Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಮ್ಮ ಮನ ಮಂದಿರದ
ಗುರುವೇ
ನೀ ಎದ್ದು ಬಾರೊ
ಪ್ರಭುವೇ
ಸತ್ಯಮಾರ್ಗದಲ್ಲಿ
ನಿತ್ಯ ನಡೆಯುವ
ಶಕ್ತಿ ತುಂಬುವ ದೈವವೇ
ಜಾತಿ ಮತ
ಭೇದವಿಲ್ಲದೆ ವಿದ್ಯೆ
ಎಮಗೆ ನೀಡಿದೆ
ಅಜ್ಞಾನದ ಕತ್ತಲೆಯಿಂದ
ಸುಜ್ಞಾನದ ಬೆಳಕಿನೆಡೆಗೆ
ಎಮ್ಮನು ಕಳುಹಿದೆ
ಶುದ್ಧ ಮನಸ್ಸಿನ ಅಂತರಾಳದಿ
ಬೀಜಾಕ್ಷರವ ಬಿತ್ತಿದೆ
ಅಕ್ಷರದ ದಾಸೋಹದಿ
ಉಣಿಸಿ ಎಮ್ಮನು ಬೆಳೆಸಿದೆ
ನಿಮ್ಮ ನುಡಿಯ
ವಾಣಿಯಲ್ಲಿ ಬದುಕಿನ
ಮಾರ್ಗವ ಕಲಿಸಿದೆ
ಗುರುಪೂರ್ಣಿಮೆಯ
ಪೂರ್ಣಚಂದ್ರರು ನೀವು
ಬೆಳಕಿನಡೆಗೆ ನಡೆಸುವ
ಜ್ಞಾನದೇವರು ನೀವು
- shankar gargi
26 Jul 2021, 09:25 am
" ನಿನಗೊಂದು ಮನವಿ ಸಲ್ಲಿಸಬೇಕಿದೆ ದೇವಾ...
ನನಸಾಗದ ಕನಸುಗಳ ಕಾಣಿಸದಿರು,
ಸಿಗದ ವ್ಯಕ್ತಿಗಳ ಪರಿಚಯಿಸದಿರು,
ನೆನಪಾಗಿ ಉಳಿಯುವ ಸಂಬಂದಗಳ ನೀಡದಿರು
ಕಷ್ಟಗಳೊಂದಿಗೆ ಮರೆಯಾಗೊ
ಸಂಬಂದಗಳು ಬೆಸೆಯದಿರು,
ಸಂಬಂದಗಳ ಸುಳಿಯಲ್ಲಿ ಸಿಲುಕಿಸದಿರು.
ಕೊಟ್ಟು ಕಿತ್ತು ಕೊಳ್ಳುವುದಕ್ಕಿಂತ
ಒಬ್ಬಂಟಿಯಾಗಿಯೇ ಇರಿಸಿಬಿಡು "
_ಪದಗಳಿಲ್ಲದ ಕವನ...
msbhovi.....✍️
- mani_s_bhovi
25 Jul 2021, 09:45 am
ನಾನು ಬರೆಯುವ
ಪ್ರತಿಯೊಂದು ಅಕ್ಷರ
ನಿನ್ನ ನೆನಪಲ್ಲೇ ಗೆಳತಿ
ನಾನು ನೋಡುವ
ನೋಟವೆಲ್ಲ
ನಿನ್ನ ನೆನಪಲ್ಲೇ ಗೆಳತಿ
ನಾನು ಹಾಡುವ
ಪ್ರತಿಯೊಂದು ನುಡಿಯು
ನಿನ್ನ ನೆನಪಲ್ಲೇ ಗೆಳತಿ
ನಾನು ಇಡುವ
ಪ್ರತಿಯೊಂದು ಹೆಜ್ಜೆಯೂ
ನಿನ್ನ ನೆನಪಲ್ಲೇ ಗೆಳತಿ
ಈ ಹೃದಯಬಡಿತದ
ಪ್ರತಿಯೊಂದು ಮಿಡಿತ
ನಿನ್ನ ನೆನಪಲ್ಲೇ ಗೆಳತಿ
ನನ್ನ ಉಸಿರಿನ
ಕೊನೆಯ ಉಸಿರು
ನಿನ್ನ ನೆನಪಲ್ಲೇ ಗೆಳತಿ
- shankar gargi
23 Jul 2021, 01:49 pm
ಹುಚ್ಚು ಮನಸ್ಸು
ಹರಿದಾಡುತ್ತಿದೆ
ನೂರೆಂಟು ಕಡೆ
ದಾರಿ ಕಾಣದೆ
ಸಾಗುತ್ತಿದೆ ಬದುಕಿನಡೆ
ಬಯಸಿದ್ದೆಲ್ಲ
ಬೇಕು ಅಂತ
ಹುಡುಕಾಡುತ್ತಿದೆ
ಹುಚ್ಚು ಮನಸ್ಸಿನ
ಕಿಚ್ಚಿನಲ್ಲಿ ತೇಲಾಡುತ್ತಿದೆ
ಹುಚ್ಚು ಆಸೆಗೆ
ಕೊಚ್ಚಿ ಹೋಗುವ
ಈ ಮನಸ್ಸಿಗೆ ನೆಮ್ಮದಿ
ಎಂತೋ ಕಾಣದಾಗಿದೆ
ಕರಿನೆರಳಿನ ಅಡಿಯಲ್ಲಿ
ಬೆಳಕು ಕಾಣದೆ
ಮಣ್ಣಾಗಿ ಹೋಗಿದೆ
- shankar gargi
23 Jul 2021, 01:33 pm
ನೆನಪುಗಳ ಸಾಲಿನಲ್ಲಿ
ನೀ ಬರೀ ನೆನಪು ಮಾತ್ರ
ನಿನ್ನ ಆ ಬೆಳದಿಂಗಳ ನಗು
ನಿನ್ನ ಆ ಕುಡಿಯಂಚಿನ ನೋಟ
ಬರಿ ನೆನಪು ಮಾತ್ರ
ನಡೆವಾಗ ಆ ನಿನ್ನ ಗೆಜ್ಜೆಯ ನಾದ
ನೀ ಮುಡಿದ ಮಲ್ಲಿಗೆಯ ಪರಿಮಳ
ಬರಿ ನೆನಪು ಮಾತ್ರ
ನೀ ನಾಡಿದ ನುಡಿಮುತ್ತುಗಳು ಸಾಲು
ನೀ ಬಳಸಿದ ಆ ತೋಳು ಬಂಧನ
ಬರಿ ನೆನಪು ಮಾತ್ರ
ಈ ಬದುಕಿನ ಪುಟದಲ್ಲಿ ಬಾಳು ಕಲಿಸಿದ
ದೇವತೆ ನೀನು
ಈ ಹೃದಯ ಬಡಿತದ
ಮೊದಲ ಮಿಡಿತ ನೀನು
ನನ್ನ ಕೊನೆಯುಸಿರಿನ
ಸವಿನೆನಪು ನೀನು
- shankar gargi
23 Jul 2021, 12:27 pm
ನನ್ನ ಕಣ್ಣಲಿ
ನಿನ್ನ ರೂಪ
ಬೆಳಕಿನಂತೆ ಹರಡಿದೆ
ನನ್ನ ಹೃದಯ
ಬಡಿತದಲಿ
ನಿನ್ನ ಹೆಸರು
ಮಿಡಿದಿದೆ
ನಿನ್ನ ಮುಗುಳು
ನಗೆಯು
ಎನ್ನ ಮನವ
ಸೋಂಕಿ ನಲಿದಿದೆ
ಸೌಂದರ್ಯದ
ನಿನ್ನ ಹೂಳಪು
ಎನ್ನ ಕನಸಲಿ
ಕಾಡಿದೆ
ಅರಳಿ ನಿಂತು
ನಿನ್ನ ಪ್ರೀತಿಗೆ
ದುಂಬಿಯಾಗಿ
ಹಾಡಿದೆ
ಕಣ್ಣು ಮುಚ್ಚಲು
ನಿನ್ನ ನೆನಪು
ಬೆಳದಿಂಗಳಂತೆ
ಹರಡಿದೆ
ನಿನ್ನ ನಡೆಯ
ಹಾದಿಯಲಿ
ಹೂವು ಪರಿಮಳ
ಸೂಸಿವೆ
ನಿನ್ನ ಕಂಗಳ
ತೂಟ್ಟಿಲಲ್ಲಿ
ಈ ಹೃದಯ
ತೂಗಿದೆ
- shankar gargi
23 Jul 2021, 09:28 am
ಬಳಸಿರಿ ಕನ್ನಡ
ಹರಿಸಿರಿ ಕನ್ನಡ
ಕನ್ನಡಕ್ಕಾಗಿ ದುಡಿಯಿರಿ
ನಡೆಯಲಿ ಕನ್ನಡ
ನುಡಿಯಲಿ ಕನ್ನಡ
ಮನೆ ಮನಗಳಲಿ ಕನ್ನಡ
ಮೊಳಗಲಿ ಎಲ್ಲಡೆ ಕನ್ನಡ
ಕರುನಾಡ ಕೀರ್ತಿಯ
ಧ್ವಜದಲಿ ಕನ್ನಡ
ಕರುನಾಡ ಸಿರಿಯಾ
ಸೊಬಗಲಿ ಕನ್ನಡ
ಕನ್ನಡ ಮಣ್ಣಲ್ಲಿ
ಕನ್ನಡದ ಕಂಪು
ಸೊಸಲಿ ಎಲ್ಲಡೆ
ಕನ್ನಡದ ಇಂಪು
ಹನಿ ಹನಿ ರಕ್ತದ
ಕಣ ಕಣದಲ್ಲಿ
ಕನ್ನಡವು ಕುಣಿಯಲಿ
ಮೈ ಮನದಲ್ಲಿ
ಕನ್ನಡವ ಬಳಸಿ
ಕನ್ನಡವು ಉಳಿಸಿ
ಕರುನಾಡ ದೀಪವ
ಎಲ್ಲಡೆ ಬೆಳಗಿಸಿ
- shankar gargi
23 Jul 2021, 09:11 am
ಮೊದ ಮೊದಲು ಮುಗಿಯುತ್ತಿರಲಿಲ್ಲ ನನ್ನ ನಿನ್ನ ಮಾತಿನ ಚಕಮಕಿ....
ಅರೆಘಳಿಗೆಯೂ ಬಿಡದೆ ಪಟಾಕಿಯಂತೆ ಸಿಡಿಯುತ್ತಿದ್ದೆ....
ಮಾತಲ್ಲೆ ಎಲ್ಲವನ್ನು ಹೇಳಿ ಅರ್ಥಮಾಡಿಸುತ್ತಿದ್ದೆ....
ಏನಾಯಿತೋ ನಾ ಅರಿಯೇ ಒಮ್ಮಲೆ ತಂತಿ ಮುರಿದ ವೀಣೆಯಂತಾದೆ....
ಈಗೀಗ ಅರ್ಥವಾಗುತ್ತಿಲ್ಲ ನಿನ್ನ ಮೌನ....
ಒಮ್ಮೆಯಾದರೂ ಮೌನ ಮುರಿದು ಅರ್ಥೈಸು ನನ್ನಿಂದಾದ ತಪ್ಪನ್ನು...........
msbhovi......✍️
- mani_s_bhovi
22 Jul 2021, 08:46 am
ಕಸಾಪ ಅದ್ಯಕ್ಷನಾಗುವ ಕನಸೊಂದಿತ್ತು
ವಿದಿಯಾಟಕ್ಕೆ ಜೀವ ಬಲಿಯಾಯ್ತು
ಚಿಕ್ಕ ಚಿಕ್ಕ ಕವನ ಸಂಕಲನ ಪ್ರಕಟವಾಗಿ
ಕರುನಾಡಿನ ಜನರ ಮನಗೆಲ್ಲುವ ಕನಸು
ಮಣ್ಣಾಗಿ ಹೋಯ್ತು ಕರೋನ ಮಾರಿಗೆ
ಜೀವನದ ಜೊತೆಗೆ ಸಪ್ತಪದಿ ತುಳಿದ
ಹೆಂಡತಿ ಮಗುವನ್ನು ಬಿಟ್ಟು ಹೋದಾಯ್ತು
ನನ್ನ ಕನಸಿನ ಜೊತೆ ಅವರ ಕನಸು ಮಣ್ಣು ಪಾಲಾಯ್ತು
- abhishek
21 Jul 2021, 10:42 pm
ವರದಕ್ಷಣೆ ಎನ್ನದಿರಿ ವರನಿಗೆ ವರೋಪಚಾರ ಎಂದು ಕೊಡಿ ಅಷ್ಟೇ
ಪೊಲೀಸರಿಗೆ ತಿಳಿಸಿದರೆ
ನಿಮ್ಮ ಮಗಳು ನಿಮ್ಮ ಮನೆಗೆ ಅಷ್ಟೇ
ನೋಡಿ ಹೆಣ್ಣು ಕೊಡಿ
ನಾನೇನು ಕಡಿಮೆ ಇಲ್ಲ
ನಿಮಗಿಂತ ಎರಡರಷ್ಟು
ನೀವು ಕೊಟ್ಟಿದ್ದು ನನಗಲ್ಲ ನಿಮ್ಮ ಮಗಳಿಗೆ ಅಷ್ಟೇ
ನಾನೇನು ಬಹಳ ಕೇಳುವುದಿಲ್ಲ ಬರೀ ಹತ್ತು ಸಾವಿರ ಹತ್ತು ತೊಲೆ ಅಷ್ಟೇ
ನಿಮ್ಮ ಮಗಳು. ಸುಖವಾಗಿರಬೇಕೆಂದರೆ.
ಕಾರು ಬಂಗಲೆ ಕೊಡಿ.
ಮತ್ತೇನು ಬೇಡ ಅಷ್ಟೇ
ಕೊನೆಯದಾಗಿ ನೀವು ಸತ್ತರೆ ನಿಮ್ಮ ಆಸ್ತಿ ಅದೂ ನನ್ನಗಲ್ಲ ನಿಮ್ಮ ಮಗಳಿಗೆ ಕೊಡಿ ಅಷ್ಟೇ
ಮತ್ತೆನೂ ಇಲ್ಲ ನಾನು ಹೇಳುವುದು ಇಷ್ಟೇ
- shankar gargi
21 Jul 2021, 08:39 pm