Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬದಲಾಗುತ್ತದೆ ಜನ ಮನ,

ಕಾಲ ನಿಯಮ



ಬದಲಾಗುತ್ತದೆ ಜನ ಮನ,ಜಗತ್ತಲ್ಲ ನಡೆದು ಬಂದ ಹೆಜ್ಜೆಗಳು ಮಾಸಿವೆ,ಪಾದಗಳು ಹೊಸ ಉರುಪಿನಿಂದ ಬಹುದೂರ ಸಾಗಿವೆ.

ಈಗ ಮಾಸಲು ನೆನಪುಗಳಷ್ಟೇ ಓಡುತ್ತಿರುವ ಯೋಚನೆ ವಿವೇಚನೆ ಒಂದೊಂದೇ ಹೆಜ್ಜೆ ದೂರವಾಗುತ್ತಿವೆ, ಕೈ ಚಾಚಿ ಕರೆದೊಯ್ಯಲು ಮನಸ್ಸಿಲ್ಲ,ಸದಾ ಮನಸಲ್ಲೇ ಇದ್ದೀರಿ ಅನ್ನುತ್ತಿದೆ ಜನವೆಲ್ಲಾ.

ಹೂ ಅರಳಿದಾಗ ಇದ್ದ ಮೊಬತ್,ಈಗ ಬರವಣಿಗೆಯಲ್ಲಿ ಮೂಡಿ ಬರುತ್ತಿದೆ ಹಂತ ಹಂತವಾಗಿ ಖಾಸಾ ಬಾತ್,ಉಪ್ಪು ಹುಳಿಯಿರದ ಸಪ್ಪೆ ಊಟದಂತೆ,ಕಾಡುತ್ತಿವೆ ಹಲವಾರು ಚಿಂತೆ.

ಓದಲಷ್ಟೇ ಚೆಂದ ಪ್ರೇಮ ಕಹಾನಿ,ನಾವೇ ಅದರ ಪಾತ್ರಗಳೆಂದು ಗೊತ್ತಾದಾಗ ಆಗುತ್ತಿದ್ದೇವೆ ಮೌನಿ,ಕಾರಣ ಪ್ರೇಮ ಮೂರ್ತಿ ಮಸಕು ಮಸುಕಾಗಿ ಕಾಣುತ್ತಿದೆ ದೂರ ಸಾಗಿ ಬಂದ ನಮಗೆ.

ಈಗಷ್ಟೇ ಬಂದ ಸುದ್ಧಿ ಹಲವಾರೋಗಗಳಿಗೆ ತುತ್ತಾಗಿದ್ದಾನೆ ಪಾಗಲ್ ಪ್ರೇಮಿ, ಪರೀಕ್ಷಿಸಲು ರಕ್ತವೆ ಇರದ ಅನಾಮಿ,ಬಸಿದು ಬರೆದ ರಕ್ತದ ಪ್ರೇಮ ಪಾತ್ರಗಳೇ ಇವನ್ನೆಬ್ಬಿಸಿದ ಸುನಾಮಿ.

ಮತ್ತದೇ ನೆಲ ಹಲವು ಹೃದಯಗಳಿಗೆ ಜನನ, ಅರಳಿ ನರಳುವವು ಎಷ್ಟೋ,ನಗುವವು ಎಷ್ಟೋ ಲೆಕ್ಕವಿಡಲಾಗದ ನೆಲದವ್ವ ಮತ್ತೆ ಮೌನಿ, ಮರಳಲ್ಲಿ ಮರೆಯಾದ ಹೆಜ್ಜೆ ಗುರುತುಗಳಂತೆ.

- ನಂದು

01 Mar 2021, 04:19 pm

ಬಾಳ ಸಂಗಾತಿ

ಮಾಧುರ್ಯದ ಆ ನಿನ್ನ ಮಾತು
ನನ್ನ ಬಾಳಲ್ಲಿ ಮಂದಹಾಸವ ತಂದಿದೆ...
ಚಂದ್ರನನ್ನು ತಂದು ಕೈಗೆ ಇಡೆಲೇ ಎನ್ನಲಾರೆ
ಆ ಬೆಳದಿಂಗಳ ಕತ್ತಲಲ್ಲಿ ನಿನ್ನ ಕೈ ತುತ್ತು ತಿನ್ನುವಾಸೆ..
ಕತ್ತಲೆ ಆವರಿಸಿದ ನನ್ನೀ ಬಾಳಲ್ಲಿ
ಮಿಂಚಾಗಿ ಬಂದು ದೀವಿಗೆಯಂತೆ ಮನವ ಬೆಳಗಿಸಿದೆ...!
ಮೌನದಲ್ಲೆ ನನ್ಮನವನ್ನ ನಿನ್ನೆಡೆಗೆ ಸೆಳೆದೆ
ಮನ ಪೂರ ನೀ ಆವರಿಸಿ ನೆಲೆಯಾಗಿ ಕುಂತೆ.!
ಅದೇ ಎಷ್ಟೇ ಕಷ್ಟ ಬರಲಿ ನಮ್ಮ ನಡುವಿನ
ಪ್ರೀತಿಗೆ ಕೊನೆಯಾಗದಿರಲಿ...!
ಕಷ್ಟವೋ ಸುಖವೋ ನೆಮ್ಮದಿಯ ಜೀವನ
ಸಾಗಿಸಿಬಿಡುವ ನಿನಗೆ ನಾನು ನನಗೆ ನೀ ಎಂದು...!
ಮನದ , ಮನೆಯ ಒಡೆತಿಯಾಗಿ ಆಯ್ಕೆಯಾದೆ
ನನ್ನ ಆಯ್ಕೆ ಸರಿಯಾಗಿದೆ ಇಂದೂ ಎಂದೂ ಎಂದೆಂದಿಗೂ ನೀನೇ ನನ್ನ ಬಾಳ ಸಂಗಾತಿಯೆಂದೂ...!
ನಾವಾಗಬೇಕು ಸತಿ ಪತಿಯಾಗಿ ಎಂದೆಂದಿಗೂ
ಬರೆದೆ ನಾ ಇಂದೂ ನನ್ನೊಲವಿನ ಜೀವಕ್ಕೊಂದು
ನನ್ನೀ ಒಲವ ವರ್ಣಿಸಲು ಪದಗಳು ಸಾಲದು ಪುಟಗಳು ಎಣಿಸಲಾಗದು
ನನ್ಮನದ ಒಲವಿಗೆ ಪುಟ್ಟ ಉಡುಗೊರೆಗೆ ನಿನಗೆಂದು..!
ಇಂದಿಗೆ ಮಾತ್ರ ಸೀಮಿತವಲ್ಲ ಈ ಉಡುಗೊರೆ ಜೀವನ ಪೂರ ನೆನೆಪಿನ ಅಂಗಳದಲ್ಲಿ ನಮ್ಮ ಜೋಡಿ ರಾರಾಜಿಸಬೇಕು...
ಹೇ ಒಲವೇ ಹಿಡಿಸಿತೆ ನನ್ನೀ ಪುಟ್ಟ ಕವನ....!!

- sharan

16 Feb 2021, 08:29 am

ಪ್ರೀತಿ

ಅಲ್ಲಿಹುದು,
ಇಲ್ಲಿಹುದು,
ಎಲ್ಲಿಹುದು ಪ್ರೀತಿ ?
ಅಣುವಾದಿ ಅನಂತದೊಳಡಗಿಹುದು ಪ್ರೀತಿ

ಬಸಿರ ಪೊತ್ತು ಹಡೆದವಳ ಮಡಿಲೊಳಗೆ ಪ್ರೀತಿ
ಭುಜದಿ ಹೊತ್ತು ನಡೆದವನ ತೋಳೊಳಗೆ ಪ್ರೀತಿ
ಅಕ್ಕರದಿ ಅಕ್ಷರಮಿತ್ತ ಗುರುವೊಳಗೆ ಪ್ರೀತಿ
ತಾಯ್ನುಡಿಯ ಸವಿಜೇನ ಸುಧೆಯೊಳಗೆ ಪ್ರೀತಿ

ಸೋದರಿಕೆಯಾದರದ ಅಪ್ಪುಗೆಯೆ ಪ್ರೀತಿ
ಮನದನ್ನೆಯುಂಗುರದ ಒಪ್ಪುಗೆಯೆ ಪ್ರೀತಿ
ಅಳುವ ಕಂದನ ತೊದಲು ನುಡಿಗಳದು ಪ್ರೀತಿ
ಉಳುವ ರೈತನ ಬೆವರ ಹನಿಗಳದು ಪ್ರೀತಿ

ಹರ ಕುಣಿದ, ಹರಿ ತಿರಿದ, ರವಿ ಸುರಿದ, ಕವಿ ಬರೆದ
ಎಲ್ಲಕ್ಕು ಮೊದಲಾಗಿ ಕಾರಣವು ಪ್ರೀತಿ,
ವಸುಂಧರೆಯ ಒಡಲೊಳಗು ಸದಾ ಮೊರೆವ ಕಡಲೊಳಗು
ತುಂಬಿಹುದು ಆನಂದದಿoಬುಗೆಯ ಪ್ರೀತಿ,

ನಾನಳಿಯೆ, ನೀನಳಿಯೆ, ಜನರಳಿಯೆ, ಜಗವಳಿಯೆ
ಇದಕುಂಟೆ ಆದಿ ?
ಇದಕುಂಟೆ ಅಂತ್ಯ ?
ಯುಗಕಳೆದು ಮಗದೊಂದು ಯುಗಮುಗಿಯೆ
ಬಿರಿಯುವುದು ಪ್ರೀತಿ......
ಮೆರೆಯುವುದು ಪ್ರೀತಿ.....
ಭೋರ್ಗರೆಯುವುದು ಪ್ರೀತಿ...........


- Darshan Bidare

14 Feb 2021, 01:54 pm

ನಿಷ್ಕಲ್ಮಶ ಪ್ರೀತಿ

ನಿನ್ನ ನಿಷ್ಕಲ್ಮಶ ಕಣ್ಣೋಟ,
ಸೆಳೆಯಿತು ಗೆಳೆಯ ಅದುವೇ ನನ್ನ ನಿನ್ನತ್ತ,
ನಿನಗೆ ಹೇಳಲಾಗದ ನನ್ನ ಪ್ರೀತಿಯ,
ಹೇಗೆ ನೀ ಅರಿತೇ ಗೆಳೆಯ,

ನಿನ್ನ ನಿಷ್ಕಲ್ಮಶ ಪ್ರೀತಿಗೆ ಇಲ್ಲ ಸರಿಸಾಟಿ,
ಗೆಳೆಯ ನನ್ನ ನಮಸ್ಕಾರಗಳು ನಿನಗೆ ಕೋಟಿ ಕೋಟಿ.

- Veena

11 Feb 2021, 08:27 pm

ಧಣಿ

ದೇವಾಲಯ ಸುತ್ತಿ
ಮೂರ್ಖನಾಗಬೇಡ
ಶಾಲೆಗೆ ಕಲಿತು
‌‌ ಜಾಣನಾಗು
ಕಲ್ಲು ಪೂಜಿಸುವ
ಮೂಢ ಮನುವಾದಿಯಾಗಬೇಡ
ಎಲ್ಲರನ್ನೂ ಗೌರವಿಸುವ
ಮಾನವತಾವಾದಿಯಾಗು
ನೀ ಯಾರನ್ನು ಯಾವ
ಜಾತಿ ಧರ್ಮ ಅನುಸರಿಸಬೇಡ
ನಿನ್ನನೇ ಅನುಸರಿಸುವಂತ
ದೊಡ್ಡ ಜ್ಞಾನಿಯಾಗು
ಗುಡಿ ಗೋಪುರಕ್ಕೆ
ದೇಣಿಗೆ ಕೊಟ್ಟು ದಡ್ಡನಾಗಬೇಡ
ದಣಿದವನಿಗೆ ಅನ್ನ
ಕೊಡುವ ಧಣಿಯಾಗು

- ರಾಜು ಹಾಸನ

08 Feb 2021, 08:30 pm

ಹೃದಯದ ಪಿಸುಮಾತು...

ಭಾವನೆಯೇ ಬದುಕಿನ ಬಣ್ಣ...
ತಂಪು ಗಾಳಿಯ ದಾಳಿಗೆ,
ಮಾತನಾಡುತ್ತಿದೆ ಕಣ್ಣರೆಪ್ಪೆಯು
ಕೂದಲಿನ ಜೊತೆಗೆ,
ನಿದ್ದೆಯು ಬರುತ್ತಿಲ್ಲ ನನ್ನ ಕಣ್ಣಿಗೆ,
ಮುತ್ತಿಡಬೇಕಾಗಿದೆ ನೀ
ನನ್ನಯ ತುಟಿಯೆಂಚಿಗೆ,
ನಿದ್ದೆಯಲ್ಲೂ ಈ ಹೃದಯಕ್ಕೆ
ನಿನ್ನದೆ ಹೊಚ್ಚಿಗೆ,
ಮನಸ್ಸಿನಲ್ಲೂ ಮೌನ ಆವರಿಸಿದೆ
ಕಾರಣ ನೀ ಬಂದೆ ನನ್ನಯ ಕನಸಿಗೆ,
ಜೀವನದ ಅದ್ಯಾಯದಲ್ಲಿ ನನ್ನನ್ನ
ಮೊದಲನೇಯ ಪುಟವಾಗಿಟ್ಟುಕೋ,
ಇದೆ ನೀ ನನಗೆ ನೀಡುವ ಸಲುಗೆ...
ರೋಹಿಣಿ M....

- Rohini barki

06 Feb 2021, 09:38 pm

ಎಚ್ಚರ ಎಚ್ಚರ

ಚಿಲ್ಲರೆ ಕಾಸಿಗೆ
ಚಿಲ್ಲರೆ ನೋಟಿಗೆ
ವೋಟು ಕೊಟ್ಟು
ಬೂಟು ನೆಕ್ಕಬೇಡಿ
ಮುಂದೊಂದು ದಿನ
ಬೀಳುವುದು ಮೆಟ್ಟಿನೆಟ್ಟು
ಅಂದು ಬಿಡಬೇಕಾಗುವುದು
ಕಣ್ಣು ಬಾಯಿ ಎಚ್ಚರ ಎಚ್ಚರ
ಜಾತಿ ಧರ್ಮದ
ಕಥೆಯ ಕಟ್ಟಿ ಜುಟ್ಟು ಹಿಡಿದು
ತಲೆಯ ಕಡಿಯುವರು
ಹೆಂಡ ಖಂಡ ಕೊಟ್ಟು
ಮಂಗನಾಟ ಆಡಿಸುವರು
ಮನುವಾದಿ ಕಮಂಗಿಗಳು
ಎಚ್ಚರ ಎಚ್ಚರ ಎಚ್ಚರ
ಮುಗ್ಧ ಜನಗಳೇ

ಮಂಗನ ಕೈಗೆ
ಮಾಣಿಕ್ಯ ಕೊಟ್ಟರು ಒಂದೇ
ಹೆಂಡ ಕೊಟ್ಟರು ಒಂದೇ
ಹಾಗೆಯೇ ಮನುವಾದಿ
ಮಂಗಗಳ ಕೈಗೆ
ರಾಜ್ಯ ಕೊಟ್ಟರು ಒಂದೇ
ದೇಶ ಕೊಟ್ಟರು ಒಂದೇ
ರಾಜ್ಯ ದೇಶ ಅಳಿಯಾದೆ
ಉಳಿಯುವುದೇ
ಮನುವಾದಿಗಳು ಪಠಿಸುವುದು
ಮಂತ್ರವಲ್ಲ
ಜನರ ಉರುಳಿಸುವ ತಂತ್ರ
ಇದ್ದನ್ನು ಅರಿಯದ
ಮುಗ್ಧ ಜನರು ಅತಂತ್ರ ಅತಂತ್ರ

ಬಗ್ಗೆ ಬಗ್ಗೆಯ
ತಿಂಡಿ ತಿನಿಸುಗಳು ಬೇಕು
ಬಕಾಸುರ ರಾಕ್ಷಸ
ಮನುವಾದಿಗಳ ಹೊಟ್ಟೆಗೆ
ಬಗ್ಗೆ ಬಗ್ಗೆಯ
ಬೆಳೆ ಬೆಳೆಯುವ
ರೈತರ ಗೋಳು
ಕಂಡು ಹಾಕಿಕೊಂಡರೆ
ಮನುವಾದಿಗಳು
ಬಾಯಿಗೆ ಮಣ್ಣು

- ರಾಜು ಹಾಸನ

04 Feb 2021, 01:06 pm

ನನ್ನ ಜನಗಳು

ಜನರ ಮತ ಪಡೆದು
ಕೊಂದಿದ್ದು ಆಯ್ತು ಜನರ ಬದುಕು
ಊರು ರಾಜ್ಯ ದೇಶದ
ಆಸ್ತಿ ಪಾಸ್ತಿ ಕೊಳ್ಳೆ ಹೊಡೆದು
ಮಾರಿದ್ದು ಆಯ್ತು
ಬಡ ಜನರ ಬದುಕು ಮೂರಾಬಟ್ಟೆ
ಮಾಡಿದ್ದು ಆಯ್ತು
ದೇಶದ ಬೆನ್ನೆಲುಬು ರೈತರ
ಬೆನ್ನು ಮೂಳೆ ಮುರಿದಿದ್ದು ಆಯ್ತು
ಸುಳ್ಳು ಹೇಳಿ ಕಥೆಯ ಕಟ್ಟಿ
ಜನರ ನಂಬಿಸಿ
ಜನರ ದಿಕ್ಕು ತಪ್ಪಿಸಿದ್ದು ಆಯ್ತು
ರಾಜ್ಯ ದೇಶವೇ ಬಂಡವಾಳ
ಶಾಹಿಗಳ ಕೈ ಸೇರಿದ್ದು ಆಯ್ತು
ಬಡವನ ಉದ್ಯೋಗದ
ಕನಸಿಗೆ ತಣ್ಣೀರು ಹಾಕಿದ್ದು ಆಯ್ತು
ದೇಶವನ್ನೇ ದೇವರು
ಧರ್ಮವೆಂದು ಹೊಡೆದು
ಸಾಯಿಸಿದ್ದು ಆಯ್ತು
ಇನ್ನು ಉಳಿದಿರುವುದು ಒಂದೇ
ಈ ದೇಶದ ಜನರ
ಕಂಡವರ ದೇಶಕ್ಕೆ ಮಾರುವುದು
ಒಂದು ಬಾಕಿಯಿದೆ
ಎಚ್ಚರ ಎಚ್ಚರ ನನ್ನ ಜನಗಳೇ
ಮನುವಾದಿ ಗುಲಾಮಗಿರಿಗೆ
ಬುದ್ದಿ ಕಲಿಸಿ ಊರು ದೇಶದಿಂದ
ಒದ್ದು ಓಡಿಸಿದರೇ
ಈ ದೇಶದ ಮೂಲ ನಿವಾಸಿಗಳಿಗೆ
ಉಳಿಗಾಲ ಇಲ್ಲದಿದ್ದರೆ
ಮೂಲ ನಿವಾಸಿಗಳಿಗೆ ಕೊನೆಗಾಲ

- ರಾಜು ಹಾಸನ

31 Jan 2021, 12:36 am

ಭರವಸೆ

ಕಳೆದ ನಿನ್ನೆಯ ಮರೆತು
ಹೊಸ ಕ್ಷಣಗಳ ಜೊತೆ ಬೆರೆತು
ಬಾಳೋಣ ನಾವು- ನೀವೆಲ್ಲ...

ಕಹಿ ನೆನಪನ್ನು ಮರೆತು
ಹೊಸ ದಿನಗಳ ಜೊತೆ ಬೆರೆತು
ಸಾಗಿದರೆ ಬಾಳಲ್ಲಿ ನೋವೇ ಇಲ್ಲ.....

ಕೃಷ್ಣ ಬಿಲ್ಲಾಡಿ ಮೇಲ್ ಬೈಲು

- krishna Billadi melbailu

23 Jan 2021, 11:27 am

ಮೊದಲ ಪ್ರೀತಿಯ ನೆನಪಲಿ

ಮರೆಯಲಾಗದವಳ ಬಗ್ಗೆ
ಬರೆಯಬಾರದು ಕವಿತೆ
ಹಳೆಯ ನೆನಪುಗಳ ಜೊತೆ
ನಾ ಮೌನಿಯಾಗಿ ಕುಳಿತೆ...

ಮೊದಲ ಪ್ರೀತಿಯ ನೆನಪಲ್ಲಿ
ಕಳೆದ ದಿನಗಳು ಅದೆಷ್ಟೋ
ಅರ್ಥವಾಗದ ಈ ಪ್ರೀತಿಯಲ್ಲಿ
ಉಳಿದಿರುವುದು ನೆನಪುಗಳು ಒಂದಿಷ್ಟು..,,
.
ಕೃಷ್ಣ ಬಿಲ್ಲಾಡಿ ಮೇಲ್ ಬೈಲು

- krishna Billadi melbailu

23 Jan 2021, 11:23 am