜಲ
ಶಿಲ್ಪ ಕಲೆಯ ಸಂಗೀತ ನೆಲೆಸಿರುವ
ಆಲಯ ಈ ನಮ್ಮ ದೇವಾಲಯವು

ವಿಜಯನಗರ ಸೌಂದರ್ಯ
ದೇವಾಲಯ...
ಕಣ್ಣಿನ ಹಬ್ಬದ ಶಿವಾಲಯ
ವಿಜಯನಗರ ಸೌಂದರ್ಯ
ಕಣ್ಣಿಗೆ ಹಬ್ಬದ ಶಿವಾಲಯ
ದೇವಾಲಯ..
ಎಲ್ಲೆಲ್ಲೂ ಶಿಲ್ಪಕಲೆ ಮಾಧುರ್ಯ..
ತುಂಬಿದ ದೇವಾಲಯ..

✍️ವೀರೇಶಪ್ಪ ವಿ ಖೈರವಾಡಗಿ














- Veereshappa v khairawadagi

25 Jun 2026, 11:27 am

ಬೆಳ್ಳಿ ಮುಗಿಲು ಬೆಳ್ಳಕ್ಕಿ ಸಾಲು

ಬೆಳ್ಳಿ ಮುಗಿಲು ಬೆಳ್ಳೆಕ್ಕಿ ಸಾಲು...ಓ ಓ
ಬೆಳ್ಳಿ ಮುಗಿಲು ಬೆಳ್ಳಕ್ಕಿ ಸಾಲು... ಓ ಓ
ಆ ಚಲುವೆ ಮೊಗವು ಸುಂದರ ನಗುವು
ಕೆಂದಾವರೆ ಹರಳಿದ ಹಾಗೆ ಸುಮವು

ಚಂದವಾ ನೋಡು ಆಯಾಗಿ ಹಾಡು
ಆಯಾಗಿ ಹಾಡುತ ನೇಸರ ನೋಡು...
ಬಂಗಾರ ಬಣ್ಣದ ನೇಸರ ನೋಡು
ಮನೋಲ್ಲಾಸದಿ ಸಂತೋಷದಿ ಹಾಡು

ಗಾಳಿಯ ವೇಗದಿ ಮರಗಿಡ ತೂಗುಯ್ಯಾಲೆ
ತಂಪಾದ ನೆರಳಲಿ ತೂಗುಯ್ಯಾಲೆ
ಕರಿ ಮುಗಿಲು ಆ ಸಾಗರದ ಕಡಲು.
ಕರೀಮುಗಿಲು ಆ ಸಾಗರದ ಕಡಲು
ಚಂದಾಗಿ ಒಂದಾಗಿ ನಿಂತು ನಗಲು
ಮಳೆಗೆ ಭೂತಾಯಿ ಕಾದಿದೆ ಒಡಲು ಹೊ...

✍️ವೀರೇಶಪ್ಪ ವಿ ಖೈರವಾಡಗಿ





- Veereshappa v khairawadagi

24 Jun 2026, 03:18 pm

ಇದು ನಿನ್ನ ಜೀವನ So ನಿನಗಾಗಿ ನೀನು ಬದುಕಿ‌ದರೆ ಸಾಕು , ಅದನ್ನು ಬಿಟ್ಟು ನಿನ್ನ So Called Friends ತರಹ ನಟಿಸುವವರನ್ನು ಮೆಚ್ಚಿಸುವ ಅವಶ್ಯಕತೆ ಇಲ್ಲ... ಹಾಗೂ ನಿನ್ನ ಅವಶ್ಯಕತೆ ಇಲ್ಲದ ಕಡೆ ತಲೆಯನ್ನು ಬಾಗಿಸುವ ಅಗತ್ಯನೂ‌‌ ಇಲ್ಲ...!!!

- ನಮಿತ ಗಟ್ಟಿ

23 Jun 2026, 09:53 pm

ಕವಿಯು ನಾನು ಕಲ್ಪನೆ ನೀನು

ಕವಿಯು ನಾನು ಓ ಚಲುವೆ ಓ ಓ ಓ
ಕವಿಯು ನಾನು ಓ ಚಲುವೆ ಓ ಓ ಓ
ಕಲ್ಪನೆ ನೀನು...
ಕಲ್ಪನೆ ನೀನು...
ಅಂತರರಂಗವು ನಾನು .
ಅಡಗಿರುವ ಹೂ ನೀನು
ಓ ಚಲುವೆ... ಓ ಚಲುವೆ...

ನಿನ್ನ ಈ ಕಣ್ಣೋಟ..
ಅಂದದ ಮೈ ಮಾಟ
ನನ್ನ ಹೃದಯದ ಅರಸಿ ನೀ..
ನನ್ನ ಹೃದಯದ ರೂಪಸಿ ನೀ
ಚಂದುಳ್ಳ ಚಲುವೆ ನೀನು
ರಾಣಿ ನೀ ನೀನು
ಮಹಾರಾಣಿ ನೀನು
ನಿನಗೆ ಮನಸೋತು ಬಂದ..
ರಾಜನು ನಾನು
ಮಹಾರಾಜನು ನಾನು
ನಿನ್ನ ಸುತ್ತ ಸುಳಿಯುವ
ಸುಂದರ ನಾನು
ನನ್ನ ಮನದೊಳ್
ಸುಂದರಿ ನೀನು

ಮಂದಾರ ಮಲ್ಲಿಗೆ ನೀನು
ಮಳೆ ಸುರಿಸೋ ಮಳೆ ನಾನು
ಚಲುವಾದ ಹೂವಾದೇ ಪ್ರೇಯಸಿ
ನಾ ಹೂ ದುಂಬಿಯಾದೆ ಮಾನಸಿ
✍️ ವೀರೇಶಪ್ಪ ವಿ ಕುಂಬಾರ ಖೈರವಾಡಗಿ




- Veereshappa v khairawadagi

23 Jun 2026, 09:35 am

ಮುದ್ದಿನ ಮಡದಿ...

ಕವನ ಬರೆಯಲೆಂದು ಬರೆದೆ ಮುನ್ನುಡಿ,
ನೀ ನನ್ನ ಅಂತರಂಗದಾ ಕನ್ನಡಿ,

ನನಗೆ ನೀನು, ನಿನಗೆ ನಾನು,
ಜೊತೆಯಿರೆ ನೀನು, ಬೇಕು ಬೇರೇನು?

ನಿನ್ನ ಹುಸಿ ಕೋಪ ಚೆನ್ನ, ಕುಡಿ ನೋಟ ಚೆನ್ನ,
ನೀ ನನ್ನ ಬಾಳಲಿ ಬಂದಾಗಿನಿಂದ ಬೇಡವಾಗಿದೆ ಚಿನ್ನ,

ನಿನ್ನ ಮಾತದು ಇರಬಹುದು ಹರಿತ,
ಆ ಮಾತ ದ್ವನಿಯದು ಕೇಳಲು ಬಲು ಹಿತ,

ನಿನ್ನ ಸುಮಧುರ ಕಂಠ ಸಿರಿಯ ಮೃದುವಾದ ಮಾತುಗಳು,
ಕೇಳಲು ಬಲು ಇಂಪು ಮುಂಜಾನೆ ಬಿಸಿ ನೀರ ಕುಡಿಯುತ ಕುಳಿತಿರಲು,

ಇರಬೇಕು ಓದು ಒಕ್ಕಾಲು, ಬುದ್ದಿ ಮುಕ್ಕಾಲು,
ಮೀಸಲಿಡುವೆ ನಿನಗೆ, ಈ ನನ್ನ ಬಾಳ ಸಮ ಪಾಲು,

ಸಂಜೆ ಉದ್ಯಾನವನದಲಿ ಬೀಸುತಿರೆ ತಂಗಾಳಿ,
ನಮ್ಮ ಪಿಸು ಮಾತ ಕದ್ದಾಲಿಸುತಾವೆ ಹೂ ಬಳ್ಳಿ,

ನೀ ಊರಿಗೆ ಹೋದಾಗಿನ ನನ್ನ ಪಾಡು ನಾ ಹೇಗೆ ನಿನಗೆ ಹೇಳಲಿ?
ಸುಮ್ಮನೆ ಕುಳಿತಿರೆ ನಾ ಮನೆಯಲಿ,
ಮಾತನಾಡಿದೆ ನೀ ಮೊನ್ನೆ ಹಾಕಿದಾ ರಂಗೋಲಿ,
ಅದಕೆ ನಾ ಏನ ಉತ್ತರ ಹೇಳಲಿ?

ಏನೂ ಹೇಳಲಾರದೆ ನಾ ಓಡಿ ಬಂದು ರೈಲಿನಲಿ ಕುಳಿತೆ,
ನಿನ್ನ ನೆನೆನೆನೆದು ಬರೆಯುತಾ, ನಾ ಹಿಂದೆಂದೂ ಬರೆದಿರದ ಮಧುರ ಪ್ರೇಮ ಕವಿತೆ...
ಬರೆದಷ್ಟೂ ಸಾಗುತಿದೆ ಪದಗಳಾ ಎಣಿಕೆ...
ಕ್ಷಮಿಸುವೆಯಾ ನೀನು? ತಡಮಾಡಿದೆ ನಾನು, ಕೊಡಲು ಕವನದಾ ಕಾಣಿಕೆ,
ತಡಮಾಡಲಾರೆ ನಾ ಹೊದಿಸಲು ಒಲವಿನಾ ಹೊದಿಕೆ,
ಹೇಳು ನನಗೇಕೆ ಚಿಂತೆ, ಆದಮೇಲೆ ನೀನು ನನ್ನಾಕೆ,

ಇಡುವೆ ನಾನೀಗ ಅಲ್ಪ ವಿರಾಮ,
ವಿರಮಿಸದೇ ಸಾಗುತಿರಲಿ ಈ ನಮ್ಮ
ಮಧುರ ಪ್ರೇಮ...
--- tippu ---

- tippu

23 Jun 2026, 08:13 am

ಗೆಳೆತನ

ಗೆಳೆತನ ಮಾಡಲು ಜಾತಿ - ಮತವಿಲ್ಲ
ಗೆಳೆತನದಲ್ಲಿ ಮೇಲು - ಕೀಳಿಲ್ಲ
ಗೆಳೆತನದಲ್ಲಿದೆ ನೋವು - ನಲಿವು
ಗೆಳೆತನದಲ್ಲಿದೆ ಸೋಲು - ಗೆಲುವು
ಇದನ್ನರಿತು ಬಾಳುವ ಜನ ಹಲವು |

ಗೆಳೆತನವೆಂಬುದು ಸಮುದ್ರದ ಆಳ
ಈಜಲು ಬಲ್ಲವಗೆ ತುಂಬಾ ಸರಳ
ಗೆಳೆತನವೆಂಬುದು ಆಕಾಶದೆತ್ತರ
ಹಾರಲು ಬಲ್ಲವಗೆ ಬಹಳಾ ಹತ್ತಿರ
ಗೆಳೆತನವೆಂಬುದು ತುಂಬಾ ಸುಂದರ |

ಸುಳ್ಳು ವಂಚನೆ ಮೋಸದ ಗೆಳೆತನ
ಬರುವುದು ಮನುಜನ ಬಾಳಲಿ ಅನುಮಾನ
ತರುವುದು ಮನಸಲಿ ಕೆಟ್ಟ ಹಗೆತನ
ಕಂಬನಿ ವರೆಸುವ ನಿಜವಾದ ಸ್ನೇಹಿತ
ನೂರಾರು ವರುಷ ಬದುಕಲಿ ಶಾಶ್ವತ |

- A Akanksha

21 Jun 2026, 09:47 am

ಹೊಂಗಿರಣಾಕಾಶದೊಳಗೆ ರವಿಯು ಮೂಡಿದ

ಹೊಂಗಿರಣಾಕಾಶದೊಳಗೆ ರವಿಯು ಮೂಡಿದ...

ಹೊಂಗಿರಣಾಕಾಶದೊಳಗೆ ರವಿಯು ಮೂಡಿದ...
ನೀಲಿ ಆಕಾಶದೊಳ್ ಹೊನ್ನೂನೊತ್ತು ಕಿರಣ ಸುರಿದ
ಈ ಭೂಮಿಮೆ ಅಂದದೊಳಗೆ ತೆಲಿಸಿ ಹೂ ಅರಳಿಸಿದ
ಮಾಯಾಗಾರ ಶಿವನ ಪಾದದೊಳ್ಗೆ ಆಡಕಾವಾದ
ಬಿಳಿ ಮುಗಿಲಳೋಗೆ ಮಲ್ಲಿಗೆ ಹನಿ ಮಳೆ ಸುರಿದ...
ತುಂತುರು ಮಂಜಿನ ಮಳೆಹನಿ
ಎಲೆ ಮೇಲೆ ಎರಚಿ ಹೋದ ll

ಹೊಂಗಿರಣಾಕಾಶ್ದೊಳ...

ಬಣ್ಣ ಬಣ್ಣದ ಹೂದೊಳಗೆ ಚಿಟ್ಟೆಯ ಕೂರಿಸಿ
ಸೌಂದರ್ಯದ ಸೊಬಗು ತೋರಿದ..
ಅಂದಾಗರ ಈ ಸೂತ್ರದಾರ ನಿನ್ನ ಕರುಣೆ..
ಎನು ಮಾಯಾವೋ ಎನು ವಿಸ್ಮಯವೋ
ಕಡಲು.ನದಿ,ಸಾಗರ,ಸರೋವರ
ಮಾಡಿದೇ ನೀ ನಿನಗೆ ನಿನ್ನ ವರವೋ..
ಗಾಳಿ ನೀರಿ ನೊಳಗೆ ಬೆರೆತಿರುವೆ...ll

ಹೊಂಗಿರಣಾಕಾಶದೊಳ..

✍️ವೀರೇಶ್ ವಿ ಖೈರವಾಡಗಿ



- Veereshappa v khairawadagi

21 Jun 2026, 06:10 am

- Shivanand Dinni

20 Jun 2026, 07:41 pm

ಕನ್ನಡಮ್ಮನ ಹೃದಯಗೀತೆ

ಓ ಕನ್ನಡಮ್ಮನ ಹೃದಯ ಗೀತೆ

ಓ ಕನ್ನಡಮ್ಮನ ಹೃದಯ ಗೀತೆ..

ಸಾವಿರ ಭಾಷೆ ಕಲಿ ಕನ್ನಡವನ್ನೇ ನುಡಿ

ಇತಿಹಾಸ ಪುಟದಲಿ ಇರಲಿ ಕನ್ನಡ ನುಡಿ

ಕಲ್ಪವೃಕ್ಷ ಕನ್ನಡ ನಮ್ಮೆಲ್ಲರ ಅಂದದ ಗುಡಿ

ಕಾವೇರಿ ಈ ನೀರು ಸಿಹಿಕಬ್ಬಿನ ಹಾಲು

ತುಂಗೆ ಈ ನೀರು ಕನ್ನಡಮ್ಮನ ಎದೆಹಾಲು

ಕನ್ನಡದ ಮಗುವೇ ನಗುತಿರುವ ಸುಮವೇ...

ಲಾಲಿ ಹಾಡು ಜೋಗುಳದ ಹಾಡು ಕನ್ನಡ

ನಮ್ಮ ಜನುಮದಾತೆ ಕನ್ನಡ....

ನಮ್ಮೂಸಿರು ಮಾತೆ ಕನ್ನಡ....

ಪ್ರೀತಿಯಿಂದ ನುಡಿ..ಕನ್ನಡ
ಪ್ರೀತಿಯಿಂದ ನೆಡಿ..ಕನ್ನಡ
ಬಂಗಾರದ ನುಡಿ ಕನ್ನಡ..
ಶೃಂಗಾರದ ನುಡಿಗನ್ನಡ..

✍️ ವೀರೇಶ್ ವಿ ಖೈರವಾಡಗಿ









- Veereshappa v khairawadagi

19 Jun 2026, 11:45 pm

- tippu

19 Jun 2026, 08:52 pm