ಜೈ ಜೈ ಜೈ ಭೀಮ್
ನಾವು ಜೈ ಭೀಮನ ಮಕ್ಕಳು
ಜೈ ಭೀಮನ ಮರಿ ಆನೆಗಳು
ಇಲ್ಲಿ ಯಾರು ಕೆಮ್ಮಗಿಲ್ಲ
ಕೆಣಕಿದರೆ ಬಿಡೋದಿಲ್ಲ
ಸುಮ್ಮನೆ ಕಾಲುಕೆರದು
ನಮ್ಮ ತಂಟ್ಟೆಗೆ ಬಂದರೆ
ಬಿಡೋದಿಲ್ಲ ಉಳಿಸೋದಿಲ್ಲ
ಉರುಳಿಸಿ ಚಂಡಾಡುವೆವು
ಮನುವಾದಿಗಳ ರುಂಡ ಮುಂಡ
ಗಂಚಾಲಿ ಮಾಡಿದರೆ ಸಿಗಿದು
ತೋರಣ ಕಟ್ಟಿ ಬಿಡುವೆವು
ಎಚ್ಚರ ಎಚ್ಚರ ಎಚ್ಚರ
ಕಟ್ಟೆಚ್ಚರವಿರಲಿ ಮನುವಾದಿಗಳಿಗೆ
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು
ಮೂಢನಂಬಿಕೆಯ ಧಿಕ್ಕರಿಸಿ
ಮೋಸ ವಂಚನೆಯ ಖಂಡಿಸಿ
ಅನ್ಯಾಯದ ವಿರುದ್ಧ ಹೋರಾಡಿ
ದಂಡು ದಾಳಿಗೆ ಹೆದರದೆ ಬೆದರದೆ
ಭೀಮ್ ಕೊರೆಂಗಾವ್ ಗೆದ್ದ
ಸಿಡಿಲ ಸಿಂಹದ ಮರಿಗಳ
ಮರಿ ಮೊಮ್ಮಕ್ಕಳು ನಾವು
ಭಯವಿಲ್ಲ ಹೆದರುವುದಿಲ್ಲ
ಕೆಚ್ಚೆದೆಯ ಕಲಿಗಳು
ಗಂಡೆದೆಯ ಗಂಡುಗಲಿಗಳು
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು
ಬಡವರ ಸ್ತ್ರೀ ಶೋಷಿತರ
ರಕ್ಷಣೆ ಏಳಿಗೆಯ ಸಹಿಸದ
ದುರುಳ ನೀಚರನ್ನು ಸದೆಬಡಿದು
ಸ್ನೇಹ ಪ್ರೀತಿ ಸಮಾನತೆ
ಸಹಬಾಳ್ವೆ ನಮ್ಮಉಸಿರೆಂದು
ಜೀವನ ಪೂರ್ತಿ ಬದುಕುವ
ನ್ಯಾಯ ನೀತಿಗೆ ಬೆಲೆ ಕೊಟ್ಟು
ತಲೆ ಬಾಗಿ ನಡೆಯುವ
ಬುದ್ಧನ ವಂಶಸ್ಥರು
ನಾಗ ಕುಲದವರು
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು
ಬುದ್ದನ ಧರ್ಮವೇ ನನ್ನ ಧರ್ಮ
ಸಂವಿಧಾನವೇ ನನ್ನ ಧರ್ಮ ಗ್ರಂಥ
ಜೈ ಭೀಮನೇ ನನ್ನ ಗುರು
ಜೈ ಭೀಮನೇ ನಮ್ಮ ಕುಲದೇವರು
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು
ನನ್ನವಳು ನನ್ನವಳು ನನಗೆಲ್ಲ
ನೀನು ಕೊಟ್ಟ ಪ್ರೀತಿಯೇ ನನಗೆಲ್ಲ
ಸುಮ್ಮನಿರಲು ಬಿಡದು
ನೀ ಬಿಟ್ಟುಹೋದ ಈ ಹೃದಯ
ತಾಳಲಾರೇನು ಸಹಿಸಲಾರೇನು
ಮನಸಿನ ಕಸಿಬಿಸಿಯ
ನಿನ್ನ ಬಿಟ್ಟು ಒಂಟಿಯಾಗಿ
ಬದುಕಿ ಬಾಳುವ ಆಸೆ ನನಗಿಲ್ಲ
ಸನಿಹವೇ ಸುಳಿದಾಡುವ ಜವರಯನ
ಜೋತೆ ಹೋಗುವ ಆಸೆ ನನಗೆಲ್ಲ
ನನ್ನವಳು ನನ್ನವಳು ನನಗೆಲ್ಲ
ನೀನು ಕೊಟ್ಟ ಪ್ರೀತಿಯೇ ನನಗೆಲ್ಲ
ನಿನ್ನ ಮಾತುಗಳಿಲ್ಲದೆ
ಕಿವಿ ಕೇಳಿಸದ ಕಿವುಡನಾಗಿರುವೇ
ನಿನ್ನ ಮಾತುಗಳು ಕೇಳಿಸಿದರು
ಪದೇ ಪದೇ ಕೇಳುವ ಮನಸ್ಸು ನನಗೆಲ್ಲ
ನಿನ್ನ ಪ್ರತಿಬಿಂಬವಿಲ್ಲದೆ
ಕಣ್ಣು ಕಾಣಿಸದ ಕುರುಡನಾಗಿರುವೆ
ನಿನ್ನ ನೋಡಿ ಕಣ್ಣ್
ತುಂಬಿಕೊಳ್ಳುವ ಕನಸುಗಳೆ ನನಗೆಲ್ಲ
ನಿನ್ನ ನಗುವಿಲ್ಲದೆ ಮಾತು
ಬಾರದ ಮೂಗನಾಗಿರುವೇ
ನಿನ್ನ ನಗುವ ಕಂಡು ನಕ್ಕುನಲಿಯುವ
ಮುದ್ದಿನ ಅರಗಿಣಿ ನೀನೆ ನನಗೆಲ್ಲ
ನನ್ನವಳು ನನ್ನವಳು ನನಗೆಲ್ಲ
ನೀನು ಕೊಟ್ಟ ಪ್ರೀತಿಯೇ ನನಗೆಲ್ಲ
ನಿನ್ನ ಪ್ರೀತಿ ಇಲ್ಲದೆ
ಬರಿದಾಗಿದೆ ನನ್ನೆದೆಯ ಗೂಡು
ಬರಿದಾದ ಗೂಡಿಗೆ ನಿನ್ನ ಪ್ರೀತಿಯ
ಬೆಳಕೆ ದಾರಿದೀಪವು ನನಗೆಲ್ಲ
ಉಕ್ಕಿ ಹರಿಯುತವ ಮನಸ್ಸಿನ
ನೋವನು ಬಚ್ಚಿಡಲಾರೇನು
ನನ್ನವಳು ನನ್ನವಳು ನನಗೆಲ್ಲ
ನೀನು ಕೊಟ್ಟ ಪ್ರೀತಿಯೇ ನನಗೆಲ್ಲ
ಸುಳ್ಳೆ ಸುಳ್ಳೋ
ನಾನು ಸುಳ್ಳೋ ನೀನು ಸುಳ್ಳೋ
ಎಲ್ಲಾ ಸುಳ್ಳೇ ಸುಳ್ಳೋ
ಪ್ರೀತಿ ಪ್ರೇಮ ಅನ್ನೊದು
ಬರಿ ಸುಳ್ಳೆ ಸುಳ್ಳೋ
ನಾನು ಮಾಡಿದ ಪ್ರೀತಿ ಸುಳ್ಳೋ
ನೀನು ಕೊಟ್ಟ ಪ್ರೀತಿ ಸುಳ್ಳೋ
ನಾನು ಕಂಡ ಕನಸು ಸುಳ್ಳೋ
ನೀನು ಕಟ್ಟಿದ ಕನಸು ಸುಳ್ಳೋ
ಸುಳ್ಳೆ ಸುಳ್ಳೋ ಈ ಪ್ರೀತಿಯಲ್ಲಿ
ನಾನು ಸುಳ್ಳೋ ನೀನು ಸುಳ್ಳೋ
ಎಲ್ಲಾ ಸುಳ್ಳೇ ಸುಳ್ಳೋ
ನಾನು ಬರೆದ ಪ್ರೇಮ ಪತ್ರ ಸುಳ್ಳೋ
ನೀನು ಓದಿ ಬರೆದ ಪ್ರೇಮ ಪತ್ರ ಸುಳ್ಳೋ
ನಾನು ಆಡಿದ ಮಾತು ಸುಳ್ಳೋ
ನೀನು ಇಟ್ಟ ಹಣೆ ಮಾತು ಸುಳ್ಳೋ
ನಾನು ನಂಬಿದ ನೀನು ಸುಳ್ಳೋ
ನೀನು ನಂಬಿದ ನಾನು ಸುಳ್ಳೋ
ಸುಳ್ಳೆ ಸುಳ್ಳೋ ಈ ಪ್ರೀತಿಯಲ್ಲಿ
ನಾನು ಸುಳ್ಳೋ ನೀನು ಸುಳ್ಳೋ
ಎಲ್ಲಾ ಸುಳ್ಳೇ ಸುಳ್ಳೋ
ನಿನಗಾಗಿ ನಾನು ಅತ್ತಿದ್ದು ಸುಳ್ಳೋ
ನನಗಾಗಿ ನೀನು ಅತ್ತಿದ್ದು ಸುಳ್ಳೋ
ನಿನಗಾಗಿ ನಾನು ಬರುತ್ತಿದ್ದದ್ದು ಸುಳ್ಳೋ
ನನಗಾಗಿ ನೀನು ಕಾಯುತ್ತಿದ್ದದ್ದು ಸುಳ್ಳೋ
ಸುಳ್ಳೆ ಸುಳ್ಳೋ ಈ ಪ್ರೀತಿಯಲ್ಲಿ
ನಾನು ಸುಳ್ಳೋ ನೀನು ಸುಳ್ಳೋ
ಎಲ್ಲಾ ಸುಳ್ಳೇ ಸುಳ್ಳೋ
ನಾನು ಸುತ್ತಿ ಬೇಡಿದ್ದು ಸುಳ್ಳೋ
ನೀನು ಬೈದು ಬುದ್ಧಿ ಹೇಳಿದ್ದು ಸುಳ್ಳೋ
ನಿನಗಾಗಿ ನಾನು ಹುಟ್ಟಿದ್ದು ಸುಳ್ಳೋ
ನನಗಾಗಿ ನೀನು ಹುಟ್ಟಿದ್ದು ಸುಳ್ಳೋ
ನಾನು ಮಾಡಿದ ಮೋಸ ಸುಳ್ಳೋ
ನೀನು ಮಾಡಿದ ಮೋಸ ಸುಳ್ಳೋ
ಸುಳ್ಳೆ ಸುಳ್ಳೋ ಈ ಪ್ರೀತಿಯಲ್ಲಿ
ನಾನು ಸುಳ್ಳೋ ನೀನು ಸುಳ್ಳೋ
ಎಲ್ಲಾ ಸುಳ್ಳೇ ಸುಳ್ಳೋ
ದೇವರ ಬೈದರೆ
ಬರುವುದಂತೆ ಕರ್ಮ
ಸುತ್ತಿಕೊಳ್ಳುವುದಂತೆ
ಮೈ ತುಂಬಾ ಪಾಪ
ದಿನ ಬೆಳಗಾದರೆ
ಪೂಜಿಸಿ ಆರಾಧಿಸುವ
ಬಡ ಜನರಿಗೆಕ್ಕೆ
ಬಂದಿಲ್ಲಾ ಸಿರಿತನ
ಸುತ್ತಿಕೊಂಡಿರುವುದಯ್ಯ
ಬಡತನವೆಂಬ ವಿಷ ಸರ್ಪ
ಹಾಸಿಕೊಂಡಿರುವುದಯ್ಯ
ಮುಳ್ಳಿನ ಕರಿ ಕಂಬಳಿ
ಸುರಿಯುತ್ತಿರುವುದಯ್ಯ
ಕಣ್ಣೀರಿನ ಮಹಾಮಳೆ
ಹರಿಯುತ್ತಿರುವುದಯ್ಯ
ರಕ್ತ ಕಣ್ಣೀರಿನ ಹೊಳೆ
ಇದು ಯಾಕೆ ಹಿಂಗೇಕ್ಕಯ್ಯ
ನೀ ಹೇಳು ಓ ಮನುಜ
ಒಂದು ಮಾತು
ಒಂದು ದಿನವೂ
ಒಂದು ಕ್ಷಣವೂ
ದೇವರ ಬೈಯದ
ಮೂಕ ಪ್ರಾಣಿಗಳ
ಮಾತು ಕಿತ್ತುಕೊಂಡವನು
ಯಾರಯ್ಯ ಯಾಕಯ್ಯ
ಮೂಕ ಪ್ರಾಣಿಗಳು ಮಾಡಿದ
ತಪ್ಪಾದರೂ ಏನಯ್ಯ
ಯಾವ ಪಾಪ ಪುಣ್ಯದ
ಅರಿವಿಲ್ಲದ ಮೂಕ
ಪ್ರಾಣಿಗಳಿಗೆಕ್ಕಯ್ಯ ಈ ಶಿಕ್ಷೆ
ಎಲ್ಲ ನಮ್ಮ ನಮ್ಮ
ಕನಸಿನ ಭ್ರಮೆ ಅಷ್ಟೆ
ನೀ ತಿಳಿಯಯ್ಯ
ಓ ಮನುಜ ವಿಶ್ವ ಮನುಜ
ದೇವರೇ ಜನರ ಜೀವ
ಕಿತ್ತುಕೊಳ್ಳುವ ದುಷ್ಟನಗಿರುವಾಗ
ಜನರು ದುಷ್ಟರಂತೆ
ವರ್ತಿಸುವುದರಲ್ಲಿ ತಪ್ಪೇನಿದೆ
ಅಂಗವಿಕಲರೆಂದು
ಹಿಯಾಳಿಸಿ ಜರಿಯ ಬೇಡ
ನೀ ದೇವರೆಂದು ಪೂಜಿಸುವ
ದೇವರು ಕೂಡ ಅಂಗವಿಕಲನಯ್ಯ
ಅಂಗವಿಕಲರ ಜರಿದರೆ
ನೀ ದೇವರನ್ನ ಜರಿದಂತೆ ಮನುಜ
ಒಂದೇ ದೇಹಕ್ಕೆ
ಹತ್ತಾರು ತಲೆ ಕೈಗಳು ಮಾತ್ರ
ಇರುವುದಯ್ಯ ದೇವರಿಗೆ
ಹತ್ತಾರು ಕಾಲು ಕಣ್ಣುಗಳು
ಇಲ್ಲದ ಅಂಗವಿಕಲನಯ್ಯ
ಈ ನಿಮ್ಮ ದೇವರಯ್ಯ
ದೇವರಿಗೆ ಯಾಕೆ ಬೇಕಯ್ಯ
ಹತ್ತಾರು ತಲೆ ಕೈ ಕಾಲುಗಳು
ತಲೆ ಕೈ ಕಾಲು ಇಲ್ಲದವರಿಗೆ
ತನ್ನ ತಲೆ ಕೈ ಕಾಲು ಕಣ್ಣು ಕೊಟ್ಟು
ಕಾಯಲಾರದಷ್ಟು ಸ್ವಾರ್ಥಿಯೇ
ನಿಮ್ಮ ಅಂಗವಿಕಲ ದೇವರಯ್ಯ
ಚಂದವೋ ಚಂದವೋ ನನ್ನೆಯ ನಾಡು
ನಾ ಹುಟ್ಟಿ ಬೆಳೆದ ನನ್ನ ತಾಯಿ ನಾಡು
ಜನರ ಜೀವ ನದಿ ಹುಟ್ಟಿ ಹರಿಯುವ
ಕಾವೇರಿ ತಾಯಿಯ ತವರೂರು
ಅಣ್ಣ ಬಸವಣ್ಣ ಅಕ್ಕ ಮಹಾದೇವಿ
ಮಡಿವಾಳ ಮಾಚಯ್ಯ ಮದಿಗಾರ ಚೆನ್ನಯ
ಅಂಬಿಗರ ಚೌಡಯ್ಯ ಕನಕದಾಸರು
ಪುರಂದರದಾಸರು ಶರಣ ಸಂತರ ಕರುನಾಡು
ರಾಜ ಮಹಾರಾಜರ ಬೀಡು
ಕೃಷ್ಣರಾಜ ಒಡೆಯರ ಬಂಗಾರದ ನಾಡು
ಟಿಪ್ಪು ಸುಲ್ತಾನ್ ವೀರ ಮದಕರಿ
ಶೂರ ಧೀರರ ಕೆಚ್ಚೆದೆಯ ಗಂಡುಗಲಿಗಳ ನಾಡು
ಒನಕೆ ಓಬವ್ವ ಕಿತ್ತೂರ ರಾಣಿ ಚನ್ನಮ್ಮ
ರಾಣಿ ಅಬ್ಬಕ್ಕ ವೀರ ವನಿತೆಯರ ತವರೂರು
ಗಾನ ಕೋಗಿಲೆಗಳ ಸಂಗೀತದ ಸೂರು
ಚೆಲುವು ತುಂಬಿದ ಶ್ರೀಗಂಧದ ನಾಡು
ನಮ್ಮ ಚೆಲುವ ಕನ್ನಡ ನಾಡು
ನಮ್ಮ ನಾಡು ನುಡಿ ನಮ್ಮ ಕರುನಾಡು ಕನ್ನಡ
ನಮ್ಮ ನೆಲ ಜಲ ಜನ ಭಾಷೆ
ನಮ್ಮ ಉಸಿರು ನಮ್ಮ ಜೀವನ ನಮ್ಮ ಬದುಕು
ಚಂದವೋ ಚಂದವೋ ನನ್ನೆಯ ನಾಡು
ಮನುಷ್ಯನ
ರುಂಡ ಮುಂಡವ ಕತ್ತರಿಸಿ ತಂದು
ಸತ್ತವನ ಹೆಣಕ್ಕೆ ಇಟ್ಟರು
ಮತ್ತೆ ಮರಳಿ ಬಾರದಯ್ಯಾ
ಬಡಪಾಯಿ ಜೀವಾ
ಆನೆಯ ರುಂಡವ ಕತ್ತರಿಸಿ ತಂದು
ಮನುಷ್ಯನ ದೇಹಕ್ಕೆ ಇಟ್ಟು
ಹೋದ ಜೀವವ ಮತ್ತೆ ತುಂಬಿದನಂತೆ
ಇವನ್ಯಾರೋ ಇವನ್ಯಾರೋ
ಚಂಡ ಪ್ರಚಂಡನೇ ಇರಬೇಕು
ನಾಯಿ ತಲೆಯ ಕತ್ತರಿಸಿ
ಕೋಳಿ ಮುಂಡಕ್ಕೆ ಇಟ್ಟರೇ
ಬದುಕುಳಿಯುವುದೇ
ಸತ್ತ ಕೋಳಿ ಬದುಕಿ ಕೂಗುವುದೇ
ಕೋಕೋ ಕೋಳಿ
ದೇವರು ಇರುವನೆಂದು ಕಟ್ಟು ಕಥೆ
ಬರೆದವನು ನಿಜವಾಗಿಯೂ
ಚಂಡರಿಗೆ ಚಂಡ ಪ್ರಚಂಡ ಮಹಾ
ಪ್ರಚಂಡನೇ ಆಗಿರಬೇಕಯ್ಯ
ಅರ್ಥ ಮಾಡಿಕೊಂಡವರಿಗೆ
ಅರ್ಥವಾಗುವುದಯ್ಯ
ಸುಳ್ಳಿನ ಗುಟ್ಟು ಸತ್ಯದ ಬೆಲೆ
********ರಾಜು ಹಾಸನ*********