Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಂಬಿಕೆ ಇಲ್ಲದ ಮೇಲೆ

ನಂಬಿಕೆ ಇಲ್ಲದ ಮೇಲೆ
ಹೂವು ಹಾವಾದಂತೆ
ಅಮೃತವು ವಿಷವಾದಂತೆ
ಬದುಕಿದ್ದು ಸತ್ತಂತೆ

ಜೀವಕ್ಕೆ ಜೀವ ಎಂದು
ನಂಬಿಬಂದೆ ನಾನಂದು
ಅಗ್ನಿಸಾಕ್ಷಿಯಾಗಿ ನುಡಿದೆ ನೀ
ನಂಬಿಕೆಗೆ ನಾನೆ ನೆಂಟನೆಂದು

ಉಸಿರು ನಿಲ್ಲುವ ಮುನ್ನ
ಹೆಸರುಳಿಸುವ ಬಯಕೆ ನನ್ನದು
ಹೆಸರಳಿಸಿ ಉಸಿರಾಡುವ
ಹಾದಿಯಲ್ಲಿ ಸಾಗಿಹೆ ನೀನಿಂದು

ಅಂತರಂಗದ ಅರಿವಿಲ್ಲದೆ
ಅಂಧಕಾರದ ದಾರಿಯಲ್ಲಿ
ನಂಬಿದವರ ಮಣ್ಣಾಗಿಸಿ
ಮಸಣದಲ್ಲಿ ಮಲಗಿಹೆ ಇಂದು




ಶಾರದ

- ಶಕುಂತಲಾ

10 Oct 2020, 06:40 am

ಚಿರ ಋಣಿ

ಸುಖವೆಂದರೆ ಓಡಿ ಬರುವ ಮಾನವ
ಕಷ್ಟವೆಂದರೆ ಓಡಿ ಹೋಗುವ ಮನುಜ
ಕಷ್ಟ ಸುಖ ನೋವು ನಲಿವು
ಏನೇ ಬಂದರೂ ಓಡಿಹೋಗದೆ
ಧೈರ್ಯದಿಂದ ಓಡಿ ಬಂದು
ಹೆಗಲಿಗೆ ಹೆಗಲು ಕೊಟ್ಟು ಕಾಯುವ
ಕರುಣಮಹಿ ತಂದೆ ತಾಯಿಗೆ
ಸಾದಾ ಕಾಲ ನಾ ಚಿರ ಋಣಿ

- ರಾಜು ಹಾಸನ

09 Oct 2020, 11:33 pm

ಓಡುವರಯ್ಯ

ಆ ದೇವರಿಗೆ ಈ ದೇವರಿಗೆ
ಆ ಹರಕೆ ಈ ಹರಕೆಯೆಂದು
ಮಾಡಿಡುವರಯ್ಯ ಎಡೆಯೂಟ
ಕುರಿ ಕೋಳಿ ಕತ್ತರಿಸಿ
ತನ್ನನ್ನು ತಾನು ಕತ್ತರಿಸಿ
ಎಡೆಯೂಟ ಮಾಡಿರಿ ಎಂದರೆ
ಓಡುವರಯ್ಯ ಬಿದ್ದ್ನೋ ಎದ್ದ್ನೋ
ಎಂದು ಕೈಗೆ ಸಿಗದಂತೆ
ಪ್ರಾಣಿ ಮಾಂಸ ಕಂಡರೆ
ಜೊಲ್ಲು ಸುರಿಸುವ ಮಾನವ
ತನ್ನ ಬೆರಳು ತಾನೇ ಕತ್ತರಿಸಿ
ತಿನ್ನೆಂದರೆ ಮಾತು ಬಾರದ
ಮೂಕನಾಗುವನಯ್ಯ

- ರಾಜು ಹಾಸನ

09 Oct 2020, 06:22 pm

ಆ ಶಾಲೆಯಿಂದಾನೆ ಬಂದಿದ್ದು..

ಶಾಲೆಗೆ ಮಕ್ಕಳನ್ನು ಸೇರಿಸಬೇಡಿ
ಮೊದಲು ಆ ಶಾಲೆಗಳನ್ನು ಮುಚ್ಚಿ

ಇಲ್ಲಿ
ಮೇಷ್ಟ್ರು ನಡೆ ನುಡಿ ಬೇರೆಯಾಗಿ ಸುಳ್ಳುಗಾರನಾಗಿದ್ದಾನೆ
ಅವನು ಆ ಶಾಲೆಯಿಂದಾನೆ ಬಂದಿದ್ದು..

ಪೊಲೀಸ್ ಲಂಚ ವಸೂಲಿಗಾರನಾಗಿದ್ದಾನೆ
ಅವನು ಆ ಶಾಲೆಯಿಂದಾನೆ ಬಂದಿದ್ದು..

ವಕೀಲ ಹಣಪಡೆದು ಅನ್ಯಾಯದ ನ್ಯಾಯವಾದಿಯಾಗಿದ್ದಾನೆ
ಅವನು ಆ ಶಾಲೆಯಿಂದಾನೆ ಬಂದಿದ್ದು..

ವೈದ್ಯ ಶ್ರೀಮಂತ ರೋಗಿಯನ್ನು ಮಾತ್ರ ಮುಟ್ಟಿ ನೋಡುತ್ತಿದ್ದಾನೆ
ಅವನು ಆ ಶಾಲೆಯಿಂದಾನೆ ಶ್ರಮಪಟ್ಟು ಬಂದಿದ್ದು

ಸರ್ಕಾರಿ ಅಧಿಕಾರಿಗಳು ಹೆಚ್ಚು ಭ್ರಷ್ಟರಾಗಿದ್ದಾರೆ
ಅವರು ಆ ಶಾಲೆಯಲ್ಲೇ ಹೆಚ್ಚು ಇದ್ದು ಬಂದಿದ್ದು..

ರಾಜಕಾರಣಿ ಜಾತಿ ಧರ್ಮವ ಬಳಸಿ ಸಮಾಜಕ್ಕೆ ಕೋಮುವಾದದ ಬೆಂಕಿ ಹಚ್ಚಿ ದೇಶವನ್ನು ಅಳುತಿದ್ದಾನೆ
ಅವನು ಆ ಶಾಲೆಯಿಂದಾನೆ ಬೇಗ ಬಂದಿದ್ದು...

ಸುದ್ದಿವಾಹಿನಿಯವರು ಜ್ಯೋತಿಷಿಗಳನ್ನು ಕೂರಿಸಿಕೊಂಡು ಇಬ್ಬರು ಬೊಗಳೆ ಬಿಡುತ್ತಾ ಪುಂಗಿದಾಸರಾಗಿದ್ದಾರೆ
ಅವರು ಆ ಶಾಲೆಯಿಂದಾನೆ ಬಂದಿದ್ದು..

ಸಾಹಿತಿಗಳು ಇಲ್ಲದ ಸಲ್ಲದ ಭ್ರಮಸಂಗತಿಗಳನ್ನು ತುಂಬುವ ಚಿಂತಕರಾಗಿದ್ದಾರೆ
ಅವರು ಆ ಶಾಲೆಯಿಂದಾನೆ ನಿಧಾನಕ್ಕೆ ಬಂದಿದ್ದು

ಇಂತಹ ವ್ಯರ್ಥ ಮಾತುಗಳನ್ನಾಡುವ ನಾನು ಬಂದಿದ್ದು ಆ ಶಾಲೆಯಿಂದಾನೆ.. !

ದಯವಿಟ್ಟು..
ಶಾಲೆಗೆ ಮಕ್ಕಳ ಸೇರಿಸಬೇಡಿ
ಮೊದಲು ಆ ಶಾಲೆಗಳನ್ನು ಮುಚ್ಚಿ.....

-..ಪ್ರವೀಣಾ ಸಿಂಗೋನಹಳ್ಳಿ..

- praveens singonahalli

09 Oct 2020, 12:11 pm

ಮೂಢನಂಬಿಕೆ

ಹಸಿರು ಗರಿಕೆಯ ಹುಲ್ಲು ತಿಂದು
ಹಾಲು ಕೊಡುವ ಹಸುವಿನಲ್ಲಿ
ಮುಕ್ಕೋಟಿ ದೇವರು ಇರುವುದಾದರೆ
ಆದೇ ಹಸಿರು ಗರಿಕೆ ಹುಲ್ಲು ತಿಂದು
ಹಾಲು ಕೊಡುವ ಎಮ್ಮೆಯಲ್ಲಿ
ಯಾಕಿಲ್ಲ ಮುಕ್ಕೋಟಿ ದೇವರುಗಳು

ಹಸುವಿನ ವಿಭೂತಿ ಶ್ರೇಷ್ಠವೆಂದು
ಹಣೆಗೆ ಮೈ ಕೈಗೆ ತಿಕ್ಕಿಕೊಳ್ಳುವ
ಜನರು ತಿಂದು ರುಚಿ ಕಂಡಿರುವರೇ
ಇದು ಹಸುವಿನ ಸಗಣಿ ಇಲ್ಲ
ಇದು ಎಮ್ಮೆಯ ಸಗಣಿಯೆಂದು
ಯಾರಿಗೆ ಗೊತ್ತು ಯಾರು
ಯಾವ ಸಗಣಿ ತಿಂದಿದ್ದಾರೋ ಏನು
ಅವರೇ ಬಲ್ಲವರು ಅವರೇ ನಿಪುಣರು

- ರಾಜು ಹಾಸನ

09 Oct 2020, 12:51 am

ಹೊಟ್ಟೆ ಪಾಡು

ಪೂಜೆ ಪುನಸ್ಕಾರ
ಹಬ್ಬ ಹರಿದಿನ ಜಪ ತಪ ಮಾಡೆಂದು
ಯಾವ ದೇವರು ಯಾವ ಪುಸ್ತಕದಲ್ಲಿ
ಬರೆದಿಟ್ಟು ಎಲ್ಲಿಗೆ ಓಡಿ
ಹೋಗಿದ್ದಾನೋ ನಾ ಕಾಣೆನು
ತಿಥಿ ಪುಣ್ಯ ತಿಥಿ ಮಾಡೆಂದು
ಯಾವ ವ್ಯಕ್ತಿ ಯಾವ ಘಳಿಗೆಯಲ್ಲಿ
ಯಾರಿಗೆ ಹೇಳಿ ಸತ್ತಿರುವನೋ
ನಾ ಕಂಡಿಲ್ಲ ನಾ ಕೇಳಿಲ್ಲ
ಯಾವುದು ದೇವರಿಗಾಗಿಯು ಅಲ್ಲ
ಸತ್ತವರಿಗಾಗಿಯು ಅಲ್ಲ
ಯಾಲ್ಲವು ನಮಗಾಗಿ
ನಮ್ಮ ಹೊಟ್ಟೆ ಪಾಡಿಗಾಗಿ ಅಷ್ಟೇ

- ರಾಜು ಹಾಸನ

09 Oct 2020, 12:04 am

ನಿಜವಲ್ಲವೇ

ಸತ್ತ ಪ್ರಾಣಿಯ
‌‌ ಮಾಂಸವೆಂದು ತಿನ್ನುವ ಜನ
ಸತ್ತ ವ್ಯಕ್ತಿಯ
ಹೆಣವೆಂದು ಸುಡುವ ಜನ
ಸತ್ತವನ ಸುಟ್ಟು ಬರಿ
ಬೂದಿ ಬಿಡುವರಯ್ಯ ನೀರಿಗೆ
ಸತ್ತವನು ಬಿಟ್ಟು ಹೋದ
ಆಸ್ತಿ ಅಂತಸ್ತು ಸಿರಿ ಸಂಪತ್ತನ್ನು
ಸುಡದೆ ಬಿಡದೆ ಎಡಬಿಡದೆ
ಮುಕ್ಕಿಬಿಡುವರಯ್ಯ ಈ ಜನ

- ರಾಜು ಹಾಸನ

08 Oct 2020, 08:15 am

ಜನರ ಆಟ

ಮಾತಿನಲ್ಲಿ ಮುತ್ತು
ಮನಸ್ಸಿನಲ್ಲಿ ಹೊಲಸು
ತುಂಬಿಕೊಂಡು
ದೇವಾಲಯದ ಸುತ್ತ ಸುತ್ತಿ
ಜಪ ತಪವೆಂದು
ಕಲ್ಲು ಮುಂದೆ ಮೌನವಾಗಿ
ಕುಳಿತರೇನು ಬಂತಯ್ಯ
ಮುಕ್ತಿ ಮೋಕ್ಷಕ್ಕಾಗಿ
ಜಪ ತಪವೆಂದು
ದೇವರ ಭಜನೆ ಮಾಡುತ್ತ ಕುಳಿತರೆ
ವ್ಯರ್ಥವಾಗುವುದು ಸಮಯ
ತುಂಬದಿರುವುದು ಹಸಿದ ಹೊಟ್ಟೆ
ಆದರೂ ನಿಲ್ಲದಿರುವುದು
ದೇವರ ಹಿಂದೆ ಓಡುವ ಜನರ ಆಟ

- ರಾಜು ಹಾಸನ

08 Oct 2020, 12:27 am

ಮಾಯಾ ಜಿಂಕೆ

ತನ್ನ ನೆರಳನ್ನು
ತಾನು ಹಿಡಿಯಲಾಗದ
ಈ ಮನುಜ ಓಡುವನಯ್ಯ
ಕಣ್ಣಿಗೆ ಕಾಣದ ದೇವರೆಂಬ
ಮಾಯಾ ಜಿಂಕೆಯ ಹಿಂದೆ
ಕಂಡು ಕಾಣದಂತೆ ಅಲೆದಾಡಿ
ಹಳ್ಳಕ್ಕೆ ಬೀಳುವನಯ್ಯ
ಹರಕೆಯ ಕುರಿಯಂತೆ
ಈ ಮಂಗ ಮನುಜ

- ರಾಜು ಹಾಸನ

07 Oct 2020, 09:42 am

ಕನ್ನಡ ನುಡಿ ವಿಶ್ವ ನುಡಿ

ಕಲಿ ಕನ್ನಡ
ನುಡಿ ಕನ್ನಡ
ಬರೆ ಕನ್ನಡ
ಸದಾ ಮೊಳಗು
ನೀ ಕನ್ನಡದ ಕಹಳೆ
ಇದರಿಂದಲೇ ಪಡೆ
ನೀ ಸದ್ಗತಿ.

ಹಿಡಿ ನೀ ಕನ್ನಡದ ಕನ್ನಡಿ
ಕಾಣುವೆ ನೀ ವಿಶ್ವದ ಗಡಿ
ಮೇರೆಯಿಲ್ಲದ ಗಡಿ ಯಾಗಲಿ ಕನ್ನಡದ ಗಡಿ
ಪ್ರತಿ ಮನೆದಲ್ಲಿ ಚಿಗುರಿದ ಕುಡಿಯ
ಎಲ್ಲೆಡೆ ಮಾತನಾಡುವ ಭಾಷೆ ಯಾಗಲಿ
ನನ್ನೀ ಕನ್ನಡ ಭಾಷೆ.

ಸೊಗಸುಂಟು ಕನ್ನಡ ನುಡಿಯಲ್ಲಿ
ಪರಭಾಷೆಗಳೆಲ್ಲಾ ಇದರಡಿಯಲ್ಲಿ.
ಬರೆಯುವ ಕೈಗಳು
ಕನ್ನಡದ ಕಳಸ ಹೊತ್ತ ಕರಗಳಾಗಲಿ.

ಕನ್ನಡ ಕಲಿಯುವ ನಾಲಿಗೆ
ಸದಾ ಪಾವನ,
ಕನ್ನಡ ನುಡಿಯುವ ನಾಲಿಗೆ
ಸದಾ ಚಂದನ.

ಕನ್ನಡಕ್ಕೆ ಕೊನೆಯಿಲ್ಲ,
ಕನ್ನಡಿಗರಿಗೆ ಭಯವಿಲ್ಲ.
ಕನ್ನಡದ ಕೋಗಿಲೆಗಳು ನಾವೆಲ್ಲ.
ಹಾಡುವೆವು ಸದಾ ಆನಂದದಿ
ಪರಮಕನ್ನಡದ ಮಡಿಲಲ್ಲಿ.

ಗಂಧದ ನಾಡಲ್ಲಿ, ಶಿಲ್ಪಿಗಳ ಬೀಡಲ್ಲಿ
ಕಣಿಯುತ, ನಲಿಯುತಾ,
ಕನ್ನಡದ ಕಂಪಿನ ಕುಸುಮಗಳು ನಾವಿಲ್ಲಿ.
ಸಾಗಿಹುದು ಭರವಸೆಯ ಬೆಳಕಲಿ,
ನಮ್ಮೀ ಜೀವನ ಕನ್ನಡದ ಮಡಿಲಲಿ.

ಕನ್ನಡದ ಕವಿಗಳು ಹಾಡಿಹೊಗಳಿದ
ಭಾಷೆ ನನ್ನವ್ವನ ನುಡಿ.
ಅನವರತ ಆಹ್ವಾನ ಕನ್ನಡದ ಕಲಿಕೆಗೆ.
ಅನವರತ ಗುಣಗಾನದ ನುಡಿ ಕನ್ನಡ.

ಕನ್ನಡ ಸಾಹಿತ್ಯ ಸಂಪದರ ಸುಮಧುರ ನುಡಿ.
ಷಟ್ಪದಿಯ ಬ್ರಹ್ಮ ರಾಘವಾಂಕನ ಬೀಡು.
ವಚನಶಾಸ್ತ್ರ ಪಿತಾಮಹ ಹಳಕಟ್ಟಿ ಯ ನಾಡು.
ರಗಳೆಗಳ ಜನಕ ಹರಿಹರ ಜನಿಸಿದಾ ನೆಲೆವೀಡು.
ಕನ್ನಡ ಕಬೀರ್ ಶಿಶುನಾಳ ಶರೀಫರ ನಾಡು.
ತ್ರಿಪದಿ ಜನಕ ಸವ೯ಜ್ಞನ ಬೀಡು.

ಕವಿಚಕ್ರವರ್ತಿ ರನ್ನನ ಸಾಹಿತ್ಯದ ಕನ್ನಡ ನುಡಿ.
ಆದಿಕವಿ ಪಂಪನ ಮರುಜನ್ಮ ಬೇಡಿದ ನಾಡು.
ಉಭಯಕವಿಚಕ್ರವತಿ೯ ಪೊನ್ನನ ಕನಸಿನ ನುಡಿ.
ವರಕವಿ ಬೇಂದ್ರೆಯವರ ಹುಟ್ಟಿದ ನಾಡು.

ಪ್ರೇಮಕವಿ ಕೆ. ಎಸ್. ನರಸಿಂಹಸ್ವಾಮಿಯ ನುಡಿ.
ಚಲಿಸುವ ವಿಶ್ವಕೋಶ ಶಿವರಾಮ ಕಾರಂತರ ನುಡಿ.
ಚಲಿಸುವ ನಿಘಂಟು ಡಿ. ಎಲ್ ನರಸಿಂಹಾಚಾರ್ ನುಡಿ.

ದಲಿತಕವಿ ಯ ಸಿದ್ದಲಿಂಗಯ್ಯರ ಭಾಷೆಯ ನುಡಿ.
ಕನ್ನಡ ಸಾಹಿತ್ಯದ ವಿಲಿಯಮ್ ವಡ೯ಸ್ವತ್ ಕುವೆಂಪು
ಮಾತನಾಡಿದ ಕನ್ನಡ ನುಡಿ.

ಕನ್ನಡ ಸಾಹಿತ್ಯ ಸದಾ ತುಂಬಿದ ಕೊಡ.
ನನ್ನವ್ವನ ನುಡಿ ವಿಶ್ವ ನುಡಿ ಯಾಗುವ ಕನಸು.
ಭೂಪಟದಲ್ಲಿ ಮಿನುಗಲಿ ಕನ್ನಡ ನಾಡು
ಎಲ್ಲರ ಮನೆಯನು ಬೆಳಗಲಿ ಕನ್ನಡ ನುಡಿ.
ಎಲ್ಲರ ನಾಲಿಗೆ ಮೇಲೆ ಕುಣಿಯಲಿ ಕನ್ನಡ ನುಡಿ.

---------ಖಾಜಾ

- ಖಾಜಾ

06 Oct 2020, 08:34 am