Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಧರ್ಮ ಕೋಟೆ

ಜಾತಿ ಧರ್ಮ
ಯಾರಿಗೆ ಬೇಕು
ಯಾತಕ್ಕೆ ಬೇಕು
ಮನುಷ್ಯ ಮನುಷ್ಯರ
ಕೊಂದು ತಿನ್ನುವ
ರಕ್ತ ಹೀರುವ
ಬದುಕಲು ಬಿಡದ
ಜಾತಿ ಧರ್ಮ
ಯಾರಿಗೆ ಬೇಕು
ಯಾತಕ್ಕೆ ಬೇಕು

ಮನುವಾದಿಗಳ
ಷಡ್ಯಂತ್ರದ ಉದ್ದರದ
ಕಳ್ಳ ಖಜಾನೆಯ ಕೋಟೆ
ಸುಖದ ಸುಪ್ಪತ್ತಿಗೆಯ
ಜಾತಿ ಧರ್ಮದ
ಮತ ಕೋಟೆ

ಯಾರಿಗು ಬೇಡ
ಯಾತಕ್ಕೂ ಬೇಡ
ಯಾವ ಜಾತಿ
ಧರ್ಮದ ಮತ ಕೋಟೆ
ಉಳಿದು ಬೆಳಯಲಿ
ಜನರ ಪ್ರೀತಿಯ
ಮಾನವ ಧರ್ಮದ
ಮಹಾ ಕೋಟೆ

ಜಾತಿ ಧರ್ಮ
ತಲೆ ಎತ್ತಿದಾಗ
ಸತ್ತು ಹೋಗುವುದು
ಮಾನವ ಕುಲ ಕುಲ
ಬೀಳುವುದು
ಸತ್ತ ಹೆಣಗಳ ರಾಶಿ
ಹರಿಯುವುದು
ರಕ್ತ ಕಣ್ಣೀರಿನ ಕೋಡಿ

ಸತ್ತು ಕೆಟ್ಟರೆ ಯಾವ
ಜಾತಿ ಧರ್ಮದವು
ಬರುವುದಿಲ್ಲ
ಹೋರುವುದಿಲ್ಲ
ಹೋಗುವುದಿಲ್ಲ
ಸತ್ತವರ ಹಿಂದೆ ಹಿಂದೆ
ಆದರು ಕಟ್ಟುವರು
ನೂರೆಂಟು ಜಾತಿ ಧರ್ಮವ
ಸತ್ತು ಸಮಾಧಿ
ಆಗುವ ತನಕ
ಸುಟ್ಟು ಬೂದಿ
ಆಗುವ ತನಕ

ಜನರ ಜನರ
ನಡುವೆ ಜಾತಿ ಧರ್ಮದ
ವಿಷ ಬೀಜ ಬಿತ್ತಿ
ಜಾತಿ ಧರ್ಮದ ಅಡ್ಡಗೋಡೆ
ಕಟ್ಟಿರುವರು ದುಷ್ಟ
ಮನುವಾದಿ ಕುನ್ನಿ ಮರಿಗಳು
ಕೆಡವಿ ಉರುಳಿಸಬೇಕು
ಮನುವಾದಿಗಳ ಜಾತಿ
ಧರ್ಮದ ಅಡ್ಡಗೋಡೆ
ಅಧರ್ಮದ ಮತ ಕೋಟೆ

ಬದುಕಿ ಬಾಳಬೇಕು
ಮನುವಾದಿಗಳ
ಎಡೆಮುರಿ ಕಟ್ಟಿ
ಹೊಡೆದು ಕಟ್ಟಬೇಕು
ಮಾನವ ಧರ್ಮದ
ಮಹಾ ಕೋಟೆ

- ರಾಜು ಹಾಸನ

25 Nov 2020, 04:30 pm

ಓ ನನ್ನ ಹೆಣ್ಣೆ

ಓ ಹೆಣ್ಣೆ ಓ ಹೆಣ್ಣೆ
ತಿಳಿದು ಬಾಳು
ಓ ನನ್ನ ಹೆಣ್ಣೆ
ಹೆಣ್ಣಿಗೆ ಶೀಲವೇ
ಬಂಗಾರ
ವಜ್ರದ ಕವಚ
ನೀ ಮೈ ಮರೆತು
ಹೋಗಬೇಡ
ಕಂಡ ಕಂಡವರ
ಜೊತೆಗೂಡಿ

ಸಂಬಂಧ
ಭಾವನೆಗಳ ಮರೆತು
ಆಚಾರ ವಿಚಾರ
ದಿಕ್ಕರಿಸಿ ಚುಡಾಯಿಸಿ
ಅಪಚಾರ ಮಾಡುವ
ನೀಚಾರು ಇರುವರು
ಎಚ್ಚರ ಎಚ್ಚರ
ಓ ಹೆಣ್ಣೆ ಓ ಹೆಣ್ಣೆ
ತಿಳಿದು ಬಾಳು
ಓ ನನ್ನ ಹೆಣ್ಣೆ
*****ರಾಜು ಹಾಸನ*****

- ರಾಜು ಹಾಸನ

25 Nov 2020, 08:54 am

ಧೈರ್ಯ

ಅವಮಾನಿಸಿ
ಅಪಮಾನಿಸಿ
ಇಯಳಿಸಿದರು
ಅಂಜದೆ ಅಳುಕದೆ
ಕುಗ್ಗದೆ ಜಗ್ಗದೆ
ಧೈರ್ಯದಿಂದ ನಡೆ
ಹೆದರಿ ಬೆದರಿ
ಬಿದ್ದು ಓಡುವರು
ನಿನ್ನ ಅಣಕಿಸುವ
ಮನುವಾದಿಗಳು
ತಲೆ ತಗ್ಗಿಸಿ ಬಗ್ಗಿಸಿ
ನುಡಿದು ನೆಡೆದರೆ
ಕತ್ತರಿಸುವರು
ನಿನ್ನ ತಲೆ ತಲೆ
ಎಚ್ಚರ ಎಚ್ಚರವಿರಲಿ
ನನ್ನ ಮುಗ್ಧ ಜನಗಳೆ

- ರಾಜು ಹಾಸನ

25 Nov 2020, 12:12 am

ಹುಚ್ಚು ಕುದುರೆ

ಹುಚ್ಚು ಕುದುರೆ
ಹುಚ್ಚು ಕುದುರೆ
ಓಡುತ್ತಿರುವುದು
ವರದಕ್ಷಿಣೆಯ
ಬಾಲ ಹಿಡಿದು
ದಕ್ಷಿಣೆ ಕೊಟ್ಟರೆ
ನಿಲ್ಲುವುದು
ಕೊಡದಿದ್ದರೆ
ಓಡುವುದು
ಅಕ್ಕ ಪಕ್ಕದ
ಊರು ಊರು
ಹುಚ್ಚು ಕುದುರೆ

ಮದುವೆ ಎಂದರೆ
ಕನಸು ಮನಸುಗಳ
ಒಪ್ಪಂದವೇ ಹೋರೆತು
ಹಣ ಕಾಸಿನ ಒಪ್ಪಂದವಲ್ಲ

ಜೂಜು ಕಟ್ಟುವರು
ಮೋಜು ಮಾಡುವರು
ಹೆಣ್ಣು ಗಂಡಿನ
ಕುದುರೆಯ ವ್ಯಾಪಾರ
ಮಾಡಿ ಮುಗಿಸುವರು
ಹಣದ ತಟ್ಟೆ ತೂಗಿ

ವರದಕ್ಷಿಣೆ ಇಟ್ಟರೆ
ಕಟ್ಟುವರು ಮೂರು ಗಂಟು
ಇಡದ್ದಿದ್ದರೆ ಇಡುವರು
ಪಕ್ಕದೂರಿಗೆ ನೂರು ಹೆಜ್ಜೆ
*********ರಾಜು ಹಾಸನ********

- ರಾಜು ಹಾಸನ

24 Nov 2020, 11:32 pm

ನಮ್ಮೂರ ದೇವರು

ದೇವರಂತೆ ದೇವರು
ಇರುವುದಂತೆ
ಬರುವುದಂತೆ
ಕಲ್ಲು ಕಂಬದ
ಮೂಕ ದೇವರು
ಕರೆದರು ಬರುವುದಿಲ್ಲ
ಮಾತು ಬಾರದ
ಮೂಕ ದೇವರು
ಹಬ್ಬ ಹರಿದಿನವೆಂದರೆ
ಕುಣಿದು ಕುಪ್ಪಳಿಸಿ
ಓಡಿ ಓಡಿ ಬರುವುದು
ನಮ್ಮೂರ ದೇವರು

- ರಾಜು ಹಾಸನ

23 Nov 2020, 08:58 pm

ಓ ನನ್ನ ಮನಸೇ

ಯಾರು ನಿನ್ನವರಲ್ಲ
ನಿನಗಾಗಿ ನೀನೇ ಹೊರೆತು
ನಿನಗಾಗಿ ಯಾರು ಅಲ್ಲ
ಕಂಡವರ ಮಾತಿಗೆ
ಮರುಳಾಗಿ ಮೈ
ಮನ ಮರೆಯಬೇಡ
ತೋಳ ಬಲ ಜನ ಬಲ
ಇದ್ದರೆ ಹಿಡಿಯುವರು
ನಿನ್ನ ಕೈ ಕಾಲು
ಇಲ್ಲದಿದ್ದರೆ ಜಾಡಿಸಿ
ಒದೆಯುವರು
ನಿನ್ನ ಸ್ವಾಭಿಮಾನಕ್ಕೆ
ನಾನು ನನ್ನದೇನ್ನುವ
ಜನ ಜಾತ್ರೆಯಲ್ಲಿ ನಿಂತು
ನನ್ನವರು ನನ್ನವರೆಂದು
ಕೂಗಿ ಗೋಗರೆಯುವ
ಹುಚ್ಚು ಯಾತಕೆ
ಓ ನನ್ನ ಮನಸೇ

- ರಾಜು ಹಾಸನ

23 Nov 2020, 07:59 pm

ಸ್ವಾರ್ಥಿಗಳ ಪ್ರಪಂಚ

ಕೇಳುವವನು
ಹೇಳುವವನು
ಒಬ್ಬನೇ ಆದರೂ
ಕಂಡ ಕಂಡಲ್ಲಿ
ಹೊಗಳಿ ತೆಗಳಿ
ಮಾತನಾಡಿ ಮರುಳು
ಮಾಡುವವರು
ಹಲವು ಜನ

ಹತ್ತಾರು ಜನ
ಹತ್ತಾರು ತರ
ನೂರಾರು ಜನ
ನೂರಾರು ತರ
ಮಾತನಾಡುವರೇ
ಹೋರೆತು

ಯಾರು ಕೂಡ
ಒಂದೇ ರೀತಿ
ಒಂದೇ ಸಮ
ಯೋಚಿಸಿ
ಆಲೋಚಸಿ
ಮಾತನಾಡುವ
ಜನರಿಲ್ಲ ಈ
ಪ್ರಪಂಚದಲ್ಲಿ
ಸ್ವಾರ್ಥವೇ
ತುಂಬಿರುವ
ಸ್ವಾರ್ಥಿಗಳ
ಕೆಟ್ಟ ಪ್ರಪಂಚವಿದು

ಯಾರೇ ಏನೇ ಎಷ್ಟೇ
ಮಾತನಾಡಿದರೂ
ನಿನ್ನ ನಡೆ ನುಡಿ
ಬದಲಾಯಿಸಿಕೊಳ್ಳದೆ
ಮುನ್ನುಗ್ಗಿ ನಡೆ
ನಿನ್ನ ದಾರಿಯ ಕಡೆ
ನೀ ಎದೆಗುಂದದೆ
ಬದುಕಿ ಬಾಳು
ಮುಗಿಲೆತ್ತರಕ್ಕೆ
ನೀ ಮಾನವನಾಗಿ
ನಿಸ್ವಾರ್ಥಿಯಾಗಿ
ಓ ಮನುಜ

- ರಾಜು ಹಾಸನ

23 Nov 2020, 01:07 pm

ಸ್ವಾರ್ಥಿಗಳ ಪ್ರಪಂಚ

ಕೇಳುವವನು
ಹೇಳುವವನು
ಒಬ್ಬನೇ ಆದರೂ
ಕಂಡ ಕಂಡಲ್ಲಿ
ಹೊಗಳಿ ತೆಗಳಿ
ಮಾತನಾಡಿ ಮರುಳು
ಮಾಡುವವರು
ಹಲವು ಜನ


ಹತ್ತಾರು ಜನ
ಹತ್ತಾರು ತರ
ನೂರಾರು ಜನ
ನೂರಾರು ತರ
ಮಾತನಾಡುವರೇ
ಹೋರೆತು
ಯಾರು ಕೂಡ
ಒಂದೇ ತರ
ಒಂದೇ ರೀತಿ
ಯೋಚಿಸಿ
ಆಲೋಚಸಿ
ಮಾತನಾಡುವ
ನಿಸ್ವಾರ್ಥಿಗಳ
ಪ್ರಪಂಚವಲ್ಲ
ಇದು ಸ್ವಾರ್ಥಿಗಳೆ
ತುಂಬಿರುವ
ಸ್ವಾರ್ಥಿಗಳ
ಕೆಟ್ಟ ಪ್ರಪಂಚ

ಯಾರೇ ಏನೇ ಎಷ್ಟೇ
ಮಾತನಾಡಿದರೂ
ನಿನ್ನ ನಡೆ ನುಡಿ
ಬದಲಾಯಿಸಿಕೊಳ್ಳದೆ
ಮುನ್ನುಗ್ಗಿ ನಡೆ
ನಿನ್ನ ದಾರಿಯ ಕಡೆ
ನೀ ಎದೆಗುಂದದೆ
ಬದುಕಿ ಬಾಳು
ಮುಗಿಲೆತ್ತರಕ್ಕೆ
ನೀ ಮಾನವನಾಗಿ
ನಿಸ್ವಾರ್ಥಿಯಾಗಿ
ಓ ಮನುಜ

- ರಾಜು ಹಾಸನ

23 Nov 2020, 01:07 pm

ದುಡಿಮೆಯೇ ಜೀವನ

ದುಡಿಮೆಯೇ
ಜೀವನವಲ್ಲ
ಜೀವನವೇ
ದುಡಿಮೆಯಾದರೆ
ನಿನ್ನ ಬಾಳೆ
ಬಂಗಾರ ಸಿಂಗಾರ
ಯಾರ ಯಾವ
ಹಂಗು ಹೋಂಗಿನ
ಮೇಲೇರುವ
ಏಣಿ ಬೇಕಿಲ್ಲ
ನಿನ್ನ ದುಡಿಮೆಯೇ
ನಿನ್ನ ಗುರಿ ದಡ
ಮುಟ್ಟುವ ಏಣಿ
ತಿಳಿಯೋ ಓ ಮನುಜ

ನಿನ್ನ ಗುರಿ ನೀ ಮರೆತು
ಕುಂತು ಕುಂತಲ್ಲಿಯೇ
ವಾಲಾಡಿ ತೂಕಡಿಸಿ
ಮಲಗ ಬೇಡ ಮರುಳ
ಜೀವನವೆಂಬ
ಅನಂತ ಪಯಣದಲ್ಲಿ
ಜೀವವು ಕ್ಷಣಿಕವಾದರು
ದುಡಿಮೆ ಇರಲಿ ನಿರಂತರ
ಇಲ್ಲದಿದ್ದರೆ ನೀ
ಆಗುವೇ ಕಂಡ ಕಂಡವರ
ಕಾಲ ಕಸ ಕಡ್ಡಿಯ ಹುಳ
ತಿಳಿಯೋ ಓ ಮನುಜ

- ರಾಜು ಹಾಸನ

22 Nov 2020, 12:19 am

ಆಪತ್ತು

ಹೇಳಿ ಕೇಳಿ
ಹುಟ್ಟುವುದಿಲ್ಲ
ಪ್ರೀತಿಯ ಮುತ್ತು
ಹೊತ್ತು ಗೊತ್ತಿಲ್ಲದೆ
ಬರುವುದು ಆಪತ್ತು
ಹಾಗಾಗಿ ಆಗಬೇಕು
ಮನುಷ್ಯ ಮನುಷ್ಯನಿಗೆ
ಒತ್ತು ಒತ್ತು
ಇಲ್ಲದಿದ್ದರೆ ಕಾದಿರುವುದು
ಮಾನವ ಕುಲಕ್ಕೆ
ಕುತ್ತು ಕುತ್ತು
ವಿಪತ್ತು ವಿಪತ್ತು

ನೀ ಬಡವನದರು
ಛಲದ ಖಡ್ಗವಿಡಿದು
ಶ್ರಮದ ಕಿಚ್ಚು ಹಚ್ಚಿ
ಗುರಿಯ ಮೆಟ್ಟಿ ನಿಂತರೆ
ನೀ ಆಗುವೇ ಶ್ರೀಮಂತ

- ರಾಜು ಹಾಸನ

20 Nov 2020, 02:03 pm