ಹಣ ಅಂತಸ್ತು
ನೋಡಿ ಬರುವ
ಸಂಬಂಧಗಳಿಗಿಂತ
ಗುಣ ನೋಡಿ ಬರುವ
ಬಂಧು ಮಿತ್ರರೆ
ಬಲು ಚಂದವಯ್ಯ
ಪ್ರಾಣಿ ಪ್ರಾಣಿಗಳ
ನಡುವೆ ಇಲ್ಲದ ದ್ವೇಷ
ಮನುಷ್ಯ ಮನುಷ್ಯರ
ನಡುವೆ ಇರುವುದಯ್ಯ ದ್ವೇಷ
ಪ್ರಾಣಿಗಳು ಜನರ
ಪ್ರೀತಿ ಗಳಿಸಿದರೆ
ಜನರು ಸಾದಿಸುವರಯ್ಯ
ಜನ ಜನರ ನಡುವೆ ದ್ವೇಷ
ಏನಿದ್ದರೇನು
ಏನು ನನ್ನದಲ್ಲದ
ಈ ಬದುಕು
ಬಿಟ್ಟು ಹೋಗುವುದು
ಒಂದಲ್ಲ ಒಂದು ದಿನ
ಈ ದೇಹ ಈ ಉಸಿರು
ಎಲ್ಲ ಬಿಟ್ಟು ಎಲ್ಲ ಮರೆತು
ಕೈಗೆಟುಕುದ ನಕ್ಷತ್ರ ವಾಗಿ
ಜಾತಿ ಮತ
ಭಾಷೆ ಸಂಸ್ಕೃತಿ
ಲಿಂಗ ಧರ್ಮ
ಭಿನ್ನವಾದರೇನು
ನರ ಮಾನವನಿಗೆ
ಇರುವುದು ಒಂದೇ
ಭಿನ್ನ ಬಿಕ್ಕಣವಿಲ್ಲದ
ಮನುಷ್ಯತ್ವ ಧರ್ಮ
ನರ ಮಾನವ
ಪರದಾಡುವನಯ್ಯ
ನೆಮ್ಮದಿ ನೆಮ್ಮದಿಯೆಂದು
ನೆಮ್ಮದಿಯ ಹುಡುಕುತ್ತಾ
ವಜ್ರ ವೈಢೂರ್ಯವಿದ್ದರು
ಕೊಳ್ಳಲಾಗದಯ್ಯ ನೆಮ್ಮದಿ
ಕೊಳ್ಳುವ ಮಾರುವ
ಮರದ ದಿಮ್ಮಿಯಲ್ಲ
ಕೈ ಗೆ ಸಿಗುವ
ಪಂಜರದ ಹಕ್ಕಿಯಲ್ಲ
ನೆಮ್ಮದಿಗೆ ಬೇಕಾಗಿಲ್ಲ
ಸಿರಿ ಸಂಪತ್ತು ಹಣ ಅಂತಸ್ತು
ಹಿತ ಮಿತವಾದ ಆಸೆ
ಆಲೋಚನೆಗಳಿಂದರೆ
ದೊರಕುವುದಯ್ಯ ನೆಮ್ಮದಿ
ಓಡದಿರು ಮನುಜ
ನೆಮ್ಮದಿಯ ಹುಡುಕುತ್ತಾ
ನಿನ್ನಲ್ಲಿಯೇ ಇರುವುದು ನೆಮ್ಮದಿ
ನಿನ್ನ ಕಾಯಕವೇ
ನಿನ್ನ ನೆಮ್ಮದಿಯ ತಾಣವಯ್ಯ
ನನ್ನೊಲವೆ ನನ್ನೊಲವೇ
ಚಂದವಳ್ಳಿಯ ಚಲುವೆ
ನೀ ಎಷ್ಟು ಚಂದ
ನನ್ನೊಲವಿನ ಅರಸಿ
ಮುಗಿಲ ಮಲ್ಲಿಗೆಯೇ
ನಗುವ ಕೆಂದಾವರೆ ಹೂವೆ
ನಲಿವ ಕೆಂಪು ಗುಲಾಬಿಯೇ
ಅರಳೋ ಕೆಂಡ ಸಂಪಿಗೆಯೇ
ನಿನ್ನ ಹರಸಿ ಬಂದಿರುವೆ
ನಿನ್ನ ಅರಸ ನಿನ್ನಲ್ಲಿಗೆ
ನಿನ್ನ ಪ್ರೀತಿಯ ಹರಸಿ
ನನ್ನ ಪ್ರೀತಿಯ ಅರಸಿ
ಮಳೆಯೆಂದರೆ
ನೆನೆಯುವುದು ಸಹಜ
ಚಳಿಯೆಂದರೆ
ನಡುಗುವುದು ಉಚಿತ
ಬಿಸಿಲೆಂದರೆ
ಒಣಗುವುದು ಕಚಿತ
ಆಟವೆಂದರೆ
ಸೋಲು ಗೆಲುವು ನಿಶ್ಚಿತ
ನಿಲ್ದಾಣವೆಂದರೆ ಹತ್ತಿ
ಇಳಿಯುವುದು ನಿಯಮ
ಜೀವನವೆಂದರೆ
ಕಲಿಯಬೇಕು ಪಾಠ
ಯಾರು ಯಾರಿಗಾಗಿಯು ಇಲ್ಲ
ಎಲ್ಲರೂ ಅವರವರಿಗಾಗಿ
ನಿನ್ನ ದಾರಿ ನಿನಗಾಗಿ
ಅವರ ದಾರಿ ಅವರಿಗಾಗಿ
ಇಲ್ಲದಿದ್ದರೆ ನೀ ಆಗುವೆ
ದಾರಿ ತಪ್ಪಿದ ಮಗ
*******ರಾಜು ಹಾಸನ*******