ನನ್ನ ಜನ ಒಳ್ಳೆ ಜನ
ತಳುಕು ಬಳುಕು ಇಲ್ಲದ ಮುಗ್ದ ಜನ
ಕಲ್ಲು ಕಂಡರೆ ಕೈ ಮುಗಿಯುವರು
ಖಾವಿ ಕಂಡರೆ ಕಾಲಿಗೆ ಬೀಳುವರು
ಕಲ್ಲ ನಾಗರ ಕಂಡರೆ ಹೇದರುವುದಿಲ್ಲ
ನಿಜ ನಗರ ಕಂಡರೆ ಬೆಚ್ಚಬೀಳುವರು
ನನ್ನ ಜನ ಒಳ್ಳೆ ಜನ
ತಳುಕು ಬಳುಕು ಇಲ್ಲದ ಮುಗ್ದ ಜನ
ದುಡ್ಡು ಕಂಡರೆ ಬಿಡುವುದಿಲ್ಲ
ಹೆಂಡ ಕಂಡರೆ ಹಿಗ್ಗಿಬಿಡುವರು
ಸಿಹಿ ಕಂಡರೆ ಮುತ್ತುಕೋಳ್ಳುವರು
ಖಂಡ ತುಂಡು ಕಂಡರೆ ನುಂಗಿಕೊಳ್ಳುವರು
ನನ್ನ ಜನ ಒಳ್ಳೆ ಜನ
ತಳುಕು ಬಳುಕು ಇಲ್ಲದ ಮುಗ್ದ ಜನ
ಕಾಣದ ಗೆಳತಿಯೇ ಕೇಳೆ
ನಾ ನಿನಗಾಗಿ ಬರೆದಿರುವೆ
ಒಂದು ಓಲೆ
ಕಾಣೆ ಎಂಬ ಕಾರಣಕ್ಕೆ
ನೀ ಮರೆಯದಿರು ನನ್ನ
ಪ್ರತಿ ಉಸಿರಲು ನಾ ನಿನ್ನ
ನೆನೆಯುವೆ
ಈ ಕಾಲಿ ಹೃದಯದಲಿ ನಿನಗಾಗಿ
ಕಟ್ಟಿರುವೆ ಒಂದು ಚಿಕ್ಕ ಮನೆಯ
ದಯಮಾಡಿ ನೀ ಬಂದು ಸೇರು
ನನ್ನ ಈ ಮನದ ಮನೆಯ.
ನಗುವ ಮೊಗವು ಒಂದಾದರೆ ಅದರೊಳಗಿನ ಅರ್ಥವೇ ಇನೊಂದಾಗಿರುವುದು. ಮೌನಕ್ಕೆ ಸಾವಿರಾರು ಅರ್ಥಗಳಿಹುವುದು ಆದ್ರೂ ಮೌನದ ಮಾತನ್ನು ಅರಿತವರಿಗಷ್ಟೇ ಅದರ ಅರ್ಥ ತಿಳಿಯುವುದು ಅಲ್ವಾ? ಮಾತನಾಡುವ ನಾಲಿಗೆಗೆ ಇರೋ ಬೆಲೆ ಮನುಷ್ಯನ ಮನಸಿಗಿಲ್ಲ..
ಸುಮ್ಮನೆ ಕುಂತಿದ್ದರು
ಬಿಡಲಿಲ್ಲ ಎಳೆದು ತಂದು
ಕುಕ್ಕುರು ಬಡಿಸಿ
ಗುಡಿಯ ಮೇಲೆ ಗುಡಿ ಕಟ್ಟಿ
ಪೂಜಿಸಿದರಯ್ಯ
ಈ ಮೂರ್ಖ ಜನರು
ನಾ ಎಲ್ಲೂ ಕಾಣೆ
ಎಲ್ಲೂ ಕಾಣೆನು
ನಾ ಕರೆದು ಹೇಳಲು ಇಲ್ಲ
ನಾ ಹೋಗಿ ಕೇಳಲು ಇಲ್ಲ
ತಮಗೆ ತಾವೆ ಬಂದು
ಬಾಯಿ ತುಂಬಾ ಹೊಗಳಿ
ಬಾಯಿಗೆ ಬಂದಂತೆ
ಸುಮ್ಮ ಸುಮ್ಮನೇ
ಬೈಯುವರಯ್ಯ
ಈ ಬಾಯಿ ಬಡುಕ ಜನರು
ಇದು ಯಾವ ಧರ್ಮವೂ
ನನಗೆ ಒದಗಿದ ಕರ್ಮವೋ
ನಾ ಎಲ್ಲೂ ಕಾಣೆ
ಎಲ್ಲೂ ಕಾಣೆನು
ಕೇಳಿದ್ದನ್ನು ಕೊಡಲು
ನಾನೇನು ಜಾದೂಗಾರನಲ್ಲ
ನಾನೊಂದು ಜೀವವಿಲ್ಲದ
ಮರದ ಕಲ್ಲಿನ ಗೊಂಬೆ
ಮಣ್ಣಿನ ಮುದ್ದೆ ನಾನಯ್ಯ
ನನ್ನನ್ನೆ ದೇವರೆಂದು
ಪೂಜಿಸುವರಯ್ಯ
ಈ ದಂಡ ಪಿಂಡ ಜನರು
ನಾ ಎಲ್ಲೂ ಕಾಣೆ
ಎಲ್ಲೂ ಕಾಣೆನು
ದೇವರು ಬರುವುದಯ್ಯ
ಮೈ ಮೇಲೆ ಬಂದು
ಕೇಳುವುದಯ್ಯ
ಬಾಲಕ ನಿನ್ನ ಸಮಸ್ಯೆ ಏನೆಂದು
ಭಕ್ತ ಹೇಳುವನಯ್ಯ
ಈ ಭಕ್ತನ ಕೂಗು ಇಷ್ಟು ದಿನ
ನಿನಗೆ ಕೇಳಿಸಲಿಲ್ಲವೇ
ನೀ ಎಲ್ಲಿ ಹೋಗಿದೆ ನನ್ನಪ್ಪ
ನಾ ಊರು ಊರು
ಸುತ್ತಲು ಹೋಗಿದೆ
ನಿನಗೇನು ಕಷ್ಟ
ಏನು ಹೇಳು ಬಾಲಕ
ನನ್ನ ಕಷ್ಟಗಳು ನಿನಗೆ
ತಿಳಿಯದೆ ನನ್ನ ತಂದೆ ನೀನಪ್ಪ
ಊರು ಊರು ಸುತ್ತವ
ನನಗೆ ಮನೆ ಮನೆಗೆ ಭಕ್ತರಿರುವರು
ನಿನ್ನ ಕಷ್ಟ ನನಗೆ ತಿಳಿದಿಲ್ಲ
ಈಗ ಹೇಳು ನನ್ನ ಮಗನೇ
ನನ್ನ ಕಷ್ಟವ ನಾನೇ
ನಿನಗೆ ಹೇಳುವುದಾದರೆ
ನೀನೇಕೆ ಬೇಕಪ್ಪ
ನೀ ಸುಮ್ಮನೆ ಹೋಗಿಬಿಡಪ್ಪ
ನೀನು ಯಾವ ಎಂತಾ
ಬೂಟಾಟಿಕೆ ದೇವರಪ್ಪ
*******ರಾಜು ಹಾಸನ********