Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನ್ನಡ

ನಾವೆಲ್ಲ ಕನ್ನಡ ನೀವು ಕನ್ನಡ
ಹೃದಯ ಮನಸುಗಳೆಲ್ಲ ಕನ್ನಡ
ಬೆಳೆವಾ ಭೂಮಿಯಲಿ ಕನ್ನಡ
ನಮ್ಮತಾಯಿಯ ಭಾವ ಕನ್ನಡ

ನಡೆ ಕನ್ನಡ ನುಡಿಯು ಕನ್ನಡ
ಮಣ್ಣು ಹೊನ್ನೀನಲಿದೆ ಕನ್ನಡ
ದಿನ ಬಳಕೆಯ ಮಾತು ಕನ್ನಡ
ಮುದ್ದುಮಕ್ಕಳ ಮಾತು ಕನ್ನಡ

ರಾಜ್ಯ ಸಾಮ್ರಾಜ್ಯಗಳು ಕನ್ನಡ
ಆಳಿದ ಅರಸರ ಹೆಸರು ಕನ್ನಡ
ಕಟ್ಟಿದ ಗುಡಿಗೋಪುರವು ಕನ್ನಡ
ಕುಟ್ಟಿ ಕೆತ್ತಿದ ಶಿಲ್ಪಗಳೆಲ್ಲ ಕನ್ನಡ

ಸಂಗೀತ ನೃತ್ಯ ಕಲೆಗಳಲಿ ಕನ್ನಡ
ಆಟೋಟ ಪಾಟಗಳಲ್ಲಿ ಕನ್ನಡ
ಸಾಹಿತಿಗಳ ಸಾಹಿತ್ಯದಲ್ಲಿ ಕನ್ನಡ
ವಿಜ್ಞಾನ ಆವಿಷ್ಕಾರಗಳಲಿ ಕನ್ನಡ

ರೋಮ ರೋಮದಲ್ಲಿ ಕನ್ನಡ
ಹೃದಯಬಡಿತ ಉಸಿರು ಕನ್ನಡ
ಭುವನೇಶ್ವರಿಯ ನೆನೆವ ಕನ್ನಡ
ತಾಯ ನೆನೆಯುತ ಹೇಳಿ ಕನ್ನಡ

ಜೈ ಕನ್ನಡಾಂಬೆ

ಕಲ್ಮೇಶ ಬಡಿಗೇರ
೯೭೪೩೫೩೯೬೫೭
.....ಬಾದಾಮಿ....

- Kalmesh Badiger

19 Nov 2020, 12:40 pm

ಬುಡು ಬುಡುಕೆ

ಜಾತಕ ಹೇಳುವರು ಜಾತಕ
ಬುಡು ಬುಡುಕೆ ಜಾತಕ
ಡೊಳ್ಳು ಹೊಟ್ಟೆಯ ಹೊತ್ತ
ಕಳ್ಳ ಜ್ಯೋತಿಷಿಗಳ
ಹೊಟ್ಟೆಪಾಡಿನ ಜಾತಕ

ಮೈ ಬಗ್ಗಿಸಿ ದುಡಿಯಲಾಗದೆ
ಪರರ ಹಣೆಗೆ ಪಂಗನಾಮ ಹಾಕಿ
ಕುಂತು ತಿನ್ನುವ ಜುಟ್ಟು ಜನಿವಾರ
ಕಟ್ಟಿಕೊಂಡು ಪುಂಗಿ ಊದುವ
ಸೋಂಬೇರಿಗಳ ಪರಮ ಕಾಯಕ

ಅವರವರ ಜಾತಕ
ಅವರವರಿಗೆ ಗೊತ್ತಿಲ್ಲಾ
ಆದರು ಹೇಳುವರು
ಕಂಡ ಕಂಡವರ ಜಾತಕ
ಅದನ್ನೇ ನಂಬಿ ಕುಣಿಯುವ
ಜನರು ಇನ್ನೆಂತಹ
ಬುಡು ಬುಡುಕೆಗಳಿರಬೇಕು

- ರಾಜು ಹಾಸನ

18 Nov 2020, 09:17 pm

ಮೋಡಗಳೊಡನೆ

ನೀಲವರ್ಣ ಆಗಸದ ಕೆಳಗಡೆ
ಕಣ್ಣಾಮುಚ್ಚಾಲೆ ಆಡುತ್ತಿರುವ
ಕಪ್ಪು ಬಿಳಿಯ ಬಣ್ಣ ಹೊದ್ದ
ಮೋಡಗಳೆ ಹೇಳಿ ನೀವ್ಯಾರು

ಒಮ್ಮೆ ಮಗುವಾಗಿ ಕಾಣುತಲಿ
ಮತ್ತೆ ಗುರುವಾಗಿ ಕಾಣುತಲಿ
ಚಂದದ ಚಿತ್ತಾರ ಮೂಡಿಸುವ
ಬೆಳ್ಳಿಯ ಮೋಡಗಳೆ ನೀವ್ಯಾರು

ಕೃಷ್ಣನ ರಥ ಕುದುರೆಯ ತೋರಿ
ಬೆಟ್ಟ ಗುಡ್ಡಗಳ ಆಕೃತಿ ನಿರ್ಮಿಸಿ
ಸುರಿವ ಜಲಧಾರೆಯ ಮುದ್ರಿಸಿ
ಚಲಿಸುವ ಮೋಡಗಳೆ ನೀವ್ಯಾರು

ಸಾಗರದ ಮೇಲಿಂದೆದ್ದು ಬಂದು
ಸೂರ್ಯ ಚಂದ್ರಮರನು ಮುಚ್ಚಿ
ಬಿರುಗಾಳಿಗೆ ಬರಸಿಡಿಲು ಸಿಡಿಸಿ
ಮಳೆಯ ಸುರಿಸುವ ನೀವ್ಯಾರು

ಆಸ್ತಿಕರಿಗೆ ದೇವರಾಗಿ ಗೋಚರಿಸಿ
ನಾಸ್ತಿಕರ ಭಾವದಲಿ ಹೊಗೆಯಾಗಿ
ವಿಜ್ಞಾನಿಗಳಿಗೆ ನೀರಾವಿ ಎಂತೇನಿಸಿ
ಚಲಿಸುವ ಮೋಡಗಳೆ ನೀವ್ಯಾರು

ಕಲ್ಮೇಶ ಬಡಿಗೇರ
9743539657
.......ಬಾದಾಮಿ.....

- Kalmesh Badiger

18 Nov 2020, 05:27 pm

ವಿಶ್ವ ಮನುಜ

ಮಾನವನಾಗಿ
ಹುಟ್ಟಿ ಬೆಳೆದು
ನಾಗರಿಕನಾಗಿ ಬದುಕಿ
ಸಾಯುವ ಮಧ್ಯ
ಜಾತಿ ಧರ್ಮದ
ಬಿಂಕ ಬಿನ್ನಾಣವೇಕೆ
ಅನಾಗರಿಕನಾಗಿ ನೂರೆಂಟು
ಮುಖವಾಡ ಕಟ್ಟಿಕೊಂಡು
ಮೂಢನಂಬಿಕೆಯ
ತಲೆಗೆ ಸುತ್ತಿಕೊಂಡು
ಮನದಲ್ಲಿ ದ್ವೇಷ
ಅಸೂಯೆ ತುಂಬಿಕೊಂಡು
ಘರನೆ ಘರಘರನೆ
ಸುತ್ತಿ ತಿರುಗುವ ಹುಚ್ಚು
ಮನಸ್ಸು ನಿನಗೇಕೆ
ಓ ಮನುಜ ವಿಶ್ವ ಮನುಜ

ಹುಟ್ಟಿದಾಗ ಯಾವ
ಜಾತಿ ಧರ್ಮದ ಅರಿವಿಲ್ಲ
ಸತ್ತಾಗ ಯಾವ
ಜಾತಿ ಧರ್ಮದ ಹಣೆಪಟ್ಟಿಯು
ಯಾರ ಹಣೆ ಯಾರು
ಎದೆಯ ಮೇಲು ಬರೆದಿಲ್ಲ
ಬದುಕಿದ್ದಾಗ ಮಾತ್ರ
ನೂರೆಂಟು ಜಾತಿ ಧರ್ಮವ
ಕಟ್ಟಿಕೊಂಡು ಹೊಡೆದಾಡಿ
ಬಡಿದಾಡಿ ಸಾಯುವಿರಿ ಏಕೆ
ಓ ಮೂಢ ಜನಗಳೇ
ಎಲ್ಲರೂ ಬದುಕು ಬಾಳಿರಿ
ಒಂದೇ ತಾಯಿಯ ಮಕ್ಕಳಂತೆ
ಓ ಮನುಜ ವಿಶ್ವ ಮನುಜ

- ರಾಜು ಹಾಸನ

18 Nov 2020, 11:01 am

ಮೊದಲ ಮಳೆ

ಧರೆ ಒಣಗಿ ದೂಳೆದ್ದು ಹಾರಿರಲು
ಉರಿಬಿಸಿಲು ಸೊರಗಿ ಕರಗಿರಲು
ಮೋಡಗಳು ಅಪ್ಪಿ ಮುತ್ತಿಕ್ಕಲು
ಧರೆಗೆ ಉದುರಿತು ಮೊದಲ ಮಳೆ

ತುಂತುರು ಮಳೆಹನಿಯ ಆಟದಲಿ
ತವಕದಲ್ಲಿ ಹೊರಬಂದು ಕುಣಿದು
ಕಣ್ಮನವ ತಣಿಸಿ ಕೇಕೆಯನು ಹಾಕಿ
ಕರುಣದಲಿ ಕೈ ಮುಗಿದರು ರೈತಜನ

ಸಂಗಾತಿಯ ಗುಂಗಿನಲಿ ಹುಚ್ಚಾದವ
ಇನಿಯನ ಬರುವಿಕೆಯ ಕಾದು ನಿಂತ
ಹಸಿ ಬಿಸಿಯ ಪ್ರೇಮಿಗಳ ಮನಸಿನಲಿ
ಹೊಸ ಗೀತೆ ಹಾಡಿಸಿದ ಮೊದಲ ಮಳೆ

ಕುಪ್ಪಳಿಸಿ ಕುಣಿದು ಧನಿದ ಚಿಣ್ಣರಿಗೆ
ಸಿಹಿ ನೀಡಿ ಅಮ್ಮ ಮುದ್ದಿಸುತಿರಲು
ಮೇಘರಾಜನೆ ಸೋತು ಮಗುವಾಗಿ
ಧೇರೆಗಿಳಿದು ಕರಗಿ ನೀರಾಗಿ ಹರೆದ

ಭುವಿಯ ಜೀವಗಳೆಲ್ಲ ಬಾಯ್ತೆರೆದು
ಮೊದಲ ಮಳೆಹನಿಯ ರುಚಿ ಸವೆದು
ತುಂತುರು ಮಳೆಹಾಡಿನಲಿ ನಲಿ ನಲಿದು
ದೇವನಲಿ ಧನ್ಯವಾದಗಳ ಅರ್ಪಿಸಿದವು


ಕಲ್ಮೇಶ ಬಡಿಗೇರ
9743539657
......ಬಾದಾಮಿ...

- Kalmesh Badiger

17 Nov 2020, 05:35 pm

ಕರ್ಮಕಾಂಡ

ಕಂಡವರ ಹೆಂಡತಿಯರ
ಚುಡಾಯಿಸಿದರೆ
ಚುಚ್ಚಿಬಿಡುವರು
ಕೊಚ್ಚಿ ಬಿಡುವರು
ಉಸಿರಾಡದ ಹಾಗೆ
ಈ ಮೂಢ ಜನರು
ಪೂಜಿಸುವರಯ್ಯ
ಪರಸ್ತ್ರೀಯರ ಪೀಡಿಸುವ
ನೀಚನನ್ನು ಪರಮಾತ್ಮನೆಂದು
ಎಂತಹ ಕರ್ಮಕಾಂಡವಯ್ಯ


ಕಂಡವರ ಹೆಂಡತಿಗೆ
ಘಳ ಹಾಕುವ ನಮರ್ದ
ನಪುಂಸಕ ಶಂಡ ದೇವರು
ಪರಮಾತ್ಮನಂತೆ
ಏನು ಕರ್ಮವೂ
ಎಂತಹ ಧರ್ಮವೂ

ಪ್ರೀತಿಸಿ ಮದುವೆಯಾಗಲು
ಎದೆ ಗುಂಡಿಗೆಯಲ್ಲಿ ತಾಕತ್ತು
ನರವಿಲ್ಲದ ಪೀಡೆಯು
ಮೋಸ ಮಾಡಿ ಸುತ್ತುತ್ತಿದೆ
ಗಾಳಿ ನಾಯಿಯಂತೆ
ಪರ ಪತ್ನಿಯರ ಬೆನ್ನ ಹಿಂದೆ
ಇದು ಒಂದು ದೇವರಂತೆ
ಇದು ಎಂತಹ ದೇವರೋ
ಯಾವ ಸೀಮೆಯ ದೇವರೋ
ನಾ ಎಲ್ಲೂ ಕಾಣೆನು
ಈ ಕರ್ಮಕಾಂಡವ
ಅಂಧ ಭಕ್ತರ ಅಂಧಭಕ್ತಿಯ

- ರಾಜು ಹಾಸನ

17 Nov 2020, 12:45 am

ಹಣೆಬರಹ

ತನ್ನ ಮಗಳನ್ನೇ
ಮದುವೆಯಾದ
ನೀಚ ದೇವರು
ತನ್ನ ಹಣೆಬರಹವನ್ನೆ
ತಾನೇ ನೆಟ್ಟಗೆ
ಬರೆದುಕೊಳ್ಳಲಾಗದ
ಅನಿಷ್ಠ ದೇವರು
ಗೀಚಿರುವುದಂತೆ
ಜನರ ಹಣೆಬರಹ

ಯಾವನೋ ಅವನು
ಎಂತಾ ಮುಟ್ಟಳನಿರಬೇಕು
ಹಾಗೇ ಹೀಗೆಂದು
ಕಾಗಕ್ಕ ಗುಬ್ಬಕ್ಕನ
ಕಥೆಯ ಕಟ್ಟಿದವನು
ಅದನ್ನೇ ನಂಬಿದವನು
ಇನ್ನೆಂತಹ ಮುಟ್ಟಳ
ಮೂರ್ಖನಿರಬೇಕಯ್ಯ

ಯಾರ ಹಣೆಬರಹವನ್ನು
ಯಾರು ಬರೆಯುವುದಿಲ್ಲ
ಎಲ್ಲರ ಹಣೆಬರಹವು
ಯಾವ ದೇವರ ಕೈಯಲ್ಲಿಲ್ಲ
ಅವರವರ ಹಣೆಬರಹ
ಅವರವರ ನಡೆ ನುಡಿ
ಕಾಯಕದಲ್ಲಿರುವುದು
ತಿಳಿಯೋ ಮನುಜ

- ರಾಜು ಹಾಸನ

16 Nov 2020, 11:30 pm

ದೀಪಾವಳಿ

ದೀಪ ಬೆಳಗುವಂತ ದೀಪಾವಳಿ
ಕತ್ತಲೆ ಕಳೆಯುವಂತ ದೀಪಾವಳಿ
ಅಜ್ಞಾನ ಅಳಿಸುವಂತ ದೀಪಾವಳಿ
ಸುಜ್ಞಾನ ದರ್ಶನದ ದೀಪಾವಳಿ

ಶೃಂಗರಿಸಿ ತಳಿರು ತೋರಣ ದಿಂದ
ಬಣ್ಣದ ಆಕಾಶ ಬುಟ್ಟಿಯನು ಕಟ್ಟಿ
ಸಿಹಿ ತಿಂಡಿ ಹೋಳಿಗೆ ಹೂರಣವಿಟ್ಟು
ದೀಪವನು ಬೆಳಗಿಸುವ ದೀಪಾವಳಿ

ಹೂವುಗಳ ಸಾಲಲ್ಲಿ ಸುಗಂಧ ಸೂಸಿ
ಧೂಪ ದೀಪಗಳನ್ನು ಜಗಮಗಿಸುವ
ಕರ್ಪೂರ ಕಾಯಿ ಮೊಂಬತ್ತಿ ಅರ್ಪಿಸಿ
ಪೂಜಿಸುವ ನಮ್ಮ ಹಬ್ಬ ದೀಪಾವಳಿ

ಹೊಸ ಉಡುಗೆ ಹೊಸ ನಡಿಗೆ ಇಂದ
ಹೊಸ ಮಾತು ಹೊಸ ಬೆಸುಗೆಗಳಾಗಿ
ತುಸು ಆಸೆ ಇಂದ ತಾಯೆ ಕಾಯೆಂದು
ಲಕುಮಿಯ ಪಾರ್ಥಿಸುವ ದೀಪಾವಳಿ

ಮಗಳನ್ನು ಕರೆಸಿ ಅಳಿಯನಿಗೆ ತಿನಿಸಿ
ಮೊಮ್ಮಕಳ ಜೊತೆಗೆ ಆಡ್ವ ದೀಪಾವಳಿ
ತವರು ಮನೆ ಪ್ರೀತಿ ಹಬ್ಬದಲಿ ಕಣ್ತುಂಬಿ
ಒಂದಾಗಿ ಆಚರಿಸುವ ಹಬ್ಬ ದೀಪಾವಳಿ


ಕಲ್ಮೇಶ ಬಡಿಗೇರ
9743539657
.....ಬಾದಾಮಿ.......

- Kalmesh Badiger

16 Nov 2020, 05:26 pm

ಕುಬೇರ

ಬದುಕಿನಲ್ಲಿ
ಹಣ ಅಂತಸ್ತು ಇಲ್ಲದ
ಬಡವನು ನಾನಾದರೂ
ಅಪ್ಪ ಅಮ್ಮನ ಪ್ರೀತಿಯಲ್ಲಿ
ನಾ ಶ್ರೀಮಂತ
ಕುಬೇರ ಕುಬೇರನಯ್ಯ

ಅಪ್ಪ ಅಮ್ಮನ
ಪ್ರೀತಿಯ ಮುಂದೆ
ಕರಗಿ ನೀರಾಗುವ
ಸಿರಿ ಸಂಪತ್ತು ಇಲ್ಲದಿದ್ದರೂ
ಚಿಂತೆಯಿಲ್ಲ ನನಗೆ
ಅಪ್ಪ ಅಮ್ಮನ ನಗು
ಖುಷಿ ಒಂದೇ
ನನಗೆ ಸಿರಿ ಸಂಪತ್ತು

ಹಣ ಬಲ
ಜನ ಬಲ ಇಲ್ಲದಿದ್ದರೂ
ನನ್ನ ತೋಳ್ ಬಲ
ಉಸಿರು ಇರುವ ತನಕ
ಸೇವೆ ಮಾಡುವೆನು
ನನ್ನ ಹಡೆದವರ ನನ್ನೆದೆಯ
ಗುಡಿಯಲ್ಲಿಟ್ಟು
ಪೂಜಿಸಿ ಆರಾಧಿಸುವೆನು

- ರಾಜು ಹಾಸನ

15 Nov 2020, 11:55 pm

ಬಾಬಾಸಾಹೇಬರು

ಆಡು ಮುಟ್ಟದ ಸೊಪ್ಪಿಲ್ಲ
ಜನರು ಮುಟ್ಟದ ಅನ್ನವಿಲ್ಲ
ಗಾಳಿ ಮುಟ್ಟದ ಜಗತ್ತಿಲ್ಲ
ಪ್ರೀತಿ ಮುಟ್ಟದ ಮನವಿಲ್ಲ
ಸೂರ್ಯ ಚಂದ್ರರು
ಇಲ್ಲದ ಭೂಮಿ ಇಲ್ಲ
ಬಾಬಾಸಾಹೇಬರು
ಓದದೆ ಇರುವ ಪುಸ್ತಕವಿಲ್ಲ
ಬಾಬಾಸಾಹೇಬರು
ಇಲ್ಲದೆ ಸಂವಿಧಾನವಿಲ್ಲ
ಸಂವಿಧಾನವಿಲ್ಲದೆ
ಈ ದೇಶ ನಾವು ನಿವು
ಯಾರು ಇಲ್ಲ
ಯಾರೂ ಇರೋದು ಇಲ್ಲ

- ರಾಜು ಹಾಸನ

14 Nov 2020, 11:17 pm