ಚಿಂದಿಚಿಂದಿ ಬಟ್ಟೆಯನ್ನು ಉಟ್ಟು ನಿಂತಿರುವಳು ಬಡತನ ಹೊತ್ತು ನೂರಾರು ಕಾಮುಕರು ಕಣ್ಣುಗಳು ಬಯಸುತಿವೆ ಅವಳ ಸೌಂದರ್ಯವನ್ನು ಆಶ್ರಯ ಕೊಡಲು ಹೊರಟಿರುವ ವೀರಾಧಿವೀರರು ಶೂರರು, ಕಾಮದ ಮುದಿಗೂಬೆಗಳು ಹಣದಾಸೆ ತೋರಿಸಿ ಕಚ್ಚಾಡುತ್ತಿಹರು ಕ್ಷಣ ತೃಪ್ತಿಗಾಗಿ ಬಡೆದಾಡುತಿಹರು ಕಾಮದ ರಣರಂಗದಲ್ಲಿ ಹೋರಾಡಿ ಪ್ರಾಣ ಗೈಯುತಿಹರು. ಹಸಿದ ಹೊಟ್ಟೆಗೆ ಅನ್ನದಾಸೆ ಹಚ್ಚಿ ನಾರುತಿರುವ ಅವಳ ಮೈ ಸುಖವುಂಡು ನಾಯಿಗಳು ಅವಳನು ಬಿಸಾಕಿ ಹೊರಟು ಗೆದ್ದೆವು ಎಂಬ ವಿಜಯ ಪತಾಕಿ ಹಾರಿಸುತ್ತಿಹರು ಆ ಕಾಮುಕರು ನೆಟ್ಟ ಬೀಜ ಮೊಳೆತು ಮರಿಯಾದಾಗ ಮಗುವಿನ ಕೂಗು ಅಪ್ಪಾ ಎಂದು ಬಾಯಿ ತೆರೆದಾಗ ಆ ಬಡಜೀವ ಕೈಮಾಡಿ ತೋರಿಸುತ್ತಿತ್ತು ಈ ಪ್ರಪಂಚವ
ಅವ್ವ ಕಳಿಸಿದ ಬಿಸಿ ಬಿಸಿ ರೊಟ್ಟಿ,
ಇದೆಲ್ಲ ಅಮ್ರತಗಳಿಗೂ ತುಟ್ಟಿ,
ಹೊಲದಲ್ಲಿ ಕೈ ತುಂಬಾ ಕೆಲಸ,
ಕನ್ನಡ ಹಾಡೊಂದು ತಣಿಸಲು ಮನಸ,
ನೈಸರ್ಗಿಕ ತಂಪುಕಾರಕ ವಾಯು,
ಮಣ್ಣಿನ ಗುಣಕ್ಕೆ ಗಟ್ಟಿ ಈ ಸ್ನಾಯು,
ಕರುನಾಡ ಜಲ ಕುಡಿದಿರಲು ನಾನೆಂದೂ ಚಿರಾಯು ಚಿರಾಯು.........
ಮನಸ್ಸಿಗಾದ ಗಾಯಕ್ಕೆ ಮುಲಾಮು ಸಿಗೋದಿಲ್ಲ,
ನುಚ್ಚು ನೂರಾದ ಕನಸಿಗೆ ಮರು ಜೋಡನೆ ಸಾಧ್ಯವಿಲ್ಲ,
ಮಾತು ನಡುವಳಿಕೆಗಳು ಕತ್ತಿಗಿಂತ ಹರಿತ,
ತಪ್ಪು ನುಡಿದರೆ ಆಗುವುದು ಮನಸ್ಸಿಗೆ ಇರಿತ,
ನಂಬಿಕೆಯನ್ನೊ ಪದಕ್ಕೆ ಇರುವುದು ಅಪಾರವಾದ ಶಕ್ತಿ,
ಯಾರನ್ನೂ ನಂಬಬೇಕು ಎಂದು ತಿಳಿಯಲು ಇರಬೇಕು ತುಂಬಾ ಯುಕ್ತಿ,
ಮೋಸ ಮಾಡುವ ಜನರೇ ತುಂಬಿಹರು ಈ ಜಗತ್ತಿನಲ್ಲಿ,
ನಮ್ಮವರೇ ನಮಗೆ ಮೋಸ ಮಾಡುವರಿಲ್ಲಿ,
ನಮ್ಮ ತನವ ನಾವು ಎಂದಿಗೂ ಬಿಡಬಾರದು,
ನಮ್ಮ ಸಾಂಗತ್ಯಕ್ಕಿಂತ ಒಳ್ಳೆಯ ಸಾಂಗತ್ಯ ಬೇರೆ ಸಿಗಲಾರದು...
ಸಾಧಿಸುವ ಚಲವೊಂದಿದ್ದರೆ ಎಲ್ಲವು ಸುಲಭ,
ಗುರಿಯಿಲ್ಲದೆ ಮುನ್ನಡೆದರೆ ದಾರಿಯು ದುರ್ಲಭ,
ಮುಂದಿಟ್ಟ ಹೆಜ್ಜೆಯನ್ನು ಎಂದು ಹಿಂದಿಡಬಾರದು,
ಮುನ್ನುಗ್ಗಿ ನಡೆದರೆ ಯಾರು ತಡೆಯಲಾರರು,
ಸಾಗುವ ದಾರಿಯಲ್ಲಿ ಅಡೆತಡೆಗಳು ನೂರಾರು,
ಹಿಮ್ಮೆಟ್ಟಿಸಿ ನಡೆಯಲು ದಾರಿಗಳು ಸಾವಿರಾರು,
ಎಷ್ಟು ಸಲ ಸೋತರು ಪ್ರಯತ್ನಿಸುವೆ ಮತ್ತೊಂದು ಬಾರಿ,
ಸಾಧನೆಯ ಶಿಖರವನ್ನೆರುವೆ ಎಂದಾದರೊಂದು ಸಾರಿ..
ಹೇಳಲು ಗಳಿಗೆ ಸರಿ ಇರಲಿಲ್ಲ
ಕೇಳಲು ನನ್ನ ಮನಸು ನಿನ್ನ ಬಳಿ ಇರಲಿಲ್ಲ...! ಈ ಕಲ್ಪನೆಯ ಪ್ರೀತಿಯನ್ನ ಹಚ್ಚಿ ಕೊಂಡ ಹುಚ್ಚ ನಾನು...! ಅದರ ವಾಸ್ತವ ತಿಳಿಸಿದ್ದು ನೀನು....! ♥️❤
ನಿನ್ನ ಬಾಳಿಗೆ ನಾನು ತಾತ್ಕಾಲಿಕ ಪರಿಚಯವಾದರೆ...! ನನ್ನ ಬದುಕಿನಲ್ಲಿ ನೀನು ಮರೆಯಲಾರದ ನೆನಪುಗಳಾದೆ...! ♥️❤