Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜೀವನ ಪಾಠ ಹಾಗೆ ನನ್ನ ಮನದ ಮಾತು

ಹುಡುಕುತ್ತಿರುವ ದಾರಿ ಯಾವುದೋ
ಸಾಗಿ ಬಂದ ಹಾದಿ ಯಾವುದೋ
ಆರಂಬಭದ ಅರಿವಿಲ್ಲ
ಅಂತ್ಯದ ಸುಳಿವಿಲ್ಲ
ಜೊತೆಯಲ್ಲಿ ಸಾಗುವರು ಯಾರೋ
ನಡುವೆ ನೂಕಿ ಹೋಗುವರು ಯಾರೋ
ಬರುವಾಗ ಯಾರಿರಲಿಲ್ಲ
ಹೋಗುವ ಬಗ್ಗೆ ತಿಳಿದಿಲ್ಲ
ಇಲ್ಲಿ ಬಂದಿರುವುದು ಯಾಕೋ
ಹಾಗೆಯೇ ನಿಂತಿರುವುದು ಯಾಕೋ
ಬೇಕೆಂದರೂ ಖುಷಿ ಇಲ್ಲ
ಸಾಕೆಂದರೆ ನೋವು ನಿಲ್ಲಲ್ಲ
ಮುಂದೆ ಬದುಕಿನ ಬಂಡಿ ಹೇಗೋ
ನಾಳೆ ಕೂಡ ಈ ದಿನದ ಹಾಗೋ
ನಂಬಿಕೆ ಬಿಟ್ಟರೆ ಇಲ್ಲೇನಿಲ್ಲ
ಅದ ನಂಬಿಯೇ ಸಾಗಿದೆ ಜಗವೆಲ್ಲಾ......
msbhovi....✍️



- mani_s_bhovi

13 Jul 2021, 07:38 pm

"ದೇವ ಮಾಯ, ಗುರು ಭಾರತ"

ತಮ್ಮ ದೇಹ-ವೇಷವೆ ಭಾರತ ನಮ್ಮ ದೇಶವೆ ಭಾರತ,
ಜನಮ ನೀಡಿದ ಜನನಿಯೆ, ಆಕಾರ ನೀಡಿದ ಜನಕನೆ,
ತಮ್ಮ ಪ್ರಥಮ ದೇವರು ಹೆಮ್ಮೆ ರಾಷ್ಟ್ರ ವೆ ಭಾರತ.

ಸನಮಾಗ೯ದ ಸನಮಂಗಳ ತೋರುವ
ಅರು- ಗುರುವೆ,
ಸ್ತಂಭಲಾಂಛನ ಸಂಸ್ಕಾರ ಎರೆವ
ವರ- ಗುರುವೆ,
ನಮ್ಮ- ನಿಮ್ಮೆಲ್ಲರ ದ್ವಿತೀಯ ದೇವರು
ಸವ೯-ರಾಷ್ಟ್ರವೆ ಭಾರತ.

ಪ್ರಕೃತಿ-ಪ್ರಕಾಶಿಸುವ, ದಿನ-ಚರಿ,
ಅವಲೋಕಿಸುವರು ,
ಬಾನ- ಭಾಸ್ಕರ ಹುಣ್ಣಿಮೆ-ರಜನಿಕರ ಹಗಲಿರುಳಿಸುವರು,
ಜೀವ-ಸಂಕುಲ,ನಿಸರ್ಗ ಪ್ರಜ್ಞೆಯ ತೃತೀಯ ದೇವರು ,
ಭರತ ಹೆಸರೆ ಭಾರತ ಸೌಹಾರ್ದ ಶುಭಾಶಯ ಭಾರತ.

ಬಾನ-ಭೂಮಿ ಬೆಂಕಿ-ತಂಗಾಳಿ,
ಜಲ ಸೃಷ್ಟಿಸಿದ ಕತ೯ವೆ,
ಶಕ್ತಿ-ಯುಕ್ತಿ ಶೌರ್ಯ-ಧೈರ್ಯ,
ಅಂಶ ನಂಬಿದ ವಿಸ್ಮಯವೆ,
ತಮ್ಮ ಚತುಥಿ೯ ದೇವರು ನಾವಿರುವ ತಾಣವೆ ಭಾರತ.

ದೇವ ಮಾಯ, ಗುರುವೆ ಭಾರತ,
ಪೌರತ್ವ ನೆಲ-ವಾಸಿ ದೇಶವೆ ಭಾರತ.

"ರಾಜಕುಮಾರ್ "aim is a Reader Writer.

- rajkumar

13 Jul 2021, 07:25 pm

ನನ್ನ ಪ್ರೀತಿಯ ಪಯಣ....

ತುಂಬಾ ಕಷ್ಟ ಪಟ್ಟು ಕಾಡಿ ಬೇಡಿ ಪಡೆದುಕೊಂಡ
ಪ್ರೀತಿ ಕಣೆ ನನ್ನದು.....
ಸಿಂಪಲ್ ಇಗಿ ನಿನ್ನ ಬಿಟ್ಟು ಹೋಗ್ತಿನಿ ಅಂತ
ಅಂದುಕೊಳ್ಳಬೇಡ.....
ಎಷ್ಟೆ ಕಷ್ಟ ಬಂದರೂ ನಿನ್ನ ಜೊತೆಯಾಗಿ ನಿಲ್ಲುವೆನು...
ಒಂದು ವೇಳೆ ನಾ ನಿನ್ನ ಬಿಟ್ಟು ಹೊದರೆ ಅದು ನಿನು
ಮೋಸ ಮಾಡಿದರೆ ಮಾತ್ರ ಅಥವಾ ನನಗೆ ಈ ಭೂಮಿಯ ಋಣ ತೀರಿದ ಮೇಲೆ...

- mani_s_bhovi

13 Jul 2021, 04:10 pm

ಭೀಮ ಗೀತೆ

ಜೈ ಜೈ ಜೈ ಭೀಮ್
ಈ ನಾಡಿನ ಸೂರ್ಯ
ನನ್ನ ಎದೆಯ
ಸ್ವಾಭಿಮಾನದ ಜ್ಯೋತಿ
ಜೈ ಜೈ ಜೈ ಭೀಮ್

ಹಸಿದವರ ಕೈ ಹಿಡಿದು
ಮನುವಾದಿಗಳ
ಮೆಟ್ಟಿ ನಿಂತ ಒಂಟಿ ಸಲಗ
ಜೈ ಜೈ ಜೈ ಭೀಮ್

ನೊಂದವರಿಗೆ ಸೂರಾಗಿ
ದುಷ್ಟರಿಗೆ ಸಿಂಹ ಸ್ವಪ್ನವಾಗಿ ಕಾಡಿದ
ನನ್ನ ಒಡೆಯ
ಜೈ ಜೈ ಜೈ ಭೀಮ್

ಬಡವರಿಗೆ ಬಂಧುವಾಗಿ
ಮನುವಾದಿಗಳಿಗೆ ಶತ್ರುವಾಗಿ
ಹೋರಾಡಿದ ಧೀರ
ಜೈ ಜೈ ಜೈ ಭೀಮ್

ಮನುವಾದಿಗಳ
ಸೊಕ್ಕು ಅಡಗಿಸಿ
ದಿನ ದಲಿತರ ಉಸಿರಾದ
ಭಾರತ ರತ್ನ ಬಾಬಾಸಾಹೇಬ
ಜೈ ಜೈ ಜೈ ಭೀಮ್

- ರಾಜು ಹಾಸನ

12 Jul 2021, 12:02 am

ಕಾಲನ ಎದುರು

ಯಾರು ನಾವಿಲ್ಲಿ ಕಾಲನ ಎದುರು
ದೇವನ ಆಟವಿದು, ಯಾರು ನಾವಿಲ್ಲಿ
ಬರೀಯ ಚದುರಂಗದ ಕಾಯಿಗಳಂತೆ...
ಅವನು ನಡೆಸಿದಂತೆ ನಡೆಯುವ
ಚದುರಂಗದ ಕಾಯಿಗಳು ನಾವು...
ಗೆಲ್ಲಲು ಸಾಧ್ಯವೇ ನಾವಿಲ್ಲಿ ಅವನ
ಆಟವನು...ನೀ ಎಷ್ಟೇ ದೊಡ್ಡವನಿದ್ದರೂ,
ನಿನ್ನ ಆಸ್ತಿ ಎಷ್ಟಿದ್ದರೇನು ಅವನ ಆಟದ
ಮುಂದೆ ನೀನು ತೃಣಕ್ಕೆ ಸಮಾನ...

- ಹೃದಯವಾಸಿ

- Deenu Adi

10 Jul 2021, 12:54 pm

ನೀನೆಂದಿಗು ನನ್ನವನು

ಹಂಬಲಿಸುತಿದೆ ಮನಸ್ಸಿಂದು ನಿನ್ನನ್ನೇ
ಪ್ರೀತಿಯ ಪಯಣದಲ್ಲಿ ಕೂಗುತಿರುವೇನು ನಿನ್ನನ್ನು
ಬಾನಲಿ ಚುಕ್ಕಿ ಎಣಿಸುತ್ತಾ ಕೇಳಿದೆ ಅವ್ಗಳೊಂದಿಗೆ ನಿನ್ನನ್ನು
ಚಂದಿರ ಬಂದು ಕೇಳಿದ ಎಲ್ಲಿ ಎಂದು ನನ್ನನ್ನು
ನಾ ಹೇಳಿದೆ ನಾನಿರುವೆ ಅವನ ಉಸಿರಿನಲ್ಲಿ ಎಂದು
ಚಂದಿರ ನಕ್ಕು ಹೇಳಿದ ಅವನು ನಸು ನಗುತ್ತಿರುವನು ನಿನ್ನ ಗುಂಗಿನಲ್ಲಿ ಎಂದು
ನಾ ಹೇಳಿದೆ ನಾನು ಸಹ ನಾಚುತಿರುವೇನೆಂದು ..............
ಎಲ್ಲಿರುವೆ ನಾ ಕಾದಿರುವೆ.......
ಇಂತಿ ಒಂಟಿ ಹೃದಯದ ಒಡತಿ

- chinni Prakash

08 Jul 2021, 09:58 pm

ಬದುಕಿನ ಪಯಣದಿ ನೀನೇ ನನಗೆಲ್ಲ....

ಬದುಕಿನ ಪಯಣದಿ ನಿನ್ನ ಕೈ ಹಿಡಿದು ಬಾಳಬೇಕು,
ಕಷ್ಟ ಸುಖಗಳನ್ನು ಸಮನಾಗಿ ಹಂಚಿಕೊಂಡು...
ಯಾವಾಗಲೂ ನಂಬಿಕೆ ಇರಬೇಕು,
ಅನುಮಾನವೆಂಬ ರಾಕ್ಷಸ ನಮ್ಮ ನಡುವೆ ಬಾರದಂತೆ...
ಕೊನೆಯವರೆಗೂ ಪ್ರೀತಿಸುತ್ತ ಇರಬೇಕು,
ನೊಡುವವರಿಗೆ ಹೊಟ್ಟೆಕಿಚ್ಚು ಬರುವಂತೆ....
ಇಬ್ಬರ ನಡುವೆ ಸಣ್ಣ ಪುಟ್ಟ ಜಗಳ ಇರಬೇಕು,
ಕೊನೆಯಲ್ಲಿ ಇಬ್ಬರು ಸೋತು ಕ್ಷಮೆಕೇಳುವಂತೆ....
ಅನ್ಯೊನ್ಯವಾಗಿ ಇರಬೇಕು, ಮೂರನೆಯ ವ್ಯಕ್ತಿಯ
ಎದರು ಒಬ್ಬರನ್ನು ಇನ್ನೊಬ್ಬರು ಬಿಟ್ಟು ಕೊಡದಂತೆ...
msbhovi....✍️


- mani_s_bhovi

08 Jul 2021, 12:34 pm

ಪ್ರೀತಿ ತೇರು

ಒಲವು ಒಮ್ಮಿದೆ
ಮನವು ತೇಲಿದೆ
ಪ್ರೀತಿ ಪ್ರೇಮದ
ಬಿಸು ಗಾಳಿಯಲ್ಲಿ
ಅಲೆಯು ಹುಟ್ಟಿದೆ
ಪ್ರೀತಿ ಪ್ರೇಮದ
ತೇರು ಸಾಗಿದೆ
ನೂರೆಂಟು ಆಸೆ
ಕನಸು ಹೊತ್ತು
ಪರಿ ಪರಿ ಹುಟ್ಟು ಹಾಕಿದೆ
ಒತ್ತು ಕತ್ತಲಾಗುವ ಮುನ್ನ
ದಡವಾ ಸೇರಿದೆ
ಪ್ರೀತಿ ಪ್ರೇಮದ ತೇರು
ಛಲವಾ ಬಿಡದೆ



- ರಾಜು ಹಾಸನ

07 Jul 2021, 07:03 pm

ತನಕ

ಜೀವನ ಜೀವ ಇರುವ ತನಕ
ಬದುಕು ಬದುಕಿರುವ ತನಕ
ಬಂಧುಗಳು ಸಂಬಂಧ ಇರುವ ತನಕ
ಪ್ರೀತಿ ಪ್ರೇಮ ಪ್ರೇಮಿಗಳು ಇರುವ ತನಕ
ಸ್ನೇಹ ವಿಶ್ವಾಸ ಇರುವ ತನಕ
ಪ್ರಪಂಚ ಸೂರ್ಯ ಚಂದ್ರರು ಇರುವ ತನಕ
ತಂದೆ ತಾಯಿಗಳು ನಮ್ಮ ಜನ್ಮ ಮುಗಿಯುವ ತನಕ


- ರಾಜು ಹಾಸನ

07 Jul 2021, 12:06 am

ನಾನು ಚಿಕೌನ್

ನಾನು ಚಿಕೌನ್ ನಾನು ಚಿಕೌನ್
ತೋಟಕೆ ನಾನು ಹೋಗಿದ್ದೆ
ತೋಟದ ಹೂವನು ಕಿತ್ತು ತಂದು
ದೇವರ ತಲೆ ಮೇಲೆ ಇಟ್ಟಿದ್ದೆ

ಕೈಯನು ಮುಗಿದು ಕಣ್ಣನು ಮುಚ್ಚಿ
ಮಂಡೆಯ ಉರಿ ಕೂತಿದ್ದೆ
ದೇವರ ಮುಂದೆ ಕುಂತು ನಾನು
ವಿದ್ಯೆಯ ಕೊಡು ಅಂತಾ ಕೇಳಿದ್ದೆ

ಉದ್ದಗೆ ಮಲಗಿ ಹಣೆಯನು ಹಚ್ಚಿ
ಬುದ್ದಿಯ ನೀಡು ಅಂದಿದ್ದೆ
ನೈವೇದ್ಯ ಹಿಡಿಯಲು ಜೇಬಿನಲ್ಲಿದ್ದ
ಬೆಲ್ಲವ ತೆಗೆದು ಇಟ್ಟಿದ್ದೆ

ಅವ್ವ ದೇವರಿಗೆ ಉಪವಾಸ ವಿದ್ದರೆ
ಅವಲಕ್ಕಿ ಉಪ್ಪಿಟ್ಟು ತಿಂತಿದ್ದೆ
ಹರಕೆಯ ತಿರ್ಸಲು ಹೊಂಟರೆ ಅಪ್ಪನ
ಹೆಗಲಿನ ಮೇಲೆ ಕೂಡ್ತಿದ್ದೆ

ಯಾವ ದೇವರಂತ ಗೊತ್ತಿರದಿದ್ದರು
ಪ್ರತಿ ದೇವರ ಮುಂದೆ ಇರ್ತಿದ್ದೆ
ಪ್ರಸಾದ ತಿಂದು ತಿರ್ಥವ ಕುಡಿಯುತ
ಜೆಗಿಯುತ ಮನೆಕಡೆ ಬರ್ತಿದ್ದೆ

ಕಲ್ಮೇಶ ಬಡಿಗೇರ
ಬದಾಮಿ

- Kalmesh Badiger

04 Jul 2021, 10:33 pm