Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುಗ್ದ ಜನ

ನನ್ನ ಜನ ಒಳ್ಳೆ ಜನ
ತಳುಕು ಬಳುಕು ಇಲ್ಲದ ಮುಗ್ದ ಜನ
ಕಲ್ಲು ಕಂಡರೆ ಕೈ ಮುಗಿಯುವರು
ಖಾವಿ ಕಂಡರೆ ಕಾಲಿಗೆ ಬೀಳುವರು
ಕಲ್ಲ ನಾಗರ ಕಂಡರೆ ಹೇದರುವುದಿಲ್ಲ
ನಿಜ ನಗರ ಕಂಡರೆ ಬೆಚ್ಚಬೀಳುವರು
ನನ್ನ ಜನ ಒಳ್ಳೆ ಜನ
ತಳುಕು ಬಳುಕು ಇಲ್ಲದ ಮುಗ್ದ ಜನ
ದುಡ್ಡು ಕಂಡರೆ ಬಿಡುವುದಿಲ್ಲ
ಹೆಂಡ ಕಂಡರೆ ಹಿಗ್ಗಿಬಿಡುವರು
ಸಿಹಿ ಕಂಡರೆ ಮುತ್ತುಕೋಳ್ಳುವರು
ಖಂಡ ತುಂಡು ಕಂಡರೆ ನುಂಗಿಕೊಳ್ಳುವರು
ನನ್ನ ಜನ ಒಳ್ಳೆ ಜನ
ತಳುಕು ಬಳುಕು ಇಲ್ಲದ ಮುಗ್ದ ಜನ

- ರಾಜು ಹಾಸನ

31 Oct 2020, 02:42 pm

ಕನಸುಗಾರ

ಕಾಣದ ಗೆಳತಿಯೇ ಕೇಳೆ
ನಾ ನಿನಗಾಗಿ ಬರೆದಿರುವೆ
ಒಂದು ಓಲೆ
ಕಾಣೆ ಎಂಬ ಕಾರಣಕ್ಕೆ
ನೀ ಮರೆಯದಿರು ನನ್ನ
ಪ್ರತಿ ಉಸಿರಲು ನಾ ನಿನ್ನ
ನೆನೆಯುವೆ
ಈ ಕಾಲಿ ಹೃದಯದಲಿ ನಿನಗಾಗಿ
ಕಟ್ಟಿರುವೆ ಒಂದು ಚಿಕ್ಕ ಮನೆಯ
ದಯಮಾಡಿ ನೀ ಬಂದು ಸೇರು
ನನ್ನ ಈ ಮನದ ಮನೆಯ.

..................arts by kiru

- Kiran kumar

31 Oct 2020, 01:56 pm

ನಲ್ಲೆ ನಲ್ಲೆ

ಓ ನನ್ನ ನಲ್ಲೆ
ನೀ ನಗಬೇಡವೇ
ಮೆಲ್ಲ ಮೆಲ್ಲಗೆ
ಆಗುವುದು ಪ್ರೀತಿ
ನಿನ್ನ ಮೇಲೆ ಮೇಲೆ
ನೀ ಹಾಂಗೇ ತಿರು
ತಿರುಗಿ ನೋಡಿ
ನೆಡೆಯಬೇಡವೇ
ನಾ ತಿರು ತಿರುಗಿ
ಬೀಳುವೆನು ಇಲ್ಲೆ ಇಲ್ಲೆ

- ರಾಜು ಹಾಸನ

31 Oct 2020, 12:29 am

....

ನಗುವ ಮೊಗವು ಒಂದಾದರೆ ಅದರೊಳಗಿನ ಅರ್ಥವೇ ಇನೊಂದಾಗಿರುವುದು. ಮೌನಕ್ಕೆ ಸಾವಿರಾರು ಅರ್ಥಗಳಿಹುವುದು ಆದ್ರೂ ಮೌನದ ಮಾತನ್ನು ಅರಿತವರಿಗಷ್ಟೇ ಅದರ ಅರ್ಥ ತಿಳಿಯುವುದು ಅಲ್ವಾ? ಮಾತನಾಡುವ ನಾಲಿಗೆಗೆ ಇರೋ ಬೆಲೆ ಮನುಷ್ಯನ ಮನಸಿಗಿಲ್ಲ..

- Acchu love

30 Oct 2020, 11:51 pm

ನಾ ಎಲ್ಲೂ ಕಾಣೆ ಎಲ್ಲೂ ಕಾಣೆನು

ಸುಮ್ಮನೆ ಕುಂತಿದ್ದರು
ಬಿಡಲಿಲ್ಲ ಎಳೆದು ತಂದು
ಕುಕ್ಕುರು ಬಡಿಸಿ
ಗುಡಿಯ ಮೇಲೆ ಗುಡಿ ಕಟ್ಟಿ
ಪೂಜಿಸಿದರಯ್ಯ
ಈ ಮೂರ್ಖ ಜನರು
ನಾ ಎಲ್ಲೂ ಕಾಣೆ
ಎಲ್ಲೂ ಕಾಣೆನು

ನಾ ಕರೆದು ಹೇಳಲು ಇಲ್ಲ
ನಾ ಹೋಗಿ ಕೇಳಲು ಇಲ್ಲ
ತಮಗೆ ತಾವೆ ಬಂದು
ಬಾಯಿ ತುಂಬಾ ಹೊಗಳಿ
ಬಾಯಿಗೆ ಬಂದಂತೆ
ಸುಮ್ಮ ಸುಮ್ಮನೇ
ಬೈಯುವರಯ್ಯ
ಈ ಬಾಯಿ ಬಡುಕ ಜನರು
ಇದು ಯಾವ ಧರ್ಮವೂ
ನನಗೆ ಒದಗಿದ ಕರ್ಮವೋ
ನಾ ಎಲ್ಲೂ ಕಾಣೆ
ಎಲ್ಲೂ ಕಾಣೆನು

ಕೇಳಿದ್ದನ್ನು ಕೊಡಲು
ನಾನೇನು ಜಾದೂಗಾರನಲ್ಲ
ನಾನೊಂದು ಜೀವವಿಲ್ಲದ
ಮರದ ಕಲ್ಲಿನ ಗೊಂಬೆ
ಮಣ್ಣಿನ ಮುದ್ದೆ ನಾನಯ್ಯ
ನನ್ನನ್ನೆ ದೇವರೆಂದು
ಪೂಜಿಸುವರಯ್ಯ
ಈ ದಂಡ ಪಿಂಡ ಜನರು
ನಾ ಎಲ್ಲೂ ಕಾಣೆ
ಎಲ್ಲೂ ಕಾಣೆನು

- ರಾಜು ಹಾಸನ

30 Oct 2020, 10:34 pm

ಜಾಣ ಕುರುಡು

ನೋಡಲು ಕಣ್ಣಿಲ್ಲ
ತಿನ್ನಲು ಬಾಯಿಲ್ಲ
ಕೇಳಲು ಕಿವಿ ಇಲ್ಲದ
ಕಲ್ಲ ಸುತ್ತ ಸುತ್ತುವೆಕ್ಕೆ
ಸುತ್ತವ ಮನಸಿದ್ದರೆ
ಸುತ್ತು ನೆಗಿಲ ಹಿಂದೆ
ತುಂಬಿಕೊಳ್ಳುವುದು
ನಿನ್ನ ಹಸಿದ ಜೋಳಿಗೆ

ಜೀವವಿಲ್ಲದ ಕಲ್ಲಿನ ಮೇಲೆ
ಹಾಲು ತುಪ್ಪವ ಸುರಿದು
ಕಲ್ಲಿನ ಮುಂದೆ
ಅನ್ನದ ಎಡೆಯಿಟ್ಟು
ಸುಮ್ಮನೆ ವ್ಯರ್ಥ
ಮಾಡುವ ಬದಲು
ಹಸಿದವನಿಗೆ ಕೊಟ್ಟರೆ
ದೊರಕುವುದಯ್ಯ ಮುಕುತಿ

ಪ್ರಾಣಿ ಪಕ್ಷಿಗಳಿಗೆ
ಇಲ್ಲ ಒಂದು ಹೆಸರು
ಕಾಡು ಕಲ್ಲಿಗೆ ಇರುವುದು
ನೂರೆಂಟು ಹೆಸರು
ನಮಗೆ ಹೆಸರಿಡುವುದಿಲ್ಲ
ನಾವೇ ಹೆಸರಿಡುವೆವು
ತರ ತರವಾದ ಹೆಸರು
ಬಂಡೆ ಕಲ್ಲಿನ ಮೂರ್ತಿಗೆ

ಜಾಣನಿಗೆ ಜಾಣನಲ್ಲ
ದಡ್ಡನಿಗೆ ದಡ್ಡನಲ್ಲ
ಮೂಢರಲ್ಲಿ ಮೂಢನಯ್ಯ
ಈ ಮೂರ್ಖ ಮನುಜ

- ರಾಜು ಹಾಸನ

30 Oct 2020, 05:55 pm

ಗೆಳತಿಯ ಹುಟ್ಟು ಹಬ್ಬ

ಗೊಂಬೆ ಗೊಂಬೆ
ಮುದ್ದು ಗೊಂಬೆ
ನಡೆದಾಡುವ
ದಂತದ ಗೊಂಬೆ
ಬಳುಕುವ
ವೈಯ್ಯಾರದ ಗೊಂಬೆ
ಝಳ್ ಝಳ್
ಕಾಲ್ಗೆಜ್ಜೆಯ ಕಟ್ಟಿ
ಕಳ್ಳಿ ಮಳ್ಳಿ
ಹೆಜ್ಜೆಯನ್ನು ಇಡುವ
ನನ್ನ ಜನುಮ
ಜನುಮದ ಗೆಳತಿ
ಅನುಬಂಧದ ಒಡತಿ
ನನ್ನ ಕನಸಿನ ರಾಣಿ
ಮನಸಿನ ಮಹಾರಾಣಿ
ನಾ ಹಾರೈಸುವೆನು ನಿನಗೆ
ತುಂಬು ಹೃದಯಾದಿ
ಜನ್ಮ ದಿನದ ಹಾರ್ದಿಕ
ಶುಭಾಶಯಗಳು
ಇಂತಿ ನಿನ್ನ ನಲ್ಲ ಮಲ್ಲ

- ರಾಜು ಹಾಸನ

30 Oct 2020, 02:21 pm

ನಾಮಕರಣ

ಕಿಲಕಿಲನೆ ನಗುವ
ಹಾಲುಗೆನ್ನೆ ಚಂದಿರನ
ಹವಳದ ತುಟಿಗೆ
ಬೆಣ್ಣೆ ತುಪ್ಪವ ಸವರಿ
ಬೆಳ್ಳಿ ಬಟ್ಟಲ
ನೊರೆ ಹಾಲುಣಿಸಿ
ಮುದ್ದಿಸಿ ಮುತ್ತಿಟ್ಟು
ಹಾರೈಸಿ ಬನ್ನಿರಿ
ನನ್ನ ಮುದ್ದು ಕಂದಮ್ಮನ
ನನ್ನ ಬಂಧು ಮಿತ್ರರೇ
*******ರಾಜು ಹಾಸನ******

- ರಾಜು ಹಾಸನ

30 Oct 2020, 01:21 pm

ದಾಸ

ಜೀವವಿಲ್ಲದ
ಮಾತು ಬಾರದ ನಾನು
ನನ್ನ ಪಾಡಿಗೆ ನಾ ಬಿದ್ದಿದೆ
ಚಳಿ ಗಾಳಿ ಮಳೆ ಎನ್ನದೇ
ಬಿಸಿಲು ಬೆಂಕಿ ಕಾಯುತ್ತಾ
ಹೋತು ಕೊಂಡು ಬಂದರೆ
ನಾನೇನು ಮಾಡಲ್ಲಯ್ಯ
ದಾಸ ಓ ದಾಸ

ದಬದಬನೆ ತಣ್ಣೀರು ಸುರಿದು
ಹಾಲು ತುಪ್ಪದ ಹೋಳಿಗೆ ಇಟ್ಟು
ಬಣ್ಣ ಬಣ್ಣದ ಬೊಟ್ಟಿಟು
ತುಂಡು ಬಟ್ಟೆಯ ಸುತ್ತಿ
ಹೊವಿನ ಎಸಳು ಎರಚಿ
ಗುಡಿಯಲ್ಲಿಟ್ಟು ಪೂಜಿಸಿದರೆ
ನಾನೇನು ಹೇಳಲ್ಲಯ್ಯ
ದಾಸ ಓ ದಾಸ

ದಿನ ಬೆಳಗಾದರೆ
ಬರುವರಯ್ಯ ಮೂರ್ಖರು
ಘರನೆ ಘರಘರನೇ
ಸುತ್ತುವರಯ್ಯ ನನ್ನ ಗುಡಿಯ
ಘಂಟೆ ನಗಾರಿ ಬಾರಿಸಿ
ಬಿದ್ದು ಬೇಡುವರಯ್ಯ ವರವಾ
ನಾ ಹೇಂಗೆ ಕೊಡಲಯ್ಯ
ದಾಸ ಓ ದಾಸ
********ರಾಜು ಹಾಸನ********

- ರಾಜು ಹಾಸನ

29 Oct 2020, 05:16 pm

ಬೂಟಾಟಿಕೆ

ದೇವರು ಬರುವುದಯ್ಯ
ಮೈ ಮೇಲೆ ಬಂದು
ಕೇಳುವುದಯ್ಯ
ಬಾಲಕ ನಿನ್ನ ಸಮಸ್ಯೆ ಏನೆಂದು
ಭಕ್ತ ಹೇಳುವನಯ್ಯ
ಈ ಭಕ್ತನ ಕೂಗು ಇಷ್ಟು ದಿನ
ನಿನಗೆ ಕೇಳಿಸಲಿಲ್ಲವೇ
ನೀ ಎಲ್ಲಿ ಹೋಗಿದೆ ನನ್ನಪ್ಪ
ನಾ ಊರು ಊರು
ಸುತ್ತಲು ಹೋಗಿದೆ
ನಿನಗೇನು ಕಷ್ಟ
ಏನು ಹೇಳು ಬಾಲಕ
ನನ್ನ ಕಷ್ಟಗಳು ನಿನಗೆ
ತಿಳಿಯದೆ ನನ್ನ ತಂದೆ ನೀನಪ್ಪ
ಊರು ಊರು ಸುತ್ತವ
ನನಗೆ ಮನೆ ಮನೆಗೆ ಭಕ್ತರಿರುವರು
ನಿನ್ನ ಕಷ್ಟ ನನಗೆ ತಿಳಿದಿಲ್ಲ
ಈಗ ಹೇಳು ನನ್ನ ಮಗನೇ
ನನ್ನ ಕಷ್ಟವ ನಾನೇ
ನಿನಗೆ ಹೇಳುವುದಾದರೆ
ನೀನೇಕೆ ಬೇಕಪ್ಪ
ನೀ ಸುಮ್ಮನೆ ಹೋಗಿಬಿಡಪ್ಪ
ನೀನು ಯಾವ ಎಂತಾ
ಬೂಟಾಟಿಕೆ ದೇವರಪ್ಪ
*******ರಾಜು ಹಾಸನ********

- ರಾಜು ಹಾಸನ

28 Oct 2020, 11:44 pm