Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರಪಂಚ

ಚಿಂದಿಚಿಂದಿ ಬಟ್ಟೆಯನ್ನು ಉಟ್ಟು ನಿಂತಿರುವಳು ಬಡತನ ಹೊತ್ತು ನೂರಾರು ಕಾಮುಕರು ಕಣ್ಣುಗಳು ಬಯಸುತಿವೆ ಅವಳ ಸೌಂದರ್ಯವನ್ನು ಆಶ್ರಯ ಕೊಡಲು ಹೊರಟಿರುವ ವೀರಾಧಿವೀರರು ಶೂರರು, ಕಾಮದ ಮುದಿಗೂಬೆಗಳು ಹಣದಾಸೆ ತೋರಿಸಿ ಕಚ್ಚಾಡುತ್ತಿಹರು ಕ್ಷಣ ತೃಪ್ತಿಗಾಗಿ ಬಡೆದಾಡುತಿಹರು ಕಾಮದ ರಣರಂಗದಲ್ಲಿ ಹೋರಾಡಿ ಪ್ರಾಣ ಗೈಯುತಿಹರು. ಹಸಿದ ಹೊಟ್ಟೆಗೆ ಅನ್ನದಾಸೆ ಹಚ್ಚಿ ನಾರುತಿರುವ ಅವಳ ಮೈ ಸುಖವುಂಡು ನಾಯಿಗಳು ಅವಳನು ಬಿಸಾಕಿ ಹೊರಟು ಗೆದ್ದೆವು ಎಂಬ ವಿಜಯ ಪತಾಕಿ ಹಾರಿಸುತ್ತಿಹರು ಆ ಕಾಮುಕರು ನೆಟ್ಟ ಬೀಜ ಮೊಳೆತು ಮರಿಯಾದಾಗ ಮಗುವಿನ ಕೂಗು ಅಪ್ಪಾ ಎಂದು ಬಾಯಿ ತೆರೆದಾಗ ಆ ಬಡಜೀವ ಕೈಮಾಡಿ ತೋರಿಸುತ್ತಿತ್ತು ಈ ಪ್ರಪಂಚವ

- shankar gargi

21 Jul 2021, 02:07 pm

ಮನದ ಅಂಗಳದಲ್ಲಿ

ಮನದ ಅಂಗಳದಲ್ಲಿ
ಬೆಳದಿಂಗಳ ನಲ್ಲೆ...
ನಾ ಕಂಡೆನು ಅವಳ
ಅನುರಾಗದ ಲೀಲೆ...

ಹುಸಿಮುನಿಸಿನ ಒಡವೆ
ನೀ ತೊಟ್ಟರೆ ಚೆಲುವೆ...
ನಾ ರಮಿಸಲು ಬರುವೆ
ನೀ ಕೋಪವ ಬಿಡುವೆ...

ಅದರದ ನಡುವೆ
ನಗೆ ಮಲ್ಲಿಗೆ ಅರಳಿ...
ನಸು ನಾಚಲು ಕೆನ್ನೆ
ಕೆಂದಾವರೆ ಹೆಣ್ಣೆ...

ಹೃದಯದ ಬಡಿತ
ನಿನ್ನ ಕೂಗಿದೆ ಸತತ...
ಮನಸಿನ ತುಡಿತ
ಇದು ಬಯಕೆಯ ಮಿಡಿತ...

ಸಕ್ಕರೆ ಹಾಲು
ನಮ್ಮಯ ಒಲವು...
ನಗುತಿರೆ ನೀನು
ಈ ಬದುಕಲಿ ಗೆಲುವು...


- ಪಿ.ಜಿ.ಜ್ಯೋತಿ

20 Jul 2021, 04:33 pm

ಮನಸು ಮೌನವಾಗಿದೆ

ಕಣ್ಣುಗಳು ಕಂಬನಿಯ ಮೀಟುತಿದ್ದರು,
ಯಾರಿಗೂ ತಿಳಿಯದಂತೆ ನಟಿಸುತ್ತಿರುವೆ.

ಮನಸ್ಸಿನಲ್ಲಿ ಅದೆಷ್ಟೋ ಮಾತುಗಳ ಸಂಘರ್ಷ ನಡೆಯುತ್ತಿದ್ದರೂ,
ಎಲ್ಲರೆದುರು ಮೌನಿಯಂತೆ ನಟಿಸುತ್ತಿರುವೆ.

ನಾ ಕಂಡ ಕನಸುಗಳು,
ಕಣ್ಣಾ ಮುಂದೆಯೇ ಕಮರಿ ಹೋಗುತಿದ್ದರು,
ಕಾರಣ ತಿಳಿಯದೆ ಕೊರಗುತಿರುವೆ.

ಎಲ್ಲರೂ ಜೊತೆಯಿದ್ದರೂ,
ಮನಸಿನ ಭಾವನೆ ಹೇಳಲಾಗದೆ,
ಒಬ್ಬಂಟಿಗಳಂತೆ ಬದುಕುತ್ತಿರುವೇ.

ಕತ್ತಲೆಯ ಕಾರ್ಮೋಡ ಸರಿದು,
ಬೆಳಕು ಮೂಡುವುದೆಂಬ, ಭರವಸೆಯಲ್ಲಿ ನಾ ಬಾಳುತಿರುವೆ.

- Veena

18 Jul 2021, 08:35 pm

ಹೊಲದಲ್ಲಿ

ಅವ್ವ ಕಳಿಸಿದ ಬಿಸಿ ಬಿಸಿ ರೊಟ್ಟಿ,
ಇದೆಲ್ಲ ಅಮ್ರತಗಳಿಗೂ ತುಟ್ಟಿ,
ಹೊಲದಲ್ಲಿ ಕೈ ತುಂಬಾ ಕೆಲಸ,
ಕನ್ನಡ ಹಾಡೊಂದು ತಣಿಸಲು ಮನಸ,
ನೈಸರ್ಗಿಕ ತಂಪುಕಾರಕ ವಾಯು,
ಮಣ್ಣಿನ ಗುಣಕ್ಕೆ ಗಟ್ಟಿ ಈ ಸ್ನಾಯು,
ಕರುನಾಡ ಜಲ ಕುಡಿದಿರಲು ನಾನೆಂದೂ ಚಿರಾಯು ಚಿರಾಯು.........

- Naresh Poojari

15 Jul 2021, 11:52 am

ಮೌನಿ

ಕೇಳಿದ್ದೊಂದು ಕರುನಾಡು
ಕಾಣುತಿಹುದೊಂದು ಸುಡುಗಾಡು.....

ಇದೆಂಥ ವಿಪರ್ಯಾಸ,
ಹೇಳಲೂ ಕೂಡಾ ಪ್ರಯಾಸ,
ಮಣ್ಣಾಗಿಸಿದರು ಮತ ನೀಡುವಾಗ ಕಾಣಿಸಿದ್ದ ಕನಸ........

ಬದಲಾದ ಧ್ಯೇಯ
ಇವರಲ್ಲ ವಿಧೇಯ
ಅಪಹಾಸ್ಯದಲ್ಲಿದೆ ರಾಜಕೀಯ....

ನಾಲ್ಕು ಜನಕಾದರೂ ಉಪಕಾರಿ ಎಮ್ಮೆಗಳು
ಮತ ಹಾಕಿದ ಜನಕಾದರು ಮಾರಿ ಈ ಎಮ್ಮೆಲ್ಲೆಗಳು......

ಮಾತಲ್ಲೇ ಮುಗಿಯಿತು ದೇಶೋದ್ಧಾರ
ಇವರಿಗೆ ಸೀಟು ಸಿಗುವುದೇ ಹರ್ಷೋದ್ಘಾರ.......

ಹೊಲಸು ತಿನ್ನುವ ಎಮ್ಮೆ ಕೊಡುವವು ಹಾಲ
ಹೊಲಸು ಎಮ್ಮೆಲ್ಲೆಗಳಿಂದ ಕೋಲಾಹಲ......

ಕಳೆದು ಹೋಗಿದೆ ಪ್ರಜಾಪ್ರಭುತ್ವ
ಇದಕೆ ಕಾರಣ ಅಂದೇ ಹೇಳಿದ ಪ್ರಜೆಗಳ ನೋಟಿಗೆ ಓಟೆಂಬ ತತ್ವ............

-ಮೌನಿ

- Naresh Poojari

15 Jul 2021, 11:44 am

ಸಾಂಗತ್ಯ

ಮನಸ್ಸಿಗಾದ ಗಾಯಕ್ಕೆ ಮುಲಾಮು ಸಿಗೋದಿಲ್ಲ,
ನುಚ್ಚು ನೂರಾದ ಕನಸಿಗೆ ಮರು ಜೋಡನೆ ಸಾಧ್ಯವಿಲ್ಲ,
ಮಾತು ನಡುವಳಿಕೆಗಳು ಕತ್ತಿಗಿಂತ ಹರಿತ,
ತಪ್ಪು ನುಡಿದರೆ ಆಗುವುದು ಮನಸ್ಸಿಗೆ ಇರಿತ,
ನಂಬಿಕೆಯನ್ನೊ ಪದಕ್ಕೆ ಇರುವುದು ಅಪಾರವಾದ ಶಕ್ತಿ,
ಯಾರನ್ನೂ ನಂಬಬೇಕು ಎಂದು ತಿಳಿಯಲು ಇರಬೇಕು ತುಂಬಾ ಯುಕ್ತಿ,
ಮೋಸ ಮಾಡುವ ಜನರೇ ತುಂಬಿಹರು ಈ ಜಗತ್ತಿನಲ್ಲಿ,
ನಮ್ಮವರೇ ನಮಗೆ ಮೋಸ ಮಾಡುವರಿಲ್ಲಿ,
ನಮ್ಮ ತನವ ನಾವು ಎಂದಿಗೂ ಬಿಡಬಾರದು,
ನಮ್ಮ ಸಾಂಗತ್ಯಕ್ಕಿಂತ ಒಳ್ಳೆಯ ಸಾಂಗತ್ಯ ಬೇರೆ ಸಿಗಲಾರದು...

- Naresh Poojari

15 Jul 2021, 11:42 am

ಧ್ವನಿ

ಗಡಚಿಕ್ಕುವಂತೆ ಕಿವಿಗೆ ಅಪ್ಪಳಿಸುತಿದೆ ಸಮುದ್ರದ ಅಲೆಗಳ ಶಬ್ದ,
ಕತ್ತಲ ಕರಾಳ ನೋಟಕೆ ಆಗಿವೆ ಹಕ್ಕಿಗಳು ಮೂಕ ಸ್ತಬ್ಧ,
ತಂಗಾಳಿ ಬೀಸುತ್ತಿರಲು ಮನಸಿನಲ್ಲೆನೋ ತಳಮಳ,
ಯಾರನ್ನೋ ಕಳೆದುಕೊಂಡತಹ ಕಳವಳ,
ಸುತ್ತಲೂ ಆವರಿಸಿತು ನೀರವ ಮೌನ,
ಆಲೋಚನೆಗಳ ಸುಳಿಯಲ್ಲಿ ಮುಳುಗಿ ಹೋದೆ ನಾ,
ಉತ್ತರ ಸಿಗದ ಪ್ರಶ್ನೆಗಳಿಗೆ ದಿಕ್ಕು ತೋಚದಾದೆ,
ಜೀವನದ ಸವಾಲುಗಳ ಎದುರು ಸೋತು ಜೀವನಕೆ ಶರಣಾದೆ ....

- Naresh Poojari

15 Jul 2021, 11:41 am

ಸಾಧನೆ ಎಂದರೇನು?

ಸಾಧಿಸುವ ಚಲವೊಂದಿದ್ದರೆ ಎಲ್ಲವು ಸುಲಭ,
ಗುರಿಯಿಲ್ಲದೆ ಮುನ್ನಡೆದರೆ ದಾರಿಯು ದುರ್ಲಭ,
ಮುಂದಿಟ್ಟ ಹೆಜ್ಜೆಯನ್ನು ಎಂದು ಹಿಂದಿಡಬಾರದು,
ಮುನ್ನುಗ್ಗಿ ನಡೆದರೆ ಯಾರು ತಡೆಯಲಾರರು,
ಸಾಗುವ ದಾರಿಯಲ್ಲಿ ಅಡೆತಡೆಗಳು ನೂರಾರು,
ಹಿಮ್ಮೆಟ್ಟಿಸಿ ನಡೆಯಲು ದಾರಿಗಳು ಸಾವಿರಾರು,
ಎಷ್ಟು ಸಲ ಸೋತರು ಪ್ರಯತ್ನಿಸುವೆ ಮತ್ತೊಂದು ಬಾರಿ,
ಸಾಧನೆಯ ಶಿಖರವನ್ನೆರುವೆ ಎಂದಾದರೊಂದು ಸಾರಿ..

- Naresh Poojari

15 Jul 2021, 11:31 am

ಓಕೆನಾ.....

ನಂದು ಪಾಳುಬಿದ್ದ ಮನೆ

ಆಗುವೆಯಾ ನೀ ಯಜಮಾನಿ ನೀನು....

ನಂದು ನೊಂದ ಹ್ರದಯ ಕಣೆ

ಒಮ್ಮೆ ಅಪ್ಪಿ ಮನವ ನಗಿಸುವೆಯಾ ನನ್ನನ್ನು....

ನನ್ನ ಪುಟ್ಟ ಹ್ರದಯದ ಅರಮನೆಯ ಪಟ್ಟದರಸಿ ನೀನು...

ನಿನ್ನ ಪುಟ್ಟ ಹ್ರದಯದ ಅರಮನೆಯ ದೊರೆಯು ನಾನು......

ಇದು ನನ್ನ ಜೀವನದ ಕನಸು.......
msbhovi.....✍️

- mani_s_bhovi

14 Jul 2021, 08:12 pm

ರಚನೆ ಇಂತಿ ನಾನ್ಯರು...?

ಹೇಳಲು ಗಳಿಗೆ ಸರಿ ಇರಲಿಲ್ಲ
ಕೇಳಲು ನನ್ನ ಮನಸು ನಿನ್ನ ಬಳಿ ಇರಲಿಲ್ಲ...! ಈ ಕಲ್ಪನೆಯ ಪ್ರೀತಿಯನ್ನ ಹಚ್ಚಿ ಕೊಂಡ ಹುಚ್ಚ ನಾನು...! ಅದರ ವಾಸ್ತವ ತಿಳಿಸಿದ್ದು ನೀನು....! ♥️❤
ನಿನ್ನ ಬಾಳಿಗೆ ನಾನು ತಾತ್ಕಾಲಿಕ ಪರಿಚಯವಾದರೆ...! ನನ್ನ ಬದುಕಿನಲ್ಲಿ ನೀನು ಮರೆಯಲಾರದ ನೆನಪುಗಳಾದೆ...! ♥️❤

- vijay

13 Jul 2021, 11:16 pm