ಜೊತೆಗೆ ಹುಟ್ಟದಿದ್ದರೇನು
ಜೊತೆಗೆ ನಡೆದಿಲ್ಲವೇನು
ರಕ್ತ ಹಂಚಿಕೊಳ್ಳದಿದ್ದರೇನು
ರಕ್ತ ಸಂಬಂಧದಂತೆ ಹೊಂದಿಕೊಂಡಿಲ್ಲವೇನು
ನೀ ದೂರವಿದ್ದರೇನು
ನಿನ್ನ ಸ್ನೇಹ ದೂರಾದುದೇನು
ಅಂದು ಕಳೆದ ಸಮಯ
ಇಂದಿಗೂ ಸ್ಮರಣೀಯ
ನಿನ್ನೊಡನೆ ಇದ್ದ ಸಮಯ ಕಳೆದಿದೆ
ನಿನ್ನೊಡನೆ ಕಳೆದ ನೆನಪು ಅಳಿಯದು
ನೀ ಶಾಶ್ವತ
ನಿನ್ನ ಸ್ನೇಹ ಚಿರಪರಿಚಿತ.........
--ಕಲಾಕುಸುಮ
ಓದು ಬರಹ ಕಲಿತು
ಮನುವಾದಿಗಳ
ಗುಲಾಮನಾಗಬೇಡ
ಸ್ವಾಭಿಮಾನದ
ಕೂಡಿಯಾಗು
ಮೂಢನಂಬಿಕೆಯ
ಕಪಟ ಸೂತ್ರ
ತಿಳಿದು ತಿಳಿದು
ಕಂಡು ಕಂಡು
ಬೀಳಬೇಡ
ಹಗಲು ಕಂಡ ಬಾವಿಗೆ
ಶಾಶ್ವತವಲ್ಲದ ಕ್ಷಣಿಕವಾದ
ಮನುವಾದಿಗಳ
ಆಸೆ ಆಮಿಷಗಳಿಗೆ
ಜೋತು ಬಿದ್ದು
ಬಿಕ್ಷಕನಾಗಬೇಡ
ಜೊಲ್ಲು ಸುರಿಸಿ
ಸತ್ತು ಸಮಾಧಿಯಾಗಬೇಡ
ಸಂವಿಧಾನವಾ ಅರಿತು
ದಿಟ್ಟ ಹೆಜ್ಜೆ ಇಟ್ಟು
ನಡೆ ನಡೆ ನಿನ್ನ
ಬದುಕು ಬಾಳಿನ ಕಡೆ
ಗುರಿ ಸಾಧನೆಯ
ಉತ್ತುಂಗದ ಕಡೆ ಕಡೆ
*******ರಾಜು ಹಾಸನ*******
ಸದಾ ಚಟ-ಪಟ ಮಾತಂತೆ ನನ್ನದು,
ಹೌದು ನಾ ಸದಾ ಮಾತನಾಡುತ್ತಿರುವೆ...
ಬೇಡದ ಮೌನಗಳು ನನ್ನೊಳಗೆ ಬೇರೂರಿರಲು
ಮಾತನಾಡುವಂತೆ ನಟಿಸಿ ಮೌನಕ್ಕೆ
ನೀರ ಹಾಯಿಸದ ಮಾತು ನನ್ನದು!
ಸದಾ ಜಾಗರೂಕ ಹೆಣ್ಮನವಂತೆ ನನ್ನದು,
ಹೌದು ನಾ ಸದಾ ಜಾಗರೂಕತೆಯಿಂದಿರುವೆ..
ಒಂದಷ್ಟು ಅಜಾಗರೂಕತೆಗಳಿಂದ ತಿಂದ ಹೊಡೆತವ
ಮತ್ತೆ ಮರಳಿ ತಿನ್ನುವ ಶಕ್ತಿ ಇಲ್ಲದ
ಅಸಹಾಯಕ ಜಾಗರೂಕತೆ ನನ್ನದು!
ಖಡ್ಗ ಗುರಾಣಿ ಹಿಡಿದು
ಮನುವಾದಿಗಳು
ಯಾತ್ರೆ ದಂಡಯಾತ್ರೆ
ತಂತ್ರ ಕುತಂತ್ರ ಮಾಡಿ
ಕಿತ್ತುಕೊಂಡರು
ಜನಗಳ ಜೀವಾ ಮಾನ
ಉರುಳಿಸಿದರು
ಜನಗಳ ಹೆಣ
ಬದುಕಿನ ಕಣ
ಜಗಜ್ಯೋತಿ ಜ್ಞಾನಜ್ಯೋತಿ
ಬಾಬಾ ಸಾಹೇಬರು
ಲೇಖನಿ ಹಿಡಿದು
ಸಂವಿಧಾನ ಗ್ರಂಥ
ಬರೆದು ಕೊಟ್ಟರು
ಕುಡಿಯಲು ನೀರು
ಜೀವಿಸಲು ಉಸಿರು
ಹೇಳಿ ತಿಳಿಸಿ ಕೊಟ್ಟರು
ಬದುಕವಾ ರೀತಿ ನಿಯಮ
ನ್ಯಾಯ ನೀತಿ ಸ್ವಾಭಿಮಾನ
ಓದು ಬರಹ ಕಲಿತು
ಸ್ವಾತಂತ್ರವಾಗಿ ಬದುಕಿ
ಬಾಳಲು ಬಿಟ್ಟರು
ಸಮಾನತೆಯ ಹಕ್ಕು ಕೊಟ್ಟು
ಭೀಮ ರಾವ್ ಭೀಮ ರಾವ್