ಕಳ್ಳಿ ಮಳ್ಳಿ ಮಿಂಚುಳ್ಳಿ
ಮನಸು ಕದ್ದ ಚೆಂದುಳ್ಳಿ
ಕಾಡಿಸಬೇಡ ನೋಯಿಸಬೇಡ
ಕನಸಿನಲ್ಲಿ ಬಂದು ಕೊಲ್ಲಬೇಡ
ಮಿಂಚಿ ಮಾಯವಾಗಬೇಡ
ಕಂಡು ಮರೆಯಾಗಬೇಡ
ಮನಸು ಕದ್ದು ಓಡಬೇಡ
ಸೋತು ಸುಣ್ಣವಾಗಿರುವೇ
ಕಣ್ಣಾಮುಚ್ಚಾಲೆ ಆಟವೇಕೆ
ನನ್ನ ಕನಸು ಮನಸ್ಸು
ನೀನೇ ಆಗಿರುವಾಗ
ನಾಚಿಕೆಯಾಕೆ ಭಯವೇಕೆ
ಪ್ರೀತಿಯ ಮಾತು ನುಡಿಯಲು
ನನ್ನ ಪ್ರೀತಿಯ ಮಿಂಚುಳ್ಳಿ
ನಮ್ಮತನವ ನಾವು ಮರೆತು
ಪುಂಗಿ ಉದೊ ದಾಸಯ್ಯ ಹಿಂದೆ
ಅಲೆಯುವಂತಾಗಿದೆ ಬದುಕು...
ಯಾಕೆಂದರೆ ನಮ್ಮೊಳಗಿನ ಅಂತರಾಳದ ಶಕ್ತಿ
ನಾವು ಅರಿತುಕೊಳ್ಳದೆ ......
ಬೇರೆವರು ಅರಿವರೇನಯ್ಯ....?
ಅರಿತು ನಡೆಯದೆ ಭಯದಿಂದ ಮೂಲೆಗುಂಪಾಗಿ
ಉಜ್ವಲ ಭವಿಷ್ಯದ ಆತ್ಮಸ್ಥೈರ್ಯವನ್ನ
ಕಳೆದುಕೊಳ್ಳುವಂತಹ ಮನೋಸ್ಥಿತಿ ಎದುರಾಗಿದೆ...!
ಇಂತಹ ಪರಿಸ್ಥಿತಿಯಲ್ಲಿ ಬಂಧುಗಳು ,ಸ್ನೇಹ ಸಂಬಂಧಿಗಳು,
ನೆರೆಹೊರೆಯವರು ,ಮನೋಸ್ಥಿಯನ್ನರಿತು ಬೆಲೆ ಕಟ್ಟಲಾಗದ ಮಾನವಿಯ ಮೌಲ್ಯಗಳನ್ನ ಉಣಬಡಿಸಿ ....ಆತ್ಮಸ್ಥೈರ್ಯವನ್ನ ತುಂಬುವಂತಹ ಮನಸ್ಸು ಮಾನವಿಯತೆಯ... ಸದೃಢರ ಸಂಕಲ್ಪ ನಮ್ಮದಾಗಬೇಕು .
ಅಂದಾಗ , ಮಾತ್ರ ಸಮಾಜದಲ್ಲಿ ನಮ್ಮಿಂದ ನೂರಾರು ....ಸಾವಿರಾರುಕ್ಕಿಂತ ಒಬ್ಬರು ತಮ್ಮ ಜೀವನದ ಶೈಲಿ ರೂಪಿಸಿಕೊಂಡು ಯಶಸ್ಸನ್ನ ಕಂಡರೆ ! ಅದೇ ಒಬ್ಬರಿಂದ ಇನ್ನೊಬ್ಬರ ಬದುಕಿಗೆ ದಾರಿದೀಪ.....
ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳ
ನಡುವಿನ ಕೊಂಡಿ ಹೀಗ್ಯಾಕೆ ಕಳಚುತ್ತಿದೆ
ಬದುಕೇಂಬ ಒಡಲಿನಲ್ಲಿ ಹುಟ್ಟಿದ ನಾವು
ಬೇರಾವರ ಬದುಕನ್ನು ನುಂಗಲು ಹಂಬಲಿಸುವುದೇಕೆ.
ಮನಸಿನಲ್ಲಿ ಅಡಗಿರುವ ಕಿಚ್ಚನ್ನು
ಕೋಪದಲ್ಲಿ ಪರರ ಮೇಲೆ ತೋರುವುದೇಕೆ
ನಿಸ್ವಾರ್ಥದ ಪ್ರೀತಿ ಬಾರದೇಕೆ
ಆ ದೇವರ ಸನ್ನಿಧಿಯಲ್ಲಿ
ಯಾವ ವರ್ಗವಿಲ್ಲ ವರ್ಣವಿಲ್ಲ
ಜಾತಿಭೇದವಿಲ್ಲ ಬಡವ ಬಲ್ಲಿದನೆಂಬುದಿಲ್ಲ ಆದರೂ
ಈ ಜಗದಲ್ಲಿ
ಈ ಮನುಷ್ಯ ಹೀಗ್ಯಾಕೆ
ಈ ಭೂಮಿಯಲ್ಲಿ ಮನುಷ್ಯರು
ಹುಟ್ಟುತ್ತಾರೆ ಸಾಯುತ್ತಾರೆ
ಕೆಲವರು ಉಪಕಾರ ಮಾಡುತ್ತಾರೆ
ಇನ್ನೂ ಕೆಲವರು ಹಿಂಬದಿಯಿಂದ ಬೆನ್ನಿಗೆ ಚೂರಿ ಹಾಕಿ ಹೋಗುತ್ತಾರೆ
ಕೆಲವರು ಸಂತಸ ನೀಡುತ್ತಾರೆ
ಕೆಲವರು ನೊಯಿಸಿ ನೋವನಿಟ್ಟು ಹೋಗುತ್ತಾರೆ
ಕೆಲವರು ಜೀವನ ಬದುಕನ್ನೆ ಕಿತ್ತುಕೊಳ್ಳುತ್ತಾರೆ
ಈ ಮನುಷ್ಯ ಹೀಗ್ಯಾಕೆ
ಜೀವನ ಎನ್ನುವುದೇ ಅಚ್ಚರಿಗಳ ಕಂತೆ
ಕೆಲವರಿಗೆ ಶ್ರೀಮಂತಿಕೆಯ ಚಿಂತೆ
ಇಲ್ಲಿ ಅಯಸ್ಸಿಗೆ ಯಾವುದೇ ಗ್ಯಾರಂಟಿ ಇಲ್ಲ
ವಾರಂಟಿ ಇಲ್ಲ
ಆದರೂ ಈ ಮನುಷ್ಯ ಹೀಗ್ಯಾಕೆ
ನೂರು ಮನಸ್ಸುಗಳ ನೊಯಿಸಿ
ನೂರು ದೇವರುಗಳಿಗೆ
ನೂರು ದೀಪಗಳನ್ನು ಹಚ್ಚಿ ಸಂಭ್ರಮಿಸುವ
ನೂರು ಜನರಿಗೆ ಅನ್ನಹಾಕಿ ಸಂಭ್ರಮಿಸಲಾರ
ದೇವರು ಇದ್ದಿದ್ದರೆ
ಯಾರು ಅಳುತ್ತಿರಲಿಲ್ಲ
ಸಾಯುತ್ತಿರಲಿಲ್ಲ
ಹಸಿವಿನಿಂದ ಬಳಲುತ್ತಿರಲಿಲ್ಲ
ರೋಗ ರುಜನೇ ಬಂದರು
ಹೋಗುತ್ತಿರಲಿಲ್ಲ ದವಾಖನೆಗೆ
ಅಲೆದಾಡುತ್ತಿರಲಿಲ್ಲ
ಕಾಡು ಮೇಡು ಬೆಟ್ಟಗುಡ್ಡ
ಸುತ್ತುತ್ತಿರಲಿಲ್ಲ ಆ ಕ್ಷೇತ್ರ
ಈ ಕ್ಷೇತ್ರ ಪುಣ್ಯ ಕ್ಷೇತ್ರ
ಯಾರು ಯಾರಿಗಾಗಿಯು
ಕಾಯುತ್ತಿರಲಿಲ್ಲ
ನಿಮಗಾಗಿ ನೀವೇ ಹೊರೆತು
ನಿಮಗಾಗಿ ದೇವರಲ್ಲ
ಮೂಢರ ಮುಂದೆ
ಕಿನ್ನರಿ ಬಾರಿಸುವುದು ಒಂದೇ
ಹುಚ್ಚರ ಜಾತ್ರೆಯಲ್ಲಿ
ತಮಟೆ ಬಾರಿಸಿ
ಸಂಭ್ರಮಾಚರಣೆ
ಮಾಡುವುದು ಒಂದೇ